2021 ರಿಂದ 2029ರ ವರೆಗಿನ ಪ್ರಧಾನಿ ಮೋದಿ ಕುಂಡಲಿ ಭವಿಷ್ಯ: ಆರೋಗ್ಯದಲ್ಲಿ ಏರುಪೇರು ಸಾಧ್ಯತೆ!
ಜ್ಯೋತಿಷ್ಯ, ಭವಿಷ್ಯ ಮುಂತಾದವುಗಳನ್ನು ಕೆಲವೊಂದು ಜನರು ಎಷ್ಟೇ ತಮಾಷೆಯಾಗಿ ತೆಗೆದುಕೊಂಡರೂ, ಅದನ್ನು ನಂಬುವವರ ಸಂಖ್ಯೆ ಮತ್ತು ಯಾವುದರಿಂದಲೂ ಸಿಗದ ಪರಿಹಾರ ಈ ಮೂಲಕ ಸಿಗಬಹುದು ಎನ್ನುವವರ ಸಂಖ್ಯೆಗೇನೂ ಕೊರತೆಯಿಲ್ಲ.
ದೇಶ ಎದುರಿಸಬೇಕಾದ ಪ್ರಾಕೃತಿಕ ವಿಕೋಪ, ಯುದ್ದ, ರೋಗರುಜಿನಗಳ ಬಗ್ಗೆ ಹಲವು ಜ್ಯೋತಿಷಿಗಳು, ಸ್ವಾಮೀಜಿಗಳು ಈಗಾಗಲೇ ಹಲವು ಭವಿಷ್ಯವನ್ನು ಹೇಳಿಯಾಗಿದೆ. ಈ ಪಟ್ಟಿಗೆ ಇನ್ನೊಂದು ಸೇರ್ಪಡೆಯಾಗಿದೆ.
ಕಳೆದ ಅಂದರೆ 2014ರಿಂದ ಒಂದಲ್ಲಾ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಆಚಾರ್ಯ ಸಲೀಲ್ ಕುಮಾರ್ ಎನ್ನುವವರು ಭವಿಷ್ಯವೊಂದನ್ನು ನುಡಿದಿದ್ದಾರೆ.
ಇವರು, ಕೊರೊನಾ, ಭಾರತ-ಚೀನಾ ಗಡಿವಿವಾದದ ಬಗ್ಗೆಯೂ ಹಿಂದೆ ಭವಿಷ್ಯವನ್ನು ನುಡಿದಿದ್ದರು. ಸಲೀಲ್ ಅವರು 2021 ರಿಂದ 2029ರ ಅವಧಿಯಲ್ಲಿ ಮೋದಿಯ ಕುಂಡಲಿ ಯಾವರೀತಿ ಇರಲಿದೆ ಎನ್ನುವುದರ ವಿವರಣೆಯನ್ನು ನೀಡಿದ್ದಾರೆ.

ಶನಿ ಮಹಾದೆಸೆ
ಶನಿ ಮಹಾದೆಸೆಯಲ್ಲಿ ಮೋದಿಯವರ ಜನ್ಮವಾಗಿದೆ. ಇದಾದ ನಂತರ ಬುಧ, ಕೇತು, ಮತ್ತು ಸೂರ್ಯ ದೆಶೆ ಹಾದು ಬಂದಿದ್ದಾರೆ. ಹಾಗಾಗಿ, ತಮ್ಮ ಜೀವನದಲ್ಲಿ ಸಾಕಷ್ಟು ಏರಿಳಿತವನ್ನು ಮೋದಿಯವರು ಕಂಡಿದ್ದಾರೆ. ಸದ್ಯ ಅವರ ಕುಂಡಲಿ ಚಂದ್ರ ದೆಶೆಯಲ್ಲಿದೆ. ಡಿಸೆಂಬರ್ 2020ರಿಂದ ಮಂಗಳ ಮಹಾದೆಶೆ ಆರಂಭವಾಗಿದೆ. ಇದು ಮುಂದಿನ ಸಾರ್ವತ್ರಿಕ ಚುನಾವಣೆಯವರೆಗೂ ಈ ದೆಶೆ ಇರಲಿದೆ.

