ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟ್ 2022 ತಿಂಗಳ ಭವಿಷ್ಯ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ...!

By ವೀಣಾರಾವ್
|
Google Oneindia Kannada News

ಪ್ರತಿಯೊಬ್ಬ ವ್ಯಕ್ತಿಯು ತನ್ನ ಭವಿಷ್ಯದ ಸಮಯದ ಬಗ್ಗೆ ಮಾಹಿತಿಯನ್ನು ತೆಗೆದುಕೊಳ್ಳುವ ಮೂಲಕ ತನ್ನ ಭವಿಷ್ಯದ ಯೋಜನೆಗಳನ್ನು ನಿರ್ಧರಿಸಲು ಬಯಸುತ್ತಾನೆ. ಆದರೆ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವುದು ಸ್ವಲ್ಪ ಕಷ್ಟ. ಇದರೊಂದಿಗೆ, ನಿಮ್ಮ ರಾಶಿಚಕ್ರದ ಪ್ರಕಾರ ನಿಮ್ಮ ಮುಂಬರುವ ಸಮಯದಲ್ಲಿ ಸಂಭವಿಸುವ ಘಟನೆಗಳನ್ನು ಊಹಿಸಲು ಸಹ ಕಷ್ಟವಾಗುತ್ತದೆ. ಅಂತಹ ಯಾವುದೇ ಮಾಹಿತಿಗಾಗಿ ವ್ಯಕ್ತಿಯು ಜ್ಯೋತಿಷ್ಯದ ಸಹಾಯವನ್ನು ತೆಗೆದುಕೊಳ್ಳುತ್ತಾನೆ.

ಆಗಸ್ಟ್ ತಿಂಗಳಲ್ಲಿ ಅನೇಕ ದೊಡ್ಡ ಗ್ರಹಗಳು ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಬದಲಾಯಿಸಲಿವೆ. ಗ್ರಹಗಳು ಮತ್ತು ನಕ್ಷತ್ರಪುಂಜಗಳ ಬದಲಾವಣೆಯು ಮಾನವ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಜ್ಯೋತಿಷ್ಯದಲ್ಲಿ ಹೇಳಲಾದ ಎಲ್ಲಾ 12 ರಾಶಿಚಕ್ರಗಳ ಮೇಲೆ ಇದರ ಪರಿಣಾಮ ಕಂಡುಬರುತ್ತದೆ. ಆಗಸ್ಟ್ ತಿಂಗಳು ಶುಭ ಫಲಿತಾಂಶಗಳನ್ನು ತರುತ್ತದೆ ಮತ್ತು ಯಾರಿಗೆ ನಷ್ಟವಾಗಬಹುದು ಎನ್ನುವುದನ್ನು ತಿಳಿಯಬಹುದು.

ಶುಭಕೃತ್ ನಾಮ ಸಂವತ್ಸರ ದಕ್ಷಿಣಾಯನ ವರ್ಷಋತು ಶ್ರಾವಣಮಾಸ/ಆಗಸ್ಟ್ ತಿಂಗಳ ಭವಿಷ್ಯ.

ದಿನಾಂಕ: 01-08-2022 ರಿಂದ 31.08.2022

ಈ ತಿಂಗಳಲ್ಲಿ ರವಿಯ ಸಂಚಾರ ಸಿಂಹರಾಶಿಯಲ್ಲಿ, ಬುಧನ ಸಂಚಾರ ಸಿಂಹ/ಕನ್ಯಾರಾಶಿಯಲ್ಲಿ, ಶುಕ್ರನ ಸಂಚಾರ ಕಟಕರಾಶಿಯಲ್ಲಿ, ಕುಜನ ಸಂಚಾರ ವೃಷಭ ರಾಶಿಯಲ್ಲಿ ನಡೆಯುತ್ತದೆ.

ಸಂಪರ್ಕಿಸಿ: ವೀಣಾರಾವ್([email protected])

ಮೇಷರಾಶಿ:

ಮೇಷರಾಶಿ:

ಈ ತಿಂಗಳು ನಿಮ್ಮ ಜೀವನದಲ್ಲಿ ಮಹತ್ತರ ಬದಲಾವಣೆಗಳ ಸಾಧ್ಯತೆ ಇದೆ. ಈ ತಿಂಗಳ ಹತ್ತರಂದು ಕುಜ ನಿಮ್ಮ ರಾಶಿಯನ್ನು ಬಿಟ್ಟು ಮುಂದಿನ ರಾಶಿಯಾದ ವೃಷಭಕ್ಕೆ ಹೋಗುತ್ತಾನೆ. ಇದು ನಿಮಗೆ ಬಹಳ ದೊಡ್ಡ ನೆಮ್ಮದಿಯನ್ನು ತಂದುಕೊಡುತ್ತದೆ. ಅನಾರೋಗ್ಯಕ್ಕೆ ತುತ್ತಾದವರು ಚೇತರಿಸಿಕೊಳ್ಳುತ್ತಾರೆ. ಸೂರ್ಯ ತನ್ನ ಸ್ವಂತ ಮನೆಯಾದ ಸಿಂಹಕ್ಕೆ ಬರುವುದರಿಂದ ನಿಮ್ಮ ಕೆಲಸ ಕಾರ್ಯಗಳೆಲ್ಲವೂ ನೆರವೇರುತ್ತದೆ. ರಾಜಕೀಯದಲ್ಲಿ ಇರುವವರಿಗೆ ಮಹತ್ತರವಾದ ಬದಲಾವಣೆಗಳ ಸಾಧ್ಯತೆ ಇದೆ. ಸರ್ಕಾರಿ ಕೆಲಸಗಾರರಿಗೆ ಶುಭಸುದ್ದಿ ಇದೆ. ಮಗ ಇರುವವರು ಮಗನ ಪ್ರಗತಿಯಿಂದ ಸಂತೋಷಿಸುತ್ತಾರೆ. ನಾಲ್ಕರಲ್ಲಿ ಶುಕ್ರ ನಿಮಗೆ ವಾಹನಲಾಭವನ್ನು ಕೊಡುತ್ತಾನೆ. ವಾಹನ ವ್ಯಾಪಾರಿಗಳಿಗೂ ಆಭರಣ ವ್ಯಾಪಾರಿಗಳಿಗೂ ಸಂತಸದ ಸುದ್ದಿ ಇದೆ. ಹೊಸ ಕೆಲಸ ಸಿಗುವ ಯೋಗ ಇದೆ. ಮನೆಗೆ ಹೊಸ ವಸ್ತುಗಳನ್ನು ಖರೀದಿ ಮಾಡುತ್ತೀರಿ. ತಂದೆಯ ಆರೋಗ್ಯದಲ್ಲಿ ಸುಧಾರಣೆ ಇದೆ. ಮದುವೆ ಇಲ್ಲದವರಿಗೆ ಕಂಕಣಬಲ ಕೂಡಿ ಬರಲಿದೆ. ಮನೆಯಲ್ಲಿ ಆಹ್ಲಾದಕರ ವಾತಾವರಣ ಇರುತ್ತದೆ. ಕವಿದಿದ್ದ ಕಾರ್ಮೋಡ ಕಳೆದು ಉತ್ಸಾಹದ ವಾತಾವರಣ ಮೂಡಿಬರಲಿದೆ.

ವೃಷಭರಾಶಿ:

ವೃಷಭರಾಶಿ:

ನಿಮ್ಮ ರಾಶಿಯ ಅಧಿಪತಿ ಶುಕ್ರ 6.8.22 ರಂದು ಕಟಕ ರಾಶಿಗೆ ಪ್ರವೇಶವಾಗುತ್ತಾನೆ. ನಿಮಗೆ ಮಂಗಳಕರವಾದ ದಿನಗಳು ಪ್ರಾರಂಭ ಎಂದೇ ತಿಳಿಯಿರಿ. ಸೂರ್ಯ ಸ್ವಂತಮನೆ ಸಿಂಹರಾಶಿಗೆ ಬರುವುದು ಕೂಡ ನಿಮಗೆ ಬಹಳ ಶುಭಕರ. ಸರ್ಕಾರಿ ಕೆಲಸ ಸಿಗುವ ಯೋಗ ಇದೆ. ಉನ್ನತ ವ್ಯಾಸಂಗ ಮಾಡಲು ಇಚ್ಛಿಸುವವರು ಈ ದಿನಗಳಲ್ಲಿ ಪ್ರಯತ್ನ ಮಾಡಬಹುದು. ಬುಧನ ಸಿಂಹರಾಶಿಯ ಪ್ರವೇಶದಿಂದ ಉನ್ನತ ವ್ಯಾಸಂಗಕ್ಕೆ ಅನುಕೂಲ ಇದೆ. ಒಂಬತ್ತರಲ್ಲಿ ಶನಿ ಸ್ವಂತ ಮನೆಯಲ್ಲಿ ಇದ್ದು ನಿಮಗೆ ಆಧ್ಯಾತ್ಮ ಅಥವಾ ಧರ್ಮಕಾರ್ಯದಲ್ಲಿ ಮನಸ್ಸು ಕೊಡುತ್ತಾನೆ. ಆನಾವಶ್ಯಕ ಖರ್ಚುಗಳು ನಿಂತು ನಾಲ್ಕು ಕಾಸು ಕೈಸೇರಲಿದೆ. ಶುಭಕಾರ್ಯಕ್ಕೆ ಆಭರಣ ವಸ್ತ್ರ ಖರೀದಿ ಮಾಡುತ್ತೀರಿ. ಮನಸ್ಸಿಗೆ ಖುಷಿಯಾಗುತ್ತದೆ. ನಿಮ್ಮ ರಾಶಿಯಲ್ಲೇ ಕುಜನಿದ್ದು ಆಗಾಗ ಅನಾವಶ್ಯಕ ಭೀತಿಯನ್ನು ತಂದೊಡ್ಡಿದರೂ ಗುರುವಿನ ಅನುಗ್ರಹ ಇರುವುದರಿಂದ ಏನೂ ತೊಂದರೆ ಆಗುವುದಿಲ್ಲ. ಆರನೇ ಮನೆಯ ಕೇತು ನಿಮಗೆ ಶತ್ರುಗಳ ನಾಶವನ್ನೂ ಅನಿರೀಕ್ಷಿತ ಧನಲಾಭವನ್ನೂ ಕೊಡುತ್ತಾನೆ. ಈಗ ನಿಮ್ಮ ಮಾತಿಗೂ ಬೆಲೆ ಬರುವ ಕಾಲ.

ಮಿಥುನರಾಶಿ:

ಮಿಥುನರಾಶಿ:

ನಿಮ್ಮ ರಾಶಿಯಲ್ಲಿ ಇರುವ ಶುಕ್ರ ಎರಡನೇ ಮನೆಗೆ ಪ್ರವೇಶವಾಗುತ್ತಾನೆ. 12ನೇ ಮನೆಗೆ ಕುಜ ಪ್ರವೇಶ ಇದೆ. ಮೂರರಲ್ಲಿ ಸೂರ್ಯ-ಬುಧರು ಸಂಚರಿಸುತ್ತಾರೆ. ಭೂ ವ್ಯವಹಾರಗಳಲ್ಲಿ ನೀವು ಅಂದುಕೊಂಡಷ್ಟು ಲಾಭ ಇರದಿದ್ದರೂ ಬೇರೆ ಧನಾಗಮನವಿದೆ. ಮೂರರ ಸೂರ್ಯ ಶೌರ್ಯ ಸಾಹಸವನ್ನು ಹೆಚ್ಚಿಸುತ್ತಾನೆ. ಆಟಗಾರರಿಗೆ ಒಳ್ಳೆಯ ದಿನಗಳು. ಬುಧ ನಿಮ್ಮ ಬುದ್ಧಿವಂತಿಕೆಯನ್ನು ಹೆಚ್ಚಿಸುತ್ತಾನೆ. ಸಮಾಜದಲ್ಲಿ ನಿಮಗೆ ಒಂದು ಗೌರವವನ್ನು ತಂದುಕೊಡುತ್ತಾನೆ. 11 ರಾಹು ಸಹ ನಿಮಗೆ ಹಣದ ಅನುಕೂಲ ಮಾಡಿಕೊಡುತ್ತಾನೆ. ಕುಟುಂಬದಲ್ಲಿ ಶಾಂತಿ ಸೌಹಾರ್ದತೆ ನೆಲೆಸುವ ಸಮಯ. ಅಷ್ಟಮಶನಿ ಇದ್ದರೂ ಭಯ ಬೇಡ. ಅದರ ಪ್ರಭಾವ ದಿನೇ ದಿನೇ ಕಡಿಮೆಯಾಗುತ್ತಿದೆ. ನೌಕರಿಯಲ್ಲಿ ಒತ್ತಡ ಇರುತ್ತದೆ. ಆದರೆ ನೀವು ನಿಭಾಯಿಸಿಕೊಳ್ಳಬಲ್ಲಿರಿ. ಷೇರು ವ್ಯವಹಾರ, ಲಾಟರಿ, ಮೊದಲಾದ ವ್ಯವಹಾರಗಳಲ್ಲಿ ಲಾಭದ ಮುಖ ನೋಡುತ್ತೀರಿ. ವಿಮಾ ಕೆಲಸಗಾರರು, ಮಾರ್ಕೆಂಟಿಂಗ್ ವಿಭಾಗದಲ್ಲಿ ಕೆಲಸ ಮಾಡುವವರು ಫ್ಯಾಷನ್ ಡಿಸೈನಿಂಗ್ ಕುಸುರಿ ಕೆಲಸಗಾರರು ಇವರಿಗೆಲ್ಲ ಶುಭಲಾಭ ಇದೆ. ರಾಜಕೀಯ ವ್ಯಕ್ತಿಗಳು ಉತ್ತಮ ನಡೆ ತೋರಿಸುತ್ತೀರಿ.

ಕಟಕರಾಶಿ:

ಕಟಕರಾಶಿ:

ಈ ತಿಂಗಳಲ್ಲಿ ನಿಮ್ಮ ರಾಶಿಗೆ ಶುಕ್ರನ ಪ್ರವೇಶ, ಎರಡನೇ ಮನೆಗೆ ಸೂರ್ಯ-ಬುಧರ ಪ್ರವೇಶ, ಲಾಭಸ್ಥಾನಕ್ಕೆ ಕುಜ ಪ್ರವೇಶ ಶುಭ ತರಲಿದೆ. ಉನ್ನತವಾದ ಅಧಿಕಾರ ಸಿಗುವ ಯೋಗ ಇದೆ. ಎಲೆಕ್ಟ್ರಿಕಲ್ಸ್, ಕೆಂಪು ವಸ್ತುಗಳಿಗೆ ಸಂಬಂಧಪಟ್ಟ ವ್ಯಾಪಾರಿಗಳು, ಬೆಂಕಿಗೆ ಸಂಬಂಧಪಟ್ಟ ಕೆಲಸಮಾಡುವವರು ಇವರಿಗೆಲ್ಲ ಶುಭ. ಆಸ್ತಿ-ಜಮೀನು-ತೋಟ ಕೊಳ್ಳಬೇಕೆಂದು ಯೋಚಿಸಿದ್ದರೆ ಇದು ಸಕಾಲ. ಈಗ ನೀವು ಧಾರಾಳವಾಗಿ ಹಣ ಹೂಡಬಹುದು. ಮಾತಿನಿಂದ ಲಾಭ ಇದೆ. ಮಾತಿನಿಂದಲೇ ಕೆಲಸ ಮಡುವವರಿಗೆ ಶುಭಸುದ್ದಿ ಇದೆ. ವೈದ್ಯರಿಗೆ ಈ ತಿಂಗಳು ಶುಭ. ರಿಯಲ್ ಎಸ್ಟೇಟ್ ನವರಿಗೂ ಲಾಭ ಇದೆ. ಚಂದ್ರನು ಹಸ್ತಾ ಚಿತ್ತೆಯಲ್ಲಿ ಸಂಚಾರ ಮಾಡುವಾಗ ನಿಮಗೆ ಕೆಲಸ ಕಾರ್ಯಗಳಲ್ಲಿ ಜಯ, ಪ್ರಮೋಷನ್, ವಿವಾಹಕಾರ್ಯ ಮೊದಲಾದ ಶುಭ ಸುದ್ದಿಗಳು ಇವೆ. ಅವಿವಾಹಿತರಿಗೆ ಕಂಕಣಬಲ ಕೂಡಿ ಬರುತ್ತದೆ. ಶುಭಕಾರ್ಯಗಳಿಗೆ ಹೋಗಿ ಬರುತ್ತೀರಿ. ಸರ್ಕಾರಿ ಕೆಲಸಗಳಲ್ಲಿ ಜಯವಿದೆ. ತೀರ್ಥಯಾತ್ರೆ ಅಥವಾ ಪ್ರವಾಸ ಕೈಗೊಳ್ಳುತ್ತೀರಿ. ಸುಖಭೊಜನ ಪ್ರಾಪ್ತಿ ಇದೆ. ವಿದ್ಯಾರ್ಥಿಗಳಿಗೆ ಶುಭಸುದ್ದಿ ಇದೆ. ಉನ್ನತ ವ್ಯಾಸಂಗದ ಅವಕಾಶ ಒದಗಿಬರುತ್ತದೆ. ವಿದೇಶ ಯಾತ್ರೆಯ ಆಸೆಯೂ ಕೈಗೂಡಬಹುದು.

ಸಿಂಹರಾಶಿ:

ಸಿಂಹರಾಶಿ:

ಈ ತಿಂಗಳು ನಿಮಗೆ ಮಿಶ್ರಫಲ. ನಿಮ್ಮ ರಾಶ್ಯಾಧಿಪತಿ ಸೂರ್ಯ ಈ ತಿಂಗಳು ನಿಮ್ಮ ರಾಶಿಯಲ್ಲೇ ಸಂಚರಿಸುತ್ತಾನೆ. ಈ ತಿಂಗಳು ಹುಟ್ಟಿದವರು ಸೂರ್ಯನ ಪ್ರಭಾವವನ್ನೂ ಅವನ ಅನುಗ್ರಹವನ್ನು ಹೊಂದುತ್ತಾರೆ. ಸಿಂಹ ರಾಶಿ ಸೂರ್ಯನಿಗೆ ಮೂಲತ್ರಿಕೋಣ ಸ್ಥಾನ. ಸಿಂಹರಾಶಿಯಲ್ಲಿ ಸೂರ್ಯ ಬಲಿಷ್ಠ. ಸರ್ಕಾರಿ ಕೆಲಸಗಾರರಿಗೆ ಬಡ್ತಿ, ಸಂಬಳ ಏರಿಕೆ ಮೊದಲಾದ ಅನುಕೂಲಗಳು ಇವೆ. ರಾಜಕೀಯ ವ್ಯಕ್ತಿಗಳಿಗೆ ಈ ತಿಂಗಳು ಬಹಳ ಮಹತ್ವ ಪಡೆದುಕೊಳ್ಳುತ್ತದೆ. ಅನೇಕ ಬದಲಾವಣೆಗಳು ಆಗುವ ಸಮಯ. ಖಾತೆಗಳು ಹಂಚಿಕೆಯಾಗುವ ಸಮಯ. 20ನೇ ತಾರೀಖಿನ ನಂತರ ಬುಧನ ಕನ್ಯಾರಾಶಿಯ ಪ್ರವೇಶವೂ ಈ ರಾಶಿಯವರಿಗೆ ಧನಲಾಭವನ್ನು ತಂದುಕೊಡುತ್ತದೆ. ಐಷಾರಾಮಿ ವಸ್ತುಗಳಿಗೆ ಖರ್ಚು ಮಾಡುತ್ತೀರ. ಇಂಟೀರಿಯರ್ ಡೆಕೋರೇಷನ್, ಫ್ಯಾಷನ್ ಡಿಸೈನಿಂಗ್, ಕಸೂತಿ ಕೆಲಸಗಾರರಿಗೆ ಶುಭವಿದೆ. ಕುಟುಂಬದಲ್ಲಿ ಸಂಭ್ರಮದ ವಾತಾವರಣ ಇರುತ್ತದೆ. ಶುಭಕಾರ್ಯಗಳು ನಡೆಯಬಹುದು. ದೈವಕಾರ್ಯ ಧರ್ಮಕಾರ್ಯ ನಡೆಯುತ್ತದೆ. ಭೂ ವ್ಯವಹಾರದಲ್ಲಿ ಲಾಭವಿದೆ. ಬೆಂಕಿಗೆ ಸಂಬಂಧಪಟ್ಟ ವ್ಯಾಪಾರಸ್ಥರಿಗೆ ಲಾಭವಿದೆ. ಭೂಮಿ ಕೊಡು ಕೊಂಡುಕೊಳ್ಳುವ ವ್ಯವಹಾರ ಮುಂದುವರೆಸಬಹುದು. ನೌಕರಿಯಲ್ಲಿ ಶುಭಸುದ್ದಿ ಕೇಳುತ್ತೀರಿ.

ಕನ್ಯಾರಾಶಿ:

ಕನ್ಯಾರಾಶಿ:

ಅವಿವಾಹಿತರಿಗೆ ಇದು ಶುಭಕಾಲ. ಕಲ್ಯಾಣಯೋಗ ಇದೆ. ಪ್ರೀತಿಸಿದವರಿಗೆ ಪ್ರಪೋಸ್ ಮಾಡಲೂ ಇದು ಸಕಾಲ. ಎತ್ತ ನೋಡಿದರೂ ರಂಗುರಂಗಿನ ವಾತಾವರಣ ನಿಮಗೆ. ಹಣದ ಹರಿವು ಉತ್ತಮವಾಗಿದ್ದು ಬೇಡವೆಂದರೂ ಹಣ ಬರುವ ಕಾಲ. ಶುಭ ಕಾರ್ಯಕ್ಕೆ ಖರ್ಚು ಮಾಡುತ್ತೀರಿ. ಶ್ರಾವಣ ನಿಮಗೆ ಶುಭವನ್ನು ತರುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುತ್ತದೆ. ಅಧಿಕಾರ ನಿಮ್ಮನ್ನು ಅರಸಿ ಬರುವ ಕಾಲ. ಉನ್ನತ ವ್ಯಾಸಂಗ ಮಾಡುವವರು ವಿದೇಶಕ್ಕೆ ಹೋಗಲು ತಯಾರಿ ಮಾಡಿಕೊಂಡಿರುವವರು ಈಗ ನಿರ್ಭಯವಾಗಿ ಪ್ರಯತ್ನ ಮಾಡಬಹುದು. ಕಳೆದ ವರ್ಷ ನೆನೆಸಿದ ಆಸೆಗಳು ಕೈಗೂಡದೆ ನಿರಾಶರಾಗಿದ್ದರೀರಿ. ಈ ವರ್ಷ ನಿರಾಶೆಗೆ ಅವಕಾಶವೇ ಇಲ್ಲ. ಗೌರವ ಮರ್ಯಾದೆ ಸಂಪಾದಿಸುತ್ತೀರಿ. ನಿಮ್ಮ ಮಾತಿಗೆ ಬೆಲೆ ಇದೆ. ನಿಮ್ಮನ್ನು ಸಲಹೆ ಕೇಳುವುದು, ಗೌರವ ಮರ್ಯಾದೆ ಸನ್ಮಾನ ಮಾಡುವುದು ಮುಂತಾದವು ನಡೆಯುತ್ತದೆ. ಬರಹಗಾರರಿಗೆ ಪ್ರತಿಭೆಗೆ ತಕ್ಕ ಪುರಸ್ಕಾರ ಸಿಗುತ್ತದೆ. ಈ ರಾಶಿಯ ಬರಹಗಾರರು ಸನ್ಮಾನ ಪ್ರಶಸ್ತಿಗಳನ್ನು ನಿರೀಕ್ಷಿಸಬಹುದು. ಕನ್ಯಾರಾಶಿಯ ಸಿನಿಮಾ ರಂಗದವರಿಗೂ ಶುಭಸುದ್ದಿ ಇದೆ. ಮಕ್ಕಳಿಂದ ಕೊಂಚ ನಿರಾಶೆ ಇದೆ. ಆದರೂ ಚಿಂತೆ ಮಾಡುವ ಕಾರಣವಿಲ್ಲ.

