ಮೇಷ ಲಗ್ನದವರಿಗೆ ರವಿಯೇ ಭಾಗ್ಯದ ಬಾಗಿಲು: ಸೂರ್ಯನ ಒಲುಮೆಗೆ ಹೀಗೆ ಮಾಡಿ
ವೈದಿಕ ಜ್ಯೋತಿಷ್ಯದಲ್ಲಿ ಮೇಷ ರಾಶಿಯನ್ನು "ಆತ್ಮ ರಾಶಿ" ಎಂದು ಕರೆಯಲಾಗುತ್ತದೆ. ಈ ರಾಶಿಯಲ್ಲಿ ಜನಿಸಿದವರು ಸಹಜವಾಗಿ ಧೈರ್ಯಶಾಲಿಗಳು, ವೇಗವಾಗಿ ನಿರ್ಧಾರ ಮಾಡುವವರು ಹಾಗೂ ಜೀವನದಲ್ಲಿ ಮುನ್ನಡೆಸುವ ಗುಣ ಹೊಂದಿರುವವರು. ಆದರೆ ಇವರ ಭಾಗ್ಯವು ಸಾಮಾನ್ಯ ಗ್ರಹಗಳಿಂದ ಅಲ್ಲ, ಒಂದು ವಿಶೇಷ ಗ್ರಹದಿಂದ - ಸೂರ್ಯ (ರವಿ) ಯಿಂದ ನಿಯಂತ್ರಿತವಾಗಿರುತ್ತದೆ. ಏಕೆಂದರೆ ಮೇಷ ಲಗ್ನಕ್ಕೆ ಸೂರ್ಯ ಪಂಚಮಾಧಿಪತಿ. ಪಂಚಮ ಭಾವವು ಜ್ಯೋತಿಷ್ಯದಲ್ಲಿ ಅತ್ಯಂತ ಮಹತ್ವದ ಸ್ಥಾನ ಹೊಂದಿದ್ದು, ಅದು ಪೂರ್ವಜನ್ಮ ಪುಣ್ಯ, ಬುದ್ಧಿ, ಸಂತಾನ, ಮಂತ್ರಶಕ್ತಿ ಮತ್ತು ಭಾಗ್ಯೋದಯ ಇವುಗಳನ್ನು ಸೂಚಿಸುತ್ತದೆ. ಆ ಭಾವದ ಅಧಿಪತಿ ರವಿಯಾಗಿರುವುದರಿಂದ ಮೇಷರ ಜೀವನದ ಯಶಸ್ಸು, ವಿಫಲತೆ, ಭಾಗ್ಯ, ಮತ್ತು ಗೌರವ ಎಲ್ಲವೂ ಸೂರ್ಯನ ಕೃಪೆಗೆ ನೇರವಾಗಿ ಸಂಬಂಧಿಸಿದೆ. (ಬರಹ: ಪಂಡಿತ್ ವಿಠ್ಠಲ್ ಭಟ್)
ಪಾರಾಶರ ಹೋರಾ ಶಾಸ್ತ್ರದಲ್ಲಿ "ಮೇಷ ಲಗ್ನೇ ರವಿಃ ಪಂಚಮೇಶಃ" ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಇದರ ಅರ್ಥ - ಮೇಷ ಲಗ್ನದಲ್ಲಿ ಸೂರ್ಯನೇ ಪುಣ್ಯ ಹಾಗೂ ಭಾಗ್ಯವನ್ನು ನಿರ್ಧರಿಸುವ ರಾಜಗ್ರಹ. ಸೂರ್ಯ ಬಲವಾಗಿದ್ದರೆ ಮೇಷರ ಜೀವನದಲ್ಲಿ ಅನಿರೀಕ್ಷಿತ ಅವಕಾಶಗಳು, ಸರಿಯಾದ ಸಮಯದಲ್ಲಿ ಸಿಗುವ ಸಹಾಯ, ಮತ್ತು ರಾಜಯೋಗದಂತ ಭಾಗ್ಯಗಳು ಕಾಣಿಸುತ್ತವೆ. ಆದರೆ ರವಿ ದುರ್ಬಲವಾಗಿದ್ದರೆ, ಅವರ ಬುದ್ಧಿ ಗೊಂದಲಗೊಳ್ಳುತ್ತದೆ, ತಪ್ಪು ನಿರ್ಧಾರಗಳು ಆಗುತ್ತವೆ, ಸಂತಾನ ವಿಷಯದಲ್ಲಿ ಚಿಂತೆಗಳು ಬರಬಹುದು ಮತ್ತು ಜೀವನದಲ್ಲಿ ಅದೃಷ್ಟ ಬೆಂಬಲ ಕಡಿಮೆಯಾಗುತ್ತದೆ.

ಪಂಚಮ ಭಾವವು ಮಂತ್ರಶಕ್ತಿಯನ್ನೂ ಸೂಚಿಸುವುದರಿಂದ, ಮೇಷರಿಗೆ ದೇವತಾ ಉಪಾಸನೆ, ಜಪ, ತಪಸ್ಸುಗಳು ಫಲ ನೀಡಬೇಕಾದರೆ ರವಿಯ ಅನುಗ್ರಹ ಅತ್ಯವಶ್ಯ. ಫಲದೀಪಿಕಾ ಗ್ರಂಥದಲ್ಲಿ "ಪಂಚಮೇಶೋ ಮಹಾಭಾಗ್ಯಕರಃ" ಎಂದು ಹೇಳಿರುವಂತೆ, ಪಂಚಮಾಧಿಪತಿ ಬಲವಾಗಿದ್ದರೆ ಜೀವನದಲ್ಲಿ ಮಹಾಭಾಗ್ಯ ಉದಯಿಸುತ್ತದೆ. ಈ ಕಾರಣದಿಂದಲೇ ಮೇಷ ಲಗ್ನದವರು ಸೂರ್ಯನ ಶಾಂತಿ ಮಾಡದೇ ಇದ್ದರೆ ಅವರ ಪೂರ್ವಜನ್ಮ ಪುಣ್ಯ ಸಂಪೂರ್ಣವಾಗಿ ವ್ಯಕ್ತವಾಗುವುದಿಲ್ಲ ಎಂಬ ನಂಬಿಕೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಇದೆ.
ಇದಲ್ಲದೆ ಸೂರ್ಯನು ಪಿತೃಕಾರಕ ಗ್ರಹವೂ ಹೌದು. ಮೇಷ ಲಗ್ನದವರಿಗೆ ರವಿ ಶಾಂತಿ ಮಾಡಿದರೆ ತಂದೆಯ ಆರೋಗ್ಯ, ಕುಟುಂಬದ ಗೌರವ ಹಾಗೂ ವಂಶದ ಪ್ರಭಾವವೂ ರಕ್ಷಿತವಾಗುತ್ತದೆ. ಮಾನಸಿಕವಾಗಿ ನೋಡಿದರೆ, ಸೂರ್ಯವೇ ಆತ್ಮಬಲದ ಸಂಕೇತ. ರವಿ ಶಾಂತಿ ಮಾಡಿದ ಮೇಷರು ಆತ್ಮವಿಶ್ವಾಸ, ಸ್ಪಷ್ಟತೆ ಮತ್ತು ನಿರ್ಧಾರಶಕ್ತಿಯಲ್ಲಿ ಬಹಳ ಬಲವಾಗುತ್ತಾರೆ. ಇದರಿಂದ ಉದ್ಯೋಗ, ವ್ಯಾಪಾರ, ರಾಜಕೀಯ ಅಥವಾ ಆಡಳಿತ ಕ್ಷೇತ್ರಗಳಲ್ಲಿ ಅವರಿಗೆ ವಿಶೇಷ ಗೌರವ ಸಿಗುತ್ತದೆ.
ಜ್ಯೋತಿಷ್ಯದಲ್ಲಿ ಹೇಳುವಂತೆ, "ರವಿಬಲಾತ್ ವಿವೇಕಃ" - ಸೂರ್ಯ ಬಲದಿಂದ ವಿವೇಕ ಬರುತ್ತದೆ. ಮೇಷರಿಗೆ ಈ ವಿವೇಕವೇ ಜೀವನದ ದೊಡ್ಡ ಆಸ್ತಿಯಾಗಿದೆ. ರವಿ ಶಾಂತಿಯಿಲ್ಲದೆ ಇದ್ದರೆ ಅವರು ತಮ್ಮ ಸಹಜ ವೇಗ ಮತ್ತು ಉತ್ಸಾಹದಿಂದ ತಪ್ಪು ದಾರಿಗೂ ಹೋಗುವ ಸಾಧ್ಯತೆ ಇದೆ. ಆದ್ದರಿಂದ ರವಿ ಶಾಂತಿ ಅವರಿಗಾಗಿ ಕೇವಲ ಪೂಜೆಯಲ್ಲ, ಅದು ಜೀವನದ ದಿಕ್ಕನ್ನು ಸರಿಪಡಿಸುವ ಮಹತ್ವದ ಸಾಧನೆ.
ಮೇಷ ರಾಶಿಯವರು ತಮ್ಮ ಪಂಚಮಾಧಿಪತಿ ರವಿಯ ಶಕ್ತಿಯನ್ನು ಇನ್ನಷ್ಟು ಜಾಗೃತಗೊಳಿಸಿಕೊಳ್ಳಲು ಒಂದು ವಿಶಿಷ್ಟ ಸಾಧನೆ ಬಹಳ ಫಲಪ್ರದವೆಂದು ಆಗಮ ಶಾಸ್ತ್ರಗಳು ಸೂಚಿಸುತ್ತವೆ. ಜನವರಿ 18ನೇ ತಾರೀಕು ಅಮಾವಾಸ್ಯೆ ದಿನ ಆಶ್ವಾರೂಢ ಪಾರ್ವತಿ ಮಂತ್ರದಲ್ಲಿ ಅಭಿಮಂತ್ರಿತವಾದ "ರಾಜ ವರ್ಧನ ಮಣಿ" ಉಂಗುರವನ್ನು ಧರಿಸುವುದು ಶುಭ ಫಲ ಕೊಡುತ್ತದೆ. ಆಶ್ವಾರೂಢ ಪಾರ್ವತಿ ದೇವಿ ರಾಜಶಕ್ತಿ, ಆಕರ್ಷಣ ಶಕ್ತಿ ಮತ್ತು ಭಾಗ್ಯದ ವೇಗವನ್ನು ನೀಡುವ ಶಕ್ತಿ ರೂಪ. ಆಕೆಯ ಮಂತ್ರದಲ್ಲಿ ಅಭಿಮಂತ್ರಿತವಾದ ರಾಜ ವರ್ಧನ ಮಣಿ ರವಿಯ ಪಂಚಮಾಧಿಪತ್ಯ ಶಕ್ತಿಯನ್ನು ಉತ್ತೇಜಿಸಿ, ಮೇಷರ ಜೀವನದಲ್ಲಿ ರಾಜಯೋಗ, ಭಾಗ್ಯೋದಯ ಮತ್ತು ಗೌರವವನ್ನು ವೇಗವಾಗಿ ತರಲು ಸಹಾಯಕವಾಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ. ಹೆಚ್ಚಿನ ಮಾಹಿತಿಗೆ 63613 35497 ಸಂಪರ್ಕಿಸಬಹುದು.
-
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ












Click it and Unblock the Notifications