Vastu Tips for Loan: ಸಂಬಳ ಬಂದ ತಕ್ಷಣ ಸಾಲ ತೀರಿಸಬೇಡಿ: ವಾಸ್ತು ಎಚ್ಚರಿಕೆ
ಬಹುತೇಕ ಉದ್ಯೋಗಿಗಳಿಗೆ ತಿಂಗಳ ಸಂಬಳ ಬಂದ ಕೂಡಲೇ ಸಾಲ ತೀರಿಸುವುದು ಮೊದಲ ಅವರ ಆದ್ಯತೆಯಾಗಿರುತ್ತದೆ. ಆದರೆ ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೈಗೆ ಹಣ ಬಂದ ತಕ್ಷಣವೇ ಸಂಪೂರ್ಣ ಮೊತ್ತವನ್ನು ಸಾಲಕ್ಕೆ ಮೀಸಲಿಡುವುದು ಅಷ್ಟು ಸೂಕ್ತವಲ್ಲ. ಇದು ನಿಮ್ಮ ಆರ್ಥಿಕ ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ತಜ್ಞರು ಹೇಳುತ್ತಾರೆ.
ನಾವು ಯಾವ ಕ್ರಮಗಳನ್ನು ಅನುಸರಿಸುವುದು ಉತ್ತಮ?
1. ಲಕ್ಷ್ಮೀ ದೇವಿಗೆ ಗೌರವ ಸಲ್ಲಿಸಿ
ಹಿಂದೂ ಧರ್ಮದಲ್ಲಿ ಕಷ್ಟಪಟ್ಟು ಗಳಿಸಿದ ಹಣವನ್ನು ಲಕ್ಷ್ಮೀ ದೇವಿಯ ಸ್ವರೂಪವೆಂದು ಪರಿಗಣಿಸಲಾಗುತ್ತದೆ. ಸಂಬಳ ಬಂದ ತಕ್ಷಣ ಅದನ್ನು ಪೂರ್ತಿಯಾಗಿ ಸಾಲಕ್ಕೆ ಬಳಸುವುದರಿಂದ ಮನೆಗೆ ಬಂದ ಮಹಾಲಕ್ಷ್ಮಿಯನ್ನು ಬರಮಾಡಿಕೊಳ್ಳುವ ಮೊದಲೇ ಮನೆಯಿಂದ ಹೊರಗೆ ಕಳುಹಿಸಿದಂತಾಗುತ್ತದೆ. ಇದು ಮನೆಯ ಧನಾಗಮನಕ್ಕೆ ಅಡ್ಡಿಯಾಗಬಹುದು ಎಂಬ ನಂಬಿಕೆಯಿದೆ.

2. ಮೊದಲ ದಿನವೇ ಖಾತೆ...
ಸಂಬಳ ಬಂದ ಮೊದಲ ದಿನವೇ ನಿಮ್ಮ ಜೇಬು ಅಥವಾ ಬ್ಯಾಂಕ್ ಖಾತೆಯನ್ನು ಪೂರ್ತಿ ಖಾಲಿ ಮಾಡಬೇಡಿ. ಕನಿಷ್ಠ ಸ್ವಲ್ಪ ಹಣವನ್ನಾದರೂ ಉಳಿಸಿಕೊಂಡು ಮರುದಿನ ಸಾಲದ ಹಣ ಪಾವತಿಸುವುದು ಆರ್ಥಿಕ ಭದ್ರತೆಯ ದೃಷ್ಟಿಯಿಂದ ಉತ್ತಮ ಎಂದು ತರಲಾಗುತ್ತದೆ.
3. ಸಾಲ ತೀರಿಸಲು ಸಮಯ ಸಂದರ್ಭ
ಮಂಗಳವಾರ: ವಾಸ್ತು ಮತ್ತು ಜ್ಯೋತಿಷ್ಯದ ಪ್ರಕಾರ ಸಾಲದ ಕಂತುಗಳನ್ನು ಪಾವತಿಸಲು ಅಥವಾ ಸಾಲ ಮುಕ್ತವಾಗಲು ಮಂಗಳವಾರ ಅತ್ಯಂತ ಶ್ರೇಷ್ಠ ದಿನ. ಸಂಬಳ ಬಂದ ದಿನವೇ ಪಾವತಿಸುವ ಬದಲು ಕನಿಷ್ಠ ಒಂದು ದಿನದ ನಂತರ ಪಾವತಿಸುವುದು ಸೂಕ್ತ.
4. ದಿಕ್ಕುಗಳ ಮಹತ್ವ
ಸಾಲಕ್ಕೆ ಸಂಬಂಧಿಸಿದ ಹಣವನ್ನು ನೀಡುವಾಗ ಅಥವಾ ಆನ್ಲೈನ್ ಪಾವತಿ ಮಾಡುವಾಗ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿರುವುದು ಶುಭಕರ. ನೈರುತ್ಯ (South-West) ದಿಕ್ಕಿನಲ್ಲಿ ಕುಳಿತು ಹಣದ ವ್ಯವಹಾರ ಮಾಡುವುದನ್ನು ಆದಷ್ಟು ತಪ್ಪಿಸಿ ಎಂದು ತಜ್ಞರ ಸಲಹೆ.
5. ಹಣಕ್ಕೆ ಪೂಜೆ ಮಾಡಿ
ನಗದು ರೂಪದಲ್ಲಿ ಹಣ ತಂದಿದ್ದರೆ ಅಥವಾ ಬ್ಯಾಂಕಿನಿಂದ ಡ್ರಾ ಮಾಡಿದ್ದರೆ ಮೊದಲು ಅದನ್ನು ಪೂಜಾ ಸ್ಥಳದಲ್ಲಿಟ್ಟು ಅರಿಶಿನ-ಕುಂಕುಮ ಸಮರ್ಪಿಸಿ ನಮಸ್ಕರಿಸಿ. ಇದು ಧನ ವೃದ್ಧಿಗೆ ಮತ್ತು ಶುಭ ಫಲಗಳಿಗೆ ದಾರಿಯಾಗುತ್ತದೆ.
6. ಪುಟ್ಟದಾದ ದಾನ - ದೊಡ್ಡ ಪ್ರಮಾಣದ ಪುಣ್ಯ
ಬಂದ ಸಂಬಳದಲ್ಲಿ ಅತ್ಯಲ್ಪ ಮೊತ್ತವನ್ನು ದೇವಾಲಯದ ಹುಂಡಿಗೆ ಅಥವಾ ದೀನದಲಿತರಿಗೆ ದಾನ ಮಾಡುವುದರಿಂದ ಹಣಕ್ಕೆ ಮಂಗಳಕರ ಆಗುತ್ತದೆ. ಇದು ನಿಮ್ಮ ಆದಾಯದಲ್ಲಿ ಸಮೃದ್ಧಿ ತರುತ್ತದೆ.
ಸಾಲ ತೀರಿಸುವುದು ಜವಾಬ್ದಾರಿಯುತ ಕೆಲಸವೇ ಆದರೂ ಅದನ್ನು ಶಾಸ್ತ್ರೋಕ್ತವಾಗಿ ಮಾಡುವುದು ಮುಖ್ಯವಾಗಿದೆ. ಈ ಸಣ್ಣ ವಾಸ್ತು ಬದಲಾವಣೆಗಳು ನಿಮ್ಮ ಜೀವನದಲ್ಲಿ ಆರ್ಥಿಕ ಶಿಸ್ತು ಮತ್ತು ಮಾನಸಿಕ ಶಾಂತಿ ಸುಧಾರಿಸಬಹುದು ಎಂದು ನಂಬಲಾಗಿದೆ.
-
ನಿಮ್ಮ ಮನೆ ದಿಕ್ಕು ಸರಿಯೇ? ರಾಶಿ ಪ್ರಕಾರ ವಾಸ್ತು ಸೂಚನೆಗಳು ಇಲ್ಲಿವೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ












Click it and Unblock the Notifications