Get Updates
Get notified of breaking news, exclusive insights, and must-see stories!

Vastu Tips for Loan: ಸಂಬಳ ಬಂದ ತಕ್ಷಣ ಸಾಲ ತೀರಿಸಬೇಡಿ: ವಾಸ್ತು ಎಚ್ಚರಿಕೆ

ಬಹುತೇಕ ಉದ್ಯೋಗಿಗಳಿಗೆ ತಿಂಗಳ ಸಂಬಳ ಬಂದ ಕೂಡಲೇ ಸಾಲ ತೀರಿಸುವುದು ಮೊದಲ ಅವರ ಆದ್ಯತೆಯಾಗಿರುತ್ತದೆ. ಆದರೆ ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೈಗೆ ಹಣ ಬಂದ ತಕ್ಷಣವೇ ಸಂಪೂರ್ಣ ಮೊತ್ತವನ್ನು ಸಾಲಕ್ಕೆ ಮೀಸಲಿಡುವುದು ಅಷ್ಟು ಸೂಕ್ತವಲ್ಲ. ಇದು ನಿಮ್ಮ ಆರ್ಥಿಕ ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ತಜ್ಞರು ಹೇಳುತ್ತಾರೆ.

ನಾವು ಯಾವ ಕ್ರಮಗಳನ್ನು ಅನುಸರಿಸುವುದು ಉತ್ತಮ?

1. ಲಕ್ಷ್ಮೀ ದೇವಿಗೆ ಗೌರವ ಸಲ್ಲಿಸಿ

ಹಿಂದೂ ಧರ್ಮದಲ್ಲಿ ಕಷ್ಟಪಟ್ಟು ಗಳಿಸಿದ ಹಣವನ್ನು ಲಕ್ಷ್ಮೀ ದೇವಿಯ ಸ್ವರೂಪವೆಂದು ಪರಿಗಣಿಸಲಾಗುತ್ತದೆ. ಸಂಬಳ ಬಂದ ತಕ್ಷಣ ಅದನ್ನು ಪೂರ್ತಿಯಾಗಿ ಸಾಲಕ್ಕೆ ಬಳಸುವುದರಿಂದ ಮನೆಗೆ ಬಂದ ಮಹಾಲಕ್ಷ್ಮಿಯನ್ನು ಬರಮಾಡಿಕೊಳ್ಳುವ ಮೊದಲೇ ಮನೆಯಿಂದ ಹೊರಗೆ ಕಳುಹಿಸಿದಂತಾಗುತ್ತದೆ. ಇದು ಮನೆಯ ಧನಾಗಮನಕ್ಕೆ ಅಡ್ಡಿಯಾಗಬಹುದು ಎಂಬ ನಂಬಿಕೆಯಿದೆ.

Vastu Tips for Loan

2. ಮೊದಲ ದಿನವೇ ಖಾತೆ...

ಸಂಬಳ ಬಂದ ಮೊದಲ ದಿನವೇ ನಿಮ್ಮ ಜೇಬು ಅಥವಾ ಬ್ಯಾಂಕ್ ಖಾತೆಯನ್ನು ಪೂರ್ತಿ ಖಾಲಿ ಮಾಡಬೇಡಿ. ಕನಿಷ್ಠ ಸ್ವಲ್ಪ ಹಣವನ್ನಾದರೂ ಉಳಿಸಿಕೊಂಡು ಮರುದಿನ ಸಾಲದ ಹಣ ಪಾವತಿಸುವುದು ಆರ್ಥಿಕ ಭದ್ರತೆಯ ದೃಷ್ಟಿಯಿಂದ ಉತ್ತಮ ಎಂದು ತರಲಾಗುತ್ತದೆ.

3. ಸಾಲ ತೀರಿಸಲು ಸಮಯ ಸಂದರ್ಭ

ಮಂಗಳವಾರ: ವಾಸ್ತು ಮತ್ತು ಜ್ಯೋತಿಷ್ಯದ ಪ್ರಕಾರ ಸಾಲದ ಕಂತುಗಳನ್ನು ಪಾವತಿಸಲು ಅಥವಾ ಸಾಲ ಮುಕ್ತವಾಗಲು ಮಂಗಳವಾರ ಅತ್ಯಂತ ಶ್ರೇಷ್ಠ ದಿನ. ಸಂಬಳ ಬಂದ ದಿನವೇ ಪಾವತಿಸುವ ಬದಲು ಕನಿಷ್ಠ ಒಂದು ದಿನದ ನಂತರ ಪಾವತಿಸುವುದು ಸೂಕ್ತ.

ವಾಸ್ತು ಅನುಸರಿಸುವುದು ಏಕೆ ಮುಖ್ಯ? ತಿಳಿಯಿರಿ ಕಾರಣಗಳು
ವಾಸ್ತು ಅನುಸರಿಸುವುದು ಏಕೆ ಮುಖ್ಯ? ತಿಳಿಯಿರಿ ಕಾರಣಗಳು

4. ದಿಕ್ಕುಗಳ ಮಹತ್ವ

ಸಾಲಕ್ಕೆ ಸಂಬಂಧಿಸಿದ ಹಣವನ್ನು ನೀಡುವಾಗ ಅಥವಾ ಆನ್‌ಲೈನ್ ಪಾವತಿ ಮಾಡುವಾಗ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿರುವುದು ಶುಭಕರ. ನೈರುತ್ಯ (South-West) ದಿಕ್ಕಿನಲ್ಲಿ ಕುಳಿತು ಹಣದ ವ್ಯವಹಾರ ಮಾಡುವುದನ್ನು ಆದಷ್ಟು ತಪ್ಪಿಸಿ ಎಂದು ತಜ್ಞರ ಸಲಹೆ.

5. ಹಣಕ್ಕೆ ಪೂಜೆ ಮಾಡಿ

ನಗದು ರೂಪದಲ್ಲಿ ಹಣ ತಂದಿದ್ದರೆ ಅಥವಾ ಬ್ಯಾಂಕಿನಿಂದ ಡ್ರಾ ಮಾಡಿದ್ದರೆ ಮೊದಲು ಅದನ್ನು ಪೂಜಾ ಸ್ಥಳದಲ್ಲಿಟ್ಟು ಅರಿಶಿನ-ಕುಂಕುಮ ಸಮರ್ಪಿಸಿ ನಮಸ್ಕರಿಸಿ. ಇದು ಧನ ವೃದ್ಧಿಗೆ ಮತ್ತು ಶುಭ ಫಲಗಳಿಗೆ ದಾರಿಯಾಗುತ್ತದೆ.

Money Saving Vastu Tips: ವಾಸ್ತು ಪ್ರಕಾರ ಹಣ ಉಳಿಯುತ್ತಿಲ್ಲವೇ? ಈ ಸರಳ ಉಪಾಯಗಳನ್ನು ಅನುಸರಿಸಿ
Money Saving Vastu Tips: ವಾಸ್ತು ಪ್ರಕಾರ ಹಣ ಉಳಿಯುತ್ತಿಲ್ಲವೇ? ಈ ಸರಳ ಉಪಾಯಗಳನ್ನು ಅನುಸರಿಸಿ

6. ಪುಟ್ಟದಾದ ದಾನ - ದೊಡ್ಡ ಪ್ರಮಾಣದ ಪುಣ್ಯ

ಬಂದ ಸಂಬಳದಲ್ಲಿ ಅತ್ಯಲ್ಪ ಮೊತ್ತವನ್ನು ದೇವಾಲಯದ ಹುಂಡಿಗೆ ಅಥವಾ ದೀನದಲಿತರಿಗೆ ದಾನ ಮಾಡುವುದರಿಂದ ಹಣಕ್ಕೆ ಮಂಗಳಕರ ಆಗುತ್ತದೆ. ಇದು ನಿಮ್ಮ ಆದಾಯದಲ್ಲಿ ಸಮೃದ್ಧಿ ತರುತ್ತದೆ.

ಸಾಲ ತೀರಿಸುವುದು ಜವಾಬ್ದಾರಿಯುತ ಕೆಲಸವೇ ಆದರೂ ಅದನ್ನು ಶಾಸ್ತ್ರೋಕ್ತವಾಗಿ ಮಾಡುವುದು ಮುಖ್ಯವಾಗಿದೆ. ಈ ಸಣ್ಣ ವಾಸ್ತು ಬದಲಾವಣೆಗಳು ನಿಮ್ಮ ಜೀವನದಲ್ಲಿ ಆರ್ಥಿಕ ಶಿಸ್ತು ಮತ್ತು ಮಾನಸಿಕ ಶಾಂತಿ ಸುಧಾರಿಸಬಹುದು ಎಂದು ನಂಬಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+