Artificial Intelligence: ಪ್ರತಿಯೊಂದು ಕಚೇರಿಯಲ್ಲೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹವಾ ಮತ್ತಷ್ಟು ಜೋರು!
ಮನುಷ್ಯ ಸಿಕ್ಕಾಪಟ್ಟೆ ವೇಗದಲ್ಲಿ ಮುಂದುವರಿದು ಇದೀಗ ಹೊಸ ಹೊಸ ತಂತ್ರಜ್ಞಾನ ಅಭಿವೃದ್ಧಿ ಮಾಡಿ ಭವಿಷ್ಯ ರೂಪಿಸುವ ತವಕದಲ್ಲಿ ಇದ್ದಾನೆ. ಅದೇ ರೀತಿಯಾಗಿ ಇದೀಗ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹವಾ ಮತ್ತಷ್ಟು ಜೋರಾಗಿದೆ. ಎಲ್ಲೆಲ್ಲೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಈ ಸಮಯದಲ್ಲೇ ಕೋಟಿ ಕೋಟಿ ಉದ್ಯೋಗಗಳು ಕಟ್ ಆಗುವ ಭಯ ಕೂಡ ಆವರಿಸಿದೆ. ಭವಿಷ್ಯದ ಪೀಳಿಗೆ ಕೂಡ ಈ ವಿಚಾರದಲ್ಲಿ ಚಿಂತೆ ಮಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಇಂತಹ ಸಮಯದಲ್ಲೇ ಜಾಗತಿಕ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಂಸ್ಥೆಯ ಸಿಇಒ ಏನು ಹೇಳಿದ್ದಾರೆ ಗೊತ್ತಾ?
ಅಂದಹಾಗೆ ಪ್ರತಿಯೊಂದು ಕಚೇರಿ ಅರ್ಥಾತ್ ಆಫೀಸ್ ಎಐ ಕಡೆಗೆ ವಾಲುತ್ತಿದೆ. ಬಹುತೇಕ ಎಲ್ಲಾ ಆಫೀಸ್ ಬಾಸ್ಗಳು ತಮ್ಮ ತಮ್ಮ ಕಚೇರಿ ಉದ್ಯೋಗಿಗಳಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕಲಿಯಲು ಸಲಹೆ ಕೂಡ ನೀಡುತ್ತಿದ್ದಾರೆ. ಅಕಸ್ಮಾತ್ ಸ್ಕಿಲ್ ಡೆವಲಪ್ ಆಗದೇ ಇದ್ದರೆ ಅಂತಹ ಉದ್ಯೋಗಿ ಮನೆಗೆ ಹೋಗುವುದು & ಕೆಲಸ ಕಳೆದುಕೊಳ್ಳುವುದು ಕೂಡ ಗ್ಯಾರಂಟಿ ಆಗಿದೆ. ಇಂತಹ ಸಮಯದಲ್ಲೇ ಇಲ್ಲೊಬ್ಬರು ಸಿಇಒ ಕಚೇರಿ ಒಳಗೆ ಎಐ ಹವಾ ಹೇಗೆ ಇರಲಿದೆ? ಅನ್ನೋದನ್ನ ವಿವರಿಸಿದ್ದಾರೆ.

ಕಾಮೆಟ್ ಬ್ರೌಸರ್ ಮೂಲಕ ಕ್ರಾಂತಿ!
ಅಂದಹಾಗೆ ಪರ್ಪ್ಲೆಕ್ಸಿಟಿ ಎಐ ಸಂಸ್ಥೆ ಸಹ ಸಂಸ್ಥಾಪಕ & ಸಿಇಒ ಅರವಿಂದ್ ಶ್ರೀನಿವಾಸ್, ಕಾಮೆಟ್ ಬ್ರೌಸರ್ನ ಮೂಲಕ ಭವಿಷ್ಯದಲ್ಲಿ ಪ್ರತಿಯೊಂದು ಆಫಿಸ್ನಲ್ಲಿ ದೊಡ್ಡ ಮಟ್ಟಿಗೆ ಬದಲಾವಣೆ ಆಗಲಿದೆ ಅಂತಾ ಇದೀಗ ಬಿಗ್ ಅಪ್ಡೇಟ್ ನೀಡಿದ್ದಾರೆ. ಅದರಲ್ಲೂ, ವೈಟ್ ಕಾಲರ್ ಜಾಬ್ಗಳಿಗೆ ಭಾರಿ ದೊಡ್ಡ ಪೆಟ್ಟು ಬೀಳುವ ಸಾಧ್ಯತೆ ಇದ್ದು & ನೇಮಕಾತಿ ಮತ್ತು ಆಡಳಿತ ಸಹಾಯಕರ ಹುದ್ದೆಗಳಿಗೆ ಕೂಡ ಇದೇ ಎಐ ಬಂದು ಕೂರುವ ಬಗ್ಗೆ ಮುನ್ಸೂಚನೆ ನೀಡಿದ್ದಾರೆ. ಅದರಲ್ಲೂ ಕಾಮೆಟ್ ಬ್ರೌಸರ್ ಮತ್ತು ಪ್ರಗತಿಶೀಲ ಭಾಷಾ ಮಾದರಿಗಳನ್ನು ಸಮಗ್ರವಾಗಿ ಬಳಸಿಕೊಂಡು ಪ್ರಸ್ತಾಪಿಸಿರುವ ಹುದ್ದೆಗಳಲ್ಲಿ ದೊಡ್ಡ ಕ್ರಾಂತಿಕಾರಿ ಬದಲಾವಣೆ ತರಲು ಸಾಧ್ಯತೆ ಇದೆ ಎಂದಿದ್ದಾರೆ.
ಹಲವರ ಕೆಲಸ ಹೋಗುವುದು ಪಕ್ಕಾ?
ಹಾಗೇ ಭವಿಷ್ಯದಲ್ಲಿ ಕಾಮೆಟ್ ಬ್ರೌಸರ್ & ಪ್ರಗತಿಶೀಲ ಭಾಷಾ ಮಾದರಿಗಳ ಮೂಲಕ ಅಚ್ಚುಕಟ್ಟಾಗಿ ಎಲ್ಲಾ ಹುದ್ದೆಗಳ ಕೆಲಸಗಳನ್ನು ಕೂಡ ನಿರ್ವಹಣೆ ಮಾಡಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ. ಹೀಗೆ, ಪರ್ಪ್ಲೆಕ್ಸಿಟಿ ಎಐ ಸಂಸ್ಥೆ ಸಹ ಸಂಸ್ಥಾಪಕ & ಸಿಇಒ ಅರವಿಂದ್ ಶ್ರೀನಿವಾಸ್ ಅವರು ನೀಡಿರುವ ಮಾಹಿತಿ ಈಗ ಭಾರಿ ದೊಡ್ಡ ಸಂಚಲನ ಸೃಷ್ಟಿ ಮಾಡುವ ಜೊತೆಗೆ ಜಾಗತಿಕ ಮಟ್ಟದಲ್ಲಿ ಹ್ಯೂಮನ್ ರಿಸೋರ್ಸ್ ಹಾಗೂ ವೈಟ್ಕಾಲರ್ ಹುದ್ದೆಗಳು ಸೇರಿದಂತೆ ಆಡಳಿತ ಸಹಾಯಕರ ಹುದ್ದೆಗಳು ಕಡಿತವಾಗುವ ಆತಂಕ ಕೂಡ ಈಗ ಎದುರಾಗಿದೆ.
ಒಟ್ನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಲ್ಲೆಲ್ಲೂ ಸಂಚಲನ ಸೃಷ್ಟಿ ಮಾಡುವ ಜೊತೆಗೇ, ಕೋಟ್ಯಂತರ ಹುದ್ದೆಗಳಿಗೆ ಕಂಟಕ ಅನ್ನೋ ಮಾತು ಕೂಡ ಕೇಳಿಬರ್ತಿದೆ. ಆದರೆ ಭವಿಷ್ಯದಲ್ಲಿ ಇದೆಲ್ಲಾ ಬದಲಾಗುತ್ತಾ? ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಹೊಸ ಕ್ರಾಂತಿಯೇ ಸೃಷ್ಟಿಯಾಗಿ, ಬದಲಾವಣೆಗು ಕೂಡ ಅದು ನಾಂದಿ ಹಾಡುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ. ಇಷ್ಟೆಲ್ಲದರ ನಡುವೆ ಹಲವರು ಈಗಾಗಲೇ ಎಐ ಕಾರಣಕ್ಕೆ ತಮ್ಮ ತಮ್ಮ ಕೆಲಸ ಕಳೆದುಕೊಂಡು ಬೇರೆ ಬೇರೆ ಜಾಬ್ ಹುಡುಕುವಂತೆ ಆಗಿದೆ.
-
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ












Click it and Unblock the Notifications