ಯಾರು ಮೂರ್ಖ? ಒಂದು ಕಿರು ಸಂಶೋಧನೆ!

ಇಷ್ಟಕ್ಕೂ ಮೂರ್ಖರು ಯಾರು ಎಂದು ಯಾರನ್ನೂ ಕೇಳಬೇಡಿ. ಮೂರ್ಖರು ಯಾರೆಂದು ಹುಡುಕಲು ಹೋದವನೇ ಮಹಾ ಮೂರ್ಖ ಎಂದು ಕಥಾಸರಿತ್ಸಾಗರದ ಐವರು ಮೂರ್ಖರಕಥೆಯಲ್ಲಿ ಹೇಳಲಾಗಿದೆ. ಐವರು ಮೂರ್ಖರೇನು ಬಂತು ಕಥಾಸರಿತ್ಸಾಗರದಲ್ಲಿ ಬರುವ ಲಕ್ಷಾಂತರ ಕಥೆಗಳೆಲ್ಲಾ ಮೂರ್ಖರ ಕುರಿತೇ ಇವೆ. ಮೂರ್ಖರ ಪ್ರಾಮುಖ್ಯತೆ ಬಗೆಗೆ ಆಂಗ್ಲರಿಗೇನು ಗೊತ್ತು. ಪುರಾಣ ಕಾಲದಲ್ಲೇ ನಮ್ಮವರು ಮೂರ್ಖರ ಪ್ರಾಮುಖ್ಯತೆಯನ್ನು ಅರಿತು ಅನೇಕ ಕಥೆಗಳನ್ನು ಹೆಣೆದಿದ್ದಾರೆ. ಆದ ಕಾರಣ ಪ್ರಪಂಚದಲ್ಲಿ ಮೂರ್ಖರ ಪೇಟೆಂಟ್ ಹಕ್ಕುಗಳು ಸಂಪೂರ್ಣವಾಗಿ ನಮಗೇ ಸಿಗಬೇಕು, ಏನಂತೀರಾ?
'ವ್ಯಾಲೆಂಟೆನ್ಸ್ ಡೇ' ಆಚರಿಸಿಕೊಳ್ಳಬಾರದು ಎಂದು ಶ್ರೀರಾಮಸೇನೆ, ಶಿವಸೇನೆ ಪ್ರೇಮಿಗಳಿ ಬೆದರಿಕೆ ಒಡ್ಡಿದಂತೆ ಮೂರ್ಖರ ದಿನ ಆಚರಿಸಿಕೊಳ್ಳಬಾರದು ಎಂದು ಏನಾರ ಬೆದರಿಕೆ ಹಾಕಿದರೆ, ಬನ್ರಲಾ ಒಂದ್ ಕೈ ನೋಡೇ ಬಿಡ್ತೀನಿ. ನಾವೇನು ಕೈಕಟ್ಟಿ ಕುಳಿತುಕೊಳ್ಳಲಿಕ್ಕೆ ಮೂರ್ಖರೇನ್ಲಾ ಎಂದು ತೊಡೆತಟ್ಟಿ ಹೇಳಲು ಎಲ್ಲ ಮೂರ್ಖರು ಕಾದಿದ್ದಾರೆ.
ಇಷ್ಟಕ್ಕೂ ಮೂರ್ಖ ಎಂಬ ಪದ ಬೈಗುಳ ಹೇಗಾಯಿತೋ ನಾ ಕಾಣೆ. ಮೂರ್ಖರ ಬಗೆಗಿನ ಮೂರ್ಖ ಇತಿಹಾಸ ಸಹ ವರ್ಣರಂಜಿತವಾಗಿದೆ. ಮಹಾಭಾರತ, ಪಂಚತಂತ್ರ, ಬೃಹತ್ ಕಥಾಸರಿತ್ಸಾಗರದಲ್ಲಿ ಮೂರ್ಖರ ಕುರಿತ ಪ್ರಸ್ತಾವನೆ ಸಾಕಷ್ಟಿದೆ. ಮೂರ್ಖರ ಬಗ್ಗೆ ಸಮಗ್ರ ಸಂಶೋಧನೆ ನಡೆದಿಲ್ಲ. ಬಹುಶಃ ಅದು 'ಮೂರ್ಖರ ಸಂಶೋಧನೆ' ಆಗುತ್ತದೆ ಎಂದು ಸಂಶೋಧಕರು ಹಿಂದೇಟು ಹಾಕಿರಬೇಕು. ಇನ್ನಾದರೂ ಮೂರ್ಖರೇಎಚ್ಚೆತ್ತುಕೊಂಡು ಸಂಶೋಧನೆಯಲ್ಲಿ ತೊಡಗಿಕೊಳ್ಳಬೇಕಾಗಿದೆ. ಒಂದು ವೇಳೆ ಅದು ಮೂರ್ಖರ ಸಂಶೋಧನೆ ಎಂದು ಬಹಿರಂಗವಾದರೂ ತಲೆಕೆಡಿಸಿಕೊಳ್ಳುವುದು ಬೇಡ.
ಇಷ್ಟಕ್ಕೂ ಮೂರ್ಖರು ಯಾರು?ಎಂದರೆ, ಮಾತು ಕೇಳದವನೇ ಮೂರ್ಖ ಎಂದು ಗುರುಗಳು ಹೇಳಿದ್ದಾರೆ. ತೋಚಿದ್ದು ಮಾಡುವವನೇ ಮೂರ್ಖ ಎನ್ನುತ್ತಾರೆ ಹಿರಿಯರು. ಅಂದರೆ ನಮ್ಮ ರಾಜಕಾರಣಿಗಳು ತೋಚಿದ್ದು ಮಾಡುತ್ತಿದ್ದಾರಾ ಇಲ್ಲ ನೀವೇ ಹೇಳಿ. ನಮ್ಮ ಯೋಜನೆಗಳೆಲ್ಲಾ ಮೂರ್ಖ ಯೋಜನೆಗಳೇ. ಎಲ್ಲವೂ ಏಪ್ರಿಲ್ 1ರಂದು ಪ್ರಕಟಿಸಬೇಕಾದ ಮೂರ್ಖ ಯೋಜನೆಗಳು. ಆದರೂ ನಮ್ಮ ಮೂರ್ಖತ್ವದಿಂದಾಗಿ ಅವು ಅರ್ಥವಾಗುತ್ತಿಲ್ಲ. ಎಲ್ಲ ಮೂರ್ಖರ ದಿನಕ್ಕೆ ಜಿಂದಾಬಾದ್!
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications