ತುಲಾ ರಾಶಿ ಸ್ತ್ರೀಯ ಸೊಂಟದಲ್ಲಿದೆ ಬಯಕೆಯ ಉದ್ದೀಪನ
ದಾಂಪತ್ಯದ ವಿಚಾರಕ್ಕೆ ಬಂದರೆ ಗಂಡು- ಹೆಣ್ಣಿನ ಜಾತಕದ ಹೊಂದಾಣಿಕೆ ಬಹಳ ಮುಖ್ಯ. ಸಂಸಾರದಲ್ಲಿ ಸಂತೋಷ ಮನೆ ಮಾಡಬೇಕು ಅಂದರೆ ಗಂಡು-ಹೆಣ್ಣು ಇಬ್ಬರ ಜಾತಕದ ಮಧ್ಯೆ ಅದ್ಭುತ ಎನಿಸುವಂಥ ಹೊಂದಾಣಿಕೆ ಇರಬೇಕು.
ಮದುವೆಯ ಸಂದರ್ಭದಲ್ಲಿ ಜ್ಯೋತಿಷಿಗಳ ಬಳಿಗೆ ಹೋಗಿ ಗಂಡು- ಹೆಣ್ಣಿನ ಜಾತಕ ತೋರಿಸಿ, ಇಬ್ಬರಿಗೂ ಹೊಂದಾಣಿಕೆ ಹೇಗಿರುತ್ತದೆ ಎಂದು ಕೇಳುವುದು ವಾಡಿಕೆ. ಅದೇ ರೀತಿ ಕೂಟಗಳು ಮತ್ತು ಗುಣ ಇಷ್ಟು ಎಂದು ಲೆಕ್ಕ ಹಾಕಿ ಜ್ಯೋತಿಷಿಗಳು ಬರೆದು ಕೊಟ್ಟು, ಮದುವೆ ಮಾಡಬಹುದೋ ಇಲ್ಲವೋ ಎಂಬುದನ್ನು ತಿಳಿಸುತ್ತಾರೆ. ಈ ಪರಿಪಾಠ ಹಿಂದಿನಿಂದಲೂ ನಡೆದುಬಂದಿದೆ.
ದಾಂಪತ್ಯದಲ್ಲಿ ಗಂಡು- ಹೆಣ್ಣಿನ ಆಸಕ್ತಿ ಸಮಾನವಾದರೆ ಒಂದು ಬಗೆ. ಒಂದು ವೇಳೆ ಸ್ವಲ್ಪ ಕೈ ಕೊಟ್ಟು ಹೆಣ್ಣು- ಗಂಡಿನ ಆದ್ಯತೆಗಳು ಬೇರೆಯಾಗಿ ಉತ್ತರ ಧ್ರುವ- ದಕ್ಷಿಣ ಧ್ರುವ ಎಂದಾಗಿಬಿಟ್ಟರೆ ಕಷ್ಟ ಕಷ್ಟ. ಇನ್ನು ಲೈಂಗಿಕ ವಿಚಾರಕ್ಕಾಗಿಯೂ ಗಂಡ- ಹೆಂಡತಿ ಬೇರೆಯಾಗುವ ಸಂದರ್ಭಗಳಿವೆ. ಸ್ತ್ರೀಯರ ಲೈಂಗಿಕ ಪ್ರಾಧಾನ್ಯ ಬೇರೆಯೇ ಇರುತ್ತದೆ. ಜ್ಯೋತಿಷ್ಯದಲ್ಲೇ ಆ ಬಗ್ಗೆ ಏನು ಹೇಳಲಾಗಿದೆ ಎಂಬುದನ್ನು ತಿಳಿಸಿಕೊಡುವ ಯತ್ನವಿದು.
ಅಶ್ಲೀಲದ ಸೋಂಕು ತಾಗದಂತೆ ದಂಪತಿ ಮಧ್ಯದ ಲೈಂಗಿಕ ಜೀವನಕ್ಕೆ ಪೂರಕ ಆಗಬಹುದಾದ ಲೇಖನ ಇದು. ಯಾವ ರಾಶಿ ಸ್ತ್ರೀಯರ ಪ್ರಣಯ ಉತ್ತೇಜಕ ಯಾವುದು ಎಂಬುದರ ಸರಣಿಯ ಮುಂದುವರಿದ ಭಾಗವನ್ನು ಈ ದಿನ ಓದಲಿದ್ದೀರಿ. ಅದರಲ್ಲಿ ತುಲಾ ರಾಶಿಯ ಸ್ತ್ರೀ ಬಗ್ಗೆ ತಿಳಿಸಲಾಗುವುದು.

ಹುಲಿ ಹಾಗೂ ಎಮ್ಮೆ
ಚಿತ್ತಾ ನಕ್ಷತ್ರದ ಎರಡು, ಮೂರು, ನಾಲ್ಕನೇ ಪಾದ, ಸ್ವಾತಿ ನಕ್ಷತ್ರದ ನಾಲ್ಕು ಪಾದ ಮತ್ತು ವಿಶಾಖ ನಕ್ಷತ್ರದ ಒಂದು ಹಾಗೂ ಎರಡನೇ ಪಾದ ಸೇರಿ ತುಲಾ ರಾಶಿಯಾಗುತ್ತದೆ. ಚಿತ್ತಾ ಹಾಗೂ ವಿಶಾಖ ನಕ್ಷತ್ರದ ಯೋನಿ ಕೂಟ ಹುಲಿ ಮತ್ತು ಸ್ವಾತಿ ನಕ್ಷತ್ರಕ್ಕೆ ಎಮ್ಮೆ ಆಗುತ್ತದೆ.

ಸೊಂಟವೇ ಉತ್ತೇಜನಕ್ಕೆ ಪೂರಕ
ತುಲಾ ರಾಶಿಯ ಸ್ತ್ರೀಯರ ಸೊಂಟದಲ್ಲಿ ಅವರನ್ನು ಲೈಂಗಿಕತೆಗೆ ಉತ್ತೇಜಿಸುವ ಸ್ಥಾನವಿರುತ್ತದೆ. ಬೆನ್ನಿನ ಕೆಳತುದಿ ಹಾಗೂ ಹಿಂಭಾಗದ ಮೇಲೆ ಕೈಯಾಡಿಸುತ್ತಾ ಕಾಮನೆಗಳನ್ನು ಉತ್ತೇಜಿಸಿದರೆ ಮುಂದಿನ ಕ್ರಿಯೆಗೆ ಸಿದ್ಧತೆ ನಡೆಸಿದಂತೆಯೇ.

ಭಾವನಾತ್ಮಕ ನಂಟು ಹೆಚ್ಚು
ಈ ರಾಶಿಯ ಸ್ತ್ರೀಯರು ಉಳಿದ ರಾಶಿಯವರಿಗಿಂತ ಹೆಚ್ಚು ಭಾವನಾಜೀವಿಗಳು. ಕೆಲಸ-ಕಾರ್ಯಗಳಲ್ಲೂ ವಿಪರೀತ ಚಟುವಟಿಕೆ ಮತ್ತು ನಿಸ್ಸೀಮರು. ಆದರೆ ಭಾವನಾತ್ಮಕವಾಗಿ ಹಚ್ಚಿಕೊಂಡ ನಂತರ ಅವರಿಗೆ ಬೇಸರವಾಗುವಂತೆ ನಡೆದುಕೊಂಡಿರೋ ಮತ್ತೆ ನಿಮ್ಮತ್ತ ತಿರುಗಿ ಕೂಡ ನೋಡುವುದಿಲ್ಲ. ಸಹಕರಿಸುವುದಿಲ್ಲ. ಸ್ಪಂದಿಸುವುದಿಲ್ಲ.

ಅಳೆದು-ತೂಗಿ ನೋಡುವ ಜಾಯಮಾನ
ಪ್ರತಿ ಮಾತನ್ನೂ ಅಳೆದು-ತೂಗಿ ನೋಡುವ ಈ ಮಹಿಳೆಯರು ಕೆಲವು ಸಲ ತಕ್ಷಣಕ್ಕೆ ಸ್ಪಂದಿಸುವುದಿಲ್ಲ. ಅದರರ್ಥ ಆಸಕ್ತಿ ಇಲ್ಲ ಎಂದಲ್ಲ. ಅವರು ಭವಿಷ್ಯದಲ್ಲಿ ಎದುರಾಗಬಹುದಾದ ಸನ್ನಿವೇಶ- ಸವಾಲುಗಳ ಲೆಕ್ಕಾಚಾರದಲ್ಲಿ ಇರುತ್ತಾರೆ. ಆದ್ದರಿಂದ ಉತ್ಕಟವಾದ ಸುಖದಲ್ಲಿರುವಾಗ ಹಳೆ ವಿಚಾರಗಳು, ವ್ಯವಹಾರದ ಸಂಗತಿಗಳು ಮಾತನಾಡಲೇ ಬೇಡಿ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications