121646pink slipಸಿಇಓ ಯಮಧರ್ಮರಾಯನ ಪಿಂಕ್ ಸ್ಲಿಪ್ ಪುರಾಣ/column/humor/2008/0919-yamaloka-software-company-pink-slip-episode.htmlನೋಡನೋಡುತ್ತಿದ್ದಂತೆ ಯಮಲೋಕದ ಗೆಟಪ್ಪೇ ಬದಲಾಗಲು ಪ್ರಾರಂಭಿಸಿತು. ಬೋಳು ತಲೆ, ಫ್ರೆಂಚ್ ಗಡ್ಡ, ಬ್ಲಾಕ್ ಟೀಶರ್ಟು, ಜೀನ್ಸ್ ಪ್ಯಾಂಟು, ಕಾಲಿಗೆ ಹವಾಯಿ ಚಪ್ಲಿ ಹಾಕ್ಕೊಂಡು ಸಣಕಲ ಕಡ್ಡಿಯಂತಿದ್ದ ಯಮ ಕಣ್ಣು ಮಿಟುಕಿಸುವುದರೊಳಗಾಗಿ ತನ್ನ ಮೂಲರೂಪ ಪಡೆದಿದ್ದ. ತಲೆಯನ್ನೊಮ್ಮೆ ಕೊಡವಿ ಕಿರೀಟ ಧರಿಸಿದ ನೋಡು ಆತನ ಖದರೇ ಬದಲಾಗಿಹೋಯಿತು. ಕಣ್ಣೆಲ್ಲ ಬೆಂಕಿಯ ಉಂಡೆ, ಕಿವಿಯಿಂದ ಬುಸ್ಸನೆ ಹೊಗೆ. ಲೇಖನ 743http://kannada.oneindia.com/img/2009/07/21-yama1e.jpg121646pink slipಟಿಸಿಎಸ್ ನಲ್ಲಿ ಪಿಂಕ್ ಸ್ಲಿಪ್ ಗಳು ರೆಡಿಯಾಗಿವೆ/news/2009/03/09/tcs-to-sack-under-perfoming-employees-s-ramadorai.htmlಚೆನ್ನೈ, ಮಾ. 9 : ದೇಶದ ಬಹುದೊಡ್ಡ ಸಾಫ್ಟವೇರ್ ಕಂಪನಿ ಎಂಬ ಹೆಗ್ಗಳಿಕೆ ಹೊಂದಿರುವ ಟಾಟಾ ಕನ್ಸ್ ಲ್ಟನ್ಸಿ ಸರ್ವೀಸಸ್ ನಲ್ಲಿ ವೃತ್ತಿಪರತೆ ತೋರಿಸದ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲು ಕಂಪನಿಯ ಸಿದ್ಧತೆ ನಡೆಸಿದೆ. ಆರ್ಥಿಕ ಬಿಕ್ಕಟ್ಟು ಮುಂದುವರೆದಲ್ಲಿ ಹಾಗೂ ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಉದ್ಯೋಗಿ ವೃತ್ತಿಪರತೆ ತೋರಿಸದಿದ್ದಲ್ಲಿ ಅನಿವಾರ್ಯವಾಗಿ ಸೋಡಾ ಚೀಟಿ ನೀಡಲಾಗುವುದು ಎಂದು ಕಂಪನಿ 35106http://kannada.oneindia.com/img/2009/03/09-ramadorai1.jpg121646pink slipಸತ್ಯಂ ಕಂಪ್ಯೂಟರ್ ನಲ್ಲಿ ಮತ್ತಷ್ಟು ನೌಕರರಿಗೆ ಪಿಂಕ್ ಸ್ಲಿಪ್?/news/2009/05/25/satyam-may-sack-8000-non-billable-staff.htmlನವದೆಹಲಿ, ಮೇ.25: ಸತ್ಯಂ ಕಂಪ್ಯೂಟರ್ಸ್ ನಲ್ಲಿ ಮಾರಾಟ, ಮಾನವ ಸಂಪನ್ಮೂಲ ಮತ್ತು ಮಾರಾಟ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 8000 'ನಾನ್ ಬಿಲ್ಲಬಲ್' (ಗ್ರಾಹಕರಿಗೆ ಸ್ಥಳದಲ್ಲೇ ಸೇವೆ ನೀಡುವ ನೌಕರರು)ನೌಕರರು ಸದ್ಯದಲ್ಲೇ ಕೆಲಸ ಕಳೆದುಕೊಳ್ಳಲಿದ್ದಾರೆ. ಸತ್ಯಂ ಕಂಪ್ಯೂಟರ್ಸ್ ಈಗಾಗಲೇ ಟೆಕ್ ಮಹೀಂದ್ರಾ ಕಂಪನಿಯ ತೆಕ್ಕೆಗೆ ಬಿದ್ದಿದೆ. ಜೂನ್ 1ರಿಂದ ಸತ್ಯಂ ಕಂಪ್ಯೂಟರ್ಸ್ ನ ಸಂಪೂರ್ಣ ಆಡಳಿತವನ್ನು ಟೆಕ್ ಮಹೀಂದ್ರಾ ತನ್ನ 36859http://kannada.oneindia.com/img/2009/05/25-satyam1.jpg121646pink slipಟೈಂಪಾಸ್ ಬಾಣಸಿಗನ ಬವಣೆಗಳು/column/humor/2009/0911-cooking-is-an-art-of-living.htmlಇದು ಲೇಖನವಲ್ಲ. ನೌಕರಿ ಗುಳುಂ ಆಗಿಬಿಟ್ಟರೆ, ಅಡುಗೆ ಭಟ್ಟನ ಕೆಲಸಕ್ಕೆ ಈಗಲೇ ಹಾಕಿರುವ ಬ್ಲಾಗ್ ಅಪ್ಲಿಕೇಷನ್!ಭಾಗಶಃ ಎಲ್ಲಾ ಗಂಡಸರು ಒಮ್ಮೆ ಯಾದರು ಅಡುಗೆ ಮನೆಗೆ ನುಗ್ಗಿ ನಳ ಮಹಾರಾಜನ ತರ ಪೋಸ್ ಕೊಟ್ಟು ಅಡುಗೆ ಮಾಡಿರ್ತಾರೆ. (ನುಗ್ಗದೆ ಇದ್ದವರು ಇರಬಹುದು, ನಾನು ಕಂಡಿಲ್ಲ) ಇರಲಿ ನಾನಂತೂ ಇ ಪಾಕ ಗೃಹಕ್ಕೆ ಕಾಲೇಜು ದಿನಗಳಲ್ಲೇ ಕಾಲಿರಿಸಿದ್ದೆ. ಆದರೆ ಅದು 39132http://kannada.oneindia.com/img/2009/09/11-cook-male1.jpg121646pink slipಕೇರಿಯಲ್ಲಿ ಕಂಪನಿ ಕದಮುಚ್ಚಿದ ಡೆಲ್/news/2009/10/09/dell-inc-shutters-down-in-cary.htmlರೌಂಡ್ ರಾಕ್, ಅ. 9 : ಅಗ್ರ ಪಂಕ್ತಿಯ ಕಂಪ್ಯೂಟರ್ ಉತ್ಪಾದಕ ಕಂಪನಿ ಡೆಲ್ ತನ್ನ ನಾರ್ತ್ ಕೆರೋಲಿನ ಘಟಕವನ್ನು ಮುಚ್ಚಿ ನೌಕರರನ್ನು ಮನೆಗೆ ಕಳಿಸುವ ಗಂಟೆ ಬಾರಿಸಿದೆ. ಕೇರಿಯ ವಿನ್ ಸ್ಟನ್ - ಸೇಲಂ ನಲ್ಲಿರುವ ಡೆಸ್ಕ್ ಟಾಪ್ ಕಂಪ್ಯೂಟರ್ ಉತ್ಪಾದನಾ ಘಟಕವನ್ನು ಮುಚ್ಚಿ 905 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲು ನಿರ್ಧರಿಸಿದೆ. ಇವರಲ್ಲಿ ಸುಮಾರು 39609http://kannada.oneindia.com/img/2009/10/09-dell-logo.jpg83806humorಮುದ್ದಾದ ಒಂದು ಹೆಸರಿನ ನಿತ್ಯ ಕಗ್ಗೊಲೆ/column/humor/2008/0917-how-they-spell-poornima-in-london.htmlಅಜ್ಜಿ ಇಟ್ಟ ಮುದ್ದಾದ ತನ್ನ ಹೆಸರು ನಿತ್ಯ ಕಗ್ಗೊಲೆ ಆಗುತ್ತಿರುವ ಕಥೆಗೆ ಹಾಸ್ಯದ ರವಿಕೆ ತೊಡಿಸಿದ ಹುಡುಗಿಯ ಹೆಸರು ನಿಮಗೆ ಗೊತ್ತಾ? ಅಣ್ಣತಮ್ಮಂದಿರೆ, ಅಕ್ಕತಂಗಿಯರೆ, ಲಂಡನ್ನಿನ ತರುಲತೆಗಳೆ ಒಮ್ಮೆಯಾದರೂ ನನ್ನನ್ನ ಬಾಯ್ತುಂಬ ಪೂರ್ಣಿ ಎಂದು ಕರೆಯುವಿರಾ ಎಂದು ಕನವರಿಸುತ್ತಿದ್ದಾರೆ. ಲಂಡನ್‌ಗೆ ಕೇಳಿಸುವ ಹಾಗೆ ನೀವೆಲ್ಲ ಪೂರ್ಣೀ..ಎಂದು ಇಲ್ಲಿಂದಲೇ ಜೋರಾಗಿ ಕೂಗಿ ಕರೆಯಿರಿ!! ಪೂರ್ಣಿಮಾ ಭಟ್ಟ ಸಣ್ಣಕೇರಿ, 788http://kannada.oneindia.com/img/2009/07/23-poornima-bhat1.jpg83806humorಕೊಳೆತ ಮಾರುಕಟ್ಟೆಯಲ್ಲಿ ಹೆಂಗಸರ ತಾಜಾ ರಾಜಕೀಯ/column/humor/2008/0506-fresh-politics-in-rotten-market.htmlಭಾನುವಾರ ಬೆಳಿಗ್ಗೆ ಸಂತೆ. ಹಣ್ಣು, ಹೂವು, ತರಕಾರಿ ಮಾರುವವರದೇ ಭರಾಟೆ. ತರಕಾರಿ ಹೆಸರನ್ನು ಹಿಡಿದುಕೊಂಡು ಗಿರಾಕಿಗಳನ್ನು ತಮ್ಮತ್ತ ಸೆಳೆಯುವವರದೇ ಚೀರಲು ಧ್ವನಿಗಳು. ಆದರೆ, ಒಂದು ಮೂಲೆಯಲ್ಲಿ ಈ ಎಲ್ಲ ಚೀರು ಧ್ವನಿಗಳನ್ನು ಮೀರಿ ರೋಷಾವೇಷದ ಮಾತುಗಳು ಕೇಳಿಬರುತ್ತಿತ್ತು. ಮಹಿಳಾಮಣಿಗಳದ್ದೇ ಅಬ್ಬರ. ಏನೋ ಮಜಾ ನಡೆದೈತಿ ಅಂತ ನನ್ನ ಅನುಮತಿಗೂ ಕಾಯದೇ ಡಿಬ್ಬಿ ಅತ್ತ ಎಳೆದುಕೊಂಡು ಹೋದ. ಯಶ್ 2596http://kannada.oneindia.com/img/2009/11/14-market1.jpg83806humorಪ್ರಮಿಳಾ ನೇಸರ್ಗಿಯೂ ಮಂತ್ರಿಸಿದ ನಿಂಬೆಹಣ್ಣೂ/column/humor/2008/0422-subbu-and-magical-lemon.htmlರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಗಲ್ಲಿಗಲ್ಲಿಗಳಲ್ಲಿ ಜ್ಯೋತಿಷಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ಚುನಾವಣೆ ಇಲ್ಲದಿದ್ದರೂ ಅವರು ಇದ್ದೇ ಇರುತ್ತಾರೆ. ಯಾವ ಪಕ್ಷ ಗೆಲ್ಲುತ್ತೆ? ಮುಮಂ ಯಾರು? ಮೊದಲು ಎಡಗಾಲಿಡಬೇಕೋ, ಬಲಗಾಲಿಡಬೇಕೋ ಅವರೇ ಹೇಳುತ್ತಾರೆ. ಅರಳುತ್ತಿರುವ ಜ್ಯೋತಿಷಿಗಳು ಮರುಳಾಗುತ್ತಿರುವ ರಾಜಕಾರಣಿಗಳ ಕುರಿತು ಒಂದು ವಿಡಂಬನೆ. * ಪ್ರಸಾದ ನಾಯಿಕ ಪಕ್ಕದ ಓಣಿಯಲ್ಲಿದ್ದ ಗೆಳೆಯ ಡಿಬ್ಬಿ ಹಳೆಯ ಕಾಲದ ಚಿತ್ರದಲ್ಲಿ ತಾಯ್ ನಾಗೇಶ್ 2738http://kannada.oneindia.com/img/2009/11/14-pramila-nesargi1e.jpg83806humorಶರಶೈಯೆಯಲ್ಲಿ ಪವಡಿಸಿದ ಭೀಷ್ಮ ಪ್ರತಿಜ್ಞೆ/column/humor/2009/0102-i-just-broke-my-new-year-resolution-2009.htmlಹೊಸವರ್ಷ ಉದಯವಾಗುವ ವೇಳೆ ಅನೇಕ ಜನ, ಥರಹೇವಾರಿ ಪ್ರತಿಜ್ಞೆಗಳನ್ನು ಮಾಡುವುದು ರೂಢಿ. ತಪ್ಪೇನಿಲ್ಲ ಬಿಡಿ. ಎಷ್ಟೋ ಜನ 2009ಕ್ಕೆ ಹೊಸ ರೆಸಲ್ಯೂಷನ್ ಗಳನ್ನು ಕೈಗೊಂಡಿದ್ದನ್ನು ನೀವು ಕೇಳಿರಬಹುದು. ಆ ಭೀಷ್ಮ ಪ್ರತಿಜ್ಞೆಗಳು ಇಷ್ಟುಹೊತ್ತಿಗಾಗಲೇ ಶರಶೈಯೆಯಲ್ಲಿ ಅಂಗಾತ ಮಲಗಿದ್ದರೆ ಖಂಡಿತ ಆಶ್ಚರ್ಯವಿಲ್ಲ * ರೇಖಾ ಹೆಗಡೆ ಬಾಳೇಸರ, ಓಲ್ಡ್‌ಸ್ಮಾರ್; ಫ್ಲಾರಿಡಾನೋಡನೋಡುತ್ತ ನೂತನ ವರ್ಷ ಬಂದಿದೆ. ನಿನ್ನಿನ ದಿನಕ್ಕೂ, ಇಂದಿನದಕ್ಕೂ 33835http://kannada.oneindia.com/img/2009/01/02-new-year-resolutions1e.jpg83806humorತಿರುಪತಿ ತಿಮ್ಮಪ್ಪನೂ, ಉಡುಪಿಯ ಹೋಟೆಲೂ/column/humor/2009/0130-tirupathi-timmappa-and-udupi-hotel.htmlಶಂಕರಪುರಂನಲ್ಲಿರುವ ಬ್ರಾಹ್ಮಣರ ಕಾಫಿ ಬಾರ್ ಯಡಿಯೂರಪ್ಪನವರ ಭೇಟಿಯಿಂದಾಗಿ ಇವತ್ತು ಸುದ್ದಿ ಕೇಂದ್ರಕ್ಕೆ ಬಂದಿರಬಹುದು, ವಿಶ್ವೇಶ್ವರ ಭಟ್ ಅವರು ಬರೆದ ಎಂಟಿಆರ್ ಹೋಟೆಲಿನ ಇತಿಹಾಸ ಮತ್ತು ಪರಂಪರೆಯ ಬಗೆಗೆ ಕನ್ನಡಿಗರು ಬೆನ್ನು ತಟ್ಟಿಕೊಳ್ಳುತ್ತಿರಬಹುದು, ತಟ್ಟಿಕೊಳ್ಳಿರಿ ತಟ್ಟಿಕೊಳ್ಳಿರಿ. ಆದರೆ ಕನ್ನಡಿಗರೇ ಒಂದು ವಿಷಯ ತಿಳಿಯಿರಿ. ಐದಾರು ಶತಮಾನಗಳ ಹಿಂದೆಯೇ ನಮ್ಮಲ್ಲಿ ಉಡುಪಿ ಹೋಟೆಲುಗಳಿದ್ದವು, ಅಲ್ಲಿ ರುಚಿರುಚಿಯಾದ ಇಡ್ಲಿ ದೋಸೆಗಳು ಬಿಕರಿಯಾಗುತ್ತಿದ್ದವು. 34371http://kannada.oneindia.com/img/2009/01/30-balaji3.jpg213553kannada blogಹೊತ್ತಿಗೆ ರೂಪದಲ್ಲಿ ಏನ್ ಗುರು ಕಾಫಿ ಆಯ್ತಾ?/column/enguru/2009/0508-enguru-in-book-form.html2007ರಲ್ಲಿ ಬನವಾಸಿ ಬಳಗದ "ಏನ್ ಗುರು ಕಾಫಿ ಆಯ್ತಾ?" ಅಂಕಣಮಾಲೇನಾ ಶುರು ಮಾಡಲಾಯ್ತು. ಇದಕ್ಕೆ ನಿರೀಕ್ಷೆಗೆ ಮೀರಿದ ಪ್ರತಿಕ್ರಿಯೆ, ಉತ್ತೇಜನ ನಿಮ್ಮಿಂದ ಸಿಕ್ಕಿದೆ. ಈ ಬರಹಗಳನ್ನು ಬರೀತಾ ಬರೀತಾನೇ ನಮ್ಮ ಚಿಂತನೆಗಳೂ ಸ್ಪಷ್ಟರೂಪ ತೆಗೆದುಕೊಳ್ಳುತ್ತಾ ಸಾಗಿದ್ದು ಸುಳ್ಳಲ್ಲ. ನಿಮ್ಮ ಸಹಕಾರ ಮತ್ತು ಅಭಿಮಾನದಿಂದ ಈ ಬ್ಲಾಗು ಇದುವರೆಗೂ ಒಂದು ಲಕ್ಷಕ್ಕೂ ಹೆಚ್ಚು ಜನ ಓದುಗರನ್ನು ಮುಟ್ಟಿದೆ.ಆದ್ರೆ ನಾವು 36498http://kannada.oneindia.com/img/2009/05/08-enguru1.jpg213553kannada blogವಿರಹಿ ವಾಸುವಿನ 'ನನ್ನ ದೇವಕಿ' ಬ್ಲಾಗು/mixed-bag/blogs/2009/0715-nanna-devaki-jogula-kannada-serial-zeekannada.htmlಜೊತೆ ಇದ್ದಾಗ ತಿಳಿಯದೆ , ದೂರಾದಾಗ ಅರಿತರೇ ಪ್ರೀತಿಯ ಆರ್ದ್ರತೆ ಹೆಚ್ಚಂತೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್, ಚಾಟ್ ಲವ್ ಗಳ ಕಾಲದಾಟಿ ಈಗ ಬ್ಲಾಗ್ ಪ್ರೀತಿ ಶುರುವಾಗಿದೆ. ಜೀ ಕನ್ನಡದ ಜನಪ್ರಿಯ ಧಾರಾವಾಹಿ 'ಜೋಗುಳ'ದಲ್ಲಿ ಈ ಬ್ಲಾಗ್ ಮೂಲಕ ಪ್ರೇಮ ನಿವೇದನೆ, ವೇದನೆ, ಆಲಾಪನೆ,ಯಾತನೆ, ಸಂಗಮ ಎಲ್ಲವನ್ನು ಬಳಸಿದ್ದು ಹೊಸತನ ಎನಿಸಿತು. ಧಾರಾವಾಹಿಗಷ್ಟೇ ಮೀಸಲಾಗಿರದೇ 38008http://kannada.oneindia.com/img/2009/07/15-nannadevaki-blog1.jpg213553kannada blogನನ್ನೂರು/literature/poem/2009/0821-my-village-kannada-poem-by-sheshagiri-jodidar.html* ಶೇಷಗಿರಿ ಜೋಡಿದಾರ್, ಬೆಂಗಳೂರು.ನನ್ನೂರು,ಉಚ್ಚರಿಸಲು ಬಾರದ ಗ್ರೀಕ್ ಪದಗಳಂತೆ,ಸಮಯಕ್ಕೆ ಸರಿಯಾಗಿ ಹೊರಡದ ಗಾದೆಗಳಂತೆ.ಹಾಗೇ, ಹೀಗೆ, ಅದೇ ಮತ್ತೆ, ಅದೇನೋ ಹೇಳ್ತಾರಲ್ಲ,ಎಂದೇ ಕೊನೆಗೊಳ್ಳುವ ಸಂಭಾಷಣೆಯಂತೆಪದಗಳಿಗೆ ಸಿಗದ ಭಾಷೆಯಂತೆ,ನನ್ನೂರಿಗೆ ನಾನೇ ಆಗಂತುಕ.ಕಡಲಡಿಯ ನಯವಾದ ಅಗ್ನಿಶಿಲೆ ಕಾಡುಬಂಡೆಗಳ ನಾಡು.ನವಿರಾದ ಉರುಟಾದ ವಿಚಿತ್ರ ಬಂಡೆಗಳ ಬರಡು ಬೀಡುಹಣ್ಣು ಅಂಗಡಿಯಲಿ ಜೋಡಿಸಿ,ಪೇರಿಸಿದ ಹಣ್ಣಿನ ಪಾಡು,ಬಣ್ಣ ಮಾತ್ರ ಬೇರೆ,ವಿವಿದ ನೆರಳುಗಳ ಬಿಸಿಲ ಮಾಡುಸುಪ್ತ ಜ್ವಾಲಾಮುಖಿ ಇಂದು 38768http://kannada.oneindia.com/img/2009/08/21-sheshagiri-jodidar1.jpg213553kannada blogನಿಶ್ಯಬ್ದಕ್ಕೆ ವಾಲುತ್ತಿರುವ ಸುದ್ದಿಮಾತು/mixed-bag/blogs/2009/0826-suddimaatu-first-anniversary-balance-sheet.html[ನಿರ್ಭಯ, ನಿಷ್ಠುರ, ವಿಕಟ, ಕಟಕಿ, ಚಟಾಕಿ ಮಾತುಗಳಿಂದಾಗಿ ಏಕಕಾಲಕ್ಕೆ ಖ್ಯಾತಿ ಮತ್ತು ಅಪಖ್ಯಾತಿಯನ್ನು ಸಂಪಾದಿಸಿದ ಕನ್ನಡ ಬ್ಲಾಗಿನ ಹೆಸರು ಸುದ್ದಿಮಾತು. ಕನ್ನಡ ಪತ್ರಿಕೋದ್ಯಮ ಮತ್ತು ಪತ್ರಕರ್ತರ ಗಲ್ಲಿಗಲ್ಲಿಗಳಲ್ಲಿ ಒಂದು ವರ್ಷಕಾಲ ಸುಯ್ಯನೆ ಸೈಕಲ್ ಹೊಡೆದ ಈ ಹವ್ಯಾಸಿ, ಆದರೆ ಚೂಟಿ ಬ್ಲಾಗು ಇವತ್ತು ಬೇರೊಂದು ಕಾರಣಕ್ಕೆ ಸುದ್ದಿ ಮಾಡುತ್ತಿದೆ. ಸಾಕಪ್ಪಾ ಸಾಕು ಅಲ್ಲ, ಇನ್ನು ಸಾಕು, ಸುದ್ದಿಮಾತು 38840http://kannada.oneindia.com/img/2009/08/26-suddimaatu1.jpg213553kannada blogಲಂಕೇಶ್ ಮಥಿಸಿದ ನೀಲು-ನೀಲಿ ನಕ್ಷತ್ರ/mixed-bag/blogs/2009/0904-neelu-romantic-poems-p-lankesh-motugode.htmlನೀಲು. ಒಂದು ಕಾಲದ ಹುಡುಗರ ನಿದಿರೆ ಕೆಡಿಸಿದ್ದ ನೀರೆ. ಯಾರಿರಬಹುದು ಈಕೆ, ಹೇಗಿರಬಹುದು ಈಕೆ ಎಂದೆಲ್ಲ ಕಲ್ಪನೆಗಳನ್ನು ಕಟ್ಟಿಸಿದ್ದ ನಿಗೂಢೆ. ಯವ್ವನದ ಹುಡುಗಿಯರ ನಿರ್ಭಿಡೆಯ ದನಿಯಾಗಿದ್ದ ನಿಸ್ಸೀಮೆ. ನೀಲು ಮುಟ್ಟದ ವಿಷಯವಿಲ್ಲ. ಪುರಾಣ, ಇತಿಹಾಸ, ರಾಜಕೀಯ, ಕ್ರೀಡೆ, ಸಾಹಿತ್ಯ, ಜನ, ಜೀವನ, ಪ್ರೇಮ, ಕಾಮ... ಎಲ್ಲವೂ ನೀಲುವಿನ ಕಾವ್ಯದಲ್ಲಿ ವಸ್ತುವಾಗಿ ಬಂದಿವೆ. ನೀಲುವೆಂದರೆ ಕಾಮಿನಿ, ಭಾಮಿನಿ, ನಾಲ್ಕು 39006http://kannada.oneindia.com/img/2009/09/04-lankesh2.jpgnews"> ಟೈಂಪಾಸ್ ಬಾಣಸಿಗನ ಬವಣೆಗಳು | Vegetarian Cook | Pink Slip | Art of cooking | TimePass | Kannada blogs | Humor - ಟೈಂಪಾಸ್ ಬಾಣಸಿಗನ ಬವಣೆಗಳು - Kannada Oneindia

ಟೈಂಪಾಸ್ ಬಾಣಸಿಗನ ಬವಣೆಗಳು

Cooking is an art of living
ಇದು ಲೇಖನವಲ್ಲ. ನೌಕರಿ ಗುಳುಂ ಆಗಿಬಿಟ್ಟರೆ, ಅಡುಗೆ ಭಟ್ಟನ ಕೆಲಸಕ್ಕೆ ಈಗಲೇ ಹಾಕಿರುವ ಬ್ಲಾಗ್ ಅಪ್ಲಿಕೇಷನ್!

ಭಾಗಶಃ ಎಲ್ಲಾ ಗಂಡಸರು ಒಮ್ಮೆ ಯಾದರು ಅಡುಗೆ ಮನೆಗೆ ನುಗ್ಗಿ ನಳ ಮಹಾರಾಜನ ತರ ಪೋಸ್ ಕೊಟ್ಟು ಅಡುಗೆ ಮಾಡಿರ್ತಾರೆ. (ನುಗ್ಗದೆ ಇದ್ದವರು ಇರಬಹುದು, ನಾನು ಕಂಡಿಲ್ಲ) ಇರಲಿ ನಾನಂತೂ ಇ ಪಾಕ ಗೃಹಕ್ಕೆ ಕಾಲೇಜು ದಿನಗಳಲ್ಲೇ ಕಾಲಿರಿಸಿದ್ದೆ. ಆದರೆ ಅದು ನಮ್ಮ ಮನೇಲಿ ಅಲ್ಲ ಅನ್ನೋದು ಅಷ್ಟೇ ವ್ಯತ್ಯಾಸ. ನಾನು ಅಡುಗೆ ಭಟ್ಟರ ಗ್ಯಾಂಗ್ ಕಾಲೇಜು ದಿನಗಳಲ್ಲಿ ಸೇರಿದ್ದೆ. .!! ತೀರ ಉಪ್ಪು ಕಾರ ಹಾಕೋ ಲೆವೆಲ್ ನಲ್ಲಿ ಕೆಲಸ ಮಾಡ್ತಾ ಇರಲಿಲ್ಲ ವಾದರೂ ತರಕಾರಿ ಹೆಚ್ಚೋದು, ಬಡಿಸೋದು ನಮ್ಮ ಕೆಲಸ. ಅಲ್ಲಿ ಸಿಗೋ ದುಡ್ಡು ಪಾಕೆಟ್ ಮನಿ.

ಒಮ್ಮೆ ಹೀಗೆ ಒಂದು ಗೃಹ ಪ್ರವೇಶ ಕಾರ್ಯ ಕ್ರಮಕ್ಕೆ ಹೋಗಬೇಕಾಯಿತು. ಗೃಹ ಪ್ರವೇಶ ಅದರಲ್ಲೂ ಮಲೆನಾಡಿನಲ್ಲಿ ಅಂದರೆ ಮುಗಿತು. ಅಡುಗೆ ಮಾಡೋರಿಗೆ ಸರಿಯಾದ ಜಾಗ ಇರೋಲ್ಲ, ಸಾಕಷ್ಟು ಸಂದರ್ಬ ದಲ್ಲಿ ಮನೆ ಕೆಲಸ ಕೂಡ ಪೂರ ಮುಗಿದಿರೋಲ್ಲ. ಆದರು ಅದರಲ್ಲೇ ರಾತ್ರೆ ಪೂರ ಹೋಮ ಹವನಾದಿ ಗಳು ನಡಿಬೇಕು ಹಾಗು ಅದೇ ಮನೆಯ ಹಿತ್ತಿಲಲ್ಲಿ ನಾವು ಅಡುಗೆ ಮಾಡಬೇಕು. ಸರಿ ಅವತ್ತು ಇದ್ದವರು 3 ಜನ, ಸುಮಾರು 150 ಜನಕ್ಕೆ ಮರುದಿನ ಊಟವಿತ್ತು. ಮೂವರಲ್ಲಿ ಒಬ್ಬ ನಾನು, "ಮೈನ್ ಭಟ್ಟರು", ಮತ್ತೊಬ್ಬ ಅವರ ಅವರ ಅಣ್ಣನ ಮಗ ರಘು. ರಘು ಶಿವಮೊಗ್ಗೆ ಯಲ್ಲಿ ಅಡುಗೆ ಕೆಲಸ ಮಾಡ್ತಾ ಇದ್ದ. ನಾವುಗಳು ಸಂಜೆ ನಾಲ್ಕಕ್ಕೆ ಕೆಲಸ ಶುರು ಮಾಡಿದೆವು. ಭಟ್ಟರು ಸಾರಿನ ಪುಡಿ, ಸಾಂಬಾರ್ ಪುಡಿ, ಪುಳಿಯೋಗರೆ ಗೆ ಹುರಿತಾ ಇದ್ದರು. ನಾನು ಅದನ್ನ ಒಂದು ಕೆಟ್ಟ mixer ನಲ್ಲಿ ಪುಡಿ ಮಾಡ್ತಾ ಇದ್ದೆ. (ಸಾಮನ್ಯ ವಾಗಿ ಅಡುಗೆ ಭಟ್ಟರಿಗೆ ಒಳ್ಳೆ ಮಿಕ್ಸರ್ ಕೊಡೋಲ್ಲ, ಬೇಕಾಬಿಟ್ಟಿ ತುಂಬಿ ಕೆಡಿಸ್ತಾರೆ ಅಂತ. ) ಭಟ್ಟರು ತರಾ ತುರಿ ಯಲ್ಲಿ ಹುರಿದು, ರಘು ಗೆ ನಾಳಿನ ಅಡುಗೆ ಗಳ ಬಗ್ಗೆ ವಿವರಿಸಿ ಬಾದುಶ ಮಾಡಲು ಹಿಟ್ಟು ಕಲೆಸಿ ದರು. ಆಮೇಲೆ ನಂಗೆ ಸುಮಾರು 250 ಬಾದುಶ ಮಾಡಲು, ಹಾಗು ರಘು ಗೆ ಸಿಹಿ ಬೂಂದಿ ಕಾಲು ಮಾಡಲು ಹೇಳುತ್ತಾ ಹೊರಡಲು ಅನುವಾದರು. ನಾವು ಮುಖ ಮುಖ ನೋಡುವ ಹೊತ್ತಿಗೆ, ಅವರು ಸ್ನಾನ ದ ಮನೆಗೆ ಹೋಗಿಬಿಟ್ಟಿದ್ದರು. ಆಮೇಲೆ ತಿಳಿಯಿತು... ಗೃಹ ಪ್ರವೇಶದ ಪುರೋಹಿತರು ಕೂಡ ಅವರೇ ಅಂತ. ಭಾಗಶಃ buy one get one free ಅಂತ ಘೋಷಣೆ ಮಾಡಿದ್ರೋ ಏನೋ..

ನಾನು ಅಂದು ಕೊಂಡೆ ರಘು ದೊಡ್ಡ ಅಡುಗೆ ಭಟ್ಟ, ಅವನಿಗೆ ಎಲ್ಲಾ ಬರುತ್ತೆ, ಸಧ್ಯಕ್ಕೆ ಅವನೇ ನನ್ನ ಟೀಂ ಲೀಡರ್ ಅಂತ. ನನ್ನ ಮುಂದೆ ಸುಮಾರು 250ಬಾದುಶ ಕರಿಯಲಿಕ್ಕೆ ಇತ್ತು. ನಾನು ಕಷ್ಟ ಪಟ್ಟು ಸೌದೆ ಒಲೆಲಿ ಎಣ್ಣೆ ಕಾಯಿಸಿ, ಅ ಹೊಗೆಗೆ ಕಣ್ಣು ಕೆಂಪಾಗಿಸಿ ಕೊಂಡು ಕಾರ್ಯೋನ್ಮುಕ ನಾದೆ. ರಘು ತರಕಾರಿ ಹೆಚ್ಚಲನುವಾದ. ಸುಮಾರು ರಾತ್ರೆ 12 ರ ಹೊತ್ತಿಗೆ ನಮ್ಮ ಕೆಲಸಗಳು ಮುಗಿಯಿತು. ಇನ್ನು ಬೂಂದಿ ಕಾಳು ಮಾಡೋದು ಒಂದೇ ಬಾಕಿ ಇತ್ತು. ರಘು ಗೆ ಅದನ್ನು ಮಾಡಲು ಹೇಳಿದೆ, ಎಣ್ಣೆ ಬಿಸಿ ಇರೋದ್ರಿಂದ 10 ನಿಮ್ಷ ದಲ್ಲಿ ಕೆಲಸ ಮುಗಿಸಿ ಮಲಗ ಬಹುದು ಅಂತ. ರಘು ಗೆ ಒಮ್ಮೆಲೇ ಆಶ್ಚರ್ಯ, ನೀನೆ ಮಾಡು, ನಾನು ಯಾವತ್ತು ಬೂಂದಿ ಕಾಳು ಇರಲಿ, ಹಪ್ಪಳ ಕೂಡ ಕರಿದು ಗೊತ್ತಿಲ್ಲ ಅಂದ. ಅವನ ಕಣ್ಣಿಗೆ ನಾನು ನಳ ಮಹಾರಾಜನೋ, ಭೀಮನೂ.. ಏನೋ. ಅ ಸಮಯ ಹೆಂಗಿತ್ತು ಅಂದರೆ ಅನಕ್ಷರಸ್ತರು IAS ಬರೀಲಿಕ್ಕೆ ಹೋದಂಗೆ ಇತ್ತು. ನಮ್ಮ ಸಮಸ್ಯೆ ಬೂಂದಿ ಕಾಳು ಮಾತ್ರ ಆಗಿರಲಿಲ್ಲ, ನಾಳೆ 150 ಜನಕ್ಕೆ ಹೇಗೆ ಅಡುಗೆ ಮಾಡೋದು, ಎಷ್ಟು ಅನ್ನ, ಸಂಬಾರ ಮಾಡಬೇಕು? ಇಬ್ಬರ ಸ್ಥಿತಿ ಕರೆಂಟ್ ಹೊಡೆದ ಕಾಗೆ ತರ ಆಗಿತ್ತು.

ಭಟ್ಟರು ರಘು ಗೆ ಎಲ್ಲ ಅಡುಗೆ ಮಾಡೋಕೆ ಬರುತ್ತೆ ಅಂತ ತಿಳಿದಿದ್ದರು ಅನ್ಸುತ್ತೆ. ಅದೂ ಅಲ್ಲದೆ ಅವನು ಇದ್ದಿದ್ದು ಶಿವಮೊಗ್ಗ ದಂತ ಪೇಟೆ ಲಿ, ಅವರು ಅವನ ಬಗ್ಗೆ ಹಾಗೆ ತಿಳಿದಿದ್ದು ತಪ್ಪೇನು ಇರಲಿಲ್ಲ. ಸರಿ ಇಬ್ಬರು ಸೇರಿ ಬೂಂದಿ ಮಾಡಲು ಹಿಟ್ಟು ಕಲೆಸಿ, ಕರಿಯಲು ಶುರು ಮಾಡಿದೆವು. ಆದರೆ ಮೊದಲ ಹೆಜ್ಜೆ ನೆ ತಪ್ಪು. ನಮಗೆ ಅದನ್ನ ಹೆಂಗೆ ಮಾಡೋದು ಗೊತ್ತಿಲ್ಲ. (ಬೂ೦ದಿಕಾಳಿಗೆ ಸ್ವಲ್ಪ ದೊಡ್ಡ ಬೂಂದಿ ಬೇಕು, ಲಾಡಿನ ಉಂಡೆ ಮಾಡಲು ಚಿಕ್ಕ ಕಾಳುಗಳು ಬೇಕು) ಕರಿದೆವು.. ಅದು ಪೂರ ಚಿಕ್ಕ ಚಿಕ್ಕ ಕಾಳುಗಳು ಆಗಿತ್ತು. ಅದನ್ನ ಬಡಿಸಲು ಸಾಧ್ಯವೇ ಇರಲಿಲ್ಲ. ನಾಳೆಗೆ ಸಿಹಿ ಬೂಂದಿ ಬೇಕೇ ಬೇಕು. ಸಮಯ ಬೇರೆ ಮೀರುತ್ತಾ ಇತ್ತು. ರಘು ಒಂದು ಬೀಡಿ ಹಚ್ಚಿ ಕೂತ. ಸ್ವಲ್ಪ ಹೊತ್ತಿನ ನಂತರ ನಾವು ಲಾಡಿನ ಉಂಡೆ ಮಾಡೋಣ ಎಂದ. ಬೀಡೀಲಿ ಐಡಿಯಾ ಗಳನ್ನೂ ಹಿಡಿಯೋ ಅಂಟೆನಾ ಏನಾದ್ರು ಇತ್ತ ಅಂತ. ಅಂತು ಮಧ್ಯ ರಾತ್ರೆ ಸಕ್ಕರೆ ಪಾಕ ಮಾಡಲು ಕುಳಿತೆವು. ಪಾಕ ರೆಡಿ ಆದಮೇಲೆ ಕಾಳಿಗೆ ಮಿಕ್ಸ್ ಮಾಡಿದೆವು. ದುರದೃಷ್ಟಕ್ಕೆ ಪಾಕ ನೀರಾಗಿತ್ತು, ಉಂಡೆ ಮಾಡುವ ಹಾಗೆ ಇರಲಿಲ್ಲ. ಅಷ್ಟು ಕಡಲೆ ಹಿಟ್ಟು, ಸಕ್ಕರೆ.. ಎಲ್ಲಾ ವೇಸ್ಟ್ ಆಗುತ್ತಲ್ಲ ಅಂತ ಬೇಜಾರು... ರಘು ಮತ್ತೆ ಒಂದು ಬೀಡಿ ಗೆ ಮೊರೆ ಹೋದ.

ಬೀಡಿ ಇಂದ ಐಡಿಯಾ ಬೇಗನೆ ಅವನಿಗೆ ಬಂತು, ಸ್ವಲ್ಪ ಏರಿದ ಪಾಕ ಮಾಡಿ ಹಾಕಿದರೆ ಸರಿ ಆಗುತ್ತೆ ಅಂದ. ಕೈಯಲ್ಲಿ ಬೀಡಿ ಇಟ್ಟುಕೊಂಡು ಪಾಕ ಮಾಡೋಕೆ ಶುರು ಮಾಡಿದ, . ನಾನು ಅವನ ಬೀಡಿ ಯಾರಿಗೂ ಗೊತ್ತಾಗದೆ ಇರಲಿ ಅಂತ ಹಿತ್ತಿಲನ್ನ ಹೊಗೆ ಮಾಡಿ ಬಿಟ್ಟೆ. (ಇದ್ದಕ್ಕಿದ್ದಂತೆ ಅಡುಗೆ ಮನೆ ಇಂದ ಹೊಗೆ ಬರ್ತಾ ಇದೆ ಅಂದ್ರೆ, ಏನೋ ಕಿತಾ ಪತಿ ನಡೀತಾ ಇದೆ ಅಂತ ಅರ್ಥ.. ). ಪಾಕ ರೆಡಿ ಆದಮೇಲೆ ಕಾಳಿಗೆ ಮಿಕ್ಸ್ ಮಾಡಿ ದೇವು. ಸ್ವಲ್ಪ ಅದೃಷ್ಟ ಅನ್ಸುತ್ತೆ, ಉಂಡೆ ಮಾಡಲು ಬಂತು. ಒಂದಷ್ಟು ದೊಡ್ಡ , ಒಂದಷ್ಟು ಚಿಕ್ಕ.. ಅನನುಬವಿ ಗಳು. ಅಂತು 150 ಲಾಡು ಕಟ್ಟಿ ಮಲಗಲು ತಯಾರಾದೆವು.

ಆದರೆ ನಿದ್ದೆ ಎಲ್ಲಿಂದ ಬಂದೀತು? ಮಾರನೆಯ ದಿನಕ್ಕೆ ಎಲ್ಲಾ ತಯಾರು ಮಾಡಬೇಕು, ಅದೇ ಯೋಚನೆ. ಕಣ್ಣು ಮುಚ್ಚಿದರೆ ಹೊಗೆಯ ಪ್ರಭಾವ, ಸಿಕ್ಕಾಪಟ್ಟೆ ಉರಿ. ಅಂತು ಬೆಳಿಗ್ಗೆ 5 ಕೆ ಎದ್ದು ಸ್ನಾನ ಮಾಡಿ ಹಾಲು ಕಾಯಿಸಿ, 2 ಕಪ್ ಕಾಫಿ ಕುಡಿದು ಕೆಲಸ ಶುರು ಮಾಡಿದೆವು. ಬೀಳೆ ಬೇಯಲು, ತರಕಾರಿ ಬೇಯಿಸಲು ಹಾಕಿದೆವು. ಎಷ್ಟು ಸಾರು, ಸಾಂಬಾರು, ಪಾಯಸ ಬೇಕು ಅಂತ ಗೊತ್ತಿಲ್ಲ. ಸುಮ್ಮನೆ ಒಂದು ಅಂದಾಜಿಗೆ ಹಾಕಿದೆವು. ಸಾರು ಮುಂತಾದವು ಟ್ರಯಲ್ ಅಂದ ಎರರ್ ಮೆಥಡ್. ಸ್ವಲ್ಪ ಕುಡಿದು ನೋಡೋದು, ಉಪ್ಪು ಕಡಿಮೆ ಇದ್ರೆ ಉಪ್ಪು ಸೇರಿಸೋದು, ಮತ್ತೆ ಟೇಸ್ಟ್ ಮಾಡೋದು. ಹೀಗೆ ನಡೀತು. ಅಂತು 12 ರ ಸುಮಾರಿಗೆ ಎಲ್ಲಾ ಕೆಲಸ ಮುಗೀತು. ಸ್ವಲ್ಪ ಹೊತ್ತಲ್ಲಿ ಊಟದ ಕಾರ್ಯಕ್ರಮ ಶುರು ಆಯಿತು. ಮಲೆನಾಡಲ್ಲಿ ಬಡಿಸಲಿಕ್ಕೆ ವಾಲಂಟೀರ್ ಗಳು ತುಂಬಾ ಇರೋದ್ರಿಂದ ಅವರೇ ಬಡಿಸ್ತಾರೆ. ನಮ್ಮದೇನಿದ್ದರೂ ಅಡುಗೆ ಮಾತ್ರ. ಸ್ವಲ್ಪ ಜನರ ಊಟ ಆಗ್ತಾ ಇದ್ದ ಹಾಗೆ ಸಾಂಬಾರು ಖಾಲಿ!! ಆಲೂಗಡ್ಡೆ ಬೀನ್ಸ್ ಹುಳಿ ಮುಗಿದೇ ಹೋಯಿತು. ಟೊಮೇಟೊ ಸಾರು ಮಾತ್ರ ಸಿಕ್ಕಾಪಟ್ಟೆ ಇದೆ. ಏನು ಮಾಡೋದು?

ರಘು ಮತ್ತೆ ಬೀಡಿಗೆ ಶರಣಾದ. 2 ನಿಮಿಷ ದ ನಂತರ ಒಂದು ಬರೋಬ್ಬರಿ ಐಡಿಯಾ ಜೊತೆ ಬಂದ. ಜಾಸ್ತಿ ಇದ್ದ ತೊಂಡೆ ಕಾಯಿ ಪಲ್ಯ, ಟೊಮೇಟೊ ಸಾರು ಎರಡು ಮಿಕ್ಸ್!!! ಇನ್ಸ್ಟಂಟ್ ಸಾಂಬಾರು ರೆಡಿ!! ಒಂದು ಸಮಸ್ಯೆ ಮುಗೀತು ಅಂದ್ರೆ ಮತ್ತೊಂದು, ಪಾಯಸ ಖಾಲಿ, ಏನು ಮಾಡೋದು, ರಘು ಗೆ ಬೀಡಿ ಲೂ ಐಡಿಯಾ ಖಾಲಿ. 5 ನಿಮಿಷ ದಲ್ಲಿ ಪಾಯಸ ಬೇಕು. ನಂಗೆ ತಲೆ ಕೆಡುತ್ತಾ ಇತ್ತು. ಅನ್ನ ಬಸಿದಿದ್ದ , ಗಂಜಿ ತೆಗೆದು ಶಾವಿಗೆ ಪಾಯಸಕ್ಕೆ ಹಾಕಿದೆ, ಅರ್ದ ಲೀಟರ್ ಹಾಲು, ಒಂದು ಕೆಜಿ ಸಕ್ಕರೆ ಹಾಕಿದೆ. ರಘು ಒಂದಿಷ್ಟು ಏಲಕ್ಕಿ, ಲವಂಗ, ದ್ರಾಕ್ಷಿ, ಗೋಡಂಬಿ ಎಲ್ಲಾ ಹಾಕಿ ಸುವಾಸನೆ ಮಾಡಿಬಿಟ್ಟ. ಎರಡೇ ನಿಮಿಷ ದಲ್ಲಿ ಘಮ ಘಮ ಪಾಯಸ ರೆಡಿ!!

ಅಂತು ಕೊನೆಗೆ ಊಟದ ಕಾರ್ಯ ಕ್ರಮ ಮುಗಿತು. ನಮಗೆ ಭಟ್ಟರು ಎಲ್ಲಿ ಬಂದು ಉಗಿತಾರೋ ಅನ್ನೋ ಭಯ. ರಘು ಗೆ ಚಿಕ್ಕಪ್ಪ ನ ಕಂಡು ಸ್ವಲ್ಪ ಹೆದರಿಕೆ. ಭಟ್ಟರ ಬಳಿ ದುಡ್ಡನ್ನ ಇನ್ನೊಮ್ಮೆ ತಗೋಬಹುದು ಅಂತ ಮನೆಗೆ ಹೊರಟು ಬಿಟ್ಟೆ. ರಘು ನು ಅರ್ಜೆಂಟ್ ಅಂತ ಶಿವಮೊಗ್ಗೆ ಗೆ ಹೊರಟ. ಸುಮಾರು 15-20 ದಿನ ಆದ ಮೇಲೆ ಸಂತೇಲಿ ಸಿಕ್ಕ ಭಟ್ಟರು ಅವತ್ತು ಹಂಗೆ ಓದಿ ಬಿಟ್ಯಲ್ಲೋ ಶಾಸ್ತ್ರೀ, ತಗೋ ಅಂತ 200 ರುಪಾಯಿ ಕೊಟ್ಟರು. ಭಾಗಶ್ಯಃ ಅವತ್ತು ನಮ್ ಅಡುಗೆ ತಿಂದು ಯಾರ ಆರೋಗ್ಯ ನು ಕೆಟ್ಟಿರಲಿಲ್ಲ ಅನ್ಸುತ್ತೆ.

ಇ ಪ್ರಸಂಗ ಆದಮೇಲೆ ನಾನು ಯಾವತ್ತು ಪ್ರಯೋಗ ಮಾಡಲಿಕ್ಕೆ ಹೋಗಲಿಲ್ಲ. ಇತ್ತೀಚಿಗೆ ಮಾಡೋ ಸಣ್ಣ ಪುಟ್ಟ ಪ್ರಯೋಗ ಗಳು ನಂ ರೂಂ ಮೆಟ್ ವರುಣ ನ ಮೇಲೆ ಮಾತ್ರ!. ಪಾಪ ಅವನು ನಾನು ಎಂತ ಕರಾಬು ಅಡುಗೆ ಮಾಡಿದ್ರು ನಂಗೆ ಗೊತ್ತಾಗೋ ಹಾಗೆ ಬೈದು ಕೊಳ್ಳಲ್ಲ.ಇಷ್ಟೆಲ್ಲಾ ವಿಷ್ಯ ಯಾಕೆ ನೆನಪಿಗೆ ಬಂತು ಅಂದ್ರೆ, ರೆಸೆಶನ್!! ಕೈಯಲ್ಲಿ ಇರೋ ಕೆಲಸ ಹೋದ್ರೆ ವಾಪಾಸ್ ಕೈಯಲ್ಲಿ ಸೌಟು ಹಿಡಿಯೋ ಪ್ಲಾನ್ ಇದೆ!! ನಿಮ್ಮಗಳ ಮನೇಲಿ ಏನಾದ್ರು ಕಾರ್ಯಕ್ರಮ ಇದ್ದರೆ ದಯವಿಟ್ಟು ಅಡುಗೆ ಕಂಟ್ರಾಕ್ಟ್ ನ ನಂಗೆ ಕೊಡಬೇಕಾಗಿ ವಿನಂತಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+