ಕಾಫಿ-ಕನ್ನಡಪ್ರೀತಿಯ ಇನ್ನೊಂದು ಕೊಂಡಿ ಕಳಚಿಕೊಂಡಿತು
ಮಧುಸೂದನ ಪೆಜತ್ತಾಯ ಎಂದೊಡನೆಯೇ ಹೆಸರು ಎಲ್ಲೋ ಕೇಳಿದ ಹಾಗಿದೆಯಲ್ಲ ಎಂದು ನಿಮಗನಿಸಬಹುದು. ಆದರೆ, ನಮ್ಮ ತಾಣ ಮತ್ತು ಕೆಂಡಸಂಪಿಗೆ ಅಂತರ್ಜಾಲ ಪತ್ರಿಕೆಯ ಓದುಗರಿಗೆ ಹೆಸರು ಚಿರಪರಿಚಿತ. ಅವರೇನು ಅಂಥ ದೊಡ್ಡಮನುಷ್ಯರೇನೂ ಆಗಿರಲಿಲ್ಲ. ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊಳೆಯಲ್ಲಿ ಒಂದಿಷ್ಟು ಗುಂಟೆ ಕಾಫಿತೋಟದ ಮಾಲೀಕರಾಗಿದ್ದರು ಎನ್ನುವುದಕ್ಕಿಂತ ರೈತರಾಗಿ ಬಾಳಿದರು ಎಂದರೆ ಸಮಂಜಸ.
ಕರ್ನಾಟಕದಲ್ಲಿ ಇವತ್ತು ರೈತರಿಗೆ ಉಳಿಗಾಲವಿಲ್ಲ. ತೋಟದಲ್ಲಿ ಕಳ್ಳತನಗಳು, ಬಲವಂತದಿಂದ ಭೂಮಿ ಒತ್ತುವರಿ, ಜಾತಿನಿಂದನೆಯ ಆಪಾದನೆಯ ನೆಪದಲ್ಲಿ ಕಿರುಕುಳಗಳು. ಬಾರದ ಮಳೆ, ಬೆಳೆದದ್ದಕ್ಕೆ ಸಿಗದ ನ್ಯಾಯಬೆಲೆ, ಮೈಬಗ್ಗಿಸಿ ದುಡಿಯಲೊಲ್ಲದ ಕೃಷಿಕೂಲಿ ಕಾರ್ಮಿಕರು, ಇಂಥವರೊಂದಿಗೆ ಏಗಲು ಮನೆಯಲ್ಲಿ ಒಬ್ಬ ಗಂಡುಮಗ ಇರಬಾರದೇ.

ಈ ಮಧುಸೂದನ ಎಂಬ ಮನುಷ್ಯ ಜೀವನಪರ್ಯಂತ ಸುಖವಾಗೇ ಇದ್ದರು. ಕ್ಯಾನ್ಸರ್ ಆಗಲೀ, ಕಣ್ಣಿಗೆ ಶಸ್ತ್ರಚಿಕಿತ್ಸೆಗಳಾಗಲೀ, ಮುದ್ದಿನ ನಾಯಿಯ ಸಾವಾಗಲೀ, ಮೋಹದ ಮಡದಿ ಸರೋಜಮ್ಮ ಅವರ ನಿರ್ಗಮನವಾಗಲೀ, ಅವರು " ತಲೆಕೊಡಿಸಿಕೊಂಡವರಲ್ಲ" .
ಹೊಸ ಜನರೊಂದಿಗೆ ಸ್ನೇಹ, ನಿಷ್ಕಲ್ಮಷ ಪ್ರೀತಿಯ ಸಿಂಚನ, ಸುಡುಗಾಡು ಸಿದ್ಧಾಂತಗಳಿಗೆ ಜೋತುಬೀಳದ ಪ್ರಾಮಾಣಿಕ ಬರಹಗಳು ಅವರನ್ನು ಸದಾಕಾಲ ಖುಷಿಯಾಗಿಟ್ಟಿದ್ದವು ಮತ್ತು ಇಲ್ಲಿಯತನಕ ಕೈಹಿಡಿದು ನಡೆಸಿಕೊಂಡು ಬಂದವು. ನಿನ್ನೆಯಲ್ಲ, ಮೊನ್ನೆ ಮಧ್ಯಾನ್ಹ ಅವರು ಬೆಂಗಳೂರಿನಲ್ಲಿ ಕೊನೆಯುಸಿರೆಳೆದರು.
ಜೀವನೋತ್ಸಾಹಕ್ಕೆ ಜ್ವಲಂತ ಉದಾಹರಣೆಯಾಗಿದ್ದ ಪೆಜತ್ತಾಯರಿಗೆ ವಯಸ್ಸೇ ಆಗಿರಲಿಲ್ಲ! ಹಾಗಾಗಿ, ಅವರ ನಿಧನದ ವಾರ್ತೆ ಬಾಳೆಹೊಳೆಯಿಂದ ಏಳು ಸಮುದ್ರಗಳಾಚೆ ಸುದ್ದಿಯಾಯಿತು. ಅವರ ಸ್ನೇಹವನ್ನು ಸವಿದ ಅನೇಕ ಕನ್ನಡಿಗರು ಬಹುವಾಗಿ ನೊಂದುಕೊಂಡರು.
ಕಾಫಿ ಹೂವುಗಳಲ್ಲಿ ಕರ್ನಾಟಕವನ್ನು, ಕನ್ನಡ ಅಕ್ಷರಗಳಲ್ಲಿ ಪರಾಗಸ್ಪರ್ಷಗಳನ್ನು ಕಂಡುಕೊಳ್ಳುವ ಹವಣಿಕೆಯಲ್ಲಿ ಎಲ್ಲರೊಳಗೊಂದಾದ ಪೆಜತ್ತಾಯರ ಈ-ಸ್ನೇಹ ಬಳಗದಲ್ಲಿ ತ್ರಿವೇಣಿ ಶ್ರೀನಿವಾಸರಾವ್ ಒಬ್ಬರು. ಆಗಿಹೋದ "ತಂದೆ"ಯೊಂದಿಗಿನ ತಮ್ಮ ಒಡನಾಟ ಮತ್ತು ಅನುಭವಗಳನ್ನು ತ್ರಿವೇಣಿಯವರು ಇಂಟರ್ ನೆಟ್ ನಲ್ಲಿ ಕನ್ನಡ ಓದುವ ಜನತೆಯೊಂದಿಗೆ ಹಂಚಿಕೊಂಡಿದ್ದಾರೆ. ಓದಿ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications