ರಾಜಕಾರಣಿಗಳ ವ್ಯಕ್ತಿಚಿತ್ರ ಮಾಲಿಕೆ ಆರಂಭ
ಶ್ರೀಸಾಮಾನ್ಯರಿಗೆ ರಾಜಕಾರಣಿಗಳ ಪರಿಚಯ ಅಷ್ಟಾಗಿರುವುದಿಲ್ಲ. ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳ ಮೂಲಕ ಜನತೆಗೆ ರಾಜಕಾರಣಿಗಳ ಒಂದು ಸಾಧಾರಣ ಚಿತ್ರವಷ್ಟೇ ಸಿಗುತ್ತದೆ. ಆದರೆ, ರಾಜಕಾರಣಿಗಳ ನಿಕಟ ಪರಿಚಯ ಮತ್ತು ಅವರ ಅಂತರಂಗದ ಬಹುತೇಕ ಸಂಗತಿಗಳು ದಕ್ಕುವುದು ಅವರನ್ನು ಹತ್ತಿರದಿಂದ ಬಲ್ಲ ಪತ್ರಕರ್ತರಿಗೆ ಮಾತ್ರ.
ಕಳೆದ ಮೂವತ್ತು ವರ್ಷಗಳಿಂದ ರಾಜಕೀಯ ವರದಿಗಾರಿಕೆಯನ್ನು ಮಾಡುತ್ತಿರುವ ಜೆ.ಎಸ್. ನಾರಾಯಣ ರಾವ್ (ಜೆಸುನಾ) ನಮ್ಮ ಅನೇಕ ರಾಜಕಾರಣಿಗಳ ಗುಣ, ಸ್ವಭಾವ, ಶಕ್ತಿ, ದೌರ್ಬಲ್ಯ, ತೆವಲು, ತಿಕ್ಕಲುತನಗಳನ್ನು ತೀರ ಹತ್ತಿರದಿಂದ ಬಲ್ಲವರು. ಮುಖ್ಯಮಂತ್ರಿ ಡಿ.ದೇವರಾಜ ಅರಸರಿಂದ ಹಿಡಿದು ವಿಧಾನ ಪರಿಷತ್ ಸದಸ್ಯೆ ಆರತಿವರೆಗೆ, ಚಿರ ವಿರಹಿ ರಾಯರೆಡ್ಡಿಯಿಂದ ಮಂತ್ರವಾದಿ ಕಾನಡೆತನಕ 26 ಮಂದಿ ಆಯ್ದ ರಾಜಕಾರಣಿಗಳನ್ನು ಕುರಿತು ಜೆಸುನಾ ಅವರು ಬರೆದ ವ್ಯಕ್ತಿ ಚಿತ್ರಗಳ ಮಾಲಿಕೆ ದಟ್ಸ್ಕನ್ನಡದಲ್ಲಿ ಮೇ 20 ಮಂಗಳವಾರದಿಂದ ಆರಂಭವಾಗಲಿದೆ.
ಇಲ್ಲಿ ಕಾಣಿಸಲಾಗುತ್ತಿರುವ ವ್ಯಕ್ತಿ ಚಿತ್ರಗಳು ಮುದ್ರಣ ಮಾಧ್ಯಮದಲ್ಲಿ ಕಾಲಕಾಲಕ್ಕೆ ಬೆಳಕುಕಂಡಂಥವು. ಸಿರ್ಸಿಯ ದಿನಪತ್ರಿಕೆ "ಧ್ಯೇಯನಿಷ್ಠ", ಬೆಳಗಾವಿ ದಿನಪತ್ರಿಕೆ "ಹಸಿರು ಕ್ರಾಂತಿ", "ವಿಜಯ ಕಿರಣ" (ಸಂಜೆಪತ್ರಿಕೆ, ಬೆಂಗಳೂರು) "ದೆಹಲಿ ವಾರ್ತೆ" (ದಿನಪತ್ರಿಕೆ ದೆಹಲಿ) "ಕರುನಾಡ ಸಂಜೆ", "ಸೂರ್ಯ" ಮುಂತಾದ ಪತ್ರಿಕೆಗಳಲ್ಲಿ ವಿಭಿನ್ನ ಕಾಲಘಟ್ಟದಲ್ಲಿ ಪ್ರಕಟವಾಗಿರುವ ವ್ಯಕ್ತಿ ಚಿತ್ರಗಳು. ಈ ಬರಹಗಳ ಸಂಕಲನ "ಕಾರಿಡಾರ್ ಕಾಲಕೋಶ" ಎಂಬ ಶೀರ್ಷಿಕೆಯಲ್ಲಿ ಇತ್ತೀಚೆಗೆ ಪುಸ್ತಕ ರೂಪದಲ್ಲೂ ಬೆಳಕು ಕಂಡಿದೆ.
ಇಲ್ಲಿ ಮೂಡಿಬರಲಿರುವ ವ್ಯಕ್ತಿ ಚಿತ್ರಣಗಳ ಇತಿಮಿತಿಯನ್ನು ಮಾನ್ಯ ಓದುಗರು ಅರಿಯಬೇಕು. ಇವೆಲ್ಲ ಅಂಕಣ ಬರಹಗಳಾದ್ದರಿಂದ, ರಾಜಕಾರಣಿಯ ಒಂದು ಕಾಲಘಟ್ಟದ ಚಿತ್ರಣ ಮಾತ್ರ ಕೊಡಬಲ್ಲುದು. ಒಂದು ಸಾಮಾಜಿಕ ಸಂದರ್ಭ ಮತ್ತು ಮದವೇರಿದ ರಾಜಕೀಯ ಚೌಕಟ್ಟಿನಲ್ಲಿ ವ್ಯಕ್ತಿ ವಿಶೇಷಗಳನ್ನು ಬಿಂಬಿಸುವುದಷ್ಟೆ ಲೇಖಕರ ಕೆಲಸ. ನಮ್ಮ ಜನಪ್ರತಿನಿಧಿಗಳು ಅಧಿಕಾರ ತುಂಬಿ ತುಳುಕಾಡುವ ವಿಧಾನಸೌಧದ ಮೂರನೆ ಮಹಡಿ, ವಿಧಾನಸಭೆ, ಶಾಸಕರಭವನ ಹಾಗೂ ಸುತ್ತಮುತ್ತಲಿನ ಅಧಿಕಾರದ ಪ್ರಭಾವಳಿಯಲ್ಲಿ ಹೇಗೆ ಬದುಕುತ್ತಾರೆ ಎಂದು ಕಾಣಿಸುವುದು ಬರಹದ ಮೂಲ ಉದ್ದೇಶ. ಈ ಪುಸ್ತಕದಲ್ಲಿ ಬರುವ ವಿಭಿನ್ನ ರಾಜಕೀಯ ಕಲಾವಿದರ ವಕ್ರ ಭಾವಚಿತ್ರವನ್ನು ರಚಿಸಿದವರು ಖ್ಯಾತ ಕಲಾವಿದ ಬಿ.ಜಿ.ಗುಜ್ಜಾರಪ್ಪ.
ಈ ಧಾರಾವಾಹಿಯಲ್ಲಿ ಮಿಂಚುವ ರಾಜಕೀಯ ಕಲಾವಿದರಲ್ಲಿ ಕೆಲವರು ಈಗಿಲ್ಲ. ಇನ್ನು ಕೆಲವರು ಇದ್ದೂ ಇಲ್ಲದಂತಾಗಿದ್ದಾರೆ. ಮತ್ತೆ ಕೆಲವರು ಆ ಪಕ್ಷಬಿಟ್ಟು ಈ ಪಕ್ಷ ಸೇರಿಕೊಂಡಿದ್ದಾರೆ. ರಾಜಕಾರಣಿಗಳ ನೆಲೆಗಳು ಬದಲಾಗುತ್ತಲೇ ಇರುತ್ತದಾದ್ದರಿಂದ ಪ್ರಸಕ್ತ ಅಧಿಕಾರ, ಪಕ್ಷ, ಸ್ಥಾನಮಾನಗಳ ಚೌಕಟ್ಟಿನಿಂದಾಚೆ ಅವರನ್ನು ಓದಿಕೊಳ್ಳುವುದು ಲೇಸು. ಒಂದು ಮಾತು : ರಾಜಕಾರಣಿಗಳು ಎಲ್ಲೇ ಇರಲಿ,ಅಧಿಕಾರ ಕೈತಪ್ಪಿರಲಿ ಅಥವಾ ಹೊಸ ಅಧಿಕಾರ ಕೈತುಂಬಿ ಬಂದಿರಲಿ, ಬದಲಾಗದೇ ಇರುವುದು ಹುಟ್ಟುಗುಣ ಮಾತ್ರ. ಸ್ವಭಾವಗಳಿಗೆ ಜಯವಾಗಲಿ! - ಸಂಪಾದಕ.
ಈ ಧಾರಾವಾಹಿಯಲ್ಲಿ ಬರುವ ಮೊದಲ ಪಾತ್ರಧಾರಿ : ತಂತ್ರ+ದ್ವೇಷ+ದರ್ಪ= ದೇವೇಗೌಡ!
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications