ಅದೃಷ್ಟ ಸಂಖ್ಯೆ 2 ವ್ಯಕ್ತಿಗಳ ಗುಣ, ವೃತ್ತಿ, ಅದೃಷ್ಟದ ವರ್ಷಗಳು
ಈಗಾಗಲೇ ತಿಳಿಸಿರುವಂತೆ ಯಾವುದೇ ವ್ಯಕ್ತಿಯ ಜೀವನದಲ್ಲಿ ಅದೃಷ್ಟ ಸಂಖ್ಯೆ ಎಂಬುದು ಬಹಳ ಮುಖ್ಯ. ವೈಯಕ್ತಿಕ ಜೀವನದಿಂದ ವ್ಯವಹಾರ ಹಾಗೂ ಉದ್ಯೋಗಕ್ಕೂ ಇದು ಮುಖ್ಯ ಪಾತ್ರ ವಹಿಸುತ್ತದೆ ಇಂದಿನ ಲೇಖನದಲ್ಲಿ ಅದೃಷ್ಟ ಸಂಖ್ಯೆ 2ರ ಬಗ್ಗೆ ವಿವರಗಳನ್ನು ತಿಳಿಸಲಾಗುವುದು.
ನಿಮ್ಮ ಅದೃಷ್ಟ ಸಂಖ್ಯೆ 2 ಆದರೆ ನೀವು ಸರಿಯಾದ ಲೇಖನವನ್ನೇ ಓದುತ್ತಿದ್ದೀರಿ. ಒಂದು ವೇಳೆ ನಿಮ್ಮ ಅದೃಷ್ಟ ಸಂಖ್ಯೆ ಯಾವುದು ಎಂಬುದೇ ಗೊತ್ತಿಲ್ಲ ಅನ್ನೋದಾದರೆ ಅದನ್ನು ಕೂಡ ತಿಳಿದುಕೊಳ್ಳಬಹುದು.
ಯಾವ ವ್ಯಕ್ತಿಗಳ ಅದೃಷ್ಟ ಸಂಖ್ಯೆ 2 ಆಗಿರುತ್ತದೋ ಅಂಥವರ ಮೇಲೆ ಚಂದ್ರನ ಪ್ರಭಾವ ಇರುತ್ತದೆ. ಇವರ ಮನಸ್ಸು ಹಾಗೂ ಬುದ್ಧಿ ಪ್ರಶಾಂತವಾಗಿರುತ್ತದೆ. ಕೆಲಸ-ಕಾರ್ಯದ ವಿಚಾರದಲ್ಲಿ ತುಂಬ ಸೂಕ್ಷ್ಮವಾಗಿರುತ್ತಾರೆ. ತುಂಬ ದೀರ್ಘ ಕಾಲದವರೆಗೆ ಎಡೆಬಿಡದೆ ಕೆಲಸ ಮಾಡಿದರೂ ಅದರ ಪರಿಶ್ರಮ ಇವರಿಗೆ ಗೊತ್ತಾಗಲ್ಲ.
ಇದು ಅವರ ಪಾಲಿಗೆ ನಕಾರಾತ್ಮಕ ಅಂಶ ಹೌದು. ಆದ್ದರಿಂದ ತಮ್ಮ ವ್ಯಾಪಾರ-ವ್ಯವಹಾರವನ್ನು ಇವರು ಆಗಾಗ ಬದಲಿಸುತ್ತಿರಬೇಕು. ಅಂದಹಾಗೆ ಈ ವ್ಯಕ್ತಿಗಳು ಶುಭ ಸಮಾರಂಭಗಳಿಗೆ ವಿಪರೀತ ಹಣ ಖರ್ಚು ಮಾಡುತ್ತಾರೆ.

ಸೂಕ್ತ ಉದ್ಯೋಗಗಳು
ಶಿಕ್ಷಕರು, ಪತ್ರಕರ್ತರು, ಅಕೌಂಟೆಂಟ್, ಸಮುದ್ರ ಪ್ರಯಾಣ, ಸಕ್ಕರೆ ಮಿಲ್, ಕೃಷಿ ಇಲಾಖೆ, ಸಂಗೀತ, ನಟನೆ, ದಂತವೈದ್ಯಕೀಯ, ನೀರಿಗೆ ಸಂಬಂಧಿಸಿದ್ದು, ಮಾಡೆಲಿಂಗ್ ಮುಂತಾದವು.

ಸೂಕ್ತ ವ್ಯವಹಾರಗಳು
ಸೌಂದರ್ಯ ವರ್ಧಕಗಳ ಮಾರಾಟ, ಪೆಟ್ರೋಲ್ ಬಂಕ್, ತಂಪು ಪಾನೀಯ, ನೀರು, ಸಂಗೀತ ಶಾಲೆ, ಹೋಟೆಲ್, ರೆಸ್ಟೋರೆಂಟ್, ಮಣ್ಣಿನ ಕೆಲಸ, ಗುತ್ತಿಗೆ, ದಲ್ಲಾಳಿ, ಮುದ್ರಣ ಸಂಸ್ಥೆ ಮತ್ತಿತರ ವ್ಯವಹಾರ.

ಅದೃಷ್ಟದ ವರ್ಷಗಳು
ಅದೃಷ್ಟ ಸಂಖ್ಯೆ 2ರ ವ್ಯಕ್ತಿಗಳಿಗೆ 2 ಹಾಗೂ 7 ಪರಿಣಾಮಕಾರಿಯಾಗಿರುತ್ತದೆ. ಜೀವನದಲ್ಲಿ ಈ ಸಂಖ್ಯೆ ಬಂದಾಗ ಸಂತೋಷ, ಸಂಪತ್ತು ಬರುತ್ತದೆ. ಈ ಎರಡು ಸಂಖ್ಯೆಗಳು ಯಾವಾಗ ಒಟ್ಟಿಗೆ ಬರುತ್ತದೋ ಆಗ ಇನ್ನಷ್ಟು ಅನುಕೂಲಗಳಾಗುತ್ತವೆ.

ಮುಖ್ಯವಾದ ಬದಲಾವಣೆ
20, 28, 38 ವಯಸ್ಸಿನಲ್ಲಿ ಸಾಕಷ್ಟು ಹಣ ಮಾಡುತ್ತೀರಿ. 25 ಹಾಗೂ 27ನೇ ವಯಸ್ಸಿನಲ್ಲಿ ಮಹತ್ವದ ಬದಲಾವಣೆ ಕಾಣಿಸಿಕೊಳ್ಳುತ್ತದೆ. 29 ಮತ್ತು 31ನೇ ವಯಸ್ಸಿನಲ್ಲಿ ಸಾಕಷ್ಟು ಏರಿಳಿತಗಳನ್ನು ಕಾಣಬೇಕಾಗುತ್ತದೆ.

ಮನೆಯ ಬಾಗಿಲು
ಅದೃಷ್ಟ ಸಂಖ್ಯೆ 2 ಇರುವವರ ಮನೆಯ ಮುಖ್ಯ ಬಾಗಿಲು ಉತ್ತರ, ಪಶ್ಚಿಮ ಅಥವಾ ವಾಯವ್ಯ ದಿಕ್ಕಿನಲ್ಲಿ ಇದ್ದರೆ ಕುಟುಂಬದ ಏಳ್ಗೆ ಆಗುತ್ತದೆ ಹಾಗೂ ಸಂಪತ್ತು ವೃದ್ಧಿಯಾಗುತ್ತದೆ.
-
'ವಂತಾರ'ಕ್ಕೆ ಒಂದು ವರ್ಷ: ಆರೋಗ್ಯ ಸುಧಾರಿಸಿದ ಅನೇಕ ಪ್ರಾಣಿಗಳು ಮರಳಿ ಕಾಡಿಗೆ -
Bengaluru: ಗೊರಗುಂಟೆಪಾಳ್ಯದ ಟ್ರಾಫಿಕ್ಗೆ ಸಿಗಲಿದ್ಯಾ ಮುಕ್ತಿ? ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು 'ಸುರಂಗ ರಸ್ತೆ' ಪ್ರಸ್ತಾಪ -
Horoscope March 4: ಈ ರಾಶಿಯವರಿಗೆ ವೃತ್ತಿಯಲ್ಲಿ ಸುಧಾರಣೆ, ಆರೋಗ್ಯ ಕಾಳಜಿ ಮುಖ್ಯ, ದಿನ ಭವಿಷ್ಯ ಇಲ್ಲಿದೆ -
Bengaluru: ‘92 ಲಕ್ಷದ ಪ್ಯಾಕೇಜ್ ಇದ್ದರೂ ಉಳಿಯಲಿಲ್ಲ ಕೆಲಸ’; ಒಂದೇ ದಿನ ಶೇ. 40ರಷ್ಟು ಸಿಬ್ಬಂದಿ ವಜಾ ಮಾಡಿದ ಐಟಿ ಕಂಪನಿ -
ಅನಧಿಕೃತವಾಗಿ ಪ್ರವೇಶಿಸಿದರೆ ಗುಂಡು ಹಾರಿಸಲಾಗುವುದು: ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಹುಟ್ಟುಹಾಕಿದ ವಾಯುಪಡೆಯ ಸೂಚನಾ ಫಲಕ -
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Toxic release postponed: ಯಶ್ ಅಭಿಮಾನಿಗಳಿಗೆ ಆಘಾತ: "ಟಾಕ್ಸಿಕ್" ಸಿನಿಮಾ ಬಿಡುಗಡೆ ದಿಢೀರ್ ಮುಂದೂಡಿಕೆ -
ಕರ್ನಾಟಕ ವಿದ್ಯುತ್ ನಿಗಮ ಬೆಳಕಿನ ಸಂಸ್ಥೆಗೆ ಕತ್ತಲೆಯ ಛಾಯೆ: ಸರ್ಕಾರಿ ನಿರ್ಲಕ್ಷದ ಒಳನೋಟ -
ಕೃಷಿಕರಿಗೆ ವರದಾನವಾದ ಶೈಲಜಾ ವಿಠಲ್ ಆವಿಷ್ಕರಿಸಿದ 35 ಕೃಷಿ ಯಂತ್ರೋಪಕರಣ, ಸಣ್ಣ ರೈತರಿಗೆ ದೊಡ್ಡ ಲಾಭ -
Elnaaz Norouzi: ಭಾರತದಲ್ಲೇ ನೆಲೆಸಿದ್ದಾರೆ ಇರಾನ್ ಸುಂದರಿ, ಮತ್ತೆ ಅಲ್ಲಿಗೆ ಕಾಲಿಟ್ಟರೆ ನನ್ನ ಕೊಲ್ತಾರೆ ಎಂದ ನಟಿ ಎಲ್ನಾಜ್ -
Saaniya Chandok: ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ಕುಟುಂಬಕ್ಕೆ ಸೊಸೆಯಾಗಿ ಬಂದ ಸಾನಿಯಾ ಚಾಂದೋಕ್ ಯಾರು? -
Rashmika: ಹೈದರಾಬಾದ್ನಲ್ಲಿ ರಶ್ಮಿಕಾ-ವಿಜಯ್ ಅರತಕ್ಷತೆ: ನವದಂಪತಿಗೆ ಡಿಕೆ ಶಿವಕುಮಾರ್ ವಿಶ್












Click it and Unblock the Notifications