ಸಾಲ ಪಾವತಿಸದ ರೈತರಿಗೆ ವಾರೆಂಟ್!: ಆತಂಕದಲ್ಲಿ ಪ್ರವಾಹಪೀಡಿತ ರೈತರು
ಬೆಳಗಾವಿ, ಸೆಪ್ಟೆಂಬರ್ 23: ನೋಟಿಸ್ ನೀಡದಂತೆ ಜಿಲ್ಲಾಧಿಕಾರಿ ಆದೇಶಿಸಿದ್ದರೂ ಬೆಳಗಾವಿ ಜಿಲ್ಲೆಯ ಇಬ್ಬರು ರೈತರಿಗೆ ಬ್ಯಾಂಕಿನಿಂದ ನೊಟೀಸ್ ಜಾರಿಯಾಗಿದೆ.
ನೀಲಕಂಠ ಲಕ್ಕಣ್ಣವರ್, ನಿಂಗಪ್ಪ ಲಕ್ಕಣ್ಣವರ್ ಸಹೋದರರಿಗೆ ಕೊಲ್ಕತ್ತಾ ನ್ಯಾಯಾಲಯದ ಆದೇಶದ ಮೇರೆಗೆ ರಾಮದುರ್ಗ ಪೊಲೀಸರಿಂದ ರೈತರಿಗೆ ವಾರೆಂಟ್ ಜಾರಿಯಾಗಿದೆ.
ರಾಮದುರ್ಗ ತಾಲೂಕಿನ ಹಂಪಿಹೋಳಿ ಗ್ರಾಮ ಮಲಪ್ರಭಾ ನದಿಯ ಭಾರೀ ಪ್ರವಾಹ ಹಿನ್ನೆಲೆ ಒಂದೇ ತಿಂಗಳಲ್ಲಿ ಎರಡು ಬಾರಿ ಸಂಪೂರ್ಣವಾಗಿ ಮುಳುಗಿತ್ತು. ಇದರಿಂದ ಈ ಗ್ರಾಮಸ್ಥರ ತೀವ್ರ ಸಂಕಷ್ಟಕ್ಕೀಡಾಗಿದ್ದರು.

ಐದು ವರ್ಷದ ಹಿಂದೆ ಎಲ್ ಅಂಡ್ ಟಿ ಫೈನಾನ್ಸ್ ನಿಂದ ಟ್ರ್ಯಾಕ್ಟರ್ ಖರೀದಿಸಿ ನಿಗದಿತ ಸಮಯದಲ್ಲಿ ಎರಡು ಕಂತು ಪಾವತಿಸಲಾಗಿತ್ತು. ನಂತರ ಬರದಿಂದ ರೈತರಿಗೆ ಕಂತು ಪಾವತಿಸಲು ಸಾಧ್ಯವಾಗಿರದ ಕಾರಣ ಫೈನಾನ್ಸ್ ನವರು ಕಳೆದ ವರ್ಷವೇ ರೈತನ ಟ್ರ್ಯಾಕ್ಟರ್ ಜಪ್ತಿ ಮಾಡಿದ್ದರು. ವಾರೆಂಟ್ ಜಾರಿಯಾಗಿರುವುದರಿಂದ ಈ ಭಾಗದಲ್ಲಿ ರೈತರು ಆತಂಕಗೊಂಡಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶವಿದ್ದಾಗಲೂ ವಾರೆಂಟ್ ಜಾರಿ ಮಾಡಿದ್ದು ಎಷ್ಟು ಸರಿ? ಪ್ರವಾಹದಿಂದ ಎಲ್ಲವನ್ನು ಕಳೆದುಕೊಂಡ ರೈತರು ಸಾಲದ ಕಂತು ಪಾವತಿಸುವುದು ಹೇಗೆ ಸಾಧ್ಯ ಎನ್ನುವುದು ಬಹುತೇಕ ರೈತರ ಪ್ರಶ್ನೆ.












Click it and Unblock the Notifications