ಅತಿ ಪಾಸಿಟಿವಿಟಿ, ಅತೀ ನೆಗೆಟಿವಿಟಿ ಜೀವನಕ್ಕೆ ಒಳ್ಳೆಯದಲ್ಲ!
"ಕೆಲಸ ಹೋಗಿ ನಾಲ್ಕು ದಿವಸವಾಯ್ತು" ಅಂತ ಇವಳು ಅಳುತ್ತಾ ಕೂತಿದ್ದಳು. ಅವನು "ಸಿಗತ್ತೆ, ಸಿಗತ್ತೆ ಬೀ ಪಾಸಿಟಿವ್" ಎಂದು ಸಮಾಧಾನ ಪಡಿಸುತ್ತಿದ್ದ. ಬೆಂಗಳೂರಿನ ಕಾಫಿ ಶಾಪ್ ಗೆ ಆಗಾಗ ಭೇಟಿ ಕೊಟ್ಟರೆ ಈ ಥರಹದ ಮಾತುಗಳು ಪದೇ ಪದೇ ಕೇಳಿಸುತ್ತಿರುತ್ತದೆ. ಬ್ರೇಕಪ್ ಆದಾಗಲೂ, ಕೆಲಸ ಕಳೆದುಕೊಂಡಾಗಲೂ, ಮತ್ತ್ಯಾರೋ ಸತ್ತುಹೋದಾಗಲೂ ನಮಗೆ ಮತ್ತೆ ಮತ್ತೆ ಸಿಗುವ ಒಂದೇ ಫ್ರೇಸ್ "ಬಿ ಪಾಸಿಟಿವ್".
ಈ ಟೈಟಲ್ ಇಟ್ಟುಕೊಂಡೇ ಅದೆಷ್ಟು ಪುಸ್ತಕಗಳು ಬಂದಿದ್ಯೋ ಏನೋ? ಈ ತರಹದ ಸೂಪರ್ ಪುಸ್ತಕಗಳು ನಮ್ಮ ಕೈಲಿದ್ದಾಗಲೇ ನಮ್ಮ ಕೈಗೆ ಮತ್ತೊಂದು ಪುಸ್ತಕ ಬರುತ್ತದೆ. ನಾವು ಓದಿಕೊಂಡ ಬಿ ಪಾಸಿಟಿವ್ ಗೆ ಆಂಟಿ ಕ್ಲೈಮಾಕ್ಸಿನ ಥರ.
ನೀವು ಮಾರ್ಕ್ ಮಾನ್ಸನ್ ನ ದೊಡ್ಡ ಅಭಿಮಾನಿಯಾಗಿದ್ದರೆ ಅವರ ಬ್ಲಾಗುಗಳನ್ನ ಓದಿದ್ದರೆ "The subtle art of not giving a f*ck" ಎಂಬ ಪುಸ್ತಕವನ್ನ ಕೈಗೆತ್ತುಕೊಳ್ಳಿ. ಇದು ಏನೋ ನಾನು ಯಾರಿಗೂ ಕೇರ್ ಮಾಡಲ್ಲ ಅನ್ನುವ ಹಾಗಿರುವ ಪುಸ್ತಕ ಎಂದುಕೊಂಡರೆ ಅದು ತಪ್ಪು. ಇದು ಜೀವನದ ಕಟು ಸತ್ಯಗಳನ್ನ ಇಂಚುಇಂಚಾಗಿಯೇ ಮುಖಕ್ಕೆ ಹೊಡೆದಹಾಗೆ ತಿಳಿಸುತ್ತದೆ.

ಮೊದಲು ಮಾರ್ಕ್ ಮಾನ್ಸನ್ ಇದನ್ನ ಬರೀಬೇಕೆನಿಸಿದ್ದು ಇಂಟರ್ನೆಟಿನ್ನಲ್ಲಿ ಸಿಗುವ "ಆದ್ದದ್ದೆಲ್ಲ ಒಳಿತೇ ಆಯಿತು" ಎನ್ನುವ ಅತೀ ಪಾಸಿಟಿವ್ ಮಾತುಗಳನ್ನ ಕೌಂಟರ್ ಮಾಡುವುದ್ದಕ್ಕೇನೆ. ಅತಿ ಪಾಸಿಟಿವಿಟಿ, ಅತೀ ನೆಗೆಟಿವಿಟಿ ಯಾವುದೂ ಜೀವನಕ್ಕೆ ಒಳ್ಳೆಯದಲ್ಲ ಎಂಬುದನ್ನು ಪ್ರಚುರಪಡಿಸುವುದಕ್ಕೆ.
ಅವರು ಮೊದಲು ಹೇಳುವುದೇ "ಕೆಲವೊಂದೆ ವಿಷಯಗಳು, ಮನುಷ್ಯರು ನಮಗೆ ಹೊಂದುವುದಕ್ಕೆ ಸಾಧ್ಯವೇ ಇಲ್ಲ, ಕೆಲವು ನಮ್ಮದಲ್ಲದ್ದು, ಬಿಟ್ಟು ಹೋಗುತ್ತಿರಬೇಕು. ಹಾಗೆಯೇ ಕೆಲವೊಂದು ನೆಗಟೀವ್ ಅನುಭವಗಳನ್ನ ನೆಗಟೀವ್ ಎಂದೇ ಪರಿಗಣಿಸಬೇಕು. ಅದರಲ್ಲಿಯೂ ಒಳ್ಳೆಯದನ್ನ ಹುಡುಕೋದಕ್ಕೆ ಹೋಗಬಾರದು" ಎಂದು ಕಡ್ಡಿ ತುಂಡು ಮಾಡಿ ಹೇಳುತ್ತಾರೆ. ಇದು ಈಗಿನ ಕಾಲದ ವೇದಾಂತ. ಕೆಲವೊಂದು ನಮಗೆ ಸಹ್ಯವಾಗುವುದೇ ಇಲ್ಲ. ಕೆಲವರಿಂದ ನಮಗೆ ಹಾನಿಯೇ ಆಗೋದು. ಅದರಲ್ಲಿಯೂ ಸರಿಯಾದದ್ದನ್ನ ಹುಡುಕ ಹೊರಟರೆ ನಮಗೇ ತೊಂದರೆ.
ಬಿ ಎಕ್ಸ್ಟ್ರಾಡಿನರಿ
ಈ ಮಾತು ಎಲ್ಲಾರು ಶಾಲೆಯಲ್ಲಿ ಕೇಳಿರುತ್ತೀವಿ. ಶಾಲೆಯಲ್ಲಿ ಮಕ್ಕಳನ್ನು ಎಲ್ಲವನ್ನೂ ಮಾಡುವ ಕಲೆಯನ್ನ ಕಲಿಸಲಾಗುತ್ತದೆ. ನನಗೂ ಆ ಅನುಭವವಾಗಿತ್ತು. ಗಣಿತದ ಕ್ಲಾಸಿನಲ್ಲಿ ಎಷ್ಟು ಲೆಕ್ಕ ಕೊಟ್ಟರೂ ಮಾಡುತ್ತಿದ್ದ ನನಗೆ, ಹಿಸ್ಟರಿ ಕ್ಲಾಸಿನಲ್ಲಿ ನಿದ್ದೆ ಬಿಟ್ಟರೆ ಬೇರೆನೂ ಬರುತ್ತಿರಲ್ಲಿಲ್ಲ. ಅದೇ ಬೋರಿಂಗ್ ಸಂಗತಿಗಳು. ಇವನು ಅವನ್ನನ್ನ ಕೊಂದ, ಅವನು ಈ ರಾಜ್ಯವಾಳಿದ, ಮತ್ತೊಬ್ಬ ಏನ್ನನ್ನೋ ಕದ್ದುಕೊಂಡು ಹೋದ. ಮಿನಿ ಕೆ ಜಿ ಎಫ್ ಸಿನೆಮಾಗಳಂತೆ ನನಗಿದು ಭಾಸವಾಗುತ್ತಿತ್ತು.

ಇದರಲ್ಲಿ ಬುದ್ಧಿ ಓಡಿಸುವುದು ಏನೂ ಇಲ್ಲ ಎಂದು ನನಗೆ ಮನವರಿಕೆಯಾಗಿತ್ತು. ಆದರೂ ಶಾಲೆಯಲ್ಲಿ ಆ ಪಾಠವನ್ನ ಓದಲೇ ಬೇಕಿತ್ತು. ನಿನಗೆ ಸಾಮರ್ಥ್ಯ ಇದೆ, ಓದೋದಿಲ್ಲ ಎಂದು ಅಮ್ಮ ಅಪ್ಪನಿಗೆ ಹೇಳಿ ನನ್ನನ್ನ ಜಗತ್ತಿನ ಪ್ರಸಿದ್ಧ ಹಿಸ್ಟೋರಿಯನ್ ಮಾಡುವ ಎಲ್ಲಾ ಹುನ್ನಾರ ಫಸೀಹಾ ಮಿಸ್ ಗೆ ಇತ್ತು. ಯಾವತ್ತೂ ಶಾಲೆಗೆ ಬರದಿದ್ದ ಅಪ್ಪ ಆವತ್ತು ಪೋಷಕರ ಮೀಟಿಂಗಿಗೆ ಬಂದಿದ್ದರು. ನಮ್ಮ ಮಿಸ್ ಶುರುಮಾಡಿದ್ದರು.
ನನ್ನ ಹಾಗೆ ನನ್ನ ತಂಗಿ ಯಾಕಿಲ್ಲ? ನನ್ನ ತಂಗಿಯ ಹಾಗೆ ನಾನು ಯಾಕಿಲ್ಲ? ಎಂದು ಹೋಲಿಕೆ ಮಾಡಿ ದೊಡ್ಡ ಭಾಷಣ ಬಿಗಿದರು. ಅಪ್ಪ ಕೇಳೋ ಅಷ್ಟು ಕೇಳಿ, "ಒಬ್ಬೊಬ್ಬರಿಗೆ ಒಂದೊಂದು ಕಲೆ ಇರತ್ತೆ, ಅದನ್ನ ಮುಂದುವರೆಸಿಕೊಂಡು ಹೋದರೆ ಸಾಕು, ಎಲ್ಲವನ್ನು ಎಲ್ಲರೂ ಮಾಡುವುದು ನನ್ನ ಪ್ರಕಾರ ತಪ್ಪು, ಅವರವರ ಪರಿಣತಿಯ ವಿಷಯದ ಮೇಲೆ ಅವರ ಕೆಲಸವನ್ನ ಆಯ್ದುಕೊಳ್ಳಬೇಕು" ಎಂದು ಆಧುನಿಕ ವೇದಾಂತಿಯ ಹಾಗೆ ಮಾತಾಡುತ್ತಾ ಹೋದರು. ನಮ್ಮ ಅಧ್ಯಾಪಕಿಗೆ ಸಿಕ್ಕಾಪಟ್ಟೆ ಬೇಜಾರಾಯಿತು. ಅಪ್ಪನಿಗೆ ಹೆಣ್ಣುಮಕ್ಕಳ ಮೇಲೆ ವಿಪರೀತ ಪ್ರೀತಿಯೆಂದು ಹೇಳಿ, ಮಾರ್ಕ್ಸ್ ಕಾರ್ಡನ್ನ ಕೈಗಿತ್ತು ಕಳಿಸಿದರು.
ಪ್ರಾಯಶಃ ಅಪ್ಪ ಆ ಮಾತನ್ನ ಹೇಳದಿದ್ದರೆ, ನಾನು ಮತ್ತೆ ನನ್ನ ತಂಗಿ ಒಬ್ಬರ ಹಾಗೆ ಮತ್ತೊಬ್ಬರಿಲ್ಲ ಎಂಬ ಕೀಳರಿಮೆಯಲ್ಲಿಯೇ ಜೀವನವನ್ನೆಲ್ಲ ಕಳೆಯುತ್ತಿದ್ದೆವೇನೊ. ಹಾಗೆ ಈ ಪುಸ್ತಕದಲ್ಲಿಯೂ ಈ ಮಾತನ್ನ ಬಹಳ ನಿಚ್ಚಳವಾಗಿ ಬರೆದಿದ್ದಾರೆ. ಕೆಲವೊಂದು ವಿಷಯದಲ್ಲಿ ನಾವು ಗೆಲುವು ಪಡೆಯುತ್ತೇವೆ, ಕೆಲವೊಂದರಲ್ಲಿ ಸೋಲು. ಪರವಾಗಿಲ್ಲ ಅದು ನಮಗೆ ಸಾಧ್ಯವಿಲ್ಲ ಎಂದು ನಂಬಿ ಮುಂದಕ್ಕೆ ಹೋಗಬೇಕೆ ಹೊರತು, ಎಲ್ಲವನ್ನೂ ಮಾಡುತ್ತೇನೆ ಎಂದು ಕಷ್ಟ ಪಡುವುದು ನನ್ನ ಪ್ರಕಾರ ತಪ್ಪು. ನಮ್ಮ ಸೀಮೆ, ಗಡಿಗಳು ನಮಗೆ ಗೊತ್ತಿರಬೇಕು.

ಯಾವಾಗಲೂ ಖುಷಿಯಾಗಿಯೇ ಇರುವುದು ಎಂಬ ಪರಮ ಸುಳ್ಳು
ತಾತನ ಜೊತೆ ಇದ್ದಾಗ ಅವರ ಭಾವನೆಗೆಳು ನಮಗೆ ಗೊತ್ತಾಗುತ್ತಿರಲ್ಲಿಲ್ಲ. ಅವರು ಯಾವಾಗಲೂ ಮಂದಸ್ಮಿತರಾಗಿಯೇ ಇರುತ್ತಿದ್ದರು. ಅವರಿಗೆ ಕಷ್ಟಗಳೇ ಇರಲ್ಲಿಲ್ಲ ಎಂದು ನಾನು ನಂಬಿಕೊಂಡಿದ್ದೆ. ತಾತ ಹೋದ ನಂತರವೇ ಅವರ ಕಷ್ಟ, ದುಃಖ ಅನಾವರಣವಾಗಿದ್ದು. ಹಾಗಾದರೇ ಅವರು ದುಃಖವನ್ನ ಮರೆಮಾಚುತ್ತಿದ್ದರಾ ಎಂದು ಅಪ್ಪನ್ನನ್ನ ಕೇಳಿದರೆ, ಅಪ್ಪ "ಹೌದು, ಜೀವನದಲ್ಲಿ ಎಲ್ಲವನ್ನು ಎಲ್ಲರಲ್ಲಿಯೂ ಹೇಳಿಕೊಳ್ಳುವ ಅಗತ್ಯವಿಲ್ಲ, ಮತ್ತು ಸದಾ ಖುಷಿಯಾಗಿರುವುದೊಂದು ಮಿಥ್" ಎಂದು ಅಂದಿದ್ದರು.
ಇದನ್ನೇ ಪುಸ್ತಕದಲ್ಲಿಯೂ ಹೇಳಿರುವುದು. ಜೀವನ ಸಿಹಿ ಕಹಿಗಳ ಮಿಶ್ರಣ. ಬಂದದ್ದನ್ನ ಹಾಗೆಯೇ ಸ್ವೀಕರಿಸಬೇಕು ಎಂಬ ಕಟು ಸತ್ಯವನ್ನ ತಿಳಿಸಲಾಗುತ್ತದೆ. ಪುಸ್ತಕದಲ್ಲಿ ಇನ್ನೂ ಅನೇಕಾನೇಕ ವಿಷಯಗಳಿವೆ. ಸರಳ ಇಂಗ್ಲಿಷಿನಲ್ಲಿ ಬರೆದಿರುವ ಈ ಪುಸ್ತಕ ನಮಗೆ ಕೆಲವು ಸತ್ಯಗಳನ್ನ ತಿಳಿಸೇ ತಿಳಿಸುತ್ತದೆ. ಈ ಪುಸ್ತಕ ಬಾರ್ಸಿಲೋನಾದ ಗೆಳತಿ ನನಗೆ ಕೊಟ್ಟಿದ್ದು, ಹುಟ್ಟಿದ ಹಬ್ಬದ ಉಡುಗೊರೆಯಾಗಿ ಶ್ರವಣನಿಗೆ ಕೊಟ್ಟಿದ್ದೆ. ಪುಸ್ತಕ ಕೊಂಡು ಓದಿ!
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications