ಬಾತ್ರೂಮ್ಗೂ ವಾಸ್ತು ಇದೆ; ಐದು ತಪ್ಪುಗಳನ್ನು ಮಾಡುವವರು ಈ ನಿಯಮಗಳು ತಿಳಿಯಿರಿ
ಮನೆ ಕಟ್ಟುವಾಗ ನಾವು ವಾಸ್ತು ಶಾಸ್ತ್ರಕ್ಕೆ ತುಂಬಾ ಪ್ರಾಮುಖ್ಯತೆಯನ್ನು ನಿಡುತ್ತೇವೆ. ಮನೆಯಲ್ಲಿ ಯಾವ ಕೋಣೆ ಯಾವ ಜಾಗದಲ್ಲಿ ಇರಬೇಕು, ಯಾವ ದಿಕ್ಕಿನಲ್ಲಿ ಇರಬೇಕು ಎಂಬುದು ನಾವು ಮುಖ್ಯವಾಗಿ ಗಮನಿಸಬೇಕಾಗುತ್ತದೆ. ಇದೇ ರೀತಿ ಮನೆಯಲ್ಲಿ ಸ್ನಾನಗೃಹ ಅಥವಾ ಶೌಚಾಲಯದ ಸ್ಥಳವನ್ನು ಆಯ್ಕೆ ಮಾಡುವಾಗ ವಾಸ್ತು ಶಾಸ್ತ್ರದ ನಿಯಮಗಳನ್ನು ಪಾಲಿಸುವುದು ಅಗತ್ಯ ಎಂದು ತಜ್ಞರು ಹೇಳುತ್ತಾರೆ. ತಪ್ಪು ದಿಕ್ಕಿನಲ್ಲಿ ನಿರ್ಮಿಸಿದರೆ ನಕಾರಾತ್ಮಕ ಶಕ್ತಿ ಮನೆಗೆ ಪ್ರವೇಶಿಸಿ ಹಲವು ಸಮಸ್ಯೆಗಳು ಉಂಟಾಗಬಹುದು ಎಂಬ ನಂಬಿಕೆ ಇದೆ.
ವಾಸ್ತು ಶಾಸ್ತ್ರದ ಪ್ರಕಾರ ವಾಯುವ್ಯ (ಉತ್ತರ-ಪಶ್ಚಿಮ) ದಿಕ್ಕಿಗೆ ಸ್ನಾನಗೃಹವನ್ನು ನಿರ್ಮಾಣ ಮಾಡುವುದು ಒಳ್ಳೆಯದು. ಮನೆಯ ಹೊರಗಡೆಯ ಗೋಡೆಯ ಬಳಿ ಈ ದಿಕ್ಕಿನಲ್ಲಿ ನಿರ್ಮಿಸುವುದು ಉತ್ತಮ. ಈ ದಿಕ್ಕಿನಲ್ಲಿ ಮಾಡಲು ಸಾಧ್ಯವಾಗದಿದ್ದರೆ ಪಶ್ಚಿಮ ದಿಕ್ಕಿನಲ್ಲಿ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ.

ಇನ್ನೂ ನಾವು ಕೆಲವು ಸಂದರ್ಭಗಳಲ್ಲಿ ದಕ್ಷಿಣ ದಿಕ್ಕಿನಲ್ಲಿಯೂ ಶೌಚಾಲಯ ನಿರ್ಮಿಸಬಹುದು. ಆದರೆ ಅದು ನೈಋತ್ಯ ದಿಕ್ಕಿಗೆ ತಾಗದಂತೆ ಜಾಗರೂಕರಾಗಿ ಶೌಚಾಲಯವನ್ನು ನಿರ್ಮಿಸಬಹುದು. ನೈಋತ್ಯ ದಿಕ್ಕಿನಲ್ಲಿ ಸ್ನಾನಗೃಹ ನಿರ್ಮಿಸುವುದು ಮಾನಸಿಕ ಒತ್ತಡ ಮತ್ತು ಅಶಾಂತಿಗೆ ಕಾರಣವಾಗಬಹುದು ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ.
