ಗ್ರಾಮ್ಯ ಹಬ್ಬ ಸಂಕ್ರಾಂತಿ: ಹಳ್ಳಿಗಳಲ್ಲಿ ಆಚರಣೆ ಹೇಗೆ?
ಸಂಕ್ರಾಂತಿ ಗ್ರಾಮ್ಯ ಹಬ್ಬ, ನಗರವಾಸಿಗಳಿಗೆ ಸಂಕ್ರಾಂತಿ ಎಂದರೆ ಎಳ್ಳು-ಬೆಲ್ಲ ಹಂಚುವುದು, ದೇವಾಲಯಗಳಿಗೆ ಹೋಗಿ ಕೈಮುಗಿಯುವುದು ಅಷ್ಟೆಯೋ ಏನೋ, ಆದರೆ ಹಳ್ಳಿಗರಿಗೆ ಇದು ಸುಗ್ಗಿ ಹಬ್ಬ. ಬೆಳೆದ ಬೆಳೆಯನ್ನು ಕಟಾವು ಮಾಡಿ ಭಕ್ತಿಯಿಂದ ಕೈಮುಗಿಯುವ ಹಬ್ಬ. ಸಂಕ್ರಾಂತಿ, ರೈತ ತನ್ನ ಶ್ರಮಕ್ಕೆ ತಾನೇ ನಮಿಸುವ ಹಬ್ಬ.
ಬೆಳೆದ ಬೆಳೆಯನ್ನು ಕಣ (ಒಟ್ಟು) ಮಾಡಿ, ಸಗಣಿಯನ್ನು ಸಣ್ಣ ತ್ರಿಭುಜದ ಆಕಾರಕ್ಕೆ ಮಾಡಿ ಅದಕ್ಕೊಂದು ಗರಿಕೆ ಚುಚ್ಚಿ ಒಟ್ಟು ಮಾಡಿದ ಫಸಲಿನ ಮೇಲೆ ಇಟ್ಟು ಪೂಜೆ ಸಲ್ಲಿಸುತ್ತಾರೆ. ಫಸಲು ಬಳಸಿ ಮಾಡಿದ ಅಡುಗೆಯನ್ನು ದೇವರಿಗೆ ನೈವೇದ್ಯ ಇಡುವುದು ಬಯಲುಸೀಮೆಯಲ್ಲಿ ಇರುವ ಪ್ರತೀತಿ. ಈಗಲೂ ಹೀಗೆಯೇ ನಡೆಯುತ್ತದೆ ಎಂದು ಹೇಳಲಾಗದಾದರೂ ಆದರೆ ಹಿಂದೆಲ್ಲಾ ಆಚರಣೆ ಹೀಗೆಯೇ ಇತ್ತು.
ಆ ನಂತರದ್ದು ಎತ್ತುಗಳ ಪೂಜೆ. ವರ್ಷವಿಡೀ ರೈತನಿಗೆ ಸಮನಾಗಿ ದುಡಿದ ಎತ್ತುಗಳನ್ನು ಚೆನ್ನಾಗಿ ತೊಳೆದು, ಅದಕ್ಕೆ ಸುಖಕರ ಎನಿಸುವ ಆಹಾರವನ್ನು ಅಂದು ನೀಡುತ್ತಾರೆ. ಎತ್ತುಗಳನ್ನು ಸಿಂಗಾರ ಮಾಡಿ ಊರ ದೇವಾಲಯಕ್ಕೆ ಸುತ್ತು ಹೊಡೆಸುವ ಪದ್ಧತಿಯೂ ಕೆಲವು ಹಳ್ಳಿಗಳಲ್ಲಿ ಉಂಟು. ಕೇವಲ ಎತ್ತುಗಳು ಮಾತ್ರವಲ್ಲ ಮನೆಯಲ್ಲಿನ ಎಲ್ಲ ಜಾನುವಾರುಗಳಿಗೆ ಅಂದು ಸ್ನಾನ ಮಾಡಿಸಿ ಪೂಜೆ ಮಾಡಲಾಗುತ್ತದೆ.

ಸಂಜೆ ಮಬ್ಬು ಕವಿಯುತ್ತಲೆ ಊರ ಮುಂದಿನ ಅರಳಿ ಮರದ ಬಳಿಯೋ ಅಥವಾ ದೇವಾಲಯದ ಬಳಿಯೋ ಕಿಚ್ಚು ಮಾಡಿ ಎತ್ತುಗಳನ್ನು ಅದರ ಮೂಲಕ ಹಾಯಿಸಲಾಗುತ್ತದೆ. ಎತ್ತುಗಳು ಕಿಚ್ಚು ಹಾಯುವುದನ್ನು ನೋಡಲೆಂದು ಗ್ರಾಮದ ಜನರೆಲ್ಲಾ ಊರ ಮುಂದೆ ನೆರೆಯುತ್ತಾರೆ.
ಕೆಲವು ಹಳ್ಳಿಗಳಲ್ಲಿ ಪಂಜು ತಿರುಗಿಸುವ ಪದ್ಧತಿಯೂ ಇದೆ. ಯುವಕರು ಉದ್ದ ಕಂಬಿಗಳಿಗೆ ಮುಂದೆ ಬಟ್ಟೆಗಳನ್ನು ಚೆನ್ನಾಗಿ ಸುತ್ತಿ ಅದಕ್ಕೆ ಬೆಂಕಿ ಕೊಟ್ಟು ಕಂಬಿಯನ್ನು ಹಿಡಿದು ತಿರುಗಿಸುತ್ತಾರೆ, ಪಂಜು ತಿರುಗುತ್ತಿದ್ದರೆ ಬೆಂಕಿಯ ಬೆಳಕಲ್ಲಿ ಕತ್ತಲ ಕ್ಯಾನ್ವಾಸ್ನಲ್ಲಿ ಚಿತ್ರಗಳು ಮೂಡಿದಂತೆ ಭಾಸವಾಗುತ್ತದೆ.
ಇನ್ನು ಎಳ್ಳು-ಬೆಲ್ಲವಂತೂ ಸಂಕ್ರಾಂತಿಯಂದು ಇರಲೇ ಬೇಕು. ಬೆಳಿಗ್ಗೆ ಪೂಜೆ ಮುಗಿದ ಕೂಡಲೇ ಎಳ್ಳು-ಬೆಲ್ಲವನ್ನು ನೆರೆ-ಹೊರೆಯವರಿಗೆ ಹಂಚಲಾಗುತ್ತದೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ












Click it and Unblock the Notifications