ಯೋಗಾಸನ ಮಾಡುವವರು ಸೇವಿಸಬೇಕಾದ ಆಹಾರಗಳು
ವಿಶ್ವ ಯೋಗ ದಿನವನ್ನು ನಾಳೆ ಜೂನ್ 21ರಂದು ಇಡೀ ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ನಮ್ಮ ದೇಶದಲ್ಲಿ ಎಲ್ಲ ಶಾಲೆಗಳಲ್ಲಿ ಕಡ್ಡಾಯವಾಗಿ ಯೋಗ ದಿನವನ್ನು ಸೂರ್ಯ ನಮಸ್ಕಾರ ಮಾಡುವ ಮೂಲಕ ಆಚರಿಸಬೇಕೆಂದು ಕೇಂದ್ರ ಸರಕಾರ ಸೂಚನೆ ನೀಡಿದೆ.
ಇದೇ ರೀತಿ ಹಲವಾರ ಸಂಘ-ಸಂಸ್ಥೆಗಳು ಯೋಗಾಸನ ಮಾಡುವ ಮೂಲಕ ಯೋಗ ದಿನವನ್ನು ಆಚರಿಸಲು ನಿರ್ಧರಿಸಿದ್ದಾರೆ. ಇನ್ನು ಕೆಲವರು ಯೋಗದಂಗವಾಗಿ ಜಾಥಾ, ರ್ಯಾಲಿ ಮುಂತಾದವುಗಳನ್ನು ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಯೋಗ ಸರ್ವವ್ಯಾಪಿಯಾಗುತ್ತಿರುವುದು ಸಂತೋಷದ ವಿಷಯ. ಜೊತೆಗೆ ಜನರ ಆರೋಗ್ಯದ ಕಾಳಜಿ ಹೆಚ್ಚುತ್ತಿರುವುದು ಮುಖ್ಯ.
ಇನ್ನು ಬರೀ ಯೋಗಾಸನ ಮಾಡಿದರೆ ಮಾತ್ರ ಆರೋಗ್ಯವರ್ಧನೆಯಾಗುತ್ತದೆ ಎಂಬುದು ಮಾತ್ರ ಜನರಲ್ಲಿ ತಪ್ಪು ಕಲ್ಪನೆ. ನಿರ್ದಿಷ್ಟ ಆಹಾರ ಸೇವನೆ ಮಾಡುವುದರಿಂದ ಯೋಗಾಸನದ ಲಾಭಗಳನ್ನು ಪಡೆದುಕೊಳ್ಳಬಹುದು. ಆಹಾರದ ಪಥ್ಯ ಮಾಡದೇ ಬರೀ ಯೋಗಾಸನ ಮಾಡಿದರೆ ಮಾತ್ರ ಲಾಭವಾಗುತ್ತದೆ ಎಂದು ಮೂರ್ಖತನವಾಗುತ್ತದೆ. ಹೀಗಾಗಿ ಯೋಗಾಸನ ಮಾಡುವವರು ರೂಢಿಸಿಕೊಳ್ಳಬೇಕಾದ ಕೆಲವೊಂದು ಆಹಾರ ಪಥ್ಯಗಳನ್ನು ನೋಡೋಣ. [ಸೂರ್ಯ ನಮಸ್ಕಾರ ಮಾಡುವ ಕ್ರಮಬದ್ಧ ವಿಧಾನ]

ಈ ಆಹಾರಗಳನ್ನು ಬಿಟ್ಟುಬಿಡಿ
ಮೊದಲಿಗೆ ಬೆಣ್ಣೆ, ತುಪ್ಪ, ಹೈನಿನ ಪದಾರ್ಥಗಳು, ಸಕ್ಕರೆ, ಎಣ್ಣೆ, ಜೇನು ತುಪ್ಪ, ಸಿಹಿ ತಿನಿಸುಗಳು, ಚಾಕೋಲೇಟ್ , ಬ್ರೆಡ್, ಬಿಸ್ಕತ್ತು ಮುಂತಾದ ಆಹಾರಗಳನ್ನು ಬಿಟ್ಟು ಬಿಡಬೇಕು. ತಿನ್ನಬೇಕೆನಿಸಿದರೆ ವಾರಕ್ಕೊಮ್ಮೆ ಅಥವಾ ಹಬ್ಬಹರಿದಿನಗಳಲ್ಲಿ ಮಾತ್ರ ಕಡಿಮೆ ಪ್ರಮಾಣದಲ್ಲಿ ಸೇವಿಸಿಕೊಂಡು ನಾಲಿಗೆಗೆ ರುಚಿ ತೋರಿಸಿದರೆ ಸಾಕು. ಯಾಕೆಂದರೆ ಇಂಥ ಆಹಾರಗಳ ಸೇವನೆಯಿಂದ ಮೈಯಲ್ಲಿ ಬೊಜ್ಜಿನ ಪ್ರಮಾಣ ಹೆಚ್ಚಾಗುತ್ತದೆ. ಬೊಜ್ಜು ಕರಗಿಸಲೆಂದು ಯೋಗಾಸನ ಮಾಡುತ್ತಿದ್ದರೆ. ಇಂಥ ಆಹಾರಗಳನ್ನು ಕೂಡಲೇ ತ್ಯಜಿಸುವುದು ಒಳ್ಳೆಯದು. ಹೀಗಾದಲ್ಲಿ ಮಾತ್ರ ಒಬ್ಬ ಒಳ್ಳೆಯ ಯೋಗಪಟು ಆಗಲು ಸಾಧ್ಯ.

ಸೇವಿಸಬಹುದಾದ ಆಹಾರಗಳು
ಹಸಿ ತರಕಾರಿ, ಹಣ್ಣು, ಹಂಪಲುಗಳು, ಹಸಿರು ತೊಪ್ಪಲು ಪಲ್ಯೆ, ನೆನೆ ಹಾಕಿದ ಕಾಳುಗಳು ಮತ್ತು ಹೆಚ್ಚಿನ ಪ್ರಮಾಣದ ನೀರಿನ ಸೇವೆಯಿಂದ ದೇಹ ಉತ್ತಮ ಸ್ಥಿತಿಯಲ್ಲಿರುತ್ತದೆ. ಇನ್ನು ಕೆಲವರು ಮಾಂಸಾಹಾರಿಗಳಾಗಿದ್ದರೆ ತಿಂಗಳಿಗೊಮ್ಮೆ ಮಾತ್ರ ಸೇವಿಸುವ ರೂಢಿಯಿಟ್ಟುಕೊಳ್ಳಬೇಕು. ಅಥವಾ ಶುಭ ಕಾರ್ಯಗಳಿದ್ದಾಗ ಮಾತ್ರ ಮಾಂಸ ಸವಿಯಬೇಕು. ಅದನ್ನೂ ಬಿಟ್ಟು ಬಿಟ್ಟರೆ ಒಳ್ಳೆಯದೇ. ಆದರೆ ಕೆಲವರು ರುಚಿಪ್ರಿಯರಾಗಿರುತ್ತಾರೆ.

ಹೊಟ್ಟೆಬಾಕ ಸಂಸ್ಕೃತಿಯನ್ನು ಕಡಿಮೆ ಮಾಡಿಕೊಳ್ಳಬೇಕು. ಇದೇ ರೀತಿ ಊಟ ಮಾಡುವುದನ್ನು ನಿಯಮಿತ ಸಮಯಕ್ಕೆ ಮಾಡಬೇಕು. ಒಂಚೂರು ಹೆಚ್ಚು ಕಮ್ಮಿಯಾಗದಂತೆ ನೋಡಿಕೊಳ್ಳಬೇಕು. ಸಮಯ ತಪ್ಪಿದಲ್ಲಿ ಬೊಜ್ಜು ಹೆಚ್ಚಾಗುತ್ತೆ ಮತ್ತು ವಾತ-ಪಿತ್ಥ ಶುರುವಾಗುವುದರಲ್ಲಿ ಸಂಶಯವೇ ಇಲ್ಲ.
ಮುಂದಿನ ಲೇಖನದಲ್ಲಿ : ಯಾವ ರೋಗಗಳಿಗೆ ಯಾವ ಯೋಗಾಸನ ಉಪಯುಕ್ತ
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications