2017ರ ಅಕ್ಷಯ ತೃತೀಯಾಕ್ಕೆ ಯಾವುದು ಶುಭ-ಯಾವುದು ಅಶುಭ?
ಈ ವರ್ಷದ ಅಕ್ಷಯ ತೃತೀಯಾ ಶುಭಕರವಲ್ಲ ಇತ್ಯಾದಿಯಾಗಿ ಸಾಕಷ್ಟು ಪ್ರಚಾರ ಪಡೆಯುತ್ತಿದೆ. ಈ ಬಗ್ಗೆ ಜ್ಯೋತಿಷಿಗಳಾದ ಕಬಿಯಾಡಿ ಜಯರಾಮ ಆಚಾರ್ಯ ಅವರು ಕರಾರುವಾಕ್ ಆಗಿ ವಿವರಣೆ ನೀಡಿದ ಲೇಖನ ಇಲ್ಲಿದೆ
ಈ ವರ್ಷದ ಅಕ್ಷಯ ತೃತೀಯಾ ಏಪ್ರಿಲ್ 29ನೇ ತಾರೀಕು ಶನಿವಾರ ಬರಲಿದೆ. ಆ ದಿನ ದರಿದ್ರ ಯೋಗವಿದೆ, ಶನಿ ಚೋರ ಕಾರಕ. ಆ ದಿನ ಚಿನ್ನ ಖರೀದಿಸಿದರೆ ಕಳವಾಗುತ್ತದೆ.ಎಂಬಿತ್ಯಾದಿ ಅಶಾಸ್ತ್ರೀಯ ಅಪದ್ಧ ಕಂತೆಗಳನ್ನು ಅರೆಬರೆ ಜ್ಯೋತಿಷ್ಯ ತಿಳಿದ ....ಶಿಖಾಮಣಿಗಳು ಟಿವಿ ಮತ್ತು ಪತ್ರಿಕಾ ಮಾಧ್ಯಮಗಳ ಮೂಲಕ ಪ್ರಚುರ ಪಡಿಸುತ್ತಿದ್ದಾರೆ.
ಯುಗಾದಿ, ಅಕ್ಷಯ ತೃತೀಯಾ, ವಿಜಯದಶಮಿ ಮತ್ತು ಬಲಿ ಪಾಡ್ಯದ ಅರ್ಧ ದಿನ ಈ ಮೂರೂವರೆ ದಿನಗಳು ಅತ್ಯಂತ ಶುಭ ಮುಹೂರ್ತದ ದಿನಗಳು ಎನಿಸಿದ್ದು, ಆ ದಿನಗಳಿಗೆ ವಾರ, ನಕ್ಷತ್ರ, ಯೋಗ, ಕರಣಗಳ ದೋಷವಿರುವುದಿಲ್ಲ. ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾ ತಿಥಿಯು ಅಕ್ಷಯ ತೃತೀಯಾ ಎಂದೆನಿಸಿದೆ.[ವಿವಾಹ, ಸಂತಾನ ದೋಷ ನಿವಾರಣೆಗೆ ಮುಗ್ವಾ ಸುಬ್ರಹ್ಮಣ್ಯ ದರ್ಶನ]

ಅಪರಾಹ್ನ 1 ಯಾಮ ವ್ಯಾಪಿನಿಯಾದ ತಿಥಿಯಿರುವ ದಿನವನ್ನು ಯಾವುದೇ ತಿಥಿಯ ಆಚರಣೆಗೆ ಬಳಸುವುದು ಒಂದು ಕ್ರಮ. ಸೂರ್ಯೋದಯದ ಹೊತ್ತಿಗಿರುವ ತಿಥಿಯನ್ನು ಆ ದಿನದ ಸಾಮಾನ್ಯ ತಿಥಿಯಾಗಿ ಸ್ವೀಕರಿಸುವುದು ಇನ್ನೊಂದು ಕ್ರಮ. ಎರಡೂ ಶಾಸ್ತ್ರಸಮ್ಮತವೇ.
ಈ ಬಾರಿ ದೃಗ್ಗಣಿತ ರೀತ್ಯಾ ಏಪ್ರಿಲ್ 28ರ ಶುಕ್ರವಾರ ಸೂರ್ಯೋದಯವಾದ 4 ತಾಸು 18 ನಿಮಿಷದ (ಹತ್ತೂ ಮುಕ್ಕಾಲು ಘಳಿಗೆ=ಬೆಂಗಳೂರಿನಲ್ಲಿ ಬೆಳಗ್ಗೆ 10.25, ಉಡುಪಿಯಲ್ಲಿ ಬೆಳಗ್ಗೆ 10.32) ಬಳಿಕ ತೃತೀಯಾ ತಿಥಿ ಪ್ರಾರಂಭವಾಗುತ್ತದೆ.[ಶಿವನಿಗೆ ಯಾವ ಅಭಿಷೇಕ ಮಾಡಿದರೆ ಯಾವ ಫಲ?]

ಏಪ್ರಿಲ್ 29ರ ಶನಿವಾರ ಸೂರ್ಯೋದಯಾತ್ 48 ನಿಮಿಷ (2 ಘಳಿಗೆ= ಬೆಂಗಳೂರಿನಲ್ಲಿ ಬೆಳಗ್ಗೆ 6.53, ಉಡುಪಿಯಲ್ಲಿ ಬೆಳಗ್ಗೆ 7.00) ವರೆಗೆ ಇರುತ್ತದೆ. ಇದು ನಿಜವಾದ ಅಕ್ಷಯ ತೃತೀಯಾ ಸಮಯ.
ಏಪ್ರಿಲ್ 28ರ ಶುಕ್ರವಾರದಂದು ಸೂರ್ಯೋದಯಕ್ಕೆ ದ್ವಿತೀಯಾ(ಭದ್ರಾ) ತಿಥಿಯಿರುವುದರಿಂದ ವಾರವರ ಯೋಗ ಹಾಗೂ ಶನಿವಾರ ರೋಹಿಣಿ ನಕ್ಷತ್ರವಿರುವುದರಿಂದ ಅಮೃತ(ಶುಭ) ಸಿದ್ಧಿ ಯೋಗಗಳಿವೆ. ಅಂದರೆ ಈಗ ಸುಖಾಸುಮ್ಮನೆ ಹಬ್ಬಿಸುತ್ತಿರುವಂತೆ ದರಿದ್ರಯೋಗವೇನಿಲ್ಲ.[ದ್ವಾದಶ ರಾಶಿಗಳ ಮೇಲೆ ವಕ್ರೀ ಶನಿಯ ಪರಿಣಾಮ ಏನು?]

ಎಲ್ಲ ಶನಿವಾರಗಳಂದು ಗೃಹ ಪ್ರವೇಶ, ಸ್ಥಿರವಾಗಿ ಉಳಿಸಬಹುದಾದ ಉಪಯೋಗಿ ವಸ್ತುಗಳ, ಸ್ಥಿರಾಸ್ತಿಗಳ ಖರೀದಿ ಇವನ್ನೆಲ್ಲ ಮಾಡಬಹುದು. ಅದೇ ದಿನ ಅಕ್ಷಯ ತೃತೀಯಾ ತಿಥಿಯೂ ಬಂದರೆ ಏನನ್ನೂ ಖರೀದಿಸಬಹುದು. ಮತ್ತು ಮದುವೆ- ಉಪನಯನ ಹೊರತಾಗಿ ಎಲ್ಲ ಶುಭ ಕಾರ್ಯಗಳನ್ನು ಮಾಡಬಹುದು.

ಶನಿ ಚೋರಕಾರಕನಾದುದರಿಂದ ಶನಿವಾರದ ಖರೀದಿ ಮಾಡಿದ ವಸ್ತುಗಳು ಕಳವಾಗುತ್ತವೆ ಎಂದಾದರೆ, ಶನಿ ಆಯುಷ್ಯಕಾರಕನೂ ಹೌದಾದ್ದರಿಂದ ಶನಿವಾರ ಹುಟ್ಟಿದವರೆಲ್ಲ ಅಲ್ಪಾಯುಗಳಾಗಬೇಕಾದೀತು. ಇವೆಲ್ಲ ಬಾಲಿಶ ಅಶಾಸ್ತ್ರೀಯ ವಾದಗಳು.
-
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ












Click it and Unblock the Notifications