ಶನಿ ಮಹಾತ್ಮನ ಬಗ್ಗೆ ತಪ್ಪು ಕಲ್ಪನೆ ಬಿಡಿ

ಅಲ್ಲದೇ ಶನಿಯು ತನ್ನ ತಂದೆ, ತಾಯಿ ಮತ್ತು ಶಿವ, ಬ್ರಹ್ಮ, ಬೃಹಸ್ಪತಿ, ದಶರಥ, ಶಂಕರಾಚಾರ್ಯ, ಸತ್ಯ ಹರಿಶ್ಚಂದ್ರ, ಶ್ರೀಕೃಷ್ಣ, ವಿಷ್ಣುದೇವ, ಗಣಪತಿ, ಲಕ್ಮೀದೇವಿ, ವಿಶ್ವಾಮಿತ್ರ, ವಾಲಿ, ನಳ ಮಹಾರಾಜ, ಪಾಂಡವರು, ಕೌರವರು, ಪಾರ್ವತಿ, ಸರಸ್ವತಿ, ರಾಜಾ ವಿಕ್ರಮಾದಿತ್ಯ ಮತ್ತಿತರರನ್ನೇ ತನ್ನಾಟದಿಂದ ಬಿಟ್ಟಿಲ್ಲ, ಇನ್ನು ನಮ್ಮ ಕರ್ಮಫಲಗಳನ್ನು ಅನುಭವಿಸಲು ನಮ್ಮನ್ನು ಬಿಡದೇ ಇರುತ್ತಾನೆಯೇ? ಈ ಬಗ್ಗೆ ಹಲವಾರು ಪೌರಾಣಿಕ ಕಥೆಗಳಿವೆ. ಮುಂದಿನ ಲೇಖನಗಳಲ್ಲಿ ಓದುವಿರಿ.
ಇನ್ನು ಮಂತ್ರಕ್ಕೆ ಹಣ್ಣು ಉದುರುವುದೇ? ಎಂಬ ಮಾತಿನಂತೆ ನವಗ್ರಹ ಸ್ತೋತ್ರ, ಹನುಮಾನ ಚಾಲೀಸಾ, ಮಹಾಮೃತ್ಯುಂಜಯ ಮಂತ್ರಗಳನ್ನು ಪಠಿಸುವುದರಿಂದ ಶನಿ ಹೇಗೆ ಶಾಂತನಾಗುತ್ತಾನೆ ಎಂಬ ಪ್ರಶ್ನೆ ಅಪ್ರಬುದ್ಧರಲ್ಲಿ ಮೂಡುವುದು ಸಹಜವೇ. ನಾವು ರಾಷ್ಟ್ರಗೀತೆ, ದೇಶಭಕ್ತಿಗೀತೆ, ನಾಡಗೀತೆಗಳನ್ನು ಮನದುಂಬಿ ಹಾಡುವಾಗ ನಮ್ಮೆಲ್ಲರ ಕಣಕಣಗಳಲ್ಲೂ ದೇಶಭಕ್ತಿ ಉಕ್ಕಿ ಹರಿಯುತ್ತದೆ. ಅದೇ ರೀತಿ ಮಂತ್ರಗಳನ್ನು ಪಠಿಸುವುದರಿಂದ ಭಯ, ಭಕ್ತಿ-ಭಾವ ಮನದಲ್ಲಿ ಮತ್ತು ದೇಹದಲ್ಲಿ ಮೂಡುತ್ತದೆ ಎನ್ನುವುದು ಮಂತ್ರ ಪಠಿಸುವವರ ಅನುಭವದ ಮಾತು.
ಎಷ್ಟೋ ಜನರಿಗೆ ಶನಿ ಮಹಾತ್ಮನು ಅವರ ಜಾತಕದಲ್ಲಿ ಉಪಸ್ಥಿತನಾಗಿದ್ದ ಸ್ಥಳದಿಂದ ಅವರ ಮೇಲೆ ಪ್ರಭಾವ ಬೀರುತ್ತಾನೆ. ಆದರೆ ಜಾತಕ ಸಂಪೂರ್ಣ ಪರಿಶೀಲಿಸಿದಾಗಲೇ ಗೊತ್ತಾಗುವುದು. ಇಲ್ಲಿ ನಾವು ಜ್ಯೋತಿಷ್ಯ ಮತ್ತು ಭವಿಷ್ಯವನ್ನು ಹೇಳುತ್ತಿಲ್ಲ. ಕೇವಲ ಶನಿ ಮಹಾತ್ಮನ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮತ್ತು ಚರ್ಚೆ ಅಷ್ಟೇ.
ಈ ಹಿಂದಿನ ಲೇಖನದಲ್ಲಿ ಹೇಳಿದಂತೆ ಶನಿ ಮಹಾರಾಜನು ಜೀವಮಾನದಲ್ಲಿ 3 ರಿಂದ 4 ಸಲ ಬರುವನು. ಅಂದರೆ ಮೂವತ್ತು ವರ್ಷಕ್ಕೊಮ್ಮೆ ಸಾಡೇಸಾತಿಯಾಗಿ. ಆದರೆ ಒಂದನೇ ಬಾರಿಗೆ ಅಷ್ಟೊಂದು ಕೆಟ್ಟಫಲ ನೀಡಲಾರನು. 2ನೇ ಬಾರಿ ಅಸ್ತವ್ಯಸ್ತವಾದ ಜೀವನವನ್ನು ಸರಿ ಮಾಡುವ ಬಗೆಯ ಬಗ್ಗೆ ಬುದ್ಧಿ ಕಲಿಸುತ್ತಾನೆ. 3ನೇ ಬಾರಿ ಜೀವನದಲ್ಲಿ ಮಾಡಿದ ಎಲ್ಲ ಕರ್ಮಫಲಗಳನ್ನು ಮರಳಿ ನೀಡುತ್ತ ಮಾಡಿದ ಕರ್ಮಕ್ಕೆ ಫಲ ಉಣ್ಣಿಸುತ್ತಾನೆ.
ಶನಿ ಮಹಾರಾಜನಿಗೆ ಶನೈಶ್ಚರ, ಪಿಂಗಲ, ಕೃಷ್ಣ, ರೌದ್ರಾಂತಕ, ಯಮ, ಸೌರಿ, ಪಿಪ್ಪಲಾದ, ಸಂಸ್ತುತ, ಕೋಣಸ್ಥ, ಬಬ್ರು, ಮಂದ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಶನಿ ಮಹಾರಾಜನ ಬಗ್ಗೆ ಬಹಳಷ್ಟು ಮುಂದಿನ ಲೇಖನಗಳಲ್ಲಿ ವಿವರಿಸಲಾಗುವುದು.
ಶನಿಕೃಪೆಗೆ : ಪ್ರತಿ ಶನಿವಾರ ಮತ್ತು ಮಂಗಳವಾರ ಹನುಮಂತ ದೇವರ ದೇವಸ್ಥಾನಕ್ಕೆ ಹೋಗಿಬರುವುದು ಒಳ್ಳೆಯದು. ನವಗ್ರಹ ಮತ್ತು ಈಶ್ವರ ದೇವಸ್ಥಾನಗಳಿಗೂ ಹೋಗಬಹುದು ಶನಿಕೃಪೆಯಾಗಬೇಕಿದ್ದರೆ. ಆದಷ್ಟು ನಿಮ್ಮ ಪರಿಚಯದವರು ಅಥವಾ ಹತ್ತಿರದ ಬಂಧುಗಳು ಸಂಕಷ್ಟದಲ್ಲಿದ್ದರೆ ನಿಮ್ಮ ಕೈಲಾದ ಸಹಾಯ ಮಾಡಿ ಸ್ವಲ್ಪನಾದರೂ. ಎಳ್ಳು ದೀಪವನ್ನು ಮನೆಯಲ್ಲಿ ಹಚ್ಚಲೇಬೇಡಿ ದೇವಸ್ಥಾನದಲ್ಲಿ ಮಾತ್ರ ಹಚ್ಚಿ.
ವಾಸ್ತುಟಿಪ್ಸ್ : ಮನೆತುಂಬ ದೇವರ ಫೋಟೋ ಹಾಕುವುದು ಬೇಡ, ದೇವರ ಜಗಲಿ ಬಳಿ ಅಥವಾ ಪೂಜಾ ಕೋಣೆಯಲ್ಲಿ ಮಾತ್ರ ದೇವರ ಫೋಟೋ ಇಡಿ, ಒಂದೇ ದೇವರ ಎರಡಕ್ಕಿಂತ ಹೆಚ್ಚಿನ ಫೋಟೋ ಬೇಡ. ಮನೆಯ ಹಿರಿಯರ ಫೋಟೋ ಪೂಜಾ ಕೋಣೆಯಲ್ಲಿ ಇರಿಸಲೇಬೇಡಿ. ಮನೆ ದಕ್ಷಿಣದ ಗೋಡೆಗೆ ಹಿರಿಯರ ಫೋಟೋ ಇರಲಿ. [ಲೇಖಕರ ಮೊಬೈಲ್ : 9481522011].
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications