ಹನಿ ಹನಿ ಇಬ್ಬನಿ ನಿನ್ನ ಬಾಚಿ ಕುಡಿಯೋ ಆಸೆ!
ಚಿಲಿಪಿಲಿ ಹಕ್ಕಿ ನಿನ್ನ ಭಾಷೆ ಕಲಿಯೋ ಆಸೆ. . . . .ಹಾರಾಡುವ ಅರಗಿಳಿಗಳ ಮಾತಾಡಿಸಿ ಮುದ್ದಾಡುವ; ಕಾಮನಾಬಿಲ್ಲೇರುವ ಜಾರುತಾ ನಾವಾಡುವ. . . .ಹೀಗೆ ಪ್ರತೀ ರಾಗಕ್ಕೂ ಹಾಡಿನ ಹೊರತಾಗಿಯೂ ಒಂದು ಮಾಧುರ್ಯವಿದೆ. ಪ್ರತಿ ಮಾತಿಗೂ ಶಬ್ದದ ಹೊರತಾಗಿಯೂ ಒಂದು ಭಾವವಿದೆ. ಪ್ರತಿ ಅಂಗಕ್ಕೂ ಸ್ಪರ್ಶದ ಹೊರತಾಗಿಯೂ ಒಂದು ಸ್ಪಂದನವಿದೆ. ಪ್ರತಿ ಬರಹಕ್ಕೂ ವಾಕ್ಯದ ಹೊರತಾದ ಒಂದು ಅರ್ಥವಿದೆ, ಆಳವಿದೆ ಅಗಲವಿದೆ. ಏನಂತೀರ?
ಬೇಡವೆಂದರೂ ಅರಳಲಿದೆ ಹೂವುಬೇಕೆಂದರೂ ಬಾಡಲೇಬೇಕು ಹೂವು,
ವಾಸ್ತವ-ಕಾಲ್ಪನಿಕ; ಅಷ್ಟೇ ಎಲ್ಲವೂ ಕ್ಷಣಿಕ,
ಕಾಲನ ಗೀತೆಗೆ ನಾನು ಅರ್ಜುನ;
ಅವನಲ್ಲಿ ಸ್ಥಾಯಿಯಾಗಲಿ ನನ್ನ ಮನ.
***
ನಾನು ಹೊಳೆಯಬೇಕಿತ್ತು ಹೊಳೆಯಾಗಿಬಿಟ್ಟೆ;
ನಾನು ಬದುಕಬೇಕಿತ್ತು ಬಯಲಾಗಿಬಿಟ್ಟೆ;
ನಾನು ನಾನಾಗ ಬೇಕಿತ್ತು ನಗ್ನಳಾಗಿಬಿಟ್ಟೆ;
ನಾನು ಹೂವಾಗಿ ಅರಳಬೇಕಿತ್ತು ಹರಳಾಗಿಬಿಟ್ಟೆ;
ನನಗೆ ನೋವೇ ಇಲ್ಲ; ಆವಿಯಾಗಲು ಕಾವು ಇಲ್ಲ!
***
ಜನ್ಮಗಳ ಬೆನ್ನಲ್ಲೇ ಇಳಿಸಲು ಹಾತೊರೆದಿದ್ದೆ ಈ ಹೊರೆ
ನಿನ್ನ ಅಲೆಗಳಬ್ಬರದೊಡನೆ ಒಂದಾಯ್ತು ಸಿಹಿ ನೀರಿನಾ ತೊರೆ
ಕಾಮನ ಬಿಲ್ಲಿನ ತುದಿಯಲ್ಲಿ ನೀ ತೆರೆದ ಹೆರಳು.....
ಕಾದ ಮರಳಿನಲ್ಲಿ ಹುಟ್ಟಿತಾಗ ಸುಣ್ಣದ ಹರಳು
***
ದೂರದಲ್ಲೇ ನಕ್ಕು ಕಿರುಣದ ಬಸಿರು ಬಿತ್ತುವವ ನೀನು
ನೀನಿತ್ತ ಉಸಿರನ್ನೆ ಹೊತ್ತು ತಿರುಗುವವಳು ನಾನು
ಭಾನು ನಿನಗೆಲ್ಲಿದೆ ಉದಯ-ಅಸ್ತಮಾನ
ಕಲ್ಪನೆಗಷ್ಟೇ ಸೀಮಿತ ಈ ನನ್ನ ಮನ!
***
ಅಪ್ಪ ಯಾರು? ಕ್ರೋಮೋಸೋಂ ಕೊಟ್ಟವನು. . .
ಪ್ರೇಮಿ ಯಾರು? ದೇಹಕ್ಕೆ ಭಾರದ ಭ್ರಮೆ ಕೊಟ್ಟವನು.
ಮಗ ಯಾರು? ಬದುಕು ಅನುಭವವೆಂಬ ಕಲ್ಪನೆ ಕೊಟ್ಟವನು...
ನಾನು ಯಾರು? ಅದನ್ನೇ ಹುಡುಕುತ್ತಿದ್ದೇನೆ ಈವರೆಗೂ. . .
***
ನಾನು ಒಂಟಿ. . . .ನನ್ನ ಕನಸು ಒಂಟಿ. . . .
ನಾವಿಬ್ಬರೂ ಕೂಡಿದಾಗ ಏಕಾಂತ;
ಅಲ್ಲೊಂದು ಮೌನ,
ಅದೇ ನಮ್ಮ ಮಾತು!
***
ವಿಶಾಲ ಶರಧಿಯ ಕಿರುದೋಣಿಯ
ಪಯಣಿಗರು ನಾನು ನೀವು. . . .
ಜಾಡುಹಿಡಿಯದೆ ಈ ದೋಣಿಯ
ಬೇರೆಲ್ಲಿತಾನೆ ಹೋಗಬಲ್ಲೆವು. . . .
ನಿರಾಶೆ ಹತಾಶೆಬೇಡದ ಈ ಪಯಣ
ಕನಸೊಂದೇ ಕಟ್ಟುತ್ತ ದಾರಿಗುಂಟ ಸಾಗೋಣ!
ಬಾ ಗೆಳತಿ ಸಾಗೋಣ, ಸಾಗುತ್ತಲೇ ಇರೋಣ
ಎಷ್ಟೇ ಆದರೂ ಇದು ದೋಣಿ ಪಯಣ!
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications