Get Updates
Get notified of breaking news, exclusive insights, and must-see stories!

N.R.Narayana Murthy: 70 ಗಂಟೆ ನಾರಾಯಣಮೂರ್ತಿ AI ಬಗ್ಗೆ ಹೇಳಿದ ಮಾತಿದು

N.R.Narayana Murthy: ಇನ್ಫೋಸಿಸ್‌ ಸಹ ಸಂಸ್ಥಾಪಕ ಎನ್‌ಆರ್‌ ನಾರಾಯಣ ಮೂರ್ತಿ ಅವರು ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲಿರುತ್ತಾರೆ. ಹಾಗೆಯೇ ಇದೀಗ ಟ್ರೆಂಡಿಂಗ್‌ನಲ್ಲಿರುವ ಎಐ ಬಗ್ಗೆ ಪ್ರತಿಕ್ರಿಯಿಸಿ ಇದರಿಂದ ಏನೆಲ್ಲಾ ಉಪಯೋಗಗಳಿವೆ ಹಾಗೂ ಇದು ಉದ್ಯೋಗಗಳನ್ನು ಹೇಗೆ ಸೃಷ್ಟಿಸುತ್ತದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ.

ಕೃತಕ ಬುದ್ಧಿಮತ್ತೆ ಉದ್ಯೋಗಗಳನ್ನು ಕಸಿದುಕೊಳ್ಳುವುದಿಲ್ಲ. ಬದಲಾಗಿ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಭಾರತದ ಐಟಿ ವಲಯದಲ್ಲಿ ಉತ್ಪಾದಕತೆಯನ್ನು ಹೆಚ್ಚಳ ಮಾಡುತ್ತದೆ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರು ಹೇಳಿದ್ದಾರೆ.

N R Narayana Murthy AI Will Create More Jobs

ಸಂವಾದವೊಂದರಲ್ಲಿ ಮಾತನಾಡಿದ ಅವರು, ಕಂಪನಿಗಳು ಎಐ ಅನ್ನು ಉದ್ಯೋಗಿಗಳ ಬದಲಿಗೆ ಸಹಾಯಕ ಸಾಧನವಾಗಿ ನೋಡಬೇಕೆಂದು ಒತ್ತಿ ಹೇಳಿದರು. ತಂತ್ರಜ್ಞಾನವು ಉದ್ಯೋಗಗಳನ್ನ ಕಿತ್ತುಕೊಳ್ಳುವುದಿಲ್ಲ. ಬದಲಾಗಿ ಬೇರೆ ರೀತಿಯ ಉದ್ಯೋಗಗಳನ್ನ ಸೃಷ್ಟಿ ಮಾಡುತ್ತದೆ ಎಂದು ಹೇಳಿದರು.

1970ರ ದಶಕದಲ್ಲಿ ಬ್ಯಾಂಕಿಂಗ್ ವಲಯದಲ್ಲಿ ತಾಂತ್ರಿಕ ಮುನ್ನಡೆ ಉದ್ಯೋಗಗಳನ್ನ ಸೃಷ್ಟಿಸಿತು. ಉದ್ಯೋಗಗಳನ್ನು ಕಿತ್ತುಕೊಳ್ಳಲಿಲ್ಲ. ನಾಶ ಮಾಡಲಿಲ್ಲ. ಕಂಪ್ಯೂಟರ್ ಬ್ಯಾಂಕಿಂಗ್ ಕ್ಷೇತ್ರಕ್ಕೆ ಲಗ್ಗೆ ಇಟ್ಟಾಗ ಉದ್ಯೋಗಗಳು ಹೋಗುತ್ತವೆಂದು ತುಂಬಾ ಜನ ಹೇಳಿದ್ದರು. ಆದರೆ, ಉದ್ಯೋಗಗಳ ಪ್ರಮಾಣ ಶೇಕಡ 40ರಿಂದ 50ರಷ್ಟು ಹೆಚ್ಚಳ ಆಗಿದೆ ಎಂದು ತಿಳಿಸಿದರು.

ಅಲ್ಲದೆ, ಇದೀಗ ಎಲ್ಲಾ ಐಟಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಚಾಟ್‌ ಜಿಪಿಟಿಯನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದರ ಬಳಕೆಯಿಂದ ತಮ್ಮ ಕೆಲಸದ ದಕ್ಷತೆ ಹೆಚ್ಚಾಗಿದೆ. ಉಪನ್ಯಾಸದ ಸಮಯ 25-30 ಗಂಟೆಗಳಿಂದ ಕೇವಲ 5 ಗಂಟೆಗಳಿಗೆ ಇಳಿಕೆಯಾಗಿದೆ. ನಾನು ನನ್ನ ಉತ್ಪಾದಕತೆಯನ್ನು 5 ಪಟ್ಟು ಹೆಚ್ಚಿಳ ಮಾಡಿಕೊಂಡಿದ್ದೇನೆ. ಎಐ ಮಾನವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಐಟಿ ವಲಯದಲ್ಲಿ ತುಂಬಾ ಬದಲಾವಣೆಗಳಾಗಲಿವೆ. ವೃತ್ತಿಪರರು ಹೆಚ್ಚು ಕಷ್ಟಕರ ಸಮಸ್ಯೆಗಳನ್ನ ಪರಿಹರಿಸಿಕೊಳ್ಳಲಿದ್ದಾರೆ. ನಮ್ಮ ಪ್ರೋಗ್ರಾಮರ್ ಮತ್ತು ವಿಶ್ಲೇಷಕರು ಉತ್ತಮ ಅವಶ್ಯಕತೆಗಳನ್ನ ವ್ಯಾಖ್ಯಾನಿಸುವಲ್ಲಿ ಚುರುಕಾಗಲಿದ್ದಾರೆ. ಆಗ ಅವರು ದೊಡ್ಡ ಸಮಸ್ಯೆಗಳನ್ನು ಆರಮಾಗಿ ಪರಿಹರಿಸುತ್ತಾರೆ ಎಂದು ಹೇಳಿದರು.

ಎಐ ಅನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಲು ಸರಿಯಾದ ಪ್ರಶ್ನೆಗಳನ್ನು ಕೇಳುವುದು ಮತ್ತು ನಿಖರವಾಗಿ ಅಗತ್ಯತೆಗಳನ್ನ ವ್ಯಾಖ್ಯಾನಿಸುವುದು ಮುಖ್ಯವಾಗಿದೆ. ಅಗತ್ಯವಿರುವ ವ್ಯಾಖ್ಯಾನವನ್ನು ನೀಡುವುದರಲ್ಲಿಯೇ ಜಾಣತನ ಇದೆ. ಸರಿಯಾದ ಪ್ರಶ್ನೆಯನ್ನು ಕೇಳುವುದರಲ್ಲಿಯೇ ಬುದ್ಧಿವಂತಿಕೆ ಅಡಗಿದೆ ಎಂದು ಹೇಳಿದರು.

ಈ ತಂತ್ರಜ್ಞಾನದಿಂದ ನಮ್ಮ ಉದ್ಯಮದ ಬೆಳವಣಿಗೆ ಹೆಚ್ಚಾದಂತಾಗಲಿದೆ. ಭಾರತದ ಐಟಿ ಉದ್ಯಮವು ಎಐ ಬಗ್ಗೆ ಚಿಂತಿಸುತ್ತಿದೆ. ಆದರೆ, ಎಐ ನಮ್ಮ ಉದ್ಯಮದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಎಐ ಅನ್ನು ಸರಿಯಾಗಿ ಬಳಕೆ ಮಾಡಿದರೆ ಅದು ನಮಗೆ ಹೆಚ್ಚು ಲಾಭವಾಗಲಿದೆ ಎಂದು ಹೇಳಿದರು.

ದೈನಂದಿನ ಕೆಲಸಗಳಲ್ಲಿ ಸಮಯ ಉಳಿತಾಯ, ಸೂಚನೆಗಳನ್ನು ನೀಡಲು, ಪಾಠಗಳು ಮತ್ತು ಚಟುವಟಿಕೆಗಳನ್ನು ಸೃಜನಾತ್ಮಕ ರೀತಿಯಲ್ಲಿ ಬೋಧಿಸಲು ಎಐ ತುಂಬಾ ಸಹಕಾರಿಯಾಗಿದೆ ಎಂದು ಎಐಟಿ ಪ್ರಾಂಶುಪಾಲ ಡಾ.ಸಿ.ಟಿ.ಜಯದೇವ್‌ ಹೇಳಿದರು. ಎಐ ತಜ್ಞರು ಅಭಿವೃದ್ಧಿಪಡಿಸಿರುವ ಕೋರ್ಸ್‌ ಎಐ ಅಭ್ಯಾಸಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಿದರು. ಹೀಗೆ ಎಐ ಬಗ್ಗೆ ಪ್ರತಿನಿತ್ಯವೂ ಕೂಡ ಚರ್ಚೆಗಳು ಜೋರಾಗಿಯೇ ನಡೆಯುತ್ತಿವೆ. ಅಲ್ಲದೆ, ಇದರಿಂದ ಏನೆಲ್ಲಾ ಉಪಯೋಗಗಳಿವೆ ಅಂತಲೂ ತಿಳಿಸುವ ಕೆಲಸವನ್ನು ತಜ್ಞರು ಮಾಡುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+