ತುಲಾರಾಶಿ:

ತುಲಾರಾಶಿ:

ನಿಮ್ಮ ರಾಶಿಗೆ ಸಿಂಹರಾಶಿಯ ರವಿ ಬುಧ ಹಾಗೂ ಕಟಕದ ಶುಕ್ರ ಒಳ್ಳೆಯವರು. ವೃತ್ತಿಯಲ್ಲಿ ಒಳ್ಳೆಯ ಸ್ಥಾನಮಾನ ಲಭ್ಯವಿದೆ, ಆದರೆ ಒತ್ತಡ ಹೆಚ್ಚು. ತಂದೆಯಿಂದ ಲಾಭ ಸಹಾಯ ಇದೆ. ಪಿತ್ರಾರ್ಜಿತ ಆಸ್ತಿ ಕೈಸೇರುವ ಸಂಭವ ಇದೆ. ವೈದ್ಯರುಗಳಿಗೆ ಶುಭ. ಸರ್ಜನ್‌ಗಳಿಗೆ ಶುಭ. ಎಲೆಕ್ಟ್ರಾನಿಕ್ಸ್ ಉದ್ಯಮದವರಿಗೆ ಲಾಭವಿದೆ. ನಿಮ್ಮ ರಾಶಿಯಲ್ಲೇ ಇರುವ ಕೇತು ಮಾನಸಿಕ ಹಿಂಸೆ ಕೊಡುತ್ತಾನೆ. ಏಳರ ರಾಹು ಸಂಗಾತಿಯೊಂದಿಗೆ ಕಲಹವನ್ನು ಮಾಡಿಸಬಹುದು. ಮನೆಯಲ್ಲಿ ಆದಷ್ಟು ಮೌನವಾಗಿರಿ. ಸಂಗಾತಿಯೊಡನೆ ವಾಗ್ವಾದ ಬೇಡ. ಮೌನಂ ಕಲಹಂ ನಾಸ್ತಿ. ಆರರ ಗುರುವಿನಿಂದ ಆರೋಗ್ಯಕ್ಕೆ ಕೊಂಚ ಧಕ್ಕೆಯಾಗಬಹುದು. ಶುಗರ್ ಬಿಪಿ ಇರುವವರು ಎಚ್ಚರಿಕೆಯಿಂದ ಇರಿ. ಡಯಟ್ ಮೇಲೆ ಗಮನ ಇರಲಿ. ತೂಕ ಹೆಚ್ಚಾಗದಂತೆ ನೋಡಿಕೊಳ್ಳಿ. ಸಾಲಬಾಧೆ ಎದುರಿಸ ಬೇಕಾಗುತ್ತದೆ. ಸ್ನೇಹಿತರೂ ಶತ್ರುಗಳಾಗುವ ಸಮಯ. ನೌಕರಿಯಲ್ಲಿ ಕಿರಿಕರಿ ಒತ್ತಡ ಇನ್ನೂ ಕೆಲವು ಕಾಲ ನೀವು ಅನುಭವಿಸದೆ ತಪ್ಪದು. ಸುಬ್ರಹಣ್ಯನ ಜಪ ಮಾಡಿ. ಸುಬ್ರಹ್ಮಣ್ಯನ ಕ್ಷೇತ್ರ ದರ್ಶನವೂ ಒಳ್ಳೆಯದು. ಈಶ್ವರನ ಧ್ಯಾನ ಮಾಡಿ.

ವೃಶ್ಚಿಕರಾಶಿ:

ವೃಶ್ಚಿಕರಾಶಿ:

ನಿಮ್ಮ ರಾಶಿಗೆ ಅನೇಕ ಶುಭಫಲಗಳು ಇವೆ. ನೌಕರಿಯಲ್ಲಿ ಉನ್ನತ ಪದವಿಗೇರುತ್ತೀರಿ. ಪ್ರಮೋಷನ್ ಸಿಗುವ ಸಾಧ್ಯತೆ ಇದೆ. ಬಹಳ ದಿನಗಳಿಂದ ನಿಧಾನಗತಿಯಲ್ಲಿ ಇದ್ದ ಭೂಮಿ ಕೊಡುಕೊಳ್ಳುವಿಕೆ ಈಗ ಸರಾಗವಾಗಿ ನೆರವೇರುತ್ತದೆ. ಆಸ್ತಿ ಖರೀದಿಯೂ ಮಾಡುತ್ತೀರಿ. ವಿದೇಶ ಪ್ರವಾಸ ಯೋಗ ಇದೆ. ನಿಮ್ಮ ರಾಶ್ಯಾಧಿಪತಿ ಕುಜ ನಿಮ್ಮ ರಾಶಿಯನ್ನೇ ವೀಕ್ಷಿಸುತ್ತಾನೆ . ಇದು ಕೂಡ ನಿಮಗೆ ಲಾಭವನ್ನೇ ಕೊಡುತ್ತದೆ. ಒಂಬತ್ತನೇ ಮನೆಯಲ್ಲಿರುವ ಶುಕ್ರ ಸಹ ನಿಮಗೆ ಧನಲಾಭ, ವಿವಾಹಯೋಗ ಸುಖಭೋಜನ ಚಿನ್ನಾಭರಣ ಖರೀದಿ ಮೊದಲಾದ ಶುಭಫಲಗಳನ್ನು ನೀಡುತ್ತಾನೆ. ಈ ರಾಶಿಯ ರಾಜಕೀಯ ರಂಗದವರಿಗೂ ಒಳ್ಳೆಯ ಫಲಗಳು ಇವೆ. ಅವರಿಗೆ ಇಷ್ಟವಾದ ಖಾತೆಗಳು ಸಿಗಬಹುದು. ಐದನೇ ಮನೆ ಗುರು ನಿಮ್ಮ ರಾಶಿಯನ್ನು ವೀಕ್ಷಿಸುವುದರಿಂದ ನಿಮ್ಮ ಆರೋಗ್ಯದಲ್ಲೂ ಸುಧಾರಣೆ ಇದೆ. ಮನೆಯಲ್ಲಿ ಮದುವೆ ಮಾತುಕತೆಗಳು ನಡೆಯುತ್ತದೆ. ವಿವಾಹಕ್ಕೆ ಇದು ನಿಮಗೆ ಸಕಾಲ. ಮಕ್ಕಳಿಂದ ಶುಭ ಸುದ್ದಿ ಇದೆ. ಮಕ್ಕಳ ಪ್ರಗತಿ ನಿಮಗೆ ಹರ್ಷವನ್ನು ತಂದುಕೊಡುತ್ತದೆ. ನೀವು ಊಹಿಸದೆ ಇದ್ದ ಅಧಿಕಾರ ಅಂತಸ್ತು ಸಿಗುವ ಯೋಗವಿದೆ.

ಧನಸ್ಸುರಾಶಿ:

ಧನಸ್ಸುರಾಶಿ:

ಗುರು ನಾಲ್ಕನೇ ಮನೆಯಲ್ಲಿ ಇರುವುದು ನಿಮಗೆ ನೀವು ಅಂದುಕೊಂಡ ಕೆಲಸಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತದೆ. ವೃಥಾ ಅಲೆದಾಟ ಹೊತ್ತಿಗೆ ಸರಿಯಾಗಿ ಊಟ ನಿದ್ರೆ ಇಲ್ಲದೆ ಬಳಲುತ್ತೀರಿ. ತಂದೆಯಿಂದ ಧನ ಸಹಾಯ ಆಸ್ತಿ ಲಾಭ ಇದೆ. ಕಂಪ್ಯೂಟರ್ ಸಿಎ, ಅಕೌಂಟ್ಸ್, ಬ್ಯಾಂಕ್ ನೌಕರರು ಇವರಿಗೆಲ್ಲಾ ಶುಭಲಾಭ ಇದೆ. ಹಣ ಖರ್ಚು ಸಹ ಇದೆ. ನಿಮ್ಮದಲ್ಲದ ತಪ್ಪಿಗೆ ತಲೆಕೊಡುವ ಸಂದರ್ಭ ಬರಬಹುದು. ಜಾಗ್ರತೆಯಾಗಿರಿ. ಅಪವಾದ ಅವಮಾನ ಎದುರಿಸಬೇಕಾಗಬಹುದು. ಓಂ ಹ್ರೀಂ ಕ್ಲೀಂ ಹ್ರೂಂ ಬೃಹಸ್ಪತಿಯೇ ನಮಃ ಈ ಮಂತ್ರವನ್ನು ಪ್ರತಿದಿನ ಸಾಧ್ಯವಾದಷ್ಟು ಹೇಳಿಕೊಳ್ಳಿ. ಗುರುವಾರ ಈಶ್ವರನ ಗುಡಿಗೆ ಹೋಗಿ ಹಳದಿ ಹೂಗಳಿಂದ ಅರ್ಚನೆ ಮಾಡಿಸಿ. ಕಡಲೆ ಬೇಳೆಯನ್ನು ದಾನವಾಗಿ ಕೊಡಿ. ಭೂಮಿ ವ್ಯವಹಾರದಲ್ಲಿ ಲಾಭ ಇದೆ. ಷೇರು ವ್ಯವಹಾರದಲ್ಲಿ ಲಾಭ ಇದೆ. ಬಂಧುಗಳೊಡನೆ ಕಲಹ ಆಗಬಹುದು. ನೀವು ಸರಿ ಎಂದುಕೊಂಡದ್ದೇ ತಪ್ಪು ಹೆಜ್ಜೆ ಆಗಿ ನಿಮಗೆ ಕೆಟ್ಟಹೆಸರು ಬರುವ ಸಾಧ್ಯತೆ ಇದೆ. ಯಾರೊಂದಿಗೂ ಹೆಚ್ಚು ಮಾತುಕತೆ ವ್ಯವಹಾರ ಬೇಡ. 20ನೇ ತಾರೀಕಿನ ನಂತರ ಕೊಂಚ ನಿರಾಳ ಎನಿಸುತ್ತದೆ.

