Get Updates
Get notified of breaking news, exclusive insights, and must-see stories!

ಏನಿದು ಶನಿರಾಜನ ತಾಮ್ರಪಾದದ ಮಹತ್ವ?

ಸಾಡೇಸಾತಿಯಲ್ಲಿ ಬರೀ ಕೆಟ್ಟದ್ದೇ ಆಗುತ್ತಾ ಎನ್ನುವವರು, ಕೆಟ್ಟದ್ದನ್ನು ಮಾಡಿದವರಿಗಷ್ಟೇ ಕೆಟ್ಟದ್ದಾಗುತ್ತದೆ ಎಂಬುದು ತಿಳಿದುಕೊಳ್ಳಿ. "ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿಕೊಂಡು ನೋಡಿದ್ರಂತೆ" ಎಂಬ ಮಾತು ನೀವು ಕೇಳಿರಬಹುದು. "ಕಳ್ಳನ ಮನಸ್ಸು ಹುಳ್ಳುಳ್ಳಗೆ" ಅನ್ನೋ ಹಾಗೆ ಸಾಡೇಸಾತಿಯಲ್ಲಿರುವವರು ನನಗೆ ಕೆಟ್ಟದ್ದಾಗುತ್ತೆ ಅಂತ ಚಿಂತಿಸುವುದು ತಪ್ಪು. ನೀವು ಮಾಡಿದ್ದು ನಿಮಗೆ ಮರಳಿ ಬರುತ್ತದೆ ಅಷ್ಟೆ.

ತಾಮ್ರಪಾದದಲ್ಲಿ ಬಂದ ಮಹಾತ್ಮನು, ಬಹಳಷ್ಟು ದಿನಗಳಿಂದ ಪಟ್ಟ ಶ್ರಮಕ್ಕೆ ತಕ್ಕ ಫಲ ಒದಗಿಸುತ್ತಾನೆ. ಹಣಕಾಸಿನ ತೊಂದರೆಯಿದ್ದರೆ ಸುಗಮವಾಗಿ ಬಗೆಹರಿಯುತ್ತದೆ. ಹಣವೇನಾದರೂ ನೀವು ಬೇರೆಯವರಿಗೆ ಕೊಟ್ಟಿದ್ದರೆ ಮರಳಿ ಬರಲಾರಂಭಿಸುತ್ತದೆ. ಹೂಡಿಕೆಯಿಂದಲೂ ಲಾಭವಾಗುತ್ತದೆ. ಆರೋಗ್ಯ ಸುಧಾರಣೆಯಾಗುತ್ತದೆ. ರೋಗರುಜಿನಗಳು ಗುಣವಾಗಲಾರಂಭಿಸುತ್ತವೆ. ಈ ರೀತಿಯಾಗಿ ತಾಮ್ರ ಪಾದದಲ್ಲಿ ಲಾಭವೇ ಆಗುತ್ತದೆ. ಸಾಡೇಸಾತಿಯಲ್ಲಿ ಮಹಾತ್ಮನು ಎಷ್ಟು ದಿನಗಳಿಂದ ಎಷ್ಟು ದಿನಗಳವರೆಗ ತಾಮ್ರಪಾದದಲ್ಲಿ ಬಂದಿದ್ದಾನೆ ಎಂಬುದನ್ನು ಅವರವರ ಜಾತಕದ ಮೂಲಕ ತಿಳಿದುಕೊಳ್ಳಬಹುದು.

Sade Sati : What does Tamra Pada means

ವೃಶ್ಚಿಕ ರಾಶಿಗೆ 2ನೇ ಹಂತದಲ್ಲೇನಾಗುತ್ತದೆ? : ವೃಶ್ಚಿಕ ರಾಶಿಗೆ ಮಹಾತ್ಮನು ಬಂದಾಗ ಈ ರಾಶಿಗೆ ಸಾಡೇಸಾತಿ 2ನೇ ಹಂತ ಶುರುವಾಗುತ್ತದೆ. ಅಂದರೆ ಕುತ್ತಿಗೆಯಿಂದ ನಡದವರೆಗೆ. ಈ ಹಿಂದೆ ಚಟಗಳನ್ನು ಮಾಡಿದ್ದರೆ, ಚಟಗಳಿಂದುಟಾಗುವ ರೋಗಗಳು ದೇಹದಿಂದ ಹೊರಬರಲಾರಂಭಿಸುತ್ತವೆ. ವೃಶ್ಚಿಕವು ಶನಿದೇವನ ಶತ್ರು ರಾಶಿ. ಮಾಡಬಾರದ್ದನ್ನು ಮಾಡಿದವರಿಗೆ ಎಂದೂ ಅನುಭವಿಸದ ಕಷ್ಟಗಳು ಕೊರಳಿಗೆ ಸುತ್ತಿಕೊಳ್ಳುತ್ತವೆ. ಮನಸ್ಸು ಕಠೋರವಾಗುತ್ತದೆ. ಶ್ರಮ ವಹಿಸಿ ಕೆಲಸ ಮಾಡಬೇಕಾಗುತ್ತದೆ. ವಿಪರೀತ ಸಿಟ್ಟು ಆವರಿಸಿಕೊಂಡು ತನ್ನ ಕಾಲ ಮೇಲೆ ತಾನೇ ಕಲ್ಲು ಚೆಲ್ಲಿಕೊಳ್ಳುವಂತಾಗುತ್ತದೆ. ಕೆಲವೊಮ್ಮೆ ಅರಿವಿಲ್ಲದೆ ಮಾನ ಹೋಗುವಂತಹ ಕೆಲಸ ಮಾಡುವ ಮನಸ್ಸಾಗುತ್ತದೆ.

ಕುಟುಂಬದಲ್ಲಿನ ಜಗಳ ವಿಪರೀತಕ್ಕೆ ಹೋಗುತ್ತದೆ. ಸುಖ, ಶಾಂತಿ, ಆನಂದ, ಉತ್ಸಾಹ ಎಲ್ಲವೂ ಮರೀಚಿಕೆಯಾಗುತ್ತದೆ. ಅವಿವೇಕತನ ಮನೆ ಮಾಡುತ್ತದೆ. ಹಣ ಹೊಂದಿಸಿಕೊಳ್ಳಲು ಕೆಟ್ಟ ಕೆಲಸಕ್ಕೂ ಮನಸ್ಸು ಸೈ ಎನ್ನುತ್ತದೆ. ಆದ್ದರಿಂದ ವೃಶ್ಚಿಕ ರಾಶಿಯವರು ಸಾಡೇಸಾತಿಯ ಮುಂದಿನ ದಿನಗಳನ್ನು ಸುಗಮವಾಗಿಸಿಕೊಳ್ಳಬೇಕೆಂದರೆ ಈಗಿನಿಂದಲೇ ದೈವಭಕ್ತಿಗೆ ಮೊರೆ ಹೋಗಬೇಕು. ದೈವಭಕ್ತಿಯನ್ನು ಮೂಢನಂಬಿಕೆ ಎನ್ನುತ್ತ, ದೇವರೆಲ್ಲಿದ್ದಾನೆ ಎನ್ನುವವರಿಗೆ ಸಾಡೇಸಾತಿಯಲ್ಲಿ ಗೊತ್ತಾಗುತ್ತದೆ ದೇವರ ಪಾದ ಎಲ್ಲಿದೆ ಎಂದು. ದೇವರ ಪಾದ ಹಿಡಿದುಕೊಂಡರೋ ಬದುಕುತ್ತಾರೆ. ಇಲ್ಲವಾದರೆ ಶಿವನಪಾದವೇ.

ಕೆಲವರು ವಿದ್ಯಾಭ್ಯಾಸದಲ್ಲಿ ಸಾಕಷ್ಟು ಸಾಕ್ಷರರಾಗಿ ಬಂಗಾರದ ಪದಕ ಪಡೆದಿರುತ್ತಾರೆ. ಆದರೇನು, ಇಂಥಹವರಲ್ಲಿ ಕೆಲವೊಬ್ಬರಿಗೆ ಮತ್ತೊಬ್ಬರ ಬಾಳು ಬಂಗಾರವಾಗಿರುವುದು ನೋಡುವುದಾಗುವುದಿಲ್ಲ. ಹೀಗಾಗಿ ಸಾಕ್ಷರರಾಗಿದ್ದೂ ಕೂಡ ರಾಕ್ಷಸರರಂತೆ ವರ್ತಿಸುತ್ತ ಬಂಗಾರದಂಥ ಮನುಷ್ಯರಿಗೆ ತೊಂದರೆ ಕೊಡುತ್ತ ಇವರೇ ದೇವರಾಗಿ ಬಿಟ್ಟಿರುತ್ತಾರೆ. ಯಾವ ದೇವರಿಗೂ ಕೈ ಮುಗಿಯುವುದಿಲ್ಲ. ಇಂಥಹವರನ್ನು ಶನಿದೇವ ನೋಡಿ ನೋಡಿ ಅವರ ಕೈಗೆ ಕೊಳ ತೊಡಿಸಿ ಅವರ ಅಟ್ಟಹಾಸವನ್ನು ಮಟ್ಟ ಹಾಕುತ್ತಾನೆ.

ಎಷ್ಟೋ ಜನ ಅನ್ಯಾಯ, ಅಸತ್ಯ, ಅನೀತಿ, ಲಂಚತನ, ಭ್ರಷ್ಟತನ ಮಾಡುತ್ತ ಆರಾಮಾಗಿಯೇ ಇರುವುದು ನೀವು ನೋಡಿರಬಹುದು. ಈಗ ಸಾಡೇಸಾತಿ ನಡೆಯುತ್ತಿರುವ ಕನ್ಯಾ, ತುಲಾ, ವೃಶ್ಚಿಕ ರಾಶಿಯವರಲ್ಲಿ ಈ ತರಹದ ಜನರಿದ್ದರೆ, ನೀವೇ ಕಣ್ಣಾರೆ ನೋಡಬಹುದು ಅವರು ಪಡುತ್ತಿರುವ ಪಾಡನ್ನು. ವೃಶ್ಚಿಕ ಮತ್ತು ತುಲಾ ರಾಶಿಯವರು ಸಾಡೇಸಾತಿಯು ಉಗ್ರರೂಪ ಪಡೆದುಕೊಳ್ಳುವ ಮುನ್ನವೇ ತಾಳ್ಮೆಯಿಂದ, ಮುಂಜಾಗ್ರತೆ ತೆಗೆದುಕೊಂಡು ಪರಿಹಾರ ಮಾಡಿಕೊಳ್ಳಬೇಕು. ಇಲ್ಲವಾದರೆ ಕಷ್ಟಗಳನ್ನು ಆನಂದದಿಂದ ಅನುಭವಿಸುವ ಗುಣ ಬೆಳೆಸಿಕೊಳ್ಳಿ. ಯಾವ ವಿಷಘಳಿಗೆಯಲ್ಲಿ ಕರಳು ಚುರುಕ್ ಎನ್ನುತ್ತದೋ, ಯಾವಾಗ ಮೈ ಜುಮ್ ಎನ್ನುತ್ತದೋ, ಯಾವಾಗ ಎದೆ ಝಲ್ಲೆನ್ನುತ್ತದೋ ಎಂಬುದು ಅನುಭವಿಸಿದ ಮೇಲೇನೆ ಗೊತ್ತಾಗೋದು. ಅನುಭವಿಸಿದ ನಂತರ ಇತರರಿಗೆ ಹೇಳಿ ಸಾಡೇಸಾತಿಯಲ್ಲಿ ಬಂದ ಸಂಕಷ್ಟಗಳನ್ನು.

ಧನಸ್ಸು ರಾಶಿಯವರೆ ಈಗಲೇ ಎಚ್ಚೆತ್ತುಕೊಳ್ಳಿ : ಜಾಣನಿಗೆ ಮಾತಿನ ಪೆಟ್ಟು ಎಂಬ ಮಾತಿನಂತೆ ಧನಸ್ಸು ರಾಶಿಯವರು ಈಗಿನಿಂದಲೇ ಸಾಡೇಸಾತಿ ಪರಿಹಾರೋಪಾಯಗಳನ್ನು ತಿಳಿದುಕೊಳ್ಳಬೇಕು. ಗಂಡೆದೆಯಿಂದ ಗುಂಡಿಗೆ ಗುಡಾರದಂಗೆ ಮಾಡಿಕೊಳ್ಳಬೇಕು. ಮುಂದಿನ ಅನುಕೂಲಕ್ಕೆ ಹಣ ಹೊಂದಿಸಿಟ್ಟುಕೊಳ್ಳಬೇಕು. ಆರೋಗ್ಯ ವಿಮೆ ಮಾಡಿಸಿಕೊಳ್ಳಬೇಕು. ಸಾಡೇಸಾತಿಯಲ್ಲಿ ಸಣ್ಣ ಸಣ್ಣ ವಿಷಯಗಳನ್ನು ನಿರ್ಲಕ್ಷ್ಯ ಮಾಡುವುದು ಒಳಿತಲ್ಲ. ಯಾಕಂದ್ರೆ ಆಪತ್ತು, ದುಃಖ ಹೇಳಿಕೊಂಡು ಬರುವುದಿಲ್ಲ. ಮತ್ತು ಬಂದಿದ್ದನ್ನು ತಿರಸ್ಕರಿಸಲು ಬರುವುದಿಲ್ಲ. ಅನುಭವಿಸಲೇಬೇಕು.

ಏಳರಾಟದಲ್ಲಿ ಪಾರಾಗುವ ಬಗೆಯನ್ನು ತಿಳಿದುಕೊಳ್ಳದೇ, ಚಾಣಾಕ್ಷತೆಯಿಂದ ತಪ್ಪಿನ ಮೇಲೆ ತಪ್ಪು ಮಾಡುತ್ತ ಹೋದಿರೆನ್ನಿ. ನೀವೇ ಕೈ ತಪ್ಪಿ ಹೋಗುತ್ತಿರಿ ಈ ಜಗದಿಂದ. ವಿನಾಶಕ್ಕೆ ವಿಪರೀತ ಬುದ್ಧಿ ಕಾರಣವಾಗುತ್ತದೆ ಎಂಬ ಮಾತು ಅರಿತುಕೊಂಡು ಸಾಡೇಸಾತಿಯಲ್ಲಿರುವವರು ವಿಪರೀತ ಬುದ್ಧಿ ತೋರಿಸದೆ ಜೀವನ ಬಂದಂಗೆ ಸ್ವೀಕರಿಸಿ. ಯಾಕೆಂದರೆ 30 ವರ್ಷಗಳಿಗೊಮ್ಮೆ ಜೀವನವನ್ನು ರಿನೀವಲ್ ಮಾಡೋಕೆ ಸಾಡೇಸಾತಿ ಬಂದಿರುತ್ತದೆ. ಶನಿದೇವನ ಕಾಡಾಟವನ್ನು "ಛಡಿ ಛಂ ಛಂ ವಿದ್ಯೆ ಘಂ ಘಂ" ಎಂದು ಅರಿತುಕೊಂಡು, ಕೆಟ್ಟು, ಪೆಟ್ಟು ಬಿದ್ದ ಮೇಲೆ ಬುದ್ಧಿ ಬರೋದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಜಾತಕ ನೋಡಿ ಪರಿಹಾರ : ಮದುವೆ ಆಗ್ತಿಲ್ಲಾ, ಮಕ್ಕಳಾಗಲಿಲ್ಲ ಅಂತ ಎಷ್ಟೋ ಜನ ಹರಕೆ ಹೊರುತ್ತಾರೆ. ಆದರೆ ಮದುವೆಯಾದ ಕೆಲವರ ಸಂಸಾರ ಸುಖವಾಗಿರದೇ ಬೇರೆಯಾಗುತ್ತಾರೆ. ಮಕ್ಕಳಿದ್ದವರು ಮಕ್ಕಳು ವಿದ್ಯಾವಂತ, ಬುದ್ದಿವಂತರಾಗಲಿಲ್ಲವಲ್ಲ ಎಂದು ಕೊರಗುತ್ತಿರುತ್ತಾರೆ. ಕಾರಣ, ಜಾತಕ ಹೊಂದಿಸಿಕೊಂಡೇ ಮದುವೆ ಮಾಡಿಕೊಳ್ಳಬೇಕು ಎನ್ನುವುದು. ಮಕ್ಕಳ ಜಾತಕ ನೋಡಿ ಅವರ ಮುಂದಿನ ಹಾದಿ ಹೇಗಿದೆ ಎಂದು ತಿಳಿದುಕೊಳ್ಳಬಹುದು. ಅಥವಾ ಜಾತಕದಲ್ಲಿ ಏನಾದರೂ ದೋಷವಿದ್ದರೆ ಪರಿಹಾರ ಕಂಡುಕೊಂಡು ಜೀವನ ಸಂತಸವಾಗಿಸಿಕೊಳ್ಳಬೇಕು.

ತುಲಾ ರಾಶಿಗೆ ಸಾಡೇಸಾತಿ 3ನೇ ಹಂತ ಹೇಗಿರುತ್ತೆ ಮತ್ತು ಶನಿದೇವನ ಬೆಳ್ಳಿ ಪಾದದ ಮಹತ್ವ ಏನು? ಎಂಬುದು ಮುಂದಿನ ಲೇಖನದಲ್ಲಿ. (ಒನ್‌ಇಂಡಿಯಾ ಕನ್ನಡ)

ಶನಿದೇವನ ಕೃಪೆಗೆ : ಶನಿವಾರದಂದು ಎಳ್ಳೆಣ್ಣೆ ಹಚ್ಚಿಕೊಂಡು ಸ್ನಾನ ಮಾಡಿ. (ಲೇಖಕರ ಮೊಬೈಲ್ : 94815 22011)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+