ಆರ್ಥಿಕ ಹಾಗೂ ಆರೋಗ್ಯ ಸಮಸ್ಯೆಗಳು
ಈಶಾನ್ಯ ದಿಕ್ಕಿನಲ್ಲಿ ಬಾತ್ರೂಮ್ ಇದ್ದರೆ ಆರ್ಥಿಕ ಹಾಗೂ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಅದೇ ರೀತಿ ಆಗ್ನೇಯ ದಿಕ್ಕು ಬೆಂಕಿಗೆ ಸಂಬಂಧಿಸಿದ ಮೂಲವಾಗಿರುವುದರಿಂದ, ಅಲ್ಲಿ ನೀರಿನ ಅಂಶ ಇರುವ ಸ್ನಾನಗೃಹ ನಿರ್ಮಿಸುವುದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ.
ಶೌಚಾಲಯದ ಆಸನವನ್ನು ಉತ್ತರ ಅಥವಾ ದಕ್ಷಿಣ ದಿಕ್ಕಿಗೆ ಮುಖವಾಗಿರಿಸುವುದು ಸೂಕ್ತ. ಪೂರ್ವ ಅಥವಾ ಪಶ್ಚಿಮಕ್ಕೆ ಮುಖ ಮಾಡುವುದು ತಪ್ಪಿಸಲು ಸೂಚಿಸಲಾಗಿದೆ. ನೀರಿನ ನಲ್ಲಿಗಳು ಮತ್ತು ಶವರ್ಗಳನ್ನು ಪೂರ್ವ, ಉತ್ತರ ಅಥವಾ ಈಶಾನ್ಯ ಗೋಡೆಗಳಲ್ಲಿ ಅಳವಡಿಸಬೇಕು.
ಕನ್ನಡಿಯನ್ನು ಪೂರ್ವ ಅಥವಾ ಉತ್ತರ ಗೋಡೆಯ ಮೇಲೆ ಇಡುವುದು ಉತ್ತಮ. ಗಾಳಿಯು ಕಿಟಕಿ ಮೂಲಕ ಒಳಗೆ ಬರಲು ಅನುಕೂಲಕರವಾಗಿರುತ್ತದೆ. ಅಥವಾ ಎಕ್ಸಾಸ್ಟ್ ಫ್ಯಾನ್ ಅನ್ನು ವಾಯುವ್ಯ ಅಥವಾ ಪಶ್ಚಿಮ ದಿಕ್ಕಿಗೆ ಇಡಲು ತಜ್ಞರು ಸಲಹೆಯನ್ನು ನೀಡುತ್ತಾರೆ.
ಅಡುಗೆಮನೆಯ ಎದುರು ಅಥವಾ ಪಕ್ಕದಲ್ಲಿ ಸ್ನಾನಗೃಹ ಇರಬಾರದು. ಅದೇ ರೀತಿ ಪೂಜಾ ಕೊಠಡಿಯ ಮೇಲೆ, ಕೆಳಗೆ ಅಥವಾ ಪಕ್ಕದಲ್ಲಿಯೂ ಬಾತ್ರೂಮ್ ಇರಬಾರದು. ಸ್ನಾನಗೃಹದ ಬಾಗಿಲುಗಳನ್ನು ಯಾವಾಗಲೂ ಮುಚ್ಚಿರಬೇಕು. ಜೊತೆಗೆ ಒಳಭಾಗವನ್ನು ಸ್ವಚ್ಛವಾಗಿ ಇಡುವುದು ಮುಖ್ಯ ಎಂದು ವಾಸ್ತು ತಜ್ಞರು ಹೇಳಿದ್ದಾರೆ.
