AI ಬಂದ ಮೇಲೆ ನಮ್ಮ ಮೌಲ್ಯಗಳು ಬದಲಾಗದಂತೆ ನೋಡಿಕೊಳ್ಳಬೇಕು: ಮಾಜಿ ಸಿಎಂ
ಕೃತಕ ಬುದ್ಧಿಮತ್ತೆ (ಎಐ) ಬಂದ ಮೇಲೆ ನಮ್ಮ ಬದುಕು ಇನ್ನಷ್ಟು ಬದಲಾವಣೆಯಾಗಿದೆ. ಈ ಸಂದರ್ಭದಲ್ಲಿ ನಮ್ಮ (ಮಾನವನ) ಮೌಲ್ಯಗಳು ಬದಲಾವಣೆಯಾಗದಂತೆ ನೋಡಿಕೊಳ್ಳುವುದು ಮುಖ್ಯ. ಧಾರ್ಮಿಕ, ಸಾಮಾಜಿಕ ಮೌಲ್ಯಗಳು ಅಷ್ಟೇ ಅಲ್ಲ. ನ್ಯಾಯಾಂಗದ ಮೌಲ್ಯ ಕೂಡ ಮುಖ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿಯ ಜಿಲ್ಲಾ ನ್ಯಾಯವಾದಿಗಳ ಸಂಘದ ಕಟ್ಟಡದಲ್ಲಿ ಜಿಲ್ಲಾ ನ್ಯಾಯಾಂಗ ಹಾವೇರಿ, ಲೋಕೋಪಯೋಗಿ ಇಲಾಖೆ, ಹಾವೇರಿ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಜಿಲ್ಲಾ ಅಂಚೆ ಕಛೇರಿ ಹಾವೇರಿ ಇವರುಗಳ ಸಂಯುಕ್ತ ಆಶ್ರಯದಲ್ಲಿ *ನೂತನ ಅಂಚೆ ಕಛೇರಿ ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಅತ್ಯಂತ ಅವಶ್ಯಕತೆ ಇರುವ ಅಂಚೆ ಕಚೇರಿ ಉದ್ಘಾಟನೆಯಾಗುತ್ತಿರುವುದು ನಾವೆಲ್ಲರೂ ಸಂತೋಷ ಪಡುವ ವಿಚಾರ. ಆಧುನಿಕರಣ, ತಂತ್ರಜ್ಞಾನ ಹೊಸದಾಗಿ ಬಂದಿದ್ದರೂ ಕೂಡ ಅಂಚೆಗೆ ತನ್ನದೆ ಆದ ಮಹತ್ವ ಇದೆ. ನೀವು ಯಾರಿಗಾದರೂ ನೊಟೀಸ್ ಕಳುಹಿಸಿದರೆ ಅದರ ಕಾನೂನು ಮಾನ್ಯತೆ ಅಂಚೆ ಪತ್ರದ ಮೇಲೆ ಇರುತ್ತದೆ. ಇದು ಎಲ್ಲರಿಗೂ ಬಹಳ ಉಪಯುಕ್ತವಾಗಿದೆ. ಇದನ್ನು ಎಲ್ಲರೂ ಸದುಪಯೋಗ ಪಡೆಸಿಕೊಳ್ಳುವ ವಿಶ್ವಾಸ ಇದೆ ಎಂದರು.
ಎಐ ಬಂದ ಮೇಲೆ ನಮ್ಮ ಬದುಕು ಇನ್ನಷ್ಟು ಬದಲಾವಣೆಯಾಗಿದೆ. ಈ ಸಂದರ್ಭದಲ್ಲಿ ನಮ್ಮ ಮೌಲ್ಯಗಳು ಬದಲಾವಣೆಯಾಗದಂತೆ ನೋಡಿಕೊಳ್ಳುವುದು ಮುಖ್ಯ ಮೌಲ್ಯಗಳು ಅಂದರೆ, ಧಾರ್ಮಿಕ, ಸಾಮಾಜಿಕ ಮೌಲ್ಯಗಳು ಅಷ್ಟೇ ಅಲ್ಲ. ನ್ಯಾಯಾಂಗದ ಮೌಲ್ಯ ಕೂಡ ಸಾತ್ವಿಕವಾಗಿರಬೇಕು. ನ್ಯಾಯಾಂಗ ತನ್ನದೇ ಆದ ಇತಿಹಾಸ ಹೊಂದಿದೆ. ಮಾನವನ ಬೆಳವಣಿಗೆಗೆ ನ್ಯಾಯ, ನೀತಿ, ಧರ್ಮ ಎನ್ನುವಂಥದ್ದು ಜೊತೆ ಜೊತೆಗೆ ಬೆಳೆಯುತ್ತದೆ.
ಒಂದು ವ್ಯವಸ್ಥಿತವಾಗಿರುವ ಸಮಾಜ, ಶಾಂತಿಯುತವಾಗಿರುವ ಪರಿಸರ, ಅಭಿವೃದ್ಧಿಶೀಲವಾಗಿರುವ ರಾಷ್ಟ್ರ ಇರಬೇಕಾದರೆ ನ್ಯಾಯಾಂಗ ಮುಖ್ಯ. ಸತ್ಯದ ಪರೀಕ್ಷೆ ಮತ್ತು ಅದರ ಪರಿಣಾಮ ನ್ಯಾಯದ ಮೇಲೆ ನಿಂತಿದೆ. ನ್ಯಾಯ ನೀತಿ ಧರ್ಮದಲ್ಲಿ ನ್ಯಾಯ ಬಹಳ ಶ್ರೇಷ್ಠ ಯಾಕೆಂದರೆ ಯಾವಾಗ, ಎಲ್ಲಿ ಅನ್ಯಾಯ ಆಗುತ್ತದೆಯೋ ಅಲ್ಲಿ ನ್ಯಾಯ ಸಿಗಬೇಕು ಎಂದು ತಿಳಿಸಿದರು.
ಆದರ್ಶಪಾಯ ಸಮಾಜದಲ್ಲಿ ನಮ್ಮ ಆಧುನಿಕ ಸಮಾಜದಲ್ಲಿ ನೈಸರ್ಗಿಕ ಕಾನೂನು ಮತ್ತು ಮಾನವ ಲಾದಲ್ಲಿ ವ್ಯತ್ಯಾಸ ಇಷ್ಟೆ ನೈಸರ್ಗಿಕ ಕಾನೂನಿನಲ್ಲಿ ನೀವು ಸತ್ಯ ಹೇಳಿದರೆ ನಿಮಗೆ ಪುಣ್ಯ ಬರುತ್ತದೆ. ಮಾನವ ನಿರ್ಮಿತ ಕಾನೂನಿನಲ್ಲಿ ಸುಳ್ಳು ಹೇಳಿದರೆ ಈ ಶಿಕ್ಷೆ ಅಂತ ಇರುತ್ತದೆ. ಈ ಎರಡರ ಮಧ್ಯ ನಮ್ಮೆಲ್ಲರ ಕರ್ತವ್ಯ ಎರಡನ್ನೂ ನಮ್ಮ ನಡೆ ನುಡಿಯಿಂದ ಹತ್ತಿರ ತರುವ ಪಯತ್ನ ಮಾಡಬೇಕು. ನಮ್ಮ ನ್ಯಾಯಾಲಯಗಳು ಯಾವಾಗ ನ್ಯಾಯಸಮ್ಮತವಾಗಿ ನಡೆದುಕೊಳ್ಳುತ್ತವೆಯೋ ಆಗ ನ್ಯಾಯಾಂಗದ ಕೀರ್ತಿ ಎತ್ತರಕ್ಕೆ ಏರುತ್ತದೆ ಎಂದರು.
ತಂತಜ್ಞಾನ ಬದಲಾವಣೆಯಾದಂತೆ ಅಪರಾಧ ಹೆಚ್ಚಾಗುತ್ತದೆ. ಒಂದು ಮಾತಿದೆ. ಆಲ್ವೇಸ್ ಕ್ರೈಮ್ ಲೀಡ್ಸ್ ದ ಲಾ, ಆದರೆ, ಅಪರಾಧ ಕಾನೂನು ಮೀರಿ ಹೋಗದಂತೆ ನೋಡಿಕೊಳ್ಳಬೇಕು. ನ್ಯಾಯಾಂಗ ವ್ಯವಸ್ಥೆ ಅದನ್ನು ನಿಯಂತ್ರಣ ಮಾಡುವ ಶಕ್ತಿಹೊಂದಿದೆ. ಈ ದೃಷ್ಟಿಯಿಂದ ನೀವು ಮಾಡುವ ಕಾಯಕ ಬಹಳ ಮಹತ್ವ ಪಡೆದಿದೆ.
ಪ್ರಜಾಪಭುತ್ತದ ಯಶಸ್ಸು ನ್ಯಾಯಾಂಗ ವ್ಯವಸ್ಥೆಯ ಮೇಲೆ ಇದೆ. ನಾವೆಲ್ಲರೂ ಸೇರಿ ಇದನ್ನು ಗೌರವಿಸಬೇಕು. ಅಂದಾಗ ಮಾತ್ರ ಪಜಾಪಭುತ್ವ ಯಶಸ್ವಿಯಾಗುತ್ತದೆ. ಒಂದು ಕಾಲದಲ್ಲಿ ಮೊದಲು ಯಾರ ಬಳಿ ಭೂಮಿ ಇತ್ತೊ ಅವರು ಜಗತ್ತು ಆಳುತ್ತಿದ್ದರು. ನಂತರ ಯಾರ ಬಳಿ ಬಿಜಿನೆಸ್ಸು, ತಾಕತ್ತು ಇತ್ತೊ ಅವರು ಜಗತ್ತು ಆಳಿದರು. ಈಗ ಇಪತ್ತೊಂದನೆ ಶತಮಾನದಲ್ಲಿ ಯಾರ ಬಳಿ ಜ್ಞಾನ ಇದೆಯೋ ಅವರು ಜಗತ್ತನ್ನು ಆಳುತ್ತಾರೆ. ಒಂದು ಸಮೀಕ್ಷೆಯಲ್ಲಿ ಬಿಲ್ಗೇಟ್ ಮತ್ತು ಬಿಲ್ ಕ್ಲಿಂಟನ್ ನಡುವೆ ಯಾರು ಪ್ರಸಿದ್ದರು ಅಂತ ಸ್ಪರ್ಧೆ ನಡೆದಾಗ ಬಿಲ್ ಗೇಟ್ಗೆ ಜಯ ಸಿಕ್ಕಿತು. ಈಗ ತಂತ್ರಜ್ಞಾನ ಬಂದ ಮೇಲೆ ಪೇಪರ್ ಬಳಕೆ ಕಡಿಮೆಯಾಗಿದೆ ಎಂದರು.
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications