Get Updates
Get notified of breaking news, exclusive insights, and must-see stories!

ಭಾರತ, ಚೀನಾದ ನಡುವೆ ಯುದ್ದ ಸಂಭವಿಸುತ್ತಾ: ಬಾಲ ಜ್ಯೋತಿಷಿ ಅಭಿಗ್ಯಾ ನುಡಿದ ಭವಿಷ್ಯ

ಗಲ್ವಾನ್ ಗಡಿ ಸಂಘರ್ಷದ ನಂತರ ಭಾರತ ಮತ್ತು ಚೀನಾದ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗಡಿಯಲ್ಲಿನ ತನ್ನ ಸಾವಿರಾರು ಸೈನಿಕರನ್ನು ವಾಪಸ್ ಕರೆಸಿಕೊಳ್ಳಲು ಚೀನಾ ಮೀನಾಮೇಷ ಎಣಿಸುತ್ತಿದೆ.

Recommended Video

      ಇನ್ಮುಂದೆ ಈ ಏರಿಯಾ ವರೆಗೂ ಬರುತ್ತೆ ಮೆಟ್ರೋ | Oneindia Kannada

      ಈಗಾಗಲೇ, ಕೊರೊನಾ ವಿಚಾರದಲ್ಲಿ ಹಲವು ಜ್ಯೋತಿಷ್ಯವನ್ನು ನುಡಿದಿರುವ ಬಾಲ ಜ್ಯೋತಿಷಿ ಅಭಿಗ್ಯಾನ ಭವಿಷ್ಯ ಕರಾರುವಕ್ಕಾಗಿರಲಿಲ್ಲ. ಯಾಕೆಂದರೆ, ಕೊರೊನಾ ದೇಶದಿಂದ ನಿರ್ನಾಮವಾಗಲಿದೆ ಎಂದು ಆತನ ಟೈಂಲೈನ್ ಈಗಾಗಲೇ ಮುಗಿದಾಗಿದೆ.

      ಇದರ ನಡುವೆ, ಭಾರತ ಮತ್ತು ಚೀನಾದ ನಡುವೆ ಯುದ್ದ ನಡೆಯಲಿದೆಯಾ, ನಡೆದರೂ, ಯಾವ ಸಮಯದಲ್ಲಿ ಯುದ್ದ ಸಂಭವಿಸಬಹುದು ಎನ್ನುವುದರ ಬಗ್ಗೆ ಅಭಿಗ್ಯಾನ, ಹೊಸ ಭವಿಷ್ಯದ ವಿಡಿಯೋ ಹೊರಬಂದಿದೆ.

      2020-21ರ ಮುಂದಿನ ಕೆಲವು ತಿಂಗಳ ಒಟ್ಟಾರೆ ರಾಶಿಫಲವನ್ನು ಆಧರಿಸಿ ಅಭಿಗ್ಯಾ ಭವಿಷ್ಯ ನುಡಿದಿದ್ದು, ಯುದ್ದ ನಡೆದರೆ ಎರಡೂ ಕಡೆ ಅಪಾರ ಪ್ರಮಾಣದ ಸಾವುನೋವು ಸಂಭವಿಸಲಿದೆ ಎಂದು ಹೇಳಿದ್ದಾನೆ.

      ಕೊರೊನಾ ವೈರಸಿನ ವೇಗ ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಿದೆ.

      ಕೊರೊನಾ ವೈರಸಿನ ವೇಗ ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಿದೆ.

      ಭಾರತ ಮತ್ತು ಚೀನಾದ ನಡುವೆ ಯುದ್ದ ನಡೆದರೆ, ಅದು ಎರಡು ದೇಶಕ್ಕೆ ಸಂಬಂಧಿಸಿದ ಯುದ್ದ ಮಾತ್ರ ಆಗಿರುವುದಿಲ್ಲ ಎಂದಿರುವ ಅಭಿಗ್ಯಾ, ಯುದ್ದ ಸಂಭವಿಸಿದರೆ, ಇಡೀ ವಿಶ್ವಕ್ಕೆ ಅಪಾರ ಪ್ರಮಾಣದಲ್ಲಿ ಆರ್ಥಿಕತೆಯ ಮೇಲೆ ಹೊಡೆತ ಬೀಳಲಿದೆ. ನಾನು ಈ ಹಿಂದೆ ಹೇಳಿದಂತೆ, ಕೊರೊನಾ ವೈರಸಿನ ವೇಗ ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಿದೆ.

      ಭಾರತ ಮತ್ತು ಚೀನಾದ ನಡುವೆ ಯುದ್ದ

      ಭಾರತ ಮತ್ತು ಚೀನಾದ ನಡುವೆ ಯುದ್ದ

      ಕಾಳಸರ್ಪ ಯೋಗ ಮುಗಿಯುತ್ತಿರುವುದರಿಂದ ಎಲ್ಲವೂ ಮುಂದಿನ ದಿನಗಳಲ್ಲಿ ಆಶಾದಾಯಕವಾಗಲಿದೆ. ನನ್ನ ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಕಾಳಸರ್ಪ ಯೋಗ ಉಚ್ಚ್ರಾಯವಾಗಿದ್ದಾಗ, ಅಂದರೆ, ಜೂನ್ 30ರೊಳಗೆ ಭಾರತ ಮತ್ತು ಚೀನಾದ ನಡುವೆ ಯುದ್ದ ಸಂಭವಿಸಿದ್ದರೂ ಈ ದಿನಾಂಕದೊಳಗೆ ನಡೆಯಬೇಕಾಗಿತ್ತು.

      ಜೂನ್ 21ರ ಗ್ರಹಣ

      ಜೂನ್ 21ರ ಗ್ರಹಣ

      ಜೂನ್ 21ರ ಗ್ರಹಣದ ನಂತರದ ಕೆಲವು ದಿನಗಳಲ್ಲಿ ಪರಿಸ್ಥಿತಿ ಗಂಭೀರವಾಗಿತ್ತು. ಆದರೆ ಕಾಳಸರ್ಪಯೋಗದ ಪ್ರಭಾವ ಕಮ್ಮಿಯಾದ ನಂತರ, ಎಲ್ಲವೂ ತಿಳಿಯಾಗುತ್ತದೆ ಎಂದು ಹಿಂದೆನೂ ಹೇಳಿದ್ದೆ. ಭಾರತ ಮತ್ತು ಚೀನಾದ ನಡುವೆ, ಕೆಲವು ಉದ್ವಿಗ್ನತೆಯ ಸ್ಥಿತಿ ಎದುರಾದರೂ, ಡಿಸೆಂಬರ್ ಒಳಗೆ ಯುದ್ದ ಸಂಭವಿಸುವ ಸಾಧ್ಯತೆ ಇಲ್ಲ ಎಂದು ಬಾಲ ಜ್ಯೋತಿಷಿ ಅಭಿಗ್ಯಾ ಆನಂದ್ ನುಡಿದ್ದಿದ್ದಾರೆ.

      ಅಭಿಗ್ಯಾ ಆನಂದ್

      ಅಭಿಗ್ಯಾ ಆನಂದ್

      ಸೂರ್ಯನು ಮಿಥುನ ರಾಶಿಯಿಂದ ಪಥ ಬದಲಿಸುತ್ತಿರುವುದರಿಂದ, ಡಿಸೆಂಬರ್ ಒಳಗೆ ಎರಡು ದೇಶದ ನಡುವೆ ಯುದ್ದ ವಾತಾವರಣ ಇರುವುದಿಲ್ಲ. ಇದಾದ ನಂತರ, ಒಂದು ವೇಳೆ ಸಂಘರ್ಷ ನಡೆದರೂ, ಅದು ಎರಡು ದೇಶದ ನಡುವಿನ ಯುದ್ದವಾಗಿರದೇ, ಜಾಗತಿಕ ವಿಚಾರ ಆಗಿರುತ್ತುದೆ ಎಂದು ಅಭಿಗ್ಯಾ ಆನಂದ್ ನುಡಿದಿದ್ದಾರೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+