ತುಲಾ ರಾಶಿ ಸ್ತ್ರೀಯ ಸೊಂಟದಲ್ಲಿದೆ ಬಯಕೆಯ ಉದ್ದೀಪನ
ದಾಂಪತ್ಯದ ವಿಚಾರಕ್ಕೆ ಬಂದರೆ ಗಂಡು- ಹೆಣ್ಣಿನ ಜಾತಕದ ಹೊಂದಾಣಿಕೆ ಬಹಳ ಮುಖ್ಯ. ಸಂಸಾರದಲ್ಲಿ ಸಂತೋಷ ಮನೆ ಮಾಡಬೇಕು ಅಂದರೆ ಗಂಡು-ಹೆಣ್ಣು ಇಬ್ಬರ ಜಾತಕದ ಮಧ್ಯೆ ಅದ್ಭುತ ಎನಿಸುವಂಥ ಹೊಂದಾಣಿಕೆ ಇರಬೇಕು.
ಮದುವೆಯ ಸಂದರ್ಭದಲ್ಲಿ ಜ್ಯೋತಿಷಿಗಳ ಬಳಿಗೆ ಹೋಗಿ ಗಂಡು- ಹೆಣ್ಣಿನ ಜಾತಕ ತೋರಿಸಿ, ಇಬ್ಬರಿಗೂ ಹೊಂದಾಣಿಕೆ ಹೇಗಿರುತ್ತದೆ ಎಂದು ಕೇಳುವುದು ವಾಡಿಕೆ. ಅದೇ ರೀತಿ ಕೂಟಗಳು ಮತ್ತು ಗುಣ ಇಷ್ಟು ಎಂದು ಲೆಕ್ಕ ಹಾಕಿ ಜ್ಯೋತಿಷಿಗಳು ಬರೆದು ಕೊಟ್ಟು, ಮದುವೆ ಮಾಡಬಹುದೋ ಇಲ್ಲವೋ ಎಂಬುದನ್ನು ತಿಳಿಸುತ್ತಾರೆ. ಈ ಪರಿಪಾಠ ಹಿಂದಿನಿಂದಲೂ ನಡೆದುಬಂದಿದೆ.
ದಾಂಪತ್ಯದಲ್ಲಿ ಗಂಡು- ಹೆಣ್ಣಿನ ಆಸಕ್ತಿ ಸಮಾನವಾದರೆ ಒಂದು ಬಗೆ. ಒಂದು ವೇಳೆ ಸ್ವಲ್ಪ ಕೈ ಕೊಟ್ಟು ಹೆಣ್ಣು- ಗಂಡಿನ ಆದ್ಯತೆಗಳು ಬೇರೆಯಾಗಿ ಉತ್ತರ ಧ್ರುವ- ದಕ್ಷಿಣ ಧ್ರುವ ಎಂದಾಗಿಬಿಟ್ಟರೆ ಕಷ್ಟ ಕಷ್ಟ. ಇನ್ನು ಲೈಂಗಿಕ ವಿಚಾರಕ್ಕಾಗಿಯೂ ಗಂಡ- ಹೆಂಡತಿ ಬೇರೆಯಾಗುವ ಸಂದರ್ಭಗಳಿವೆ. ಸ್ತ್ರೀಯರ ಲೈಂಗಿಕ ಪ್ರಾಧಾನ್ಯ ಬೇರೆಯೇ ಇರುತ್ತದೆ. ಜ್ಯೋತಿಷ್ಯದಲ್ಲೇ ಆ ಬಗ್ಗೆ ಏನು ಹೇಳಲಾಗಿದೆ ಎಂಬುದನ್ನು ತಿಳಿಸಿಕೊಡುವ ಯತ್ನವಿದು.
ಅಶ್ಲೀಲದ ಸೋಂಕು ತಾಗದಂತೆ ದಂಪತಿ ಮಧ್ಯದ ಲೈಂಗಿಕ ಜೀವನಕ್ಕೆ ಪೂರಕ ಆಗಬಹುದಾದ ಲೇಖನ ಇದು. ಯಾವ ರಾಶಿ ಸ್ತ್ರೀಯರ ಪ್ರಣಯ ಉತ್ತೇಜಕ ಯಾವುದು ಎಂಬುದರ ಸರಣಿಯ ಮುಂದುವರಿದ ಭಾಗವನ್ನು ಈ ದಿನ ಓದಲಿದ್ದೀರಿ. ಅದರಲ್ಲಿ ತುಲಾ ರಾಶಿಯ ಸ್ತ್ರೀ ಬಗ್ಗೆ ತಿಳಿಸಲಾಗುವುದು.

ಹುಲಿ ಹಾಗೂ ಎಮ್ಮೆ
ಚಿತ್ತಾ ನಕ್ಷತ್ರದ ಎರಡು, ಮೂರು, ನಾಲ್ಕನೇ ಪಾದ, ಸ್ವಾತಿ ನಕ್ಷತ್ರದ ನಾಲ್ಕು ಪಾದ ಮತ್ತು ವಿಶಾಖ ನಕ್ಷತ್ರದ ಒಂದು ಹಾಗೂ ಎರಡನೇ ಪಾದ ಸೇರಿ ತುಲಾ ರಾಶಿಯಾಗುತ್ತದೆ. ಚಿತ್ತಾ ಹಾಗೂ ವಿಶಾಖ ನಕ್ಷತ್ರದ ಯೋನಿ ಕೂಟ ಹುಲಿ ಮತ್ತು ಸ್ವಾತಿ ನಕ್ಷತ್ರಕ್ಕೆ ಎಮ್ಮೆ ಆಗುತ್ತದೆ.

ಸೊಂಟವೇ ಉತ್ತೇಜನಕ್ಕೆ ಪೂರಕ
ತುಲಾ ರಾಶಿಯ ಸ್ತ್ರೀಯರ ಸೊಂಟದಲ್ಲಿ ಅವರನ್ನು ಲೈಂಗಿಕತೆಗೆ ಉತ್ತೇಜಿಸುವ ಸ್ಥಾನವಿರುತ್ತದೆ. ಬೆನ್ನಿನ ಕೆಳತುದಿ ಹಾಗೂ ಹಿಂಭಾಗದ ಮೇಲೆ ಕೈಯಾಡಿಸುತ್ತಾ ಕಾಮನೆಗಳನ್ನು ಉತ್ತೇಜಿಸಿದರೆ ಮುಂದಿನ ಕ್ರಿಯೆಗೆ ಸಿದ್ಧತೆ ನಡೆಸಿದಂತೆಯೇ.

ಭಾವನಾತ್ಮಕ ನಂಟು ಹೆಚ್ಚು
ಈ ರಾಶಿಯ ಸ್ತ್ರೀಯರು ಉಳಿದ ರಾಶಿಯವರಿಗಿಂತ ಹೆಚ್ಚು ಭಾವನಾಜೀವಿಗಳು. ಕೆಲಸ-ಕಾರ್ಯಗಳಲ್ಲೂ ವಿಪರೀತ ಚಟುವಟಿಕೆ ಮತ್ತು ನಿಸ್ಸೀಮರು. ಆದರೆ ಭಾವನಾತ್ಮಕವಾಗಿ ಹಚ್ಚಿಕೊಂಡ ನಂತರ ಅವರಿಗೆ ಬೇಸರವಾಗುವಂತೆ ನಡೆದುಕೊಂಡಿರೋ ಮತ್ತೆ ನಿಮ್ಮತ್ತ ತಿರುಗಿ ಕೂಡ ನೋಡುವುದಿಲ್ಲ. ಸಹಕರಿಸುವುದಿಲ್ಲ. ಸ್ಪಂದಿಸುವುದಿಲ್ಲ.

ಅಳೆದು-ತೂಗಿ ನೋಡುವ ಜಾಯಮಾನ
ಪ್ರತಿ ಮಾತನ್ನೂ ಅಳೆದು-ತೂಗಿ ನೋಡುವ ಈ ಮಹಿಳೆಯರು ಕೆಲವು ಸಲ ತಕ್ಷಣಕ್ಕೆ ಸ್ಪಂದಿಸುವುದಿಲ್ಲ. ಅದರರ್ಥ ಆಸಕ್ತಿ ಇಲ್ಲ ಎಂದಲ್ಲ. ಅವರು ಭವಿಷ್ಯದಲ್ಲಿ ಎದುರಾಗಬಹುದಾದ ಸನ್ನಿವೇಶ- ಸವಾಲುಗಳ ಲೆಕ್ಕಾಚಾರದಲ್ಲಿ ಇರುತ್ತಾರೆ. ಆದ್ದರಿಂದ ಉತ್ಕಟವಾದ ಸುಖದಲ್ಲಿರುವಾಗ ಹಳೆ ವಿಚಾರಗಳು, ವ್ಯವಹಾರದ ಸಂಗತಿಗಳು ಮಾತನಾಡಲೇ ಬೇಡಿ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications