ಶನಿ ಮಹಾರಾಜ ಯಾರು? ಎಂಥವರನ್ನು ಕಾಡುತ್ತಾನೆ?

ಅತ್ಯಂತ ಕ್ರೂರ ಗ್ರಹವೆಂದು ಕರೆಸಿಕೊಳ್ಳುವ ಶನಿಯು ಅವರವರ ಕರ್ಮಗಳ ಫಲವನ್ನು ಅವರ ಜೀವಿತಾವಧಿಯಲ್ಲೇ, ಜೀವಿತಾವಧಿಯಲ್ಲಿ ಕರ್ಮಫಲ ಉಳಿದರೆ ನರಕದಲ್ಲಿ ಅವನ ಸಹೋದರ ಯಮ ನೀಡುತ್ತಾನೆ!
ನೀಲಿ ಬಣ್ಣದ ಶನಿಯು ನಪುಂಸಕನಾಗಿದ್ದಾನೆ. ಮುಖ್ಯವಾಗಿ ರಾಜಕಾರಣಿಗಳಿಗೆ ಶನಿಯ ಕೃಪಾಕಟಾಕ್ಷ ಬೇಕೇಬೇಕು. ಏಕೆಂದರೆ ಶನಿಯು ಪ್ರಜಾಪ್ರಭುತ್ವ ಮೌಲ್ಯಗಳನ್ನು ಪ್ರತಿನಿಧಿಸುತ್ತಾನೆ. ನೀವು ನೋಡಿರಬಹುದು ಎಷ್ಟೋ ಜನ ಬೀದಿಯಲ್ಲಿ ಅರ್ಧಮರ್ಧ ಬಟ್ಟೆ ಹಾಕಿಕೊಂಡು ಭಿಕಾರಿಗಳಾಗಿ ಓಡಾಡುತ್ತಿರುತ್ತಾರೆ. ಇವರೆಲ್ಲ ಶನಿಯ ಕ್ರೂರ ದೃಷ್ಟಿಗೆ ಬಿದ್ದವರೆ. ಇನ್ನೊಂದು ವಿಷಯ. ಕೆಲವು ಜನ ಆಗಿರುವ ನೋವನ್ನು ತಡೆದುಕೊಳ್ಳದೇ ದಯಾಮರಣ ಕೇಳಿಕೊಳ್ಳುತ್ತಾರೆ. ಬೇಕಿದ್ದರೆ ಅವರೇ ಸಾವನ್ನು ಆಹ್ವಾನಿಸಬಹುದು. ಆದರೆ ಶನಿಯು ಅವರಿಗೆ ಸಾಯಲೂ ಬಿಡುವುದಿಲ್ಲ. ಇದು ಶನಿಯ ಪ್ರಭಾವ.
ಆಗರ್ಭ ಶ್ರೀಮಂತನನ್ನು ಬಿಕ್ಷುಕನನ್ನಾಗಿಯೂ ಶನಿ ಮಾಡುತ್ತಾನೆ ಎಂದರೆ ಅವನ ಪ್ರಭಾವಕ್ಕೆ ಈ ಜಗತ್ತಿನಲ್ಲಿ ಯಾರೂ ಸಾಟಿಯಿಲ್ಲ ಎನ್ನುವುದು ನೆನಪಿರಲಿ. ಆಯುಷ್ಯಕಾರಕನಾದ ಶನಿಯು ಈಗ ನೇರಗತಿಯಲ್ಲಿ ತುಲಾ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ದೈಹಿಕ ಸಾಮರ್ಥ್ಯ ಕುಗ್ಗಿಸಿ, ಮಾನಸಿಕ ಯಾತನೆ ನೀಡುವ ಶನಿಯು ಈಗ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ನೀಡುತ್ತಾನೆ.
ಗುಂಪಿನಲ್ಲಿ ಸಾವಿರಾರು ಜನರಿದ್ದರೂ ರೌಡಿಗಳು ಅವರಿಗೆ ಬೇಕಾದವನನ್ನೇ ಮಾತ್ರ ಕೊಚ್ಚುವಂತೆ (ರೌಡಿಗಳು ಅವರಿಗೆ ಬೇಕಾದವರನ್ನು ಮಾತ್ರ ಮುಟ್ಟುತ್ತಾರೆ) ಶನಿಯು ಕೋಟ್ಯಂತರ ಜನರಿದ್ದರೂ ಅವನ ಅವಕೃಪೆಗೆ ಒಳಗಾದವರನ್ನು ಮಾತ್ರ ಕಾಡುತ್ತಾನೆ. ಉಳಿದವರಿಗೆ ಅವರ ಸಮಯ ಬಂದಾಗ. ಅಂದರೆ ಸಾಡೇಸಾತಿ ವಕ್ಕರಿಸಿಕೊಂಡಾಗ.
ರಾಜಕಾರಣಿಗಳಿಗಂತೂ ಈಗ ಶುಕ್ರದೆಸೆ ಎನ್ನಬಹುದು. ಆದರೆ ಅವರು ಈ ಮುನ್ನ ಪ್ರಜೆಗಳಿಗೆ ಒಳ್ಳೆಯದನ್ನೇ ಮಾಡಿರಬೇಕು. ಇನ್ನು ಪ್ರಜೆಗಳಿಗೆ ಮೋಸ, ವಂಚನೆ ಮಾಡಿದ ರಾಜಕಾರಣಿಗಳಿಗೆ ಶನಿ ಬಿಡುವುದೇ ಇಲ್ಲ. ಯಾಕೆಂದರೆ ತುಲಾ ರಾಶಿಯು ಶನಿಯ ಉಚ್ಚಕ್ಷೇತ್ರ. ಆದ್ದರಿಂದ ಸಮನಾಗಿ ತೂಗಿ ನ್ಯಾಯ ನೀಡಲಾರಂಭಿಸಿದ್ದಾನೆ ಈಗ. ಶನಿ ಈಗ ಮಿಥುನ ಈ ರಾಶಿಯವರಿಗೆ ಪಂಚಮ ಸ್ಥಾನದಲ್ಲಿ ಸಂಚರಿಸುತ್ತ ಪಂಚಮ ಶನಿಯಾಗಿ ತನ್ನಾಟ ಶುರು ಮಾಡಿದ್ದಾನೆ.
ಶನಿಯ ಕುರಿತು ಅಲ್ಪ ಪರಿಚಯವಿಷ್ಟೇ ಇದು. ಇನ್ನೂ ತುಂಬಾ ಶನಿ ಮಹಾರಾಜನ ಬಗ್ಗೆ ತಿಳಿದುಕೊಳ್ಳುವುದಿದೆ. ಅವನ ಬಗ್ಗೆ ತಿಳಿದುಕೊಂಡು, ಅವನನ್ನು ಸಂಪ್ರೀತಿ ಮಾಡುವುದು ಹೇಗೆ? ಅವನ ಒಲವು ಗಳಿಸಿಕೊಂಡು ಜೀವನದಲ್ಲಿ ಗೆಲುವು ಪಡೆದುಕೊಳ್ಳುವ ಬಗೆ ಹೇಗೆ ಎಂಬುದನ್ನು ಮುಂದಿನ ಲೇಖನಗಳಲ್ಲಿ ಓದುವಿರಿ. [ಲೇಖಕರ ಮೊಬೈಲ್ : 94815 22011]
-
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
ಡಿವೋರ್ಸ್ವರೆಗೆ ಪತಿಯ ನಿವಾಸದಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ: ನಟ ವಿಜಯ್ ಪತ್ನಿ ಕೋರ್ಟ್ಗೆ ಮನವಿ -
Yash: ಪತ್ನಿ ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ಹೊಸ ಲುಕ್ನಲ್ಲಿ ಯಶ್ ಪ್ರತ್ಯಕ್ಷ -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
ಟಿ20 ವಿಶ್ವಕಪ್ 2026 ಫೈನಲ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್ಗೆ ಸೂರ್ಯಕುಮಾರ್ ಯಾದವ್ ನಿವೃತ್ತಿ ಘೋಷಣೆ ವದಂತಿ -
Vijay Divorce: ಡಿವೋರ್ಸ್ ವದಂತಿ ನಡುವೆಯೇ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ದಳಪತಿ ವಿಜಯ್; ವಿಡಿಯೋ ವೈರಲ್ -
UPSC Results: ಯಾದಗಿರಿ ಜಿಲ್ಲೆ ಒಂದರಲ್ಲೇ 4 ಮಂದಿ ಯುಪಿಎಸ್ಸಿ ಪಾಸ್, ಯಾರವರು? ಹಿನ್ನೆಲೆ ಏನು -
Karnataka Weather: ಕಲಬುರಗಿಯಲ್ಲಿ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲ ಬೇಗೆ -
ದುಬೈ ವಿಮಾನ ನಿಲ್ದಾಣಕ್ಕೆ ನುಗ್ಗಿದ ಡ್ರೋನ್, ಎಲ್ಲಾ ವಿಮಾನ ಹಾರಾಟ ದಿಢೀರ್ ಸ್ಥಗಿತ | Operation Roaring Lion -
LPG Price Hike: ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ 60 ರೂಪಾಯಿ ಏರಿಕೆ, ವಾಣಿಜ್ಯ ಸಿಲಿಂಡರ್ ದರ 115 ರೂಪಾಯಿ ಹೆಚ್ಚಳ -
SWR: ಬೆಂಗಳೂರಿನಿಂದ ಇಲ್ಲಿಗೆ ಮಾ.10ರಿಂದ ವಿಶೇಷ ರೈಲುಗಳ ಸಂಚಾರ, ವೇಳಾಪಟ್ಟಿ ಹೀಗಿದೆ












Click it and Unblock the Notifications