ಏಷ್ಯಾದಲ್ಲೇ ಬೆಸ್ಟ್ ಸಂಖ್ಯಾಶಾಸ್ತ್ರಜ್ಞೆ ಶೀಲಾ ಬಜಾಜ್ ಬಗ್ಗೆ ಗೊತ್ತೆ?
Recommended Video

ಬಿಗ್ ಬಾಸ್ ಕನ್ನಡದ ಸೀಸನ್ ನಾಲ್ಕರಲ್ಲಿ ಪ್ರಥಮ್ ಅವರು ಉದ್ದೋಉದ್ದಕ್ಕೆ ಕಾಲಿಗೆ ನಮಸ್ಕಾರ ಮಾಡಿದ ಸಂಖ್ಯಾಶಾಸ್ತ್ರಜ್ಞೆ ನೆನಪಿದೆಯಾ ನಿಮಗೆ? ಅವರ ಹೆಸರು? ಆ ಮನೆಯಿಂದ ಆಚೆ ಬಂದವರೇ ಪ್ರಥಮ್ ಗೆಲ್ಲುವ ಅವಕಾಶ ಹೆಚ್ಚಿದೆ ಎಂದು ತಮ್ಮ ಫೇಸ್ ಬುಕ್ ನಲ್ಲಿ ಹಾಕಿದ್ದರು. ಅವರ ಹೆಸರು ಶೀಲಾ ಬಜಾಜ್.
ಟಾರೋಟ್ ರೀಡರ್, ಸಂಖ್ಯಾಶಾಸ್ತ್ರಜ್ಞೆ ಶೀಲಾಬಜಾಜ್ ಅವರ ಕಚೇರಿ ಬೆಂಗಳೂರಿನ ಕೋರಮಂಗಲದಲ್ಲಿದೆ. ದೇಶದ ನಾನಾ ನಗರಗಳಿಗೆ ಭೇಟಿ ನೀಡುವ, ವಿವಿಧ ಟಿ.ವಿ. ಶೋಗಳಲ್ಲಿ ಕಾಣಿಸಿಕೊಳ್ಳುವ ಅವರು ಸದಾ ಬಿಜಿ. ಸೋಪ್, ಪರ್ ಫ್ಯೂಮ್ ಹೀಗೆ ವಿವಿಧ 'ಮ್ಯಾಜಿಕ್' ವಸ್ತುಗಳನ್ನು ತಮ್ಮ ಅನುಭವ, ಜ್ಞಾನದಿಂದ ರೂಪಿಸಿರುವ ಇವರ ಬಳಿ ಹಲವು ಸಮಸ್ಯೆಗಳಿಗೆ ಸುಲಭ ಪರಿಹಾರ ಇದೆ.
ಹಲವು ಟಿ.ವಿ. ಶೋಗಳಲ್ಲಿ ಕಾಣಿಸಿಕೊಂಡಿರುವ ಶೀಲಾ ಬಜಾಜ್, ಏಷ್ಯಾದಲ್ಲೇ ಉತ್ತಮ ಸಂಖ್ಯಾಶಾಸ್ತ್ರಜ್ಞೆ ಎಂಬ ಗೌರವವನ್ನು ಪಡೆದವರು. ನಟಿ ಮಾಧುರಿ ದೀಕ್ಷಿತ್ ರಿಂದ ಆ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಇನ್ನು ನಟ ಜಾಕಿ ಶ್ರಾಫ್ ರಿಂದಲೂ ಪ್ರಶಸ್ತಿಯನ್ನು ಪಡೆದಿದ್ದಾರೆ ಶೀಲಾ. ಈ ವರೆಗೆ ತಮ್ಮ ಹದಿನೆಂಟು ವರ್ಷದ ಭವಿಷ್ಯ ನುಡಿಯುವ ಅನುಭವದಲ್ಲಿ ಲಕ್ಷಕ್ಕೂ ಹೆಚ್ಚು ಮಂದಿಗೆ ಮಾರ್ಗದರ್ಶನ ಕೂಡ ಮಾಡಿದ್ದಾರೆ.

ಚಿತ್ರರಂಗದ ಹಲವರು ಮಾರ್ಗದರ್ಶನ ಪಡೆದುಕೊಂಡಿದ್ದಾರೆ
ರಕ್ಷಿತ್ ಶೆಟ್ಟಿ, ನೀತೂ ಶೆಟ್ಟಿ, ನಿರ್ದೇಶಕ ಪ್ರಶಾಂತ್ ಸೇರಿದ ಹಾಗೆ ಕನ್ನಡ ಚಿತ್ರರಂಗದ ಹಲವು ನಟ-ನಟಿ, ನಿರ್ದೇಶಕರು ಶೀಲಾ ಬಜಾಜ್ ಅವರ ಬಳಿ ಸಲಹೆ- ಮಾರ್ಗದರ್ಶನ ಪಡೆದುಕೊಂಡಿದ್ದಾರೆ. ಇನ್ನು ಬಾಲಿವುಡ್ ನ ಅಮಿತಾಬ್ ಬಚ್ಚನ್ ಹಾಗೂ ಮಾಧವನ್ ಅಂಥವರ ಸಿನಿಮಾಗಳಿಗೆ ಸಂಖ್ಯಾಶಾಸ್ತ್ರದ ಅನ್ವಯ ಹೆಸರನ್ನು ಕೂಡ ಸೂಚಿಸಿದ್ದಾರೆ.

ಹಲವು ಸಮಸ್ಯೆಗಳಿಗೆ ಸುಲಭ ಪರಿಹಾರ
ಉದ್ಯೋಗದಲ್ಲಿ ಯಶಸ್ಸು ಸಿಗುತ್ತಿಲ್ಲವಾ? ಎಲ್ಲರೆದುರು ಮಾತನಾಡುವುದಕ್ಕೆ ಕೀಳರಿಮೆ ಎದುರಿಸುವವರಿಗೆ, ವಿದ್ಯಾಭ್ಯಾಸದಲ್ಲಿ- ನೆನಪಿನ ಶಕ್ತಿಯಲ್ಲಿ ಹಿಂದುಳಿದಂಥ ಮಕ್ಕಳಿಗಾಗಿ... ಹೀಗೆ ನಾನಾ ಸಮಸ್ಯೆಗಳಿಗೆ ಕೆಲವು ವಿಶಿಷ್ಟ ವಸ್ತುಗಳನ್ನು ತಮ್ಮ ಅನುಭವದ ಮೂಲಕ ರೂಪಿಸಿದ್ದಾರೆ ಶೀಲಾ ಬಜಾಜ್. ಜತೆಗೆ ಮದುವೆ-ಪ್ರೇಮ- ಸಂಬಂಧಗಳ ವಿಚಾರವಾಗಿ ಒಂದು ಸೊಗಸಾದ ಪುಸ್ತಕ ಕೂಡ ಬರೆದಿದ್ದಾರೆ.

ವಿವಿಧ ಉದ್ಯೋಗ, ವ್ಯಾಪಾರ, ಸಾಂಸಾರಿಕ ಸಮಸ್ಯೆಗೆ ಪರಿಹಾರ
ಕೋರಮಂಗಲದಲ್ಲಿ ಕಚೇರಿ ಹೊಂದಿರುವ ಶೀಲಾ ಬಜಾಜ್ ಟಾರೋಟ್ ರೀಡಿಂಗ್ ನಲ್ಲಿ ದೇಶದಾದ್ಯಂತ ಹೆಸರು ಪಡೆದವರು. ಇನ್ನು ಸಂಖ್ಯಾಶಾಸ್ತ್ರದ ವಿಚಾರದಲ್ಲೂ ಅನೇಕ ವರ್ಷಗಳ ಅಧ್ಯಯನ ಮಾಡಿದ್ದಾರೆ. ಜತೆಗೆ ಉದ್ಯೋಗ-ವ್ಯವಹಾರ- ಸಾಂಸಾರಿಕ ವಿಷಯಗಳ ಮಾರ್ಗದರ್ಶನ ಮಾಡುತ್ತಾರೆ. ಜೀವನದಲ್ಲಿ ಬಹಳ ಸಮಸ್ಯೆ ಇದೆ ಎಂದವರಿಗೆ ಟಾರೋಟ್ ರೀಡಿಂಗ್ ಮೂಲಕ ಪರಿಹಾರ ಸೂಚಿಸುತ್ತಾರೆ.

ಶೀಲಾ ಬಜಾಜ್ ಸಂಪರ್ಕ ಮಾಹಿತಿಗೆ
ಹೆಸರು ಬದಲಾವಣೆ, ಯಾವುದೇ ಆಫೀಸ್, ಕಂಪೆನಿ, ಶಾಪ್ ಗೆ ಹೆಸರಿಡುವುದಕ್ಕೆ, ಹೊಸ ವೆಬ್ ಸೈಟ್- ಬ್ಲಾಗ್ ಮಾಡಿದರೆ ಅದಕ್ಕೆ ಹೆಸರಿಡುವುದಕ್ಕೆ, ಮಕ್ಕಳ ವಿದ್ಯಾಭ್ಯಾಸ ಸಮಸ್ಯೆ, ಮದುವೆ ಸಮಸ್ಯೆ ಹೀಗೆ ನಾನಾ ವಿಚಾರಗಳಿಗೆ ಸಬಂಧಿಸಿದಂತೆ ಶೀಲಾ ಬಜಾಜ್ ಸಂಖ್ಯಾಶಾಸ್ತ್ರದ ಮೂಲಕ ಪರಿಣಾಮಕಾರಿ ಪರಿಹಾರ- ಮಾರ್ಗದರ್ಶನ ಮಾಡಬಲ್ಲರು.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications