ಸಿಂಹ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ
ಅರ್ಧಾಷ್ಟಮ ಶನಿಕಾಟದೊಂದಿಗೆ ಹೊಸ ವರ್ಷ ಆರಂಭಿಸಿರುವ ಸಿಂಹ ರಾಶಿಯವರು ಈ ವರ್ಷ ಹೆಚ್ಚಿನ ಲಾಭ ಹೊಂದಲಿದ್ದಾರೆ. ಈ ಬಗ್ಗೆ ಮೊದಲೇ ಗೊತ್ತಾಗಿರುವುದರಿಂದ ಕೂಡಲೇ ಹೊಸ ಹೊಸ ಯೋಜನೆಗಳನ್ನು ಹಾಕಿಕೊಂಡು ಅವುಗಳನ್ನು ಪೂರ್ಣಗೊಳಿಸಿಕೊಳ್ಳಬೇಕು ಆದಷ್ಟು ಬೇಗ.
ಈ ರಾಶಿಯ ಮಘಾ ನಕ್ಷತ್ರದವರಿಗೆ ವರ್ಷದ ಮೊದಲ ನಾಲ್ಕು ತಿಂಗಳು ಮಂದಗತಿಯಲ್ಲಿ ಸಾಗುವ ಜೀವನ ನಂತರ ತೊಂದರೆಗಳು ಕಾಣಲಾರಂಭಿಸಿ ಕೊನೆಯ ನಾಲ್ಕು ತಿಂಗಳು ಸಮಾಧಾನದ ನಿಟ್ಟುಸಿರುವ ಬಿಡುವಂತಾಗುತ್ತದೆ. ಆದರೆ ಕೆಲಸ ಕಾರ್ಯಕ್ಕೆಂದು ಊರೂರು ತಿರುಗುವುದು ಕೆಲವರಿಗೆ ಅನಿವಾರ್ಯವೆನಿಸಬಹುದು.
ಪೂರ್ವಾಫಾಲ್ಗುಣಿ ನಕ್ಷತ್ರದವರು ಮೊದಲ ನಾಲ್ಕು ತಿಂಗಳು ಅತ್ಯುತ್ತಮ ಸಮಯದನುಭವ ಪಡೆದುಕೊಂಡರೆ, ನಂತರದ ನಾಲ್ಕು ತಿಂಗಳು ಇದ್ದುದರಲ್ಲಿಯೇ ಸಮಾಧಾನಪಟ್ಟುಕೊಳ್ಳುವಂತಿರುತ್ತದೆ. ಆದರೆ ಕೊನೆಯ ನಾಲ್ಕು ತಿಂಗಳು ಮಾತ್ರ ಸ್ವಲ್ಪ ಕಷ್ಟಕರವೆನಿಸುವಂತಾದರೂ ಅಚ್ಚರಿಯಿಲ್ಲ. [ಸೋಂಬೇರಿಗಳು ಪೂರ್ವ ಫಾಲ್ಗುಣಿ ನಕ್ಷತ್ರದವರು]

ಉತ್ತರಾಫಾಲ್ಗುಣಿ ನಕ್ಷತ್ರದ 1ನೇ ಚರಣದವರ ಪರಿಸ್ಥಿತಿ ಸ್ವಲ್ಪ ವಿಷಾದನೀಯವಾಗಿರುತ್ತದೆ ಯುಗಾದಿಯಿಂದ 8 ತಿಂಗಳು. ನಂತರದ ನಾಲ್ಕು ತಿಂಗಳು ಒಮ್ಮೆಲೆ ಜೀವನದಲ್ಲಿ ಏರಿಕೆ ಕಂಡುಬರುವ ಸಾಧ್ಯತೆಯಿದೆ. ಈ ನಕ್ಷತ್ರದವರಿಗೆ ಸಂತೋಷ ಮತ್ತು ಸಂತಸ ಈ ವರ್ಷ ತುಸು ಹೆಚ್ಚೇ ಎನ್ನಬಹುದು.
ಇನ್ನು ಗುರುಬಲವಿಲ್ಲದೇ ಹಣಕಾಸಿನ ತೊಂದರೆಗಳಿಂದ ಗೊಂದಲಮಯವಾಗಿಸಿಕೊಂಡಿರುವ ಜೀವನವನ್ನು ಆಗಸ್ಟ್ ವರೆಗೆ ಸಾಗಿಸಿಕೊಂಡು ಹೋಗಿ. ಆ ನಂತರ ಬಂದ ಸಂಕಷ್ಟಗಳೆಲ್ಲ ಮಂಗಮಾಯವಾಗಿ ಗುರುಬಲದಿಂದ ಅಪಾರ ಯಶಸ್ಸನ್ನು ಪಡೆದುಕೊಳ್ಳಬಹುದು. [ಗುರುಬಲವಿಲ್ಲದ ಸಿಂಹ ಮತ್ತು ಕನ್ಯಾರಾಶಿಗೆ ಪರಿಹಾರವೇನು?]
2017ರ ಜನವರಿ ಪಂಚಮ ಶನಿಕಾಟ ಆರಂಭವಾಗುವುದು. ಅದಿರುವುದು ಎರಡೂವರೆ ವರ್ಷ. ಆ ಸಮಯದಲ್ಲಿ ಸಂಸಾರದ ತಾಪತ್ರಯಗಳು ಹೆಚ್ಚು ಬರುವುದರಿಂದ ಈಗಿನಿಂದಲೇ ಮುಂದಿನ ಎರಡೂವರೆ ವರ್ಷ ಏನೇನು ಮಾಡಬಹುದು ಎಂದು ಯೋಚಿಸಿಟ್ಟುಕೊಳ್ಳಿ. ಬೇಕಿದ್ದಲ್ಲಿ ವರ್ಷಫಲ ಮೊದಲೇ ತಿಳಿದುಕೊಂಡರೆ ಒಳ್ಳೆಯದು.
ಇದು ಅವಶ್ಯಕವೂ ಹೌದು, ಮೊದಲೇ ನಮಗೆ ತೊಂದರೆಯ ಸಮಯ ಬರುತ್ತದೆ ಎಂದು ಗೊತ್ತಾದರೆ ಅದಕ್ಕೆ ಪೂರ್ವ ತಯಾರಿ ಮಾಡಿಕೊಳ್ಳಬಹುದು. ಇಲ್ಲವಾದಲ್ಲಿ ಸಂಕಟ ಬಂದಾಗ ವೆಂಟಕರಮಣ ಎನ್ನುವ ಪರಿಸ್ಥಿತಿ ತಂದುಕೊಳ್ಳಬಾರದು ಸಿಂಹ ರಾಶಿಯ ಮಂದಿ. ಒಟ್ಟಿನಲ್ಲಿ ಈ ವರ್ಷ ಶೇ.70ರಷ್ಟು ಅಶುಭ ಫಲಗಳೇ ಕಂಡು ಬರುವುದರಿಂದ ಬರುವ ಸಂಕಷ್ಟಗಳನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಾಗಿರಬೇಕು.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications