ನಾನೇ ಹೆಚ್ಚೆನ್ನುವ ಅಹಂ, ಹೊಡೆದಾಟ ಕಾಮನ್
ಮೇಷ ರಾಶಿ ಸ್ತ್ರೀಯರು ನಿಜ ಹೇಳಲು ಬಯಸುತ್ತಾರೆ. ಸಾಕಷ್ಟು ಸರ್ತಿ ಮನಸ್ಸು ಮನಸ್ಸು ಒಡೆಯುವ ಸಂದರ್ಭ ಎದುರಾಗಿ ಬಿಡುತ್ತದೆ. ಪ್ರೇಮದ ವಿಷಯದಲ್ಲಿ ಸುಳ್ಳು ಜೊತೆಗಿರಬೇಕು, ಆದರೆ ಈ ರಾಶಿಗೆ ಸೇರಿದ ಹೆಣ್ಣುಮಕ್ಕಳು ತಪ್ಪದೆ ಪ್ರೇಮದ ವಿಷಯದಲ್ಲೂ ನಿಜವನ್ನು ಹೇಳುತ್ತಾರೆ. ಮೇಷ ರಾಶಿ ಸ್ತ್ರಿ ಹಾಗೂ ಕರ್ಕಾಟಕ ರಾಶಿ ಪುರುಷ ಇಬ್ಬರೂ ಅಸೂಯೆ ಗುಣವನ್ನು ಮೈಗೂಡಿಸಿಕೊಂಡಿರುತ್ತಾರೆ. ಕರ್ಕಾಟಕ ರಾಶಿ ಪುರುಷರು ಇದರಲ್ಲಿ ಒಂದು ಕೈ ಮುಂದು. ಅಸುಯಾನಂದ ಸ್ವಾಮಿ ಎಂದು ಬೇಕಾದರೂ ಕರೆಯಬಹುದು ಇವರನ್ನು.
ಈ ಎರಡು ರಾಶಿಯವರೂ ಮಹತ್ವಾಕಾ೦ಕ್ಷಿಗಳು, ಇವರಿಬ್ಬರ ನಡುವೆ ನಾನು ಹೆಚ್ಚು ಅನ್ನುವ ಹೊಡೆದಾಟ ಕಾಮನ್! ಹಣದ ವಿಷಯ, ಖರ್ಚು ಮಾಡುವ ಸಂಗತಿ ಹೀಗೆ ಕಾರಣಬೇಕಿಲ್ಲ ಜಗಳ ಮಾಡಿಕೊಳ್ಳಲು. ಮೇಷ ರಾಶಿ ಸ್ತ್ರೀಯರಿಗೆ ಕೈ ಒಡ್ಡುವ ಕೆಲಸ ಅಂದ್ರೆ ಎಂದಿಗೂ ಆಗದ ಸಂಗತಿ, ಧಾರಾಳಿಗಳು. ಮುಚ್ಚುಮರೆ ಅನ್ನುವ ಅಂಶ ಅವರ ಹತ್ತಿರ ಸುಳಿಯಲ್ಲ. ಆದರೆ ಕರ್ಕಾಟಕ ರಾಶಿಯ ಪುರುಷರಲ್ಲಿ ಮರೆಯಾಗಿರುವ ಬುದ್ಧಿ ಹೆಚ್ಚು! ಯಾವಾಗ ಈ ಗುಣವು ಕರ್ಕಾಟಕ ರಾಶಿಯ ಪುರುಷನಾದ ತನ್ನ ಪತಿಯಲ್ಲಿ ಇದೆ ಎಂದು ಆಕೆಗೆ ತಿಳಿಯುತ್ತದೆಯೋ ತಕ್ಷಣ ಅವಳ ಅನುಮಾನದ ಹುತ್ತ ದೊಡ್ಡದಾಗುತ್ತಾ ಬರುತ್ತದೆ. ಏನೆ ಆಗ್ಲಿ ಆತನ ಮನದಲ್ಲಿ ಏನೆನೇನು ಅಡಗಿದೆ ಅದನ್ನು ತಿಳಿದುಕೊಳ್ಳಲೆಬೇಕು ಅನ್ನುವ ಹಠ ಈಕೆಯಲ್ಲಿ ಜಾಗೃತವಾಗುತ್ತದೆ, ಪರಿಣಾಮ ಈಕೆಯ ಉಹಾಪೋಹಗಳಿಗೆ ಕೈಕಾಲು ತಲೆ ಬಾಲ ಇರದೇ ಇಲ್ಲದ ಪರಿಸ್ಥಿತಿ ಉಂಟಾಗಿ ಬಿಡುತ್ತದೆ. ಅದು ಮುಂದೆ ಇವರ ಬದುಕನ್ನು ತೊಂದರೆಗೇ ಈಡು ಮಾಡುತ್ತದೆ.
ಮೇಷ ರಾಶಿ ಪುರುಷ-ಕರ್ಕಾಟಕ ರಾಶಿ ಸ್ತ್ರಿ :
ಮೇಷ ರಾಶಿ ಪುರುಷ ಕರ್ಕಾಟಕ ರಾಶಿ ಸ್ತ್ರೀಯ ಬುದ್ಧಿವಂತಿಕೆಗೆ ಹಾಗೂ ಅಮಾಯಕತ್ವಕ್ಕೆ ಮುಗ್ಧನಾಗಿ ಬಿಡುತ್ತಾನೆ. ಎಷ್ಟೇ ಕಷ್ಟ ಬಂದ್ರು ಎದುರಿಸುವ ಸುಂದರಿ, ಉತ್ತಮ ಮನದ ಒಡತಿ, ಧೈರ್ಯಶಾಲಿ ಒಲವಿನ ಹೆಣ್ಣು ಅಂತ ತಿಳಿದ ಮೇಲಂತೂ ಈ ಪುರುಷ ಸಿಂಹನ ಪ್ರೀತಿ ಆಕೆಯ ಮೇಲೆ ದುಪ್ಪಟ್ಟು ಹೆಚ್ಚಾಗುತ್ತದೆ. ಆಕೆಯ ಈ ಎಲ್ಲ ಗುಣಕ್ಕೆ ಆತ ಮುಗ್ಧನಾಗಿ ಬಿಡುತ್ತಾನೆ.
ಆದರೆ ಹಣದ ವಿಷಯಕ್ಕೆ ಬಂದಾಗ ಇವರಿಬ್ಬರಲ್ಲಿ ಭಿನ್ನಭಾವ ಉಂಟಾಗುತ್ತಲೇ ಇರುತ್ತದೆ. ಆ ವಿಷಯದಲ್ಲಿ ಹೈ ಅಲರ್ಟಾಗಿ ಇದ್ದರೆ ಯಾವುದೇ ತರಲೆ ತಾಪತ್ರಯ ಅಟಕಾಯಿಸೋದಿಲ್ಲ. ಹೆಂಡತಿಗೆ ಕೋಪ ಬಂದರೆ ಆಕೆಯನ್ನು ಒಂಟಿಯಾಗಿ ಬಿಟ್ಟು ಹೋಗುವುದಕ್ಕಿಂತ ತನ್ನ ಪ್ರಿಯಪತ್ನಿಯನ್ನು ಒಲಿಸಿಕೊಳ್ಳಬೇಕು. ಸ್ವಲ್ಪ ಕಾಲ ಹೊರಗಡೆ ಸುತ್ತಾಡಲು ಕರೆದೊಯ್ಯ ಬೇಕು. ಆಗ ಇಬ್ಬರ ನಡುವೆ ಇರುವ ಅಂತರ ದೂರವಾಗಿ, ಜನುಮಾದ ಜೋಡಿ ನೀನು ಕನಕಾ ... ಕನಕಾ! ಅಂತ ಹಾಡಿಕೊಂಡು ಸಂತೋಷವಾಗಿ ಬಾಳಬಹುದು.