ಕಾಫಿ-ಕನ್ನಡಪ್ರೀತಿಯ ಇನ್ನೊಂದು ಕೊಂಡಿ ಕಳಚಿಕೊಂಡಿತು
ಮಧುಸೂದನ ಪೆಜತ್ತಾಯ ಎಂದೊಡನೆಯೇ ಹೆಸರು ಎಲ್ಲೋ ಕೇಳಿದ ಹಾಗಿದೆಯಲ್ಲ ಎಂದು ನಿಮಗನಿಸಬಹುದು. ಆದರೆ, ನಮ್ಮ ತಾಣ ಮತ್ತು ಕೆಂಡಸಂಪಿಗೆ ಅಂತರ್ಜಾಲ ಪತ್ರಿಕೆಯ ಓದುಗರಿಗೆ ಹೆಸರು ಚಿರಪರಿಚಿತ. ಅವರೇನು ಅಂಥ ದೊಡ್ಡಮನುಷ್ಯರೇನೂ ಆಗಿರಲಿಲ್ಲ. ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊಳೆಯಲ್ಲಿ ಒಂದಿಷ್ಟು ಗುಂಟೆ ಕಾಫಿತೋಟದ ಮಾಲೀಕರಾಗಿದ್ದರು ಎನ್ನುವುದಕ್ಕಿಂತ ರೈತರಾಗಿ ಬಾಳಿದರು ಎಂದರೆ ಸಮಂಜಸ.
ಕರ್ನಾಟಕದಲ್ಲಿ ಇವತ್ತು ರೈತರಿಗೆ ಉಳಿಗಾಲವಿಲ್ಲ. ತೋಟದಲ್ಲಿ ಕಳ್ಳತನಗಳು, ಬಲವಂತದಿಂದ ಭೂಮಿ ಒತ್ತುವರಿ, ಜಾತಿನಿಂದನೆಯ ಆಪಾದನೆಯ ನೆಪದಲ್ಲಿ ಕಿರುಕುಳಗಳು. ಬಾರದ ಮಳೆ, ಬೆಳೆದದ್ದಕ್ಕೆ ಸಿಗದ ನ್ಯಾಯಬೆಲೆ, ಮೈಬಗ್ಗಿಸಿ ದುಡಿಯಲೊಲ್ಲದ ಕೃಷಿಕೂಲಿ ಕಾರ್ಮಿಕರು, ಇಂಥವರೊಂದಿಗೆ ಏಗಲು ಮನೆಯಲ್ಲಿ ಒಬ್ಬ ಗಂಡುಮಗ ಇರಬಾರದೇ.

ಈ ಮಧುಸೂದನ ಎಂಬ ಮನುಷ್ಯ ಜೀವನಪರ್ಯಂತ ಸುಖವಾಗೇ ಇದ್ದರು. ಕ್ಯಾನ್ಸರ್ ಆಗಲೀ, ಕಣ್ಣಿಗೆ ಶಸ್ತ್ರಚಿಕಿತ್ಸೆಗಳಾಗಲೀ, ಮುದ್ದಿನ ನಾಯಿಯ ಸಾವಾಗಲೀ, ಮೋಹದ ಮಡದಿ ಸರೋಜಮ್ಮ ಅವರ ನಿರ್ಗಮನವಾಗಲೀ, ಅವರು " ತಲೆಕೊಡಿಸಿಕೊಂಡವರಲ್ಲ" .
ಹೊಸ ಜನರೊಂದಿಗೆ ಸ್ನೇಹ, ನಿಷ್ಕಲ್ಮಷ ಪ್ರೀತಿಯ ಸಿಂಚನ, ಸುಡುಗಾಡು ಸಿದ್ಧಾಂತಗಳಿಗೆ ಜೋತುಬೀಳದ ಪ್ರಾಮಾಣಿಕ ಬರಹಗಳು ಅವರನ್ನು ಸದಾಕಾಲ ಖುಷಿಯಾಗಿಟ್ಟಿದ್ದವು ಮತ್ತು ಇಲ್ಲಿಯತನಕ ಕೈಹಿಡಿದು ನಡೆಸಿಕೊಂಡು ಬಂದವು. ನಿನ್ನೆಯಲ್ಲ, ಮೊನ್ನೆ ಮಧ್ಯಾನ್ಹ ಅವರು ಬೆಂಗಳೂರಿನಲ್ಲಿ ಕೊನೆಯುಸಿರೆಳೆದರು.
ಜೀವನೋತ್ಸಾಹಕ್ಕೆ ಜ್ವಲಂತ ಉದಾಹರಣೆಯಾಗಿದ್ದ ಪೆಜತ್ತಾಯರಿಗೆ ವಯಸ್ಸೇ ಆಗಿರಲಿಲ್ಲ! ಹಾಗಾಗಿ, ಅವರ ನಿಧನದ ವಾರ್ತೆ ಬಾಳೆಹೊಳೆಯಿಂದ ಏಳು ಸಮುದ್ರಗಳಾಚೆ ಸುದ್ದಿಯಾಯಿತು. ಅವರ ಸ್ನೇಹವನ್ನು ಸವಿದ ಅನೇಕ ಕನ್ನಡಿಗರು ಬಹುವಾಗಿ ನೊಂದುಕೊಂಡರು.
ಕಾಫಿ ಹೂವುಗಳಲ್ಲಿ ಕರ್ನಾಟಕವನ್ನು, ಕನ್ನಡ ಅಕ್ಷರಗಳಲ್ಲಿ ಪರಾಗಸ್ಪರ್ಷಗಳನ್ನು ಕಂಡುಕೊಳ್ಳುವ ಹವಣಿಕೆಯಲ್ಲಿ ಎಲ್ಲರೊಳಗೊಂದಾದ ಪೆಜತ್ತಾಯರ ಈ-ಸ್ನೇಹ ಬಳಗದಲ್ಲಿ ತ್ರಿವೇಣಿ ಶ್ರೀನಿವಾಸರಾವ್ ಒಬ್ಬರು. ಆಗಿಹೋದ "ತಂದೆ"ಯೊಂದಿಗಿನ ತಮ್ಮ ಒಡನಾಟ ಮತ್ತು ಅನುಭವಗಳನ್ನು ತ್ರಿವೇಣಿಯವರು ಇಂಟರ್ ನೆಟ್ ನಲ್ಲಿ ಕನ್ನಡ ಓದುವ ಜನತೆಯೊಂದಿಗೆ ಹಂಚಿಕೊಂಡಿದ್ದಾರೆ. ಓದಿ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications