ಬಿಗ್ ಐಡಿಯಾಸ್ ಫಾರ್ ಇಂಡಿಯಾ ಫಲಿತಾಂಶ ಪ್ರಕಟ

ಇವುಗಳಲ್ಲಿ ಅತ್ಯುತ್ತಮವಾದ 10 ಐಡಿಯಾಗಳಿಗೆ ಬಹುಮಾನ ಘೋಷಿಸಲಾಗಿದೆ. ಬಹುಮಾನಿತರ ಹೆಸರುಗಳನ್ನು ಮತ್ತು ಅವರು ನೀಡಿರುವ ಸಲಹೆಗಳನ್ನು ನೋಡಲು ನೀವೀಗ ಎಮರ್ಜಿಕ್ ಬ್ಲಾಗಿಗೆ ವಾಪಸ್ ಹೋಗಬಹುದು - ಸಂಪಾದಕ.
ಭಾರತಕ್ಕೆ ನಿಮ್ಮ ಹೆಲ್ಪ್ ಬೇಕಾಗಿದೆ
ಕಾಯಾ ವಾಚಾ ಮನಸಾ ಭಾರತ ಸಮಾಜವನ್ನು ಸುಧಾರಿಸಲಿಕ್ಕಾಗಿ ಇಲ್ಲೊಂದು, ಹೀಗೊಂದು ಸ್ಪರ್ಧೆ ಆರಂಭವಾಗಿದೆ. ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ, ಆಡಳಿತ, ಉದ್ಯೋಗ, ಆರೋಗ್ಯ, ಉದ್ಯಮ.. ಹೀಗೆ ಹಲವು ಕ್ಷೇತ್ರಗಳಲ್ಲಿ ಸಕಾರಾತ್ಮಕ ಬದಲಾವಣೆ ತರಲು ಆಸಕ್ತಿವುಳ್ಳವರಿಗೆ ಮಾತ್ರ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಪ್ರವೇಶಾವಕಾಶವಿದೆ. ಅರ್ಹತೆ: ನೀವು ಭಾರತೀಯರಾಗಿರತಕ್ಕದ್ದು!
ಸ್ಪರ್ಧೆಯಲ್ಲಿ ಬಹುಮಾನ, ಉಡುಗೊರೆ, ಗಿಫ್ಟ್ ಹ್ಯಾಂಪರುಗಳು ಇವೆ. ಆದರೆ ಅದು 'ಕ್ಯಾರೆಟ್' ಅಲ್ಲ. ನಿಮ್ಮೊಂದಿಗೆ ನೀವೇ ಕಾಂಪಿಟಿಷನ್ನಿಗೆ ಇಳಿಯಬೇಕಾದ ಆಟ. ವಿಶ್ರಾಂತಿಯಿಲ್ಲದ ಈ ಓಟದಲ್ಲಿ ಗೆದ್ದವನೇ ಧೋನಿ. ಸೋತರೆ ಸಂಗಕ್ಕಾರ. ಸ್ಪರ್ಧೆಯನ್ನು ಪ್ರಾಯೋಜಿತಗೊಳಿಸಿರುವ ಭಾರತೀಯನ ಹೆಸರು ರಾಜೇಶ್ ಜೈನ್. ಕ್ರೀಡಾಂಗಣ: ದಿ ಎಮರ್ಜಿಕ್ ಬ್ಲಾಗ್.
ಸಾಮಾಜಿಕ ಕಳಕಳಿವುಳ್ಳ ಕೆಲವೇ ಭಾರತೀಯ ಬ್ಲಾಗುಗಳಲ್ಲಿ ಎಮರ್ಜಿಕ್ ಪ್ರಮುಖವಾದದ್ದು. ಉದಾತ್ತ ಹಾಗೂ ಕ್ರಿಯಾತ್ಮಕ ಚಿಂತನೆಗಳನ್ನು ಅಂತರ್ಜಾಲದಲ್ಲಿ ತೇಲಿಬಿಟ್ಟು ದಡದಲ್ಲಿ ವಿಶ್ರಾಂತಿ ಪಡೆಯುವ ಮೊಗವೀರ ಇವರಲ್ಲ. ದೋಣಿಯ ಜತೆಗೆ ಹುಟ್ಟುಹಾಕುತ್ತ ಸಾಗುವ ನಾವಿಕ. ಈ ಬ್ಲಾಗಿಗನ ಹೆಸರನ್ನು ನೀವು ಎಲ್ಲೊ ಒಂದು ಕಡೆ ಕೇಳಿರಲಿಕ್ಕೂ ಸಾಕು. ನೆಟ್ ಕೋರ್? ಸಮಾಚಾರ್? ಖೇಲ್? ಖೋಜ್? ಬಾವರ್ಚಿ? ಸಿಫಿ?
ಸ್ಪರ್ಧೆಯ ಸ್ವರೂಪ ಹದಿಮೂರು ಆವರಣಗಳಲ್ಲಿ ತೆರೆದುಕೊಂಡಿದೆ. ಒಂದೊಂದೂ ವಿಷಯಗಳ ಮೇಲೆ ಕಣ್ಣಾಡಿಸುತ್ತಾ ಬನ್ನಿ. ನಿಮ್ಮ ಅನಿಸಿಕೆಯನ್ನು ಎಮರ್ಜಿಕ್ ಬ್ಲಾಗ್ ತಾಣದಲ್ಲೇ ದಾಖಲಿಸಿ. ಅಂದಹಾಗೆ, ಸ್ಪರ್ಧೆಯ ಫಲಿತಾಂಶವನ್ನು ಇದೇ ಏಪ್ರಿಲ್ ಕೊನೆಯ ವಾರದಲ್ಲಿ ಪ್ರಕಟಿಸಲಾಗುತ್ತದೆ. ಭಾರತೀಯರು ನೀಡುವ ನಾನಾ ನಮೂನೆಯ ಸಲಹೆಗಳನ್ನು ಓದಲಿಕ್ಕೂ ನೀವು ತಾಣಕ್ಕೆ ಭೇಟಿ ಕೊಡುತ್ತಿರಿ.
ಅತ್ಯುತ್ತಮ ಸಲಹೆಗಳನ್ನು ಬರೆದ ಹತ್ತು ಮಂದಿ ವಿಜೇತರ ಹೆಸರುಗಳನ್ನು ತಾಣದಲ್ಲಿ ಪ್ರಕಟಿಸಲಾಗುತ್ತದೆ. ಬಹುಮಾನ ಪುಸ್ತಕ ರೂಪದಲ್ಲಿರುತ್ತದೆ. ಖ್ಯಾತ ಅರ್ಥಶಾಸ್ತ್ರಜ್ಞ ಅತಾನು ಡೇ ಅವರ ಕೃತಿ Transforming India: The Road to India"s Development ನಿಮ್ಮದಾಗಿಸಿಕೊಳ್ಳಿ. ಬನ್ನಿ, ನೋಡಿ, ಭಾಗವಹಿಸಿ. ಜೈ ಹಿಂದ್.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications