ಸಿರುಗುಪ್ಪ : ಮತ್ತೆ ಗೆಲುವಿನ ನಿರೀಕ್ಷೆಯಲ್ಲಿ ಬಿಜೆಪಿ
ಸಿರಗುಪ್ಪ ಕ್ಷೇತ್ರದ ಹಾಲಿ ಶಾಸಕ, ಕಾಂಗ್ರೆಸ್ ಪಕ್ಷದ ಬಿ.ಎಂ. ನಾಗರಾಜ್. 2013ರ ವಿಧಾನಸಭೆ ಚುನಾವಣೆಗೂ ಮುನ್ನ ಎರಡು ಬಾರಿ ಸತತವಾಗಿ ಇಲ್ಲಿ ಜಯ ಸಾಧಿಸಿದ್ದು, ಸಜ್ಜನ ರಾಜಕಾರಣಿಯೆಂದೇ ಹೆಸರುವಾಸಿಯಾಗಿರುವ ಎಂ.ಎಸ್. ಸೋಮಲಿಂಗಪ್ಪ. 2013ರ ವಿಧಾನಸಭೆ ಚುನಾವಣೆಯಲ್ಲಿ ಅವರು, ಅತ್ಯಲ್ಪ ಮತಗಳ ಅಂತರದಿಂದ ಸೋಲು ಕಂಡಿದ್ದರು. ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದವರಾದ್ದರಿಂದ ಅವರಿಗೆ ಆ ಜನಾಂಗದ ಬೆಂಬಲ ಅಗಾಧವಾಗಿಯೇ ಇದೆ.
2013ರ ವಿಧಾನಸಭೆ ಚುನಾವಣೆಯಲ್ಲಿ ಅವರು, ಅತ್ಯಲ್ಪ ಮತಗಳ ಅಂತರದಿಂದ ಸೋಲು ಕಂಡಿದ್ದರಷ್ಟೆ. ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದವರಾದ್ದರಿಂದ ಅವರಿಗೆ ಆ ಜನಾಂಗದ ಬೆಂಬಲ ಅಗಾಧವಾಗಿಯೇ ಇದೆ. ರಾಜ್ಯ ಬಿಜೆಪಿಯ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷರೂ ಆಗಿರುವ ಇವರು ಶ್ರೀರಾಮುಲು ಹಾಗೂ ಯಡಿಯೂರಪ್ಪ - ಈ ಇಬ್ಬರಿಗೂ ಆಪ್ತರು.
ಈ ಬಾರಿ ಇವರಿಗೆ ಬಿಜೆಪಿ ಟಿಕೆಟ್ ಸಿಕ್ಕರೆ ಸೋಮಲಿಂಗಪ್ಪ ಅವರು ನಿಶ್ಚಿತವಾಗಿಯೂ ಗೆಲುವು ಸಾಧಿಸುತ್ತಾರೆ ಎಂಬ ನಿರೀಕ್ಷೆಯಿದೆ.
ಹಾಗಾಗಿ, ಈ ಬಾರಿ ಇವರಿಗೆ ಬಿಜೆಪಿ ಟಿಕೆಟ್ ಸಿಕ್ಕರೆ ಸೋಮಲಿಂಗಪ್ಪ ಅವರು ನಿಶ್ಚಿತವಾಗಿಯೂ ಗೆಲುವು ಸಾಧಿಸುತ್ತಾರೆ ಎಂಬ ಮಾತುಗಳು ಕೇಳಿ ಬಂದಿವೆ.
2013ರ ಫಲಿತಾಂಶ : 2013ರಲ್ಲಿ ಶೇ 74.56 ರಷ್ಟು ಮತದಾನವಾಗಿತ್ತು. ಕಾಂಗ್ರೆಸ್ಸಿನ ಬಿ.ಎಂ ನಾಗರಾಜ ಅವರು 65,490 ಮತಗಳನ್ನು ಗಳಿಸಿದ್ದರು. ಬಿಜೆಪಿಯ ಎಂಎಸ್ ಸೋಮಲಿಂಗಪ್ಪ ಅವರು 43,676 ಮತ ಗಳಿಸಿದ್ದರು. 21,814 ಮತಗಳ (ಶೇ 17.21ರಷ್ಟು) ಅಂತರದಿಂದ ನಾಗರಾಜ ಜಯ ಗಳಿಸಿದ್ದರು.