-
ವಾಸ್ತು ಶಾಸ್ತ್ರದ 4 ಪ್ರಮುಖ ವಿಧಗಳು: ಇದರ ವೈಜ್ಞಾನಿಕ ಹಿನ್ನೆಲೆ ಏನು? -
Ragi Ambli: ಬೇಸಿಗೆಯ ಬಿಸಿಲಿಗೆ ತಂಪೆರೆಯುವ 'ರಾಗಿ ಅಂಬಲಿ'; ಮನೆಯಲ್ಲೇ ಮಾಡುವ ಸುಲಭ ವಿಧಾನ ಇಲ್ಲಿದೆ -
ದಿನಕ್ಕೆ 5 ನಿಮಿಷ ಸಾಕು: ಆಯುರ್ವೇದದಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ -
Summer Health Tips: ದೇಹ ತಂಪಾಗಿರಬೇಕಾ? ಹಾಗಾದರೆ ಈ 5 ನೈಸರ್ಗಿಕ ಆಹಾರಗಳು ಬಳಸಿ -
Heatstroke vs Dehydration: ಬೇಸಿಗೆಯಲ್ಲಿ ಕಾಡುವ ಶಾಖಾಘಾತ ಮತ್ತು ನಿರ್ಜಲೀಕರಣ: ಇವುಗಳ ವ್ಯತ್ಯಾಸ ತಿಳಿಯಿರಿ -
Bengaluru: ನಸುಕಿನ ಜಾವ 3 ಗಂಟೆಗೆ ರಾಪಿಡೋ ರೈಡರ್ ತೋರಿದ ಮಾನವೀಯತೆಗೆ ಮಹಿಳೆ ಫಿದಾ, Video Viral -
ಧನುಷ್ ಜೊತೆ ಸ್ನೇಹ ಕಳೆದುಕೊಂಡಿದ್ದು ನನ್ನ ಜೀವನದ ದೊಡ್ಡ ನಷ್ಟ: ಪತ್ನಿ ನಯನತಾರ ಜೊತೆಗಿನ ಮನಸ್ತಾಪಕ್ಕೆ ವಿಘ್ನೇಶ್ ಶಿವನ್ ಬೇಸರ -
2026ರ PUC ಫಲಿತಾಂಶಕ್ಕೆ ಕ್ಷಣಗಣನೆ; ಈ ಬಾರಿ ಡಿಜಿಲಾಕರ್ನಲ್ಲೂ ರಿಸಲ್ಟ್ ಲಭ್ಯ, ಚೆಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ -
Gold Price April 6: ಚಿನ್ನದ ಬೆಲೆ ಭರ್ಜರಿ 18,000 ರೂ. ಇಳಿಕೆ, ಬಂಗಾರ ಪ್ರಿಯರಿಗೆ ಗುಡ್ನ್ಯೂಸ್ -
Darshan: ನಟ ದರ್ಶನ್ ಕಾನೂನು ಹೋರಾಟಕ್ಕೆ ಗೆಲುವು: 'ಬಾಸ್' ಸಿನಿಮಾ ಬಿಡುಗಡೆಗೆ ಕೋರ್ಟ್ ತಡೆ -
ಒರಾಕಲ್ನಲ್ಲಿ ಕೆಲಸ ಕಳೆದುಕೊಂಡ ಟೆಕ್ಕಿ ಊರಿಗೆ ಮರಳಿ ಉಬರ್ ಓಡಿಸುತ್ತಿರುವ ಸ್ಫೂರ್ತಿದಾಯಕ ಕಥೆ Viral -
ವಾರ ಭವಿಷ್ಯ: ಈ ರಾಶಿಯ ಪ್ರೇಮಿಗಳು ಮತ್ತೆ ಒಂದಾಗುತ್ತಾರೆ! ಸೂರ್ಯನಿಗೆ ಅರ್ಘ್ಯದಿಂದ ಭಾಗ್ಯ ಬದಲಾವಣೆ -
ಹುಡುಗಿಯರೇ ಎಚ್ಚರ: ಟಾಕ್ಸಿಕ್ ಗಂಡಸರ ಲಕ್ಷಣಗಳಿವು, ಮೆಚ್ಚಿ ಒಲಿದರೆ ಬಲಿಯಾಗುವಿರಿ -ಡಾ ರೂಪಾ ರಾವ್ ಬರಹ -
Ragi Ambli: ಬೇಸಿಗೆಯ ಬಿಸಿಲಿಗೆ ತಂಪೆರೆಯುವ 'ರಾಗಿ ಅಂಬಲಿ'; ಮನೆಯಲ್ಲೇ ಮಾಡುವ ಸುಲಭ ವಿಧಾನ ಇಲ್ಲಿದೆ -
KSRTC ನೌಕರರ ಹಿಂಬಾಕಿ 1271 ರೂ ಬಿಡುಗಡೆ; ವೇತನ ಹೆಚ್ಚಳಕ್ಕೆ ಮುಹೂರ್ತ ಫಿಕ್ಸ್: ಏ.17ಕ್ಕೆ ನಿರ್ಣಾಯಕ ಸಭೆ














Click it and Unblock the Notifications