ರೈತ ಹಕ್ಕುಗಳ ದಿನವಾಗಿ ರಾಹುಲ್ ಹುಟ್ಟುಹಬ್ಬ ಆಚರಣೆ

ಕಿಸಾನ್ ಅಧಿಕಾರ್ ದಿವಸ್ ಎಂಬ ಹೆಸರಿನಲ್ಲಿ ಕಾಂಗ್ರೆಸ್ ಯುವರಾಜನನ್ನು ಮುಂದಿಟ್ಟುಕೊಂಡು ಗ್ರಾಮಗಳಲ್ಲಿ ಸಭೆಗಳನ್ನು ನಡೆಸಿ, ಕುಂದುಕೊರತೆಗಳನ್ನು ನೀಗಿಸುವ ಭರವಸೆ ನೀಡುವ ಯೋಜನೆ ಕಾಂಗ್ರೆಸ್ ಹಾಕಿಕೊಂಡಿದೆ. ಉತ್ತರ ಪ್ರದೇಶ ರಾಜ್ಯವೊಂದರಲ್ಲೇ ಸುಮಾರು 4000ಕ್ಕೂ ಅಧಿಕ ಗ್ರಾಮಸಭೆಗಳನ