ಐ ಲವ್ ಯೂ ಹೇಳೋಕೆ ಬಿಂಕವೇಕೆ?

ಸಿಂಹ ರಾಶಿ ಪುರುಷ - ಮಕರ ರಾಶಿ ಸ್ತ್ರೀ : ಜಗಳಕ್ಕೆ ಕೋಪಕ್ಕೆ ಕಾರಣವೇ ಬೇಕಿಲ್ಲ. ಕೆಲವು ಬಾರಿ ಹೆಂಡತಿಯ ಅಹಂಕಾರ - ಅಸಡ್ಡಾಳತನ ಕೋಪಕ್ಕೆ ಕಾರಣವಾಗಬಹುದು. ಆದರೆ ಒಂದಷ್ಟು ಸರ್ತಿ ಗಂಡನ ವರ್ತನೆಗಳು ಸಹ ಮನೆಯಲ್ಲಿ ಕಲಹ ಉಂಟಾಗಲು ಕಾರಣ ಆಗುತ್ತವೆ. ಈ ದಂಪತಿಗಳ ವಿಷಯಕ್ಕೆ ಬಂದಾಗ ಇಲ್ಲಿ ಗಂಡನೇ ಅನೇಕ ಜಗಳಗಳಿಗೆ ಕಾರಣ ಆಗುತ್ತಾನೆ. ಮುಂಗೋಪವು ಈತನ ಮುಖ್ಯ ಶತ್ರು. ಕೋಪದ ಭರದಲ್ಲಿ ಏನೋ ಅಂದಾಗ ಪಾಪದ ಹೆಣ್ಣುಮಗಳು ಸುಮ್ಮುಸುಮ್ಮನೆ ಹೇಗೆ ಆ ಕೋಪ ತಡೆದುಕೊಳ್ತಾಳೆ. ಪರಿಣಾಮ ಜಗಳ. ಈತ ದುಡುಕಿ ಬೈದರೂ ಆಮೇಲೆ ತನ್ನ ತಪ್ಪಿನ ಬಗ್ಗೆ ಅರಿವು ಉಂಟಾಗಿ ಪಶ್ಚಾತ್ತಾಪ ಪಡುತ್ತಾನೆ. ಹಣದ ವಿಷಯದಲ್ಲೂ ಸಹ ಇವರಿಬ್ಬರಲ್ಲಿ ಗಲಾಟೆ ಉಂಟಾಗುತ್ತದೆ. ಸ್ತ್ರೀ ತನ್ನನ್ನು ಗೌರವದಿಂದ ನೋಡಬೇಕೆಂದು ಬಯಸುತ್ತಾನೆ. ಕೆಲವು ಬಾರಿ ಅವರ ನಡುವೆ ಗದ್ದಲಕ್ಕೆ ಸಣ್ಣಪುಟ್ಟ ಸಂಗತಿಗಳು ಕಾರಣ ಆಗುತ್ತದೆ. ಸಾಕಷ್ಟು ಸರ್ತಿ ಕಾರಣವೇ ಇಲ್ಲದೆ ಜಗಳ ಮಾಡ್ತಾರೆ. ಈ ಸಂಗತಿಗಳತ್ತ ದಂಪತಿಗಳು ಗಮನ ಕೊಟ್ಟರೆ ಜಗಳರಹಿತ ಲೈಫ್ ನಿಮ್ಮದಾಗುತ್ತದೆ.
ಸಿಂಹ ರಾಶಿ ಪುರುಷ - ಕುಂಭ ರಾಶಿ ಸ್ತ್ರೀ : ಆರಂಭದಲ್ಲಿ ಇವರು ಭೇಟಿ ಆದಾಗ ಸೂಜಿ ದಾರದಂತೆ ಆಕರ್ಷಿತರಾಗುತ್ತಾರೆ. ಪರಿಣಾಮ ಪ್ರೀತಿಯ ಆರಂಭ. ಆದರೆ ಅನೇಕ ಬಾರಿ ಇಬ್ಬರು ಮೀಟ್ ಮಾಡಿದ ಬಳಿಕ ಅವರಿಗೆ ತಮ್ಮ ಆಲೋಚನೆಗಳಲ್ಲಿ ಭಿನ್ನತೆ ಇದೆ ಎಂದು ಅನ್ನಿಸುತ್ತದೆ. ಒಮ್ಮೆ ಇಬ್ಬರ ಮನವು ಒಂದಾದ ಬಳಿಕ ಇವೆಲ್ಲವೂ ಪ್ರಾಮುಖ್ಯತೆ ಪಡೆದುಕೊಳ್ಳುವುದಿಲ್ಲ. ಆದರೂ ದಾಂಪತ್ಯ ಬದುಕಲ್ಲಿ ಇಂತಹ ಸಣ್ಣಪುಟ್ಟ ಸಂಗತಿಗಳೇ ಬೇಸರ- ಕಿರಿಕಿರಿ ಉಂಟು ಮಾಡುತ್ತದೆ. ದಾಂಪತ್ಯ ಗೀತೆ ಸುಂದರವಾಗಿರಬೇಕಾದರೆ ಕೆಲವು ಸಂಗತಿಗಳಲ್ಲಿ ಕಾಂಪ್ರೋ ಆಗಬೇಕು. ಅದು ತಪ್ಪಿದರೆ ಬದುಕು ದುಃಖದ ಗೂಡಾಗುತ್ತದೆ. ಇವರ ಮತ್ತೊಂದು ಸಂಗತಿ ಏನೆಂದರೆ ಪ್ರೀತಿಯನ್ನು ಪ್ರಕಟಪಡಿಸದೇ ಇರುವುದು. ಅಯ್ಯೋ ಚೆಲುವೆ ನಿನ್ನ ಕಂಡ್ರೆ ಇಷ್ಟ ಕಣೆ ನನಗೆ, ನೀವೇ ನನ್ನ ಪ್ರಾಣ ಕಣ್ರೀ ಎನ್ನುವುದಕ್ಕೆ ದುಡ್ಡು ಕೊಡಬೇಕಾ ಕಾಸು ಖರ್ಚು ಮಾಡಬೇಕಾ.. ಅದೊಂದು ಮಾತಿನಿಂದ ಬದುಕು ನಂದನವನ ಆಗುವುದೇ ಆದ್ರೆ ಇನ್ನೇಕೆ ತಡ ಹೇಳಿ ನಿಮ್ಮ ಸಂಗಾತಿಗೆ 'ಐ ಲವ್ ಯು ಕಣೆ' ಅಂತ! (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)
-
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Gas Bill: ಇಡ್ಲಿ-ವಡೆ ಜೊತೆಗೆ ಗ್ಯಾಸ್ ಶುಲ್ಕ ವಿಧಿಸಿದ ರೆಸ್ಟೋರೆಂಟ್!: ದಂಗಾದ ಗ್ರಾಹಕರು, ಇಲ್ಲಿವೆ ನೋಡಿ ದರಗಳು -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು












Click it and Unblock the Notifications