ಬಿಜೆಪಿಗೆ ಇರುವ ದೌರ್ಬಾಗ್ಯ
ಬಿಜೆಪಿಗೆ ಇರುವ ದೌರ್ಬಾಗ್ಯ ಏನಂದರೆ ಮೋದಿಗೆ ಪರ್ಯಾಯವಾಗಿ ಯಾವ ನಾಯಕನು ಇಲ್ಲದೇ ಇರುವುದು. ಸರಕಾರದ ಎಲ್ಲಾ ಒತ್ತಡ ಮೋದಿ ಮತ್ತು ಅಮಿತ್ ಶಾ ಅವರ ಮೇಲಿದೆ. ಅಮಿತ್ ಶಾ ಅವರಿಗೆ ಆರೋಗ್ಯ ಸಮಸ್ಯೆ ಎದುರಾಗಲಿದೆ ಎಂದು ಹಿಂದೆನೇ ಹೇಳಿದ್ದೆ, ಆದರೆ, ಅವರ ಜಾತಕ ತುಂಬಾ ಪವರ್ಫುಲ್ ಆಗಿದೆ. ಶನಿಗೋಚರ ಮೋದಿಯವರ ಕುಂಡಲಿಯಲ್ಲಿ ಪ್ರಭಾವಿಯಾಗಿ ಮುಂದುವರಿಯಲಿದೆ.

ಆಚಾರ್ಯ ಸಲೀಲ್ ಕುಮಾರ್ ಎನ್ನುವವರ ಭವಿಷ್ಯ
2022ರ ವರೆಗೆ ಮೋದಿಯವರ ಜಾತಕದಲ್ಲಿನ ಶನಿಪ್ರಭಾವ ಚೆನ್ನಾಗಿ ಇರಲಿದೆ. 2022ರ ಅಂತ್ಯದಿಂದ ಮುಂದಿನ ಒಂದು ವರ್ಷ ಮೋದಿಯವರು ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕಿದೆ. ಮುಂದಿನ ಚುನಾವಣೆಯ ವೇಳೆ ಶನಿಯು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ಅವಧಿಯಲ್ಲಿ ಮೋದಿಗೆ ಆರೋಗ್ಯ ಸಮಸ್ಯೆ ಎದುರಾಗಬಹುದು ಮತ್ತು ಅವರ ಭದ್ರತೆಯವರೂ ಇನ್ನೂ ಅಲರ್ಟ್ ಆಗಿ ಇರಬೇಕಾಗುತ್ತದೆ.

ಮೋದಿ ಜಯಭೇರಿ ಬಾರಿಸುವ ಸಾಧ್ಯತೆ
ಮುಂದಿನ ಚುನಾವಣೆಯಲ್ಲೂ ಮೋದಿ ಜಯಭೇರಿ ಬಾರಿಸುವ ಸಾಧ್ಯತೆ ಹೆಚ್ಚಾಗಿದೆ. ಆದರೆ, ಬಿಜೆಪಿಯವರು ಗೆಲುವಿಗಾಗಿ ಭಾರೀ ಪರಿಶ್ರಮ ಪಡಬೇಕಾಗಿದೆ. ಮೋದಿಯವರ ರಾಜಯೋಗ ಇನ್ನೂ ಮುಂದುವರಿಯಲಿದೆ. 2021ಕ್ಕೆ ದೇಶಕ್ಕೆ ಸಂಘರ್ಷದ ಸಮಯವಾಗಿದೆ. ಅಂತರಾಷ್ಟ್ರೀಯವಾಗಿ ಮೋದಿಯವರ ಹೆಸರು ಇನ್ನೂ ಜನಪ್ರಿಯಗೊಳ್ಳಲಿದೆ. ಬಿಜೆಪಿಯವರು ಸಾಕಷ್ಟು ನಾಯಕರನ್ನು ತಯಾರು ಮಾಡಿಕೊಂಡರೆ ಪಕ್ಷಕ್ಕೆ ಒಳ್ಳೆಯದು. ಮೋದಿ ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications