ಕಲಬುರಗಿ ಜಿಐ ಟ್ಯಾಗ್ ತೊಗರಿ ಬೇಳೆ ಅಂಚೆ ಮೂಲಕ ಮನೆ ಬಾಗಿಲಿಗೆ!
ಕಲಬುರಗಿ, ಜನವರಿ 31: ನಮ್ಮ ನಾಡಿನ ಬೆಳೆ, ತರಕಾರಿ, ಉತ್ಪನ್ನಗಳನ್ನು ದೇಶದ ಜನರ ಮನೆಗಳಿಗೆ ತಲುಪಿಸಲು, ನಮ್ಮ ರೈತರ ಆದಾಯವನ್ನು ದ್ವಿಗುಣ ಮಾಡಲು ಸರ್ಕಾರ ಮತ್ತು ಸಂಸ್ಥೆಗಳು ಹಲವು ಯೋಜನೆಗಳನ್ನು ಜಾರಿಗೆ ತರುತ್ತವೆ. ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತವೆ. ಇದೆ ನಿಟ್ಟಿನಲ್ಲಿ ಮತ್ತೊಂದು ಪ್ರಯೋಗಕ್ಕೆ ಕರ್ನಾಟಕ ಪೋಸ್ಟಲ್ ಸರ್ಕಲ್ ಮತ್ತು ದ್ವಿದಳ ಧಾನ್ಯಗಳ ಅಭಿವೃದ್ಧಿ ಮಂಡಳಿ ಕೈ ಹಾಕಿವೆ.
ವಿಶ್ವಪ್ರಸಿದ್ಧ ಭೌಗೋಳಿಕ ಸೂಚ್ಯಂಕ (ಜಿಐ) ಗುಲ್ಬರ್ಗಾ ತೊಗರಿ ಬೇಳೆಯನ್ನು ಹೆಚ್ಚು ಪ್ರಸಿದ್ಧಿ ಮಾಡಲು ಮತ್ತು ಭಾರತದಾದ್ಯಂತ ಗ್ರಾಹಕರಿಗೆ ಮನೆ ಬಾಗಿಲಿಗೆ ತಲುಪಿಸಲು ಕರ್ನಾಟಕ ಪೋಸ್ಟಲ್ ಸರ್ಕಲ್ ಮತ್ತು ರಾಜ್ಯ ಸರ್ಕಾರದ ದ್ವಿದಳ ಧಾನ್ಯಗಳ ಅಭಿವೃದ್ಧಿ ಘಟಕ ಒಪ್ಪಂದಕ್ಕೆ ಸಹಿ ಹಾಕಿದೆ. ಪರಸ್ಪರ ಲಾಭದಾಯಕ ಉದ್ಯಮವು ಶೀಘ್ರದಲ್ಲೇ ಪ್ರಾರಂಭವಾಗಲಿದೆ.

ಕೆಎಸ್ಪಿಎಎಂಎಲ್ ಇ-ಕಾಮರ್ಸ್ ವ್ಯವಹಾರ
ರಾಜ್ಯದಲ್ಲಿ ದ್ವಿದಳ ಧಾನ್ಯಗಳ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಮಂಡಳಿಯನ್ನು ರಚಿಸಿದೆ. ಕಲಬುರಗಿ ಜಿಲ್ಲೆಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕರ್ನಾಟಕ ರಾಜ್ಯ ದ್ವಿದಳ ಧಾನ್ಯಗಳ ಅಭಿವೃದ್ಧಿ ಮಂಡಳಿ ಲಿಮಿಟೆಡ್ (ಕೆಎಸ್ಪಿಎಎಂಎಲ್) ಶೀಘ್ರದಲ್ಲೇ ತನ್ನ ಇ-ಕಾಮರ್ಸ್ ವ್ಯವಹಾರವನ್ನು ಪ್ರಾರಂಭಿಸಲಿದೆ ಎಂದು ವರದಿಯಾಗಿದೆ.
ಅಂಚೆ ಮೂಲಕ ಮನೆ ಮನೆಗೆ ಗುಲ್ಬರ್ಗಾ ತೊಗರಿ ಬೇಳೆಯನ್ನು ತಲುಪಿಸುವ ಈ ಹೊಸ ಒಪ್ಪಂದಕ್ಕೆ ಕೆಎಸ್ಪಿಎಎಂಎಲ್ನ ಎಂಡಿ ಆಂಥೋನಿ ಮರಿಯಾ ಇಮ್ಯಾನುಯೆಲ್ ಎಂ ಮತ್ತು ಸರ್ಕಲ್ನ ಅಂಚೆ ಸೇವೆಗಳ ನಿರ್ದೇಶಕ ಕೈಯಾ ಅರೋರಾ ಸಹಿ ಹಾಕಿದ್ದಾರೆ.
ಕಲಬುರಗಿ ಮತ್ತು ಯಾದಗಿರಿಯಿಂದ ಆನ್ಲೈನ್ನಲ್ಲಿ ಕಾಯ್ದಿರಿಸಿದ ಬೇಳೆಕಾಳುಗಳನ್ನು ತಲುಪಿಸುವ ಮೂಲಕ ಇ-ಕಾಮರ್ಸ್ ಪೋರ್ಟಲ್ಗೆ ಅಂಚೆ ಇಲಾಖೆ ಲಾಜಿಸ್ಟಿಕ್ಸ್ ಪಾಲುದಾರರಾಗಿದ್ದಾರೆ. ಈ ಬಗ್ಗೆ ಕರ್ನಾಟಕ ಅಂಚೆ ವೃತ್ತದ ವ್ಯವಹಾರ ಅಭಿವೃದ್ಧಿ ಸಹಾಯಕ ನಿರ್ದೇಶಕಿ ಎಸ್ ಅನ್ನಲಕ್ಷ್ಮಿ ಅವರನ್ನು 'ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್' ಉಲ್ಲೇಖಿಸಿ ವರದಿ ಮಾಡಿದೆ.
ಕರ್ನಾಟಕ ರಾಜ್ಯ ದ್ವಿದಳ ಧಾನ್ಯಗಳ ಅಭಿವೃದ್ಧಿ ಮಂಡಳಿ ಲಿಮಿಟೆಡ್ (ಕೆಎಸ್ಪಿಎಎಂಎಲ್) ತಿಂಗಳಿಗೆ ಕನಿಷ್ಠ 250 ಆರ್ಡರ್ಗಳು ಬುಕ್ ಆಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಕರ್ನಾಟಕ ಪೋಸ್ಟಲ್ ಸರ್ಕಲ್ ಜನವರಿ 25 ರಂದು ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಕಚೇರಿಯಲ್ಲಿ ಸ್ಪೀಡ್ ಪೋಸ್ಟ್ ಒಪ್ಪಂದವನ್ನು ವಿನಿಮಯ ಮಾಡಿಕೊಂಡಿದೆ. ಮುಂದಿನ ವಾರ ಆರ್ಡರ್ಗಳ ಬುಕಿಂಗ್ ಪ್ರಾರಂಭವಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
"ನಾವು ಮೊದಲು ತೊಗರಿಯನ್ನು ಮಾತ್ರ ಖರೀದಿಸುತ್ತಿದ್ದೆವು. ಮಂಡಳಿಯು ಮೊದಲ ಬಾರಿಗೆ ರೈತರಿಂದ ತೊಗರಿ ಬೇಳೆಯನ್ನು ಖರೀದಿಸುತ್ತಿದೆ. ನಮ್ಮಿಂದ ರೈತರಿಗೆ ಉತ್ತಮ ಬೆಲೆ ಸಿಗುತ್ತದೆ. ನಾವು ಆಗಸ್ಟ್ 2023 ರಲ್ಲಿ 'ಭೀಮಾ ಪಲ್ಸಸ್ ಗುಲ್ಬರ್ಗಾ ತುರ್ ದಾಲ್' ಹೆಸರಿನಲ್ಲಿ GI-ಟ್ಯಾಗ್ ಮಾಡಿದ ಗುಲ್ಬರ್ಗಾ ತುರ್ ದಾಲ್ ಅನ್ನು ಪ್ರಾರಂಭಿಸಿದ್ದೇವೆ. ಈ ಬೇಳೆಯನ್ನು www.bhimapulses.com ಮೂಲಕ ಮಾರಾಟ ಮಾಡುತ್ತೇವೆ" ಎಂದು ಮತ್ತೊಬ್ಬ ಅಧಿಕಾರಿಯನ್ನು ವರದಿ ಉಲ್ಲೇಖಿಸಿದೆ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications