ಸಿಹಿ ಮತ್ತು ಖಾರಾ ಹುಗ್ಗಿ ರೆಸಿಪಿ

* ಧವಳ
ಸಿಹಿ ಹುಗ್ಗಿಗೆ ಬೇಕಾಗುವ ಸಾಮಗ್ರಿಗಳು :
ಒಂದು ಪಾವು ಅಕ್ಕಿ,ಮುಕ್ಕಾಲು ಪಾವು ಹೆಸರು ಬೇಳೆ,ಒಂದು ಪಾವು ಕುಟ್ಟಿ ಪುಡಿ ಮಾಡಿದ ಬೆಲ್ಲ,ತುರಿದ ಒಣ ಕೊಬ್ಬರಿ ಒಂದು ಬಟ್ಟಲು,ನೂರು ಗ್ರಾಂ ತುಪ್ಪ, ಇಪ್ಪತ್ತೈದು ಗ್ರಾಂ ಗೋಡಂಬಿ ( ಬೇಕಾದರೆ ಹೆಚ್ಚು ಬಳಸಬಹುದು),ಕಾಯಿಸಿದ ಒಂದು ಲೀಟರ್ ಹಾಲು, ಒಂದು ಟೇಬಲ್ ಚಮಚೆ ಪುಡಿ ಮಾಡಿದ ಏಲಕ್ಕಿ ಪುಡಿ . ಚಿಟುಕೆ ಪಚ್ಚ ಕರ್ಪೂರ.
ಮಾಡುವ ವಿಧಾನ :
ಕುಕ್ಕರ್ ನಲ್ಲಿ ಅಕ್ಕಿ ಮತ್ತು ಬೇಳೆಯನ್ನು ತೊಳೆದು ಅಗತ್ಯ ಇರುವಷ್ಟು ನೀರನ್ನು ಅದರಲ್ಲಿ ಸೇರಿಸಿ ಬೇಯಿಸಿಕೊಳ್ಳಿ. (ಕುಕ್ಕರ್ ಎರಡು ವಿಷಲ್ ಹಾಕ ಬೇಕು). ದಪ್ಪದ ತಳದ ಪಾತ್ರೆ ಒಂದನ್ನು ತೆಗೆದು ಕೊಳ್ಳಿ .ಅದರಲ್ಲಿ ಈಗಾಗಲೇ ಪುಡಿ ಮಾಡಿರುವ ಬೆಲ್ಲವನ್ನು ಹಾಕಿ ಅದರಲ್ಲಿ ಪುಟ್ಟ ಬಟ್ಟಲು ನೀರನ್ನು ಸೇರಿಸಿ.ಬೆಲ್ಲ ಕರಗುವವರೆಗೂ ಚನ್ನಾಗಿ ಕುದಿಸಿ. ಕುದಿಯುವ ಬೆಲ್ಲದ ಪಾಕಕ್ಕೆ ಒಣ ಕೊಬ್ಬರಿ ತುರಿ ಹಾಗೂ ಏಲಕ್ಕಿಯನ್ನು ಬೆರಸಿರಿ. ಆ ಬಳಿಕ ಇದಕ್ಕೆ ಈಗಾಗಲೇ ಬೆಂದಿರುವ ಅಕ್ಕಿ ಬೇಳೆ ಮಿಶ್ರಣವನ್ನು ಬೆರೆಸಿರಿ.
ಒಲೆಯಲ್ಲಿ ಸಣ್ಣ ಉರಿ ಇರಲಿ.ತಳ ಹತ್ತದಂತೆ ಎಲ್ಲವನ್ನು ಕಲಕಿರಿ.ಆ ಬಳಿಕ ಮೊದಲೇ ಕಾಯಿಸಿಟ್ಟ ಹಾಲನ್ನು ಸೇರಿಸಿ.( ಈಗ ಬೇಕಾದರೆ ಪಚ್ಚ ಕರ್ಪೂರ ಸೇರಿಸ ಬಹುದು). ಹೀಗೆ ತಯಾರಾದ ಹುಗ್ಗಿಯನ್ನು ಕೆಳಗಿಳಿಸಿ. ತುಪ್ಪ ಕಾಯಿಸಿ ಅದರಲ್ಲಿ ಗೋಡಂಬಿ ತುಂಡುಗಳನ್ನು ಕೆಂಪಗೆ ಹುರಿದು,ಸಿದ್ಧವಾಗಿರುವ ಹುಗ್ಗಿಗೆ ಗೆ ಸೇರಿಸಿ. ಘಮ ಘಮ ಸಿಹಿ ಹುಗ್ಗಿ ಸಿದ್ಧ!
ಖಾರ ಹುಗ್ಗಿಗೆ ಬೇಕಾಗುವ ಸಾಮಗ್ರಿಗಳು:
ಒಂದು ಪಾವು ಅಕ್ಕಿ,ಮುಕ್ಕಾಲು ಪಾವು ಹೆಸರು ಬೇಳೆ,ತರಿಯಾಗಿ ಪುಡಿ ಮಾಡಿದ ಎರಡು ಚಮಚೆ ಜೀರಿಗೆ,ಒಂದು ಚಮಚೆ ಕರಿ ಕಾಳು ಮೆಣಸು,ಚೂರು ಮಾಡಿದ ಐದಾರು ಒಣ ಮೆಣಸಿನ ಕಾಯಿ,ಎರಡು ಎಸಳು ಕರಿ ಬೇವು,ಒಂದು ಬಟ್ಟಲು ಕಾಯಿ ತುರಿ,ಚಿಟುಕೆ ಅರಿಸಿನ,ಗೋಡಂಬಿ ಇಪ್ಪತ್ತೈದು ಗ್ರಾಂ ಚೂರುಗಳು ,ರುಚಿಗೆ ತಕ್ಕಷ್ಟು ಉಪ್ಪು,ಒಗ್ಗರಣೆಗೆ ಐವತ್ತು ಗ್ರಾಂ ತುಪ್ಪ.
ಮಾಡುವ ವಿಧಾನ :
ಅಕ್ಕಿ ಮತ್ತು ಬೇಳೆಯನ್ನು ತೊಳೆದು ಕುಕ್ಕರಿನಲ್ಲಿ ಹಾಕಿ.ಎರಡು ಶಿಳ್ಳೆ ಹಾಕಿ ಕೂಗಿಸಿಟ್ಟುಕೊಳ್ಳಿ .ನಂತರ ಒಗ್ಗರಣೆ ಬಾಂಡಲೆಗೆ ತುಪ್ಪ ಹಾಕಿ ಅದು ಕರಗಿದ ಬಳಿಕ ಅದರಲ್ಲಿ ತರಿಯಾಗಿ ಪುಡಿಮಾಡಿರುವ ಜೀರಿಗೆ ಮೆಣಸಿನ ಪುಡಿ ,ಕರಿಬೇವು,ಗೋಡಂಬಿ,ಚೂರು ಮಾಡಿದ ಒಣ ಮೆಣಸಿನಕಾಯಿ ಗಳನ್ನು ಹಾಕಿ ಬಾಡಿಸಿ. ಈಗಾಗಲೇ ಬೆಂದಿರುವ ಅಕ್ಕಿಬೇಳೆಯ ಮಿಶ್ರಣವನ್ನು ಇದಕ್ಕೆ ಸೇರಿಸಿ.ಜೊತೆಗೆ ಕಾಯಿ ತುರಿ ಮತ್ತೂ ರುಚಿಗೆ ತಕ್ಕಷ್ಟು ಉಪ್ಪು ಹಾಕುವುದನ್ನು ಮರೆಯ ಬೇಡಿ.ಸಣ್ಣ ಉರಿಯಲ್ಲಿ ತಳ ಹತ್ತದಂತೆ ಖಾರಾ ಹುಗ್ಗಿಯನ್ನು ಮಿಶ್ರ ಮಾಡಿ. ಬಿಸಿ ಬಿಸಿ ಖಾರ ಹುಗ್ಗಿ ರೆಡಿ ಟು ಸರ್ವ್!
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications