ರೈತರ ಜತೆ ಒಂದು ದಿನ ಕಳೆಯಲು ಇಲ್ಲಿದೆ ಅವಕಾಶ
ಬೆಂಗಳೂರು, ಡಿಸೆಂಬರ್ 15: ಟಿಎಎಫ್ಇ - ಟ್ರಾಕ್ಟರ್ಸ್ ಅಂಡ್ ಫಾರಂ ಎಕ್ವಿಪ್ಮೆಂಟ್ ಲಿಮಿಟೆಡ್ ಇವರು ಬೆಂಗಳೂರಿನ ಹೊರಭಾಗದಲ್ಲಿರುವ ಗೋರಂಟ್ಲದಲ್ಲಿನ ಹೊಸಚಿಗುರು ಇಓಎಸ್ ಫಾರಂನಲ್ಲಿ 17ನೇ ಡಿಸೆಂಬರ್ 2017ರಂದು ಭಾನುವಾರ ತನ್ನ #FarmDost ಎಂಬ ಹ್ಯಾಷ್ಟ್ಯಾಗ್ ಹೊಂದಿರುವ ಸಾಮಾಜಿಕ ಕಳಕಳಿಯ ಅಂಗವಾಗಿ ರಾಷ್ಟ್ರೀಯ ರೈತರ ದಿನವನ್ನು ಆಚರಿಸುತ್ತಿದೆ.
ಈ ಕಾರ್ಯಕ್ರಮ ಬೆಂಗಳೂರು ನಗರದ ನಾಗರಿಕರಿಗೆ ಒಂದು ದಿವಸದ ಮಟ್ಟಿಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಲು, ರೈತ ಸಮುದಾಯದೊಂದಿಗೆ ಮಾತುಕತೆ ನಡೆಸಲು ಮತ್ತು ಒಂದು ದಿನದ ಮಟ್ಟಿಗೆ ರೈತಾಪಿ ಜೀವನ ನಡೆಸಲು ಅವಕಾಶ ಕಲ್ಪಿಸುತ್ತದೆ.

ರೈತರ ಪರಿಶ್ರಮವೇ ನಮ್ಮೆಲ್ಲರ ಬದುಕನ್ನು ಹಸನಾಗಿಸಿರುವುದು. ಈ ಹಿನ್ನೆಲೆಯಲ್ಲಿ ಟಿಎಎಫ್ಇ ಸಂಸ್ಥೆಯ ಫಾರ್ಮ್ ದೋಸ್ತ್ ಉಪಕ್ರಮವು ಎಲ್ಲ ಕ್ಷೇತ್ರದ ಜನರೂ ರೈತಾಪಿ ವರ್ಗದವರಿಗೆ ತಮ್ಮ ಕೃತಜ್ಞತೆ ಸಲ್ಲಿಸಲು ಪ್ರೋತ್ಸಾಹಿಸುತ್ತದೆ.
ನಗರ ಮತ್ತು ಗ್ರಾಮೀಣ ಬದುಕುಗಳ ನಡುವೆ ಸಂಬಂಧ ಏರ್ಪಡಿಸುವ ಟಿಎಎಫ್ಇಯ ಈ ವಿಶೇಷ ಉಪಕ್ರಮವು ನಗರ ಪ್ರದೇಶದ ಮಹಿಳೆಯರು ಹಾಗೂ ಪುರುಷರು ಮಣ್ಣಿಗೆ ಸಮೀಪದಲ್ಲಿ ಬದುಕಲು ಅವಕಾಶ ಕಲ್ಪಿಸುತ್ತದೆ.
ನಗರ-ಗ್ರಾಮೀಣ ಪ್ರದೇಶದವರು ಪರಸ್ಪರರನ್ನು ಅರ್ಥ ಮಾಡಿಕೊಂಡು ಪರಸ್ಪರರಿಗೆ ನೆರವಾಗಲು ಹಾಗೂ ರೈತಸಮುದಾಯ ಸಾಮಾಜಿಕ ಪ್ರಜ್ಞೆ ಬೆಳೆಸಿಕೊಳ್ಳಲು ನೆರವಾಗುತ್ತದೆ.
ಇಡೀ ದಿವಸ ನಡೆಯುವ ಈ ಕಾರ್ಯಕ್ರಮದಲ್ಲಿ ಸಸಿ ನಡುವಿಕೆ, ಸಾವಯವ ಗೊಬ್ಬರದ ತಯಾರಿಕೆ, ವ್ಯವಸಾಯ ಮತ್ತು ತಮ್ಮ ತಂಡದ ಸದಸ್ಯರು ಹಾಗೂ ಮಾರ್ಗದರ್ಶಕರಾದ ರೈತರೊಂದಿಗೆ ತಮ್ಮದೇ ಮಿನಿ ಫಾರಂ ನಿರ್ಮಾಣ ಮುಂತಾದ ಚಟುವಟಿಕೆಗಳು ನಡೆಯಲಿವೆ.
ಆ ದಿವಸ ಸ್ಥಳೀಯರು ಹಾಗೂ ಹಳ್ಳಿಯ ರೈತ ಸಮುದಾಯ ಸ್ಥಳದಲ್ಲಿ ಹಾಜರಿದ್ದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಮಾರ್ಗದರ್ಶನ ನೀಡುತ್ತಾರೆ, ತಮ್ಮ ಪರಿಶ್ರಮವನ್ನು ಮತ್ತು ಅನುಭವವನ್ನು ವಿವರಿಸಿ ಪ್ರೋತ್ಸಾಹ ತುಂಬುತ್ತಾರೆ.
ಬೆಂಗಳೂರು ನಗರದ ನೋಂದಾಯಿತ ಅತಿಥಿಗಳನ್ನು ನಿಗದಿತ ಪಿಕಪ್ ಪಾಯಿಂಟ್ಗಳಿಂದ ಮುಂಜಾನೆ ಪಿಕಪ್ ಮಾಡಲಾಗುವುದು ಮತ್ತು ಸಂಜೆ ಅದೇ ಸ್ಥಳದಲ್ಲಿ ಬಿಡಲಾಗುವುದು. ಪಾಲ್ಗೊಳ್ಳುವವರಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಮತ್ತು ಚಹಾ ಒದಗಿಸಲಾಗುವುದು. ಇದಕ್ಕೆಲ್ಲ ಯಾವುದೇ ಶುಲ್ಕ ಇರುವುದಿಲ್ಲ.
-
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
Summer Gardening: ಸುಡು ಬಿಸಿಲಲ್ಲೂ ನಿಮ್ಮ ಕೈತೋಟದ ಹಸಿರಾಗಿರಲಿ: ಗಿಡಗಳ ರಕ್ಷಣೆಗೆ ಇಲ್ಲಿವೆ ಸರಳ ಸೂತ್ರಗಳು -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ











Click it and Unblock the Notifications