ನಿದ್ರಿಸುವ ಜಾಯಮಾನದವರಿಗೆ ಚಂದ್ರ ಗ್ರಹಣ ಅಪಾಯ, ಎಚ್ಚರ!
ಜನವರಿ 31ಕ್ಕೆ ಖಗ್ರಾಸ ಚಂದ್ರಗ್ರಹಣ. ಆಶ್ಲೇಷಾ ನಕ್ಷತ್ರದಲ್ಲಿ ಚಂದ್ರನಿಗೆ ರಾಹು ಗ್ರಹಣ. ಅಂದರೆ ಚಂದ್ರನೇನೂ ಗ್ರಹಣ ಬಾಧಿತನಾಗುವುದಿಲ್ಲ ಅಥವಾ ಮಲಿನವೂ ಆಗುವುದಿಲ್ಲ. ಆದರೆ ಅಷ್ಟು ಹೊತ್ತು ಚಂದ್ರ ರಶ್ಮಿಗಳು ಭೂಮಿಗೆ ವಂಚಿತವಾಗುತ್ತದೆ. ಗ್ರಹಣದ ಫಲಗಳನ್ನು ತಿಳಿದುಕೊಳ್ಳಬೇಕು ಎಂಬ ಕುತೂಹಲದಿಂದ ಇರುವವರಿಗೆ ಈ ಲೇಖನ ಉತ್ತಮ ಮಾಹಿತಿ ಒದಗಿಸುತ್ತದೆ.
ಚಂದ್ರ ಅಂದರೆ ಮನೋಕಾರಕ. ಆದ್ದರಿಂದ ಮನುಷ್ಯನ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಂದರೆ existing nature ಇರುವವರಿಗೆ ಇನ್ನಷ್ಟು ಆ ಪ್ರಕೃತಿಯು ಉದ್ದೀಪನಗೊಳ್ಳುತ್ತದೆ. ಹೆಂಡ ಕುಡಿಯದೆಯೇ ತೂರಾಡುವವನು ಹೆಂಡ ಕುಡಿದರೆ ಹೇಗಾದೀತು? ಅತಿಯಾಗಿ ನಿದ್ರಿಸುವ ಜಾಯಮಾನದವರಿಗೆ, ಸಭೆ ಸಮಾರಂಭಗಳೆನ್ನದೆ ವೇದಿಕೆಯಲ್ಲೇ ತೂಕಡಿಸುವ ಮನುಷ್ಯರಿಗೆ ಅಪಾಯವಿದೆ.
ಅವರ ನಿದ್ರಾ ಪ್ರವೃತ್ತಿಯನ್ನು ಇನ್ನಷ್ಟು ಉದ್ದೀಪನಗೊಳಿಸುತ್ತದೆ. ಅದರಲ್ಲೂ ಆಶ್ಲೇಷಾ ನಕ್ಷತ್ರ ಇರುವ ಇಂತಹ ನಿದ್ರಾಸಕ್ತರು, ದಶಾಧಿಪ ಆಶ್ಲೇಷಾ ನಕ್ಷತ್ರದಲ್ಲಿದ್ದರೂ ಇದು ದುಷ್ಪರಿಣಾಮ ಬೀರಬಹುದು. ಅದಕ್ಕಾಗಿ ಆ ದಿನ ಮಧ್ಯಾಹ್ನದ ನಂತರ ಉಪವಾಸವಿದ್ದು, ಘಟ ಶುದ್ಧಿಯಿಂದ ಇದ್ದರೆ ತುಂಬಾ ಕ್ಷೇಮವಿದೆ.

ನಿದ್ರಾಪ್ರಿಯರೇ ಎಚ್ಚರ
ಅತಿ ನಿದ್ರೆಯು ನರಮಂಡಲಗಳ ದೌರ್ಬಲ್ಯಕ್ಕೆ ಕಾರಣವಾಗುತ್ತದೆ. ಹಾಗಾಗಿ ಇಂತಹ ನಿದ್ರಾಪ್ರಿಯರು ಎಚ್ಚರದಿಂದ ಇದ್ದರೆ ಕ್ಷೇಮ. ಇನ್ನು ಇದು ಸಿಂಹ ರಾಶಿ, ಅದರ ತ್ರಿಕೋನ ರಾಶಿಗಳಾದ ಮೇಷ, ಧನುಸ್ಸು ರಾಶಿಗಳವರಿಗೂ ಪರಿಣಾಮ ಬೀರುತ್ತದೆ. ಕರ್ಕಾಟಕ ರಾಶಿಗೂ ಪರಿಣಾಮವಿದೆ.

ಜಪ-ತಪ ಅನುಷ್ಠಾನ
ಈ ಗ್ರಹಣ ಪರ್ವ ಕಾಲದಲ್ಲಿ ಜಪಾನುಷ್ಟಾನ, ಪ್ರವಚನ ಶ್ರವಣ, ಪ್ರಾಣಾಯಾಮ ಧ್ಯಾನ, ಅವರವರ ಐಚ್ಛಿಕ ಸಂಶೋಧನೆ, ವಿದ್ಯಾರ್ಥಿಗಳು ಅವರವರ syllabus study ಇತ್ಯಾದಿಗಳನ್ನು ಮಾಡಿದರೆ ಅದು ವಿಶೇಷ ಪರಿಣಾಮ ಬೀರುತ್ತದೆ. ದುಃಖ, ಹೊಡೆದಾಟ, ಹಿಂಸೆಗಳ ಸಿನಿಮಾ, ಧಾರಾವಾಹಿ ನೋಡಿದರೆ ದುಷ್ಪರಿಣಾಮ ಖಂಡಿತಾ.

ಕಾರ್ಯ ಸಾಧನೆಗೆ ಮಾಧ್ಯಮ
ಯಾಕೆಂದರೆ ಆ ಗ್ರಹಣ ಕಾಲವು ನಮ್ಮ ನಮ್ಮ ಭಾವನೆಗಳನ್ನು ಉದ್ದೀಪನಗೊಳಿಸುವ ಕಾಲವಾಗಿರುತ್ತದೆ. ಒಟ್ಟಿನಲ್ಲಿ ಶರೀರ ಮಾಧ್ಯಂ ಖಲು ಧರ್ಮ ಸಾಧನಂ ಎಂಬಂತೆ ಶರೀರದ ಸೌಖ್ಯವೇ ಸಕಲ ಕಾರ್ಯ ಸಾಧನೆಗೆ ಮಾಧ್ಯಮವಾಗುತ್ತದೆ.

ಗ್ರಹಣ ಕಾಲ ಹಾಗೂ ಆಹಾರ ಸೇವನೆ
ಸ್ಪರ್ಶ ಕಾಲ- ಸಂಜೆ 5.22 (ಭಾರತೀಯ ಕಾಲ ಮಾನ)
ಮಧ್ಯ ಕಾಲ- ರಾತ್ರಿ 7.04
ಅಂತ್ಯ ಕಾಲ- ರಾತ್ರಿ 8.46.
ಗ್ರಹಣ ಮುಗಿದ ಬಳಿಕ ಚಂದ್ರದರ್ಶನ, ಸ್ನಾನಾದಿಗಳನ್ನು ಮಾಡಿ ರಾತ್ರಿ 9 ಗಂಟೆಯ ನಂತರ ಲಘುವಾದ ಹಣ್ಣಿನ ರಸ ಅಥವಾ ಹಣ್ಣು ಸೇವಿಸಿದರೆ ಆರೋಗ್ಯಕರ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications