Shani Blessed: ನಮ್ಮ ಮೇಲೆ ಶನಿ ದೇವನ ಕೃಪೆ ಇರುವುದನ್ನು ತಿಳಿಯುವುದು ಹೇಗೆ? ನಿಮಗೀರಿತಿ ಆಗಿದಿಯಾ?
ಯಾರಿಗೆ ಶನಿದೇವನ ಕೃಪೆ ಇದೆಯೋ ಅವರ ಜೀವನದಲ್ಲಿ ಸಂಪತ್ತು ಮತ್ತು ಕೀರ್ತಿಗೆ ಕೊರತೆ ಇರುವುದಿಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾರಿಗಾದರೂ ಶನಿದೇವನ ಆಶೀರ್ವಾದ ಇದ್ದರೆ, ಅಂಥವರ ಜೀವನದಲ್ಲಿ ಏನಾದರೂ ಸಂಭವಿಸಲಿದ್ದರೆ ಅದರ ಸೂಚನೆ ಮೊದಲೇ ಸಿಗಲಿದೆ.
ಶನಿ ದೇವರನ್ನು ನ್ಯಾಯದ ದೇವರು ಎಂದು ಪರಿಗಣಿಸಲಾಗುತ್ತದೆ. ಶನಿದೇವನು ಕೋಪಗೊಂಡರೆ ಅಂಥವರ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಂದರೆ ಶನಿದೇವನ ಸಂಪೂರ್ಣ ಕೃಪೆಗೆ ಪಾತ್ರರಾದರೆ ಜೀವನದಲ್ಲಿ ಎಂದೂ ಸಂಪತ್ತು, ಕೀರ್ತಿ, ಐಷಾರಾಮಿ ಇತ್ಯಾದಿಗಳಿಗೆ ಕೊರತೆಯಾಗುವುದಿಲ್ಲ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬನು ಶನಿಯ ಕೃಪೆಯನ್ನು ಪಡೆದಿದ್ದರೆ ಅಥವಾ ಪಡೆಯಲಿದ್ದರೆ, ಅವನು ಕೆಲವು ಲಕ್ಷಣಗಳನ್ನು ಅನುಭವಿಸಲು ಪ್ರಾರಂಭಿಸುತ್ತಾನೆ. ಆ ಲಕ್ಷಣಗಳು ಯಾವುವು ಎಂಬುದನ್ನು ತಿಳಿಯೋಣ.
ನಮ್ಮ ಮೇಲೆ ಶನಿ ಕೃಪೆ ಇರುವುದನ್ನು ತಿಳಿಯುವುದು ಹೇಗೆ?
1. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನೀವು ಮನೆಯಿಂದ ಹೊರಗೆ ಹೋಗುವಾಗ ಕಪ್ಪು ನಾಯಿಯನ್ನು ಕಂಡರೆ, ಆ ನಾಯಿ ಹಾಲು ಕುಡಿಯುವುದನ್ನು ನೋಡಿದರೆ ನಿಮಗೆ ಶನಿಯ ಕೃಪೆ ಇದೆ ಎಂದರ್ಥ. ಇದರರ್ಥ ನಿಮ್ಮ ಜೀವನದಲ್ಲಿ ಸಮಸ್ಯೆಗಳು ಕ್ರಮೇಣ ಕೊನೆಗೊಳ್ಳುತ್ತವೆ.
2. ಸಾಮಾನ್ಯವಾಗಿ ದೇವಸ್ಥಾನಕ್ಕೆ ಹೋದಾಗ ಪಾದರಕ್ಷೆಗಳು ಕಳ್ಳತನವಾಗುತ್ತವೆ. ಆದರೆ ಶನಿವಾರದಂದು ದೇವಸ್ಥಾನಕ್ಕೆ ಹೋದಾಗ ನಿಮ್ಮ ಪಾದರಕ್ಷೆಗಳು ಕಳ್ಳತನವಾದರೆ ಶನಿದೇವನ ಕೃಪೆ ದೊರೆಯಲಿದೆ ಎಂದರ್ಥ. ಶನಿವಾರದಂದು ಕದ್ದ ಪಾದರಕ್ಷೆಗಳು ಶನಿ ದೇವರ ಆಶೀರ್ವಾದವನ್ನು ಪ್ರತಿನಿಧಿಸುತ್ತವೆ. ಹೀಗಾಗಿ ದೇವಸ್ಥಾನಕ್ಕೆ ಹೋದಾಗ ಪಾದರಕ್ಷೆ ಕಳ್ಳತನವಾದರೆ ಅದೃಷ್ಟದ ಬಾಗಿಲು ತೆರೆಯಲಿದೆ ಎಂದರ್ಥ.
3. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಭಿಕ್ಷುಕ ತಿನ್ನುವುದನ್ನು ನೋಡುವುದು ಶುಭ ಸಂಕೇತವೆಂದು ಪರಿಗಣಿಸಲಾಗಿದೆ. ಆಗ ನಿಮಗೆ ಶನಿಯ ಕೃಪೆ ಮತ್ತು ಆಶೀರ್ವಾದವಿದೆ ಎಂದರ್ಥ. ಜೊತೆಗೆ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎನ್ನಲಾಗುತ್ತದೆ.

4. ಎಲ್ಲೋ ಕಪ್ಪು ಹಸು ಕಂಡರೆ ಅಥವಾ ಹಾಲು ಕೊಡುವುದನ್ನು ನೋಡಿದರೆ ಶನಿಯ ಆಶೀರ್ವಾದ ಸಿಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇದು ನಿಮ್ಮ ಜೀವನದಲ್ಲಿ ಮುಂಬರುವ ಸಂತೋಷ ಮತ್ತು ಸಮೃದ್ಧಿಯನ್ನು ಸೂಚಿಸುತ್ತದೆ.
5. ನಿಮ್ಮ ಗೌರವ ಹೆಚ್ಚಾಗಲು ಪ್ರಾರಂಭಿಸಿದ್ದರೆ, ಆಗ ಶನಿದೇವನ ಕೃಪೆ ನಿಮ್ಮ ಮೇಲಿದೆ ಎಂಬುದರ ಸಂಕೇತ. ಒಬ್ಬರ ಕಾರ್ಯಗಳಿಂದ ಶನಿದೇವನು ಸಂತುಷ್ಟನಾದರೆ ಆ ವ್ಯಕ್ತಿಯ ಸ್ಥಾನಮಾನ ಮತ್ತು ಗೌರವವು ಸಮಾಜದಲ್ಲಿ ಏರತೊಡಗುತ್ತದೆ. ನಿಮ್ಮ ಜೀವನದಲ್ಲಿ ಇದು ಸಂಭವಿಸಿದಲ್ಲಿ, ಶನಿ ದೇವರಿಗೆ ಧನ್ಯವಾದ ಮತ್ತು ಆತನನ್ನು ಪೂಜಿಸಲು ಪ್ರಾರಂಭಿಸಿ ...
6. ಒಬ್ಬ ವ್ಯಕ್ತಿಯು ಇದ್ದಕ್ಕಿದ್ದಂತೆ ಬಹಳಷ್ಟು ಹಣವನ್ನು ಪಡೆದರೆ, ಕೆಲಸದಲ್ಲಿ ಬಡ್ತಿ ಹೊಂದಿದರೆ, ನಿಮಗೆ ಶನಿಯ ವಿಶೇಷ ಆಶೀರ್ವಾದವಿದೆ ಎಂಬುದರ ಸಂಕೇತವಾಗಿದೆ.
7. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜಾತಕದಲ್ಲಿ ಶನಿಯ ಶುಭ ಸ್ಥಾನ ಒಬ್ಬನನ್ನು ದೊಡ್ಡ ವಿಪತ್ತಿನಿಂದ ರಕ್ಷಿಸುತ್ತದೆ. ಆ ವ್ಯಕ್ತಿಗೆ ಯಾವುದೇ ಅವಘಡ ಸಂಭವಿಸಲು ಶನಿಯು ಅನುಮತಿಸುವುದಿಲ್ಲ. ಶನಿಯ ಕೃಪೆಯಿಂದ ವ್ಯಕ್ತಿಯು ಅಪಘಾತಗಳಂತಹ ದುರ್ಘಟನೆಗಳಿಂದ ಖಂಡಿತ ಪಾರಾಗುತ್ತಾರೆ.
-
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications