ಜ್ಯೋತಿಷಿ ಕಮಲಾಕರ್ ಭಟ್ ರಿಂದ ರವಿ ಬೆಳಗೆರೆ ಜಾತಕ ವಿಶ್ಲೇಷಣೆ
Recommended Video

ಹಾಯ್ ಬೆಂಗಳೂರ್ ವಾರ ಪತ್ರಿಕೆ ಸಂಪಾದಕ- ಪತ್ರಕರ್ತ ರವಿ ಬೆಳಗೆರೆ ಜೈಲು ಕಾಣುವಂತಾಗಿದೆ. ಅವರಿಗೆ ಜಾಮೀನು ಸಿಗಬಹುದಾ? ಸುಪಾರಿ ಕೊಲೆಗೆ ಯತ್ನಿಸಿದ ಆರೋಪದಿಂದ ಹೊರಬರಬಹುದಾ? ಮತ್ತೆ ತಮ್ಮ ಬರವಣಿಗೆಯಿಂದ ಓದುಗರ ತೃಪ್ತಿ ಪಡಿಸುತ್ತಾರಾ? ಹೀಗೆ ಹಲವು ವಿಚಾರಗಳ ಬಗ್ಗೆ ಜ್ಯೋತಿಷಿಗಳಾದ ಡಾ.ಕಮಲಾಕರ್ ಭಟ್ ಭವಿಷ್ಯ ನುಡಿದಿದ್ದಾರೆ. ಮುಖ್ಯಾಂಶಗಳು ಹೀಗಿವೆ.
* ರವಿ ಬೆಳಗೆರೆ ಅವರದು ಉತ್ತರಾಷಾಢ ನಕ್ಷತ್ರ, ಮಕರ ರಾಶಿ
* ಅವರ ಜಾತಕದಲ್ಲಿ ಗುರುಚಾಂಡಾಲ ಯೋಗ ಇದೆ
* ಗುರು ಗ್ರಹದ ಜತೆ ರಾಹು ಅಥವಾ ಕೇತು ಇದ್ದರೆ ಅದನ್ನು ಗುರುಚಾಂಡಾಲ ಯೋಗ ಅಂತಾರೆ
* ಇವರು ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಏರಿದರೂ ಏರಿಳಿತಗಳನ್ನು ಕಾಣಬೇಕಾಗುತ್ತದೆ

* ಇದಕ್ಕೆ ಸಾಕ್ಷಿ ಅನ್ನೋ ಹಾಗೆ ರವಿ ಬೆಳಗೆರೆ ಅವರು ಹೋಟೆಲ್ ಮಾಣಿಯಾಗಿ ಕೆಲಸ ಮಾಡಿದ್ದರಿಂದ ಮೊದಲುಗೊಂಡು ಹಂತಹಂತವಾಗಿ ಮೇಲೇರಿದರು
* ಗುರುಚಾಂಡಾಲ ಯೋಗ ಎಂಬುದು ದೋಷವೂ ಹೌದು, ಯೋಗವೂ ಹೌದು
* ಶನಿಯ ಪ್ರಭಾವ ಈ ವರ್ಷದ ಆರಂಭದಿಂದ ಶುರುವಾಯಿತು
* ಆಗಿನಿಂದ ಒಂದಲ್ಲ ಒಂದು ಸಮಸ್ಯೆ ಶುರುವಾಯಿತು. ಸದನ ಸಮಿತಿ ವರದಿ ಬಂತು. ಕೋರ್ಟ್ ಗೆ ಮೊರ ಹೋಗಿ ಅದರಿಂದ ತಪ್ಪಿಸಿಕೊಂಡರು
* ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ರವಿ ಬೆಳಗೆರೆ ಅವರು ಬಿಡುಗಡೆ ಆಗುವುದು ತಡವಾಗಬಹುದು
* ಮುಂದೆ ಕೆಲವು ಕಾಲ ಮತ್ತೆ ಅಕ್ಷರ ಲೋಕವನ್ನು ಆಳುತ್ತಾರೆ

* ಆ ನಂತರ ಜನ್ಮರಾಶಿಗೆ ಶನಿ ಪ್ರವೇಶ ಆದಾಗ ಆರೋಗ್ಯದಲ್ಲಿ ಏರುಪೇರಾಗುತ್ತದೆ
* ಇವತ್ತಿನ ಅವರ ಸ್ಥಿತಿಗೆ ಶನಿ ಗ್ರಹದ ದುಷ್ಪ್ರಭಾವ ಕಾರಣ
* ಭವಿಷ್ಯದಲ್ಲಿ ಅವರು ಆಪವಾದದಿಂದ ಪಾರಾಗುವ ಎಲ್ಲ ಸಾದ್ಯತೆಗಳಿವೆ
* ರವಿ ಬೆಳಗೆರೆ ಜಾತಕದಲ್ಲಿ ರವಿ ಗ್ರಹ ಉಚ್ಚವಾಗಿದೆ. ಆ ಗ್ರಹದ ಪ್ರಭಾವದಿಂದ ಅಕ್ಷರದ ಮೂಲಕ ಆಕರ್ಷಣೆ
* ಗುರು ಚಾಂಡಾಲ ಯೋಗ ಇರುವಾಗ ಎಷ್ಟು ಎತ್ತರಕ್ಕೆ ಏರಿದರೂ ಮತ್ತೆ ಕೆಳ ಮಟ್ಟಕ್ಕೆ ತಲುಪುತ್ತದೆ
* ಆರೋಗ್ಯ ಕುಸಿಯುತ್ತದೆ ಹಾಗೂ ಮಾನಸಿಕ ಸ್ಥಿತಿ ಏರುಪೇರಾಗುತ್ತದೆ. ಆರೋಗ್ಯದ ಬಗ್ಗೆ ಎಚ್ಚರ ಅಗತ್ಯ
* ಕಾನೂನಾತ್ಮಕ ಹೋರಾಟದಲ್ಲಿ ಅವರು ಜಯ ಪಡೆಯುತ್ತಾರೆ












Click it and Unblock the Notifications