ಜ್ಯೋತಿಷಿಗಳಿಗೆ ನೋಂದಣಿ ಬೇಕಾ, ಬೇಡವಾ?

***
ಸುವರ್ಣ ವಾರ್ತಾ ವಾಹಿನಿಯ "ರಿಜಿಸ್ಟರ್ಡ್ ಜ್ಯೋತಿಷಿ" ಎಂಬ ಶೀರ್ಷಿಕೆಯ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಲ್ಲಿ ನಾನೂ ಒಬ್ಬ. ಉಡುಪಿಯ ಒಂದು ಶೈಕ್ಷಣಿಕ ಸಂಸ್ಥೆಯಿಂದ ಜ್ಯೋತಿಷ್ಯ ಶಿಕ್ಷಣ ಪಡೆದ ದಾಖಲೆಯೊಂದಿಗೆ ಹಾಜರಿದ್ದ ಖ್ಯಾತ, ಪ್ರಖ್ಯಾತ, ಪ್ರಕಾಂಡ ಜ್ಯೋತಿಷಿಯೊಬ್ಬರು ಇಂತಹ ಸಂಸ್ಥೆಯಿಂದ ಶಿಕ್ಷಣ ಪಡೆದುಕೊಂಡವರು ಮಾತ್ರ ಜ್ಯೋತಿಷಿ ಎಂದು ನೋಂದಣಿ ಮಾಡಿಕೊಳ್ಳಲು ಅರ್ಹರು ಎನ್ನುವ ರೀತಿಯಲ್ಲಿ ತಮ್ಮ ವಾದ ಮಂಡಿಸಿದರು.
ಅದು ಅವರ ಅಭಿಪ್ರಾಯ. ನಿಜವಾಗಿ ಚರ್ಚೆಯ ವಸ್ತು ಆಗಬೇಕಾಗಿದ್ದು ಈ ಜ್ಯೋತಿಷಿಗಳಿಗೆ ನೋಂದಣಿ ಬೇಕು ಅಥವಾ ಬೇಡ ಎನ್ನುವುದಕ್ಕಿಂತ, ಇವರು ಸಾಮಾನ್ಯ ಜನರನ್ನು ಜ್ಯೋತಿಷ್ಯದ ಹೆಸರಿನಲ್ಲಿ ಭಯಪಡಿಸಿ ಪೂಜೆ ಪುನಸ್ಕಾರಗಳ ಹೆಸರಿನಲ್ಲಿ ಸುಲಿಗೆ ಮಾಡುತ್ತಿರುವುದರ ಬಗ್ಗೆ. ಇಂತಹ ಜ್ಯೋತಿಷಿಗಳಿಗೆ ನೋಂದಣಿಯನ್ನೂ ಕೊಟ್ಟುಬಿಟ್ಟರೆ ಲೂಟಿ ಮಾಡಲಿಕ್ಕೆ ಲೈಸೆನ್ಸ್ ಕೊಟ್ಟಂತೆ ಆಗುತ್ತದೆಯಲ್ಲದೆ ಬೇರೇನೂ ಆಗುವುದಿಲ್ಲ.
ಜ್ಯೋತಿಷ್ಯವನ್ನು ವೃತ್ತಿಯಾಗಿ ತೆಗೆದುಕೊಳ್ಳದೆ ಅಧ್ಯಯನದ ಆಸಕ್ತಿಯಿಂದ ಪ್ರವೃತ್ತಿಯಾಗಿಸಿಕೊಂಡು ಸಾಮಾನ್ಯ ಜನರ ನೋವು ನಲಿವುಗಳಿಗೆ ಸ್ಪಂದಿಸುತ್ತಿರುವ ಒಂದು ವರ್ಗ ನಮ್ಮ ಸಮಾಜದಲ್ಲಿ ಹಿಂದೆಯೂ ಇತ್ತು ಈಗಲೂ ಇದೆ ಎನ್ನುವುದನ್ನು ಯಾರೂ ಮರೆಯುವಂತಿಲ್ಲ.
ಮುಂದೆ ಭವಿಷ್ಯತ್ತಿನಲ್ಲಿ ಹೀಗೇ ಆಗುತ್ತದೆ ಎಂದು ಹೇಳಲು ಯಾವ ಅಧ್ಯಯನದಿಂದಲೂ ಸಾಧ್ಯವಿಲ್ಲ ಎನ್ನುವದನ್ನು ವಿಶ್ವ ವಿಖ್ಯಾತ ಜ್ಯೋತಿಷಿ ಡಾ ಬಿವಿ ರಾಮನ್ ರವರು ತಮ್ಮ ಮಾಸಿಕದಲ್ಲಿ ಒಂದು ಶ್ಲೋಕದ ಮೂಲಕ ಹೇಳುತ್ತಿದ್ದರು ಇಂದಿಗೂ ಈ ಜ್ಯೋತಿಷ್ಯ ಮಾಸಿಕದಲ್ಲಿ ಈ ಶ್ಲೋಕ ಉಳಿದುಕೊಂಡಿದೆ.
ಜ್ಯೋತಿಷಿಗಳು ಒಂದು ರೀತಿಯ ಮಾನಸಿಕ ತಜ್ಞರ ರೀತಿಯಾಗಿ ಕಾರ್ಯ ನಿರ್ವಹಿಸಿ ತಮ್ಮಲ್ಲಿಗೆ ಬರುವವರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕೆಲಸ ಮಾಡಬೇಕೆ ಹೊರತು, ಅವರನ್ನು ಭಯಭೀತರನ್ನಾಗಿಸಿ ಹಣ ದೋಚುವುದಲ್ಲಾ. ಈಗ ಕಡಿವಾಣ ಹಾಕಬೇಕಾದ್ದು ಈ ಹಣ ದೋಚುವ ಪ್ರವೃತ್ತಿಗೆ. ಈ ಬಗ್ಗೆ ಸನ್ಮಾನ್ಯ ಮುಜರಾಯಿ ಮಂತ್ರಿವರ್ಯರು ಗಮನ ಹರಿಸಲಿ.
ಬುದ್ಧಿವಂತರ ತಾಣ ಎಂದೇ ಗುರುತಿಸಿಕೊಂಡಿರುವ ಫೇಸ್ ಬುಕ್ ನಲ್ಲಿ ಇದರ ಬಗ್ಗೆ ಚರ್ಚೆ ಈ ಮೂಲಕ ಪ್ರಾರಂಭವಾಗಲಿ. ಜ್ಯೋತಿಷ್ಯ ವೃತ್ತಿಯಿಂದಲೇ ಸಂಪತ್ತನ್ನು ಗಳಿಸಿರುವ ವರ್ಗವೂ ಈ ಚರ್ಚೆಯಲ್ಲಿ ಪಾಲ್ಗೊಳ್ಳಲಿ.
-
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ












Click it and Unblock the Notifications