ಕನಸಲ್ಲಿ ಹಾವು ಕಾಣಿಸಿಕೊಳ್ಳುವುದರ ಸೂಚನೆ ಏನು? ಸರ್ಪ ದೋಷ ಪರಿಹಾರ ಹೇಗೆ?
ವಿವಾಹ ವಿಳಂಬ, ಸಂತಾನ ವಿಳಂಭ, ಕೆಲಸ- ಕಾರ್ಯಗಳಲ್ಲಿ ವಿಘ್ನ, ಪದೇಪದೇ ವೈಫಲ್ಯ, ಚರ್ಮ ವ್ಯಾಧಿಯೂ ಸೇರಿದಂತೆ ಹಲವು ಸಮಸ್ಯೆಗಳನ್ನು ತಂದೊಡ್ಡಬಲ್ಲಂಥದ್ದು ಸರ್ಪ ದೋಷ ಹಾಗೂ ಕಾಳ ಸರ್ಪ ದೋಷ. ಜನ್ಮ ಜಾತಕವನ್ನು ತೋರಿಸಿಕೊಂಡರೆ ಜ್ಯೋತಿಷಿಗಳು ಈ ದೋಷ ಇದೆಯೋ ಇಲ್ಲವೋ ಎಂಬುದನ್ನು ತಿಳಿಸುತ್ತಾರೆ.
ಆ ದೋಷ ಯಾವ ಪ್ರಮಾಣದಲ್ಲಿದೆ, ಅದರ ಸ್ವರೂಪ ಏನು, ಆ ಪರಿಣಾಮ ನಿಮ್ಮ ಜಾತಕದಲ್ಲಿ ಯಾವ ರೀತಿ ಆಗುತ್ತಿದೆ ಎಂಬುದನ್ನು ಸಹ ಹೇಳಬಹುದು. ಆದರೆ ದೋಷವಿದೆ ಎಂಬ ಕಾರಣಕ್ಕೆ ಆ ಪರಿಹಾರವನ್ನು ಯಾವಾಗೆಂದರೆ ಆಗ ಮಾಡಿಸಿಕೊಂಡರೆ ಬದಲಾವಣೆ ಆಗುತ್ತದೆಯಾ ಎಂಬ ಪ್ರಶ್ನೆಯನ್ನು ಒಮ್ಮೆ ಕೇಳಿಕೊಳ್ಳಬೇಕು.
ಸರ್ಪ ದೋಷ ಅಥವಾ ಕಾಳಸರ್ಪ ದೋಷಕ್ಕೆ ಕಾರಣ ಆಗುವ ಗ್ರಹಗಳೆಂದರೆ ರಾಹು- ಕೇತು. ಜನ್ಮ ಜಾತಕದಲ್ಲಿ ಈ ಗ್ರಹಗಳು ಎಲ್ಲಿ ಸ್ಥಿತವಾಗಿವೆ ಎಂಬುದನ್ನು ಗಮನಿಸಿ, ದೋಷದ ಪ್ರಮಾಣ ಅಥವಾ ದೋಷ ಇದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು. ಆದರೆ ಆ ದೋಷ ಇದ್ದಲ್ಲಿ ಪರಿಹಾರ ಮಾಡಿಕೊಳ್ಳುವುದಕ್ಕೆ ದಶಾ- ಭುಕ್ತಿ ಯಾವುದಿದೆ ಎಂಬುದನ್ನು ಕಡ್ಡಾಯವಾಗಿ ನೋಡಬೇಕು.

ಜಾತಕದಲ್ಲಿ ದಶಾ- ಭುಕ್ತಿಯ ವಿವರಗಳು ಇರುತ್ತವೆ. ಅವುಗಳಲ್ಲಿ ರಾಹು ಅಥವಾ ಕೇತು ದಶೆಯಲ್ಲಿ ಹಾಗೂ ಅವೇ ಗ್ರಹದ ಭುಕ್ತಿ ನಡೆಯುತ್ತಿರುವ ಕಾಲದಲ್ಲಿ ದೋಷಕ್ಕೆ ಪರಿಹಾರ ಮಾಡಿಕೊಂಡರೆ ಅದರ ಫಲಿತಾಂಶ ಗಮನಕ್ಕೆ ಬರುತ್ತದೆ. ಹಣವಿದೆ ಎಂಬ ಕಾರಣಕ್ಕೋ ಅಥವಾ ಆ ಸಮಯದಲ್ಲಿ ಬಿಡುವಿದೆ, ಬೇರೇನೂ ಕಾರ್ಯಕ್ರಮ ಒಪ್ಪಿಕೊಂಡಿಲ್ಲ ಎಂಬ ಕಾರಣಕ್ಕೋ ದೋಷ ಪರಿಹಾರ ಮಾಡಿಸಿಕೊಂಡರೆ ಅದರಿಂದ ಪ್ರಯೋಜನ ಬರುವುದಿಲ್ಲ.
ನನ್ನ ವೈಯಕ್ತಿಕ ಅನುಭವದಿಂದ ಹೇಳುವುದಾದರೆ, ಸುಬ್ರಹ್ಮಣ್ಯ ಸ್ವಾಮಿಯ ಶಾಪ ಇರುವವರ ಪೈಕಿ ಹಲವರಿಗೆ ಕನಸಿನಲ್ಲಿ ಪದೇ ಪದೇ ಹಾವು ಕಾಣಿಸಿಕೊಳ್ಳುತ್ತದೆ. ಹಾವು ಅಟ್ಟಿಸಿಕೊಂಡು ಬಂದ ಹಾಗೆ, ದೇಹಕ್ಕೆ ಸುತ್ತು ಹಾಕಿಕೊಂಡ ಹಾಗೆ, ಕಡಿದ ಹಾಗೆ ಕನಸಿನಲ್ಲಿ ಬರುತ್ತದೆ. ಇನ್ನು ಕೆಲವರಿಗೆ ಹರಕೆ ಪೂರ್ಣ ಮಾಡದಿದ್ದರೂ ಕನಸಿನಲ್ಲಿ ಹಾವು ಬರುವುದುಂಟು.
ತಮಗೆ ಕನಸಿನಲ್ಲಿ ಪದೇಪದೇ ಹಾವು ಕಾಣಿಸಿಕೊಳ್ಳುವುದು ಸರ್ಪ ದೋಷ- ಕಾಳ ಸರ್ಪ ದೋಷದ ಕಾರಣಕ್ಕೋ ಅಥವಾ ಹರಕೆ ತೀರಿಸಿಲ್ಲ ಎಂಬ ಕಾರಣಕ್ಕೋ ಎಂಬುದು ಸಹ ಹಲವರಿಗೆ ನಿರ್ಧರಿಸುವುದು ಸಾಧ್ಯವೇ ಆಗುವುದಿಲ್ಲ. ಅದನ್ನು ತಿಳಿದುಕೊಳ್ಳುವುದಕ್ಕೂ ಜ್ಯೋತಿಷ್ಯದಲ್ಲಿ ಮಾರ್ಗಗಳಿವೆ.
ಅದೇ ರೀತಿ ಸರ್ಪ ಸಂಚಾರ ಇದ್ದಲ್ಲಿ ಅಥವಾ ಸರ್ಪ ವಾಸಸ್ಥಳ (ಹುತ್ತ ಮೊದಲಾದವು) ಇದ್ದಲ್ಲಿ ಮನೆ ಕಟ್ಟಿಕೊಂಡಿದ್ದರೂ ಪದೇ ಪದೇ ಹಾವು ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ಆ ಮನೆಗೆ ಹೋದ ಮೇಲೆ ಹಣಕಾಸು ಕೈ ಹತ್ತಿರುವುದಿಲ್ಲ. ಇದಕ್ಕೆಲ್ಲ ಸುಬ್ರಹ್ಮಣ್ಯಸ್ವಾಮಿ ಆರಾಧನೆ ಆಗಬೇಕು. ಅದಕ್ಕೂ ಮೊದಲು ಆ ಬಗ್ಗೆ ಸೂಕ್ತರಾದ ಜ್ಯೋತಿಷಿಗಳಲ್ಲಿ ಮಾಹಿತಿ ಕೇಳಿ, ಪಡೆದುಕೊಳ್ಳಿ.
ಯಾವುದೇ ಮಾರ್ಗದರ್ಶನಕ್ಕೆ, ಸೂಕ್ತ ಜಾತಕ ವಿಶ್ಲೇಷಣೆಗೆ ವೈಯಕ್ತಿಕವಾಗಿ ಭೇಟಿಗೆ ಮೊಬೈಲ್ ಫೋನ್ ಸಂಖ್ಯೆ 9886665656- 9886155755 ಸಂಪರ್ಕಿಸಿ.
-
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ -
ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ -
ಡಿವಿಜಿ ಒಡನಾಡಿ,ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ಎಸ್ಆರ್ ರಾಮಸ್ವಾಮಿ ನಿಧನ












Click it and Unblock the Notifications