ಮಕರರಾಶಿ:

ಮಕರರಾಶಿ:

ನಿಮಗೆ ಸಾಡೆಸಾತಿ ಶನಿ ಕೊನೆಯ ಹಂತದಲ್ಲಿ ಇದೆ. ಪಾದಕ್ಕೆ ಬಂದಿದೆ. ಶನಿ ಪ್ರಭಾವ ಮುಕ್ಕಾಲು ಪಾಲು ಕಡಿಮೆಯಾಗಿದ್ದರೂ ಇನ್ನೂ ಕಾಲು ಭಾಗ ಉಳಿದಿದೆ. ಶಂ ಶನೇಶ್ಚರಾಯ ನಮಃ ಮಂತ್ರವನ್ನು ಜಪಿಸಿ. ಹನುಮಾನ್ ಗುಡಿಗೆ ಪ್ರತಿ ಶನಿವಾರ ಹೋಗಿಬನ್ನಿ. ಕೆಲಸಕಾರ್ಯಗಳಲ್ಲಿ ವಿಳಂಬ ಹಣಕಾಸಿಗೆ ಬಿಗಿ, ನೌಕರಿಯಲ್ಲಿ ಒತ್ತಡ ಅಥವಾ ನಿರುದ್ಯೋಗ ಇಂಥ ಸಮಸ್ಯೆಗಳು ಇರುತ್ತದೆ. ಅಪವಾದಗಳನ್ನು ಹೊರಬೇಕಾಗುತ್ತದೆ. ಗೊತ್ತಿದ್ದೂ ತಪ್ಪು ಮಾಡಲು ಹೋಗಬೇಡಿ. ಮತ್ತೊಬ್ಬರ ಬಗ್ಗೆ ಕೇವಲವಾಗಿ ಮಾತನಾಡಬೇಡಿ ಅದು ನಿಮಗೇ ತಿರುಗಿ ಬೀಳುತ್ತದೆ. ನಿಮ್ಮಲ್ಲಿ ಉಪಕಾರ ಪಡೆದವರೇ ನಿಮ್ಮ ವಿರುದ್ಧ ಮಾತನಾಡುತ್ತಾರೆ. ಪ್ರತಿಕ್ರಿಯೆ ಕೊಡಲು ಹೋಗಬೇಡಿ. ಕಾಲವೇ ಅವರಿಗೆ ಪಾಠ ಕಲಿಸುತ್ತದೆ. ಆದಷ್ಟು ಆಧ್ಯಾತ್ಮದ ಕಡೆ ಒತ್ತು ಕೊಡಿ. ದೇವರ ಧ್ಯಾನ ಮಾಡಿ. ಗಂಡುಮಕ್ಕಳಿರುವವರಿಗೆ ಶುಭ ಸುದ್ದಿ ಇದೆ. ಮೂರರ ಗುರು ಮನಸ್ಸಿಗೆ ಧೈರ್ಯ ಕೊಡುತ್ತಾನೆ. ಕಷ್ಟಗಳನ್ನು ಎದುರಿಸುವ ಛಲ ಕೊಡುತ್ತಾನೆ. ನೀವು ಗಟ್ಟಿಗರು. ಸುಲಭಕ್ಕೆ ಸೋಲೊಪ್ಪುವವರಲ್ಲ. ನಿಮ್ಮನ್ನು ಬಗ್ಗಿಸಲು ಯಾರಿಂದಲೂ ಸಾಧ್ಯವಿಲ್ಲ. ನಿಮಗೆ ನಿಮ್ಮದೇ ಆದ ಧ್ಯೇಯಗಳು ಆದರ್ಶಗಳೂ ಇರುತ್ತದೆ. ಅವನ್ನು ಬಿಟ್ಟು ಬರಲಾರಿರಿ. ಆರೋಗ್ಯ ಸುಧಾರಣೆ ಇದೆ. 20ನೇ ತಾರೀಖಿನ ನಂತರ ಒಳ್ಳೆಯ ಸುದ್ದಿ ಕೇಳಬಹುದು. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಇದೆ.

ಕುಂಭರಾಶಿ:

ಕುಂಭರಾಶಿ:

ಮನೆಯಲ್ಲಿ ಶುಭಕಾರ್ಯದ ಸಡಗರ ಸಂಭ್ರಮ ಇದೆ. ಹಾಗೆಯೇ ಖರ್ಚುಗಳು ಜೋರಾಗಿದೆ. ಶಿಕ್ಷಕರಿಗೆ ಶುಭಲಾಭವಿದೆ. ಬರಹಗಾರರಿಗೂ ಪುಸ್ತಕಗಳಿಗೆ ಸಂಬಂಧಿಸಿದ ಕೆಲಸ ಮಾಡುವವರಿಗೂ ಸನ್ಮಾನ ಗೌರವ ಸಿಗುವ ಕಾಲ. ಲೇಖಕರಿಗೆ ಶುಭ. ಸರ್ಕಾರಿ ನೌಕರರಿಗೆ ಇಷ್ಟವಿಲ್ಲದ ಜಾಗಕ್ಕೆ ತಾತ್ಕಾಲಿಕ ವರ್ಗಾವಣೆ ಸಾದ್ಯತೆ ಇದೆ. ಕುಂಭರಾಶಿಯ ಸಂಗಾತಿಗಳಿಗೆ ಒಳ್ಳೆಯದಾಗುತ್ತದೆ. ಸಂಗಾತಿಯೊಡನೆ ಪ್ರವಾಸ ಮನರಂಜನೆ ಇದೆ. ಶತ್ರುಗಳು ನಿಮ್ಮಿಂದ ದೂರ ಇರುತ್ತಾರೆ. ಶತ್ರುಗಳಿಗೆ ನೀವು ಸಿಂಹಸ್ವಪ್ನವಾಗಿರುತ್ತೀರಿ. ರಾಜಕೀಯರಂಗದವರಿಗೂ ಈ ಮಾಸ ಒಳ್ಳೆಯದು. ನಿಮಗೆ ಅನುಕೂಲವಾಗುವ ಸಮಯ. ವ್ಯವಸಾಯಗಾರರಿಗೆ ಒಳ್ಳೆಯದು. ಮಕ್ಕಳಿಂದ ಶುಭಸುದ್ದಿ ಕೇಳುತ್ತೀರಿ. ಉನ್ನತ ವಿದ್ಯಾಭ್ಯಾಸಕ್ಕೆ ಇದು ಸಕಾಲ. ವಿದೇಶ ಪ್ರಯಾಣ ಯೋಗ ಇದೆ. 20ನೇ ತಾರೀಖಿನ ನಂತರ ಪರಿಸ್ಥಿತಿಗಳು ನಿಮಗೆ ಇನ್ನಷ್ಟು ಅನುಕೂಲಿಸುತ್ತದೆ. ದೇವಸ್ಥಾನದ ಅರ್ಚಕರು ಧರ್ಮದರ್ಶಿಗಳು ಇವರಿಗೆಲ್ಲ ಶುಭಕಾಲ. ಉನ್ನತ ಅಧಿಕಾರ ಸಿಗುವ ಯೋಗ ಇದೆ. ಮೇಲಧಿಕಾರಿಗಳಿಂದ ನಿಮಗೆ ಬೆಂಬಲ-ಪ್ರಶಂಸೆ ಸಿಗುವ ಯೋಗ ಇದೆ. ಸಾಡೆಸಾತಿ ಶನಿಯ ಪ್ರಭಾವ ಇದ್ದರೂ ನಿಮಗೆ ಈಗ ಗುರುಬಲ ಇರುವುದರಿಂದ ಶನಿ ಹೆಚ್ಚು ತೊಂದರೆ ಮಾಡಲಾರ.

 ಮೀನರಾಶಿ:

ಮೀನರಾಶಿ:

ನಿಮ್ಮ ರಾಶಿಯಲ್ಲೇ ಗುರು ಇದ್ದು ಸ್ವಲ್ಪ ಕಿರಿಕರಿಯನ್ನು ಮಾಡುತ್ತಾನೆ. ವೃಥಾ ಅಲೆದಾಟ, ನೌಕರಿಯಲ್ಲಿ ತೃಪ್ತಿ ಇಲ್ಲದಿರುವುದು, ಬಿಡಬೇಕೆಂದರೂ ಬೇರೆ ನೌಕರಿ ಸಿಗದಿರುವುದು ಮುಂತಾದ ಋಣಾತ್ಮಕ ಫಲಗಳು ಇವೆ. ನೌಕರಿಯಲ್ಲಿ ಕಿರಿಕಿರಿಯಾದರೂ ಅನುಸರಿಸಿಕೊಂಡು ಹೋಗಿ. ಬಿಡುವ ತಪ್ಪು ಮಾಡಬೇಡಿ. ಹಣದ ಹರಿವು ಉತ್ತಮವಾಗಿದೆ. ಹೆಣ್ಣುಮಕ್ಕಳಿಂದ, ಸೋದರಿಯರಿಂದ, ತಾಯಿಯಿಂದ ಸಹಾಯಹಸ್ತ ಸಿಗುತ್ತದೆ. ಈ ವರ್ಷ ಗುರುಬಲ ಇಲ್ಲದಿರುವುದರಿಂದ ಗುರುರಾಯರು ಅಥವಾ ದತ್ತಾತ್ರೇಯನ ಪೂಜೆ ದರ್ಶನ ಮಾಡಿ. ಎರಡನೇ ಮನೆ ರಾಹು ಮುಖದಲ್ಲಿ ಅಲರ್ಜಿ ಮಾಡಿಸಬಹುದು. ಕಾಸ್ಮೆಟಿಕ್ಸನ್ನು ಎಚ್ಚರಿಕೆಯಿಂದ ಬಳಸಿ. ಬ್ರಾಂಡೆಡ್ಗಳನ್ನೇ ಬಳಸಿ. ಮೂರರ ಕುಜ ಧೈರ್ಯವನ್ನು, ಛಲವನ್ನೂ ಹೆಚ್ಚಿಸುತ್ತಾನೆ. ವಿದ್ಯುತ್ ಗೆ ಸಂಬಂಧಪಟ್ಟ ಕೆಲಸಗಾರರಿಗೆ ಒಳ್ಳೆಯ ಫಲ ಇದೆ. ಸರ್ಕಾರದಲ್ಲಿ ಕೆಲಸ ಆಗಬೇಕಾದರೆ ಈ ತಿಂಗಳು ಮಾಡಿಕೊಳ್ಳಿ. ಸಲೀಸಾಗಿ ಆಗುತ್ತದೆ. 11ರ ಶನಿ ಧನಲಾಭವನ್ನು ಕೊಡುತ್ತಾನೆ. ಕಬ್ಬಿಣದ ವ್ಯಾಪಾರಿಗಳಿಗೆ ಶುಭ. ಫ್ಯಾಕ್ಟರಿ ಮಾಲೀಕರಿಗೆ ಶುಭ. ಮೆಷಿನರಿಗೆ ಸಂಬಂಧಪಟ್ಟ ಕೆಲಸ ಮಾಡುವವರು ಮರಗೆಲಸ ಮಾಡುವವರಿಗೂ ಶುಭ. ಅವಿವಾಹಿತರು ಮದುವೆಯನ್ನು ಮುಂದಕ್ಕೆ ಹಾಕಿ.

English summary
August 2022 Monthly Horoscope In Kannada: August Masika Rashi Bhavishya: Check August Monthly Horoscope for all 12 Zodiac Signs in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X