ಯಾರು ಮೂರ್ಖ? ಒಂದು ಕಿರು ಸಂಶೋಧನೆ!

ಇಷ್ಟಕ್ಕೂ ಮೂರ್ಖರು ಯಾರು ಎಂದು ಯಾರನ್ನೂ ಕೇಳಬೇಡಿ. ಮೂರ್ಖರು ಯಾರೆಂದು ಹುಡುಕಲು ಹೋದವನೇ ಮಹಾ ಮೂರ್ಖ ಎಂದು ಕಥಾಸರಿತ್ಸಾಗರದ ಐವರು ಮೂರ್ಖರಕಥೆಯಲ್ಲಿ ಹೇಳಲಾಗಿದೆ. ಐವರು ಮೂರ್ಖರೇನು ಬಂತು ಕಥಾಸರಿತ್ಸಾಗರದಲ್ಲಿ ಬರುವ ಲಕ್ಷಾಂತರ ಕಥೆಗಳೆಲ್ಲಾ ಮೂರ್ಖರ ಕುರಿತೇ ಇವೆ. ಮೂರ್ಖರ ಪ್ರಾಮುಖ್ಯತೆ ಬಗೆಗೆ ಆಂಗ್ಲರಿಗೇನು ಗೊತ್ತು. ಪುರಾಣ ಕಾಲದಲ್ಲೇ ನಮ್ಮವರು ಮೂರ್ಖರ ಪ್ರಾಮುಖ್ಯತೆಯನ್ನು ಅರಿತು ಅನೇಕ ಕಥೆಗಳನ್ನು ಹೆಣೆದಿದ್ದಾರೆ. ಆದ ಕಾರಣ ಪ್ರಪಂಚದಲ್ಲಿ ಮೂರ್ಖರ ಪೇಟೆಂಟ್ ಹಕ್ಕುಗಳು ಸಂಪೂರ್ಣವಾಗಿ ನಮಗೇ ಸಿಗಬೇಕು, ಏನಂತೀರಾ?
'ವ್ಯಾಲೆಂಟೆನ್ಸ್ ಡೇ' ಆಚರಿಸಿಕೊಳ್ಳಬಾರದು ಎಂದು ಶ್ರೀರಾಮಸೇನೆ, ಶಿವಸೇನೆ ಪ್ರೇಮಿಗಳಿ ಬೆದರಿಕೆ ಒಡ್ಡಿದಂತೆ ಮೂರ್ಖರ ದಿನ ಆಚರಿಸಿಕೊಳ್ಳಬಾರದು ಎಂದು ಏನಾರ ಬೆದರಿಕೆ ಹಾಕಿದರೆ, ಬನ್ರಲಾ ಒಂದ್ ಕೈ ನೋಡೇ ಬಿಡ್ತೀನಿ. ನಾವೇನು ಕೈಕಟ್ಟಿ ಕುಳಿತುಕೊಳ್ಳಲಿಕ್ಕೆ ಮೂರ್ಖರೇನ್ಲಾ ಎಂದು ತೊಡೆತಟ್ಟಿ ಹೇಳಲು ಎಲ್ಲ ಮೂರ್ಖರು ಕಾದಿದ್ದಾರೆ.
ಇಷ್ಟಕ್ಕೂ ಮೂರ್ಖ ಎಂಬ ಪದ ಬೈಗುಳ ಹೇಗಾಯಿತೋ ನಾ ಕಾಣೆ. ಮೂರ್ಖರ ಬಗೆಗಿನ ಮೂರ್ಖ ಇತಿಹಾಸ ಸಹ ವರ್ಣರಂಜಿತವಾಗಿದೆ. ಮಹಾಭಾರತ, ಪಂಚತಂತ್ರ, ಬೃಹತ್ ಕಥಾಸರಿತ್ಸಾಗರದಲ್ಲಿ ಮೂರ್ಖರ ಕುರಿತ ಪ್ರಸ್ತಾವನೆ ಸಾಕಷ್ಟಿದೆ. ಮೂರ್ಖರ ಬಗ್ಗೆ ಸಮಗ್ರ ಸಂಶೋಧನೆ ನಡೆದಿಲ್ಲ. ಬಹುಶಃ ಅದು 'ಮೂರ್ಖರ ಸಂಶೋಧನೆ' ಆಗುತ್ತದೆ ಎಂದು ಸಂಶೋಧಕರು ಹಿಂದೇಟು ಹಾಕಿರಬೇಕು. ಇನ್ನಾದರೂ ಮೂರ್ಖರೇಎಚ್ಚೆತ್ತುಕೊಂಡು ಸಂಶೋಧನೆಯಲ್ಲಿ ತೊಡಗಿಕೊಳ್ಳಬೇಕಾಗಿದೆ. ಒಂದು ವೇಳೆ ಅದು ಮೂರ್ಖರ ಸಂಶೋಧನೆ ಎಂದು ಬಹಿರಂಗವಾದರೂ ತಲೆಕೆಡಿಸಿಕೊಳ್ಳುವುದು ಬೇಡ.
ಇಷ್ಟಕ್ಕೂ ಮೂರ್ಖರು ಯಾರು?ಎಂದರೆ, ಮಾತು ಕೇಳದವನೇ ಮೂರ್ಖ ಎಂದು ಗುರುಗಳು ಹೇಳಿದ್ದಾರೆ. ತೋಚಿದ್ದು ಮಾಡುವವನೇ ಮೂರ್ಖ ಎನ್ನುತ್ತಾರೆ ಹಿರಿಯರು. ಅಂದರೆ ನಮ್ಮ ರಾಜಕಾರಣಿಗಳು ತೋಚಿದ್ದು ಮಾಡುತ್ತಿದ್ದಾರಾ ಇಲ್ಲ ನೀವೇ ಹೇಳಿ. ನಮ್ಮ ಯೋಜನೆಗಳೆಲ್ಲಾ ಮೂರ್ಖ ಯೋಜನೆಗಳೇ. ಎಲ್ಲವೂ ಏಪ್ರಿಲ್ 1ರಂದು ಪ್ರಕಟಿಸಬೇಕಾದ ಮೂರ್ಖ ಯೋಜನೆಗಳು. ಆದರೂ ನಮ್ಮ ಮೂರ್ಖತ್ವದಿಂದಾಗಿ ಅವು ಅರ್ಥವಾಗುತ್ತಿಲ್ಲ. ಎಲ್ಲ ಮೂರ್ಖರ ದಿನಕ್ಕೆ ಜಿಂದಾಬಾದ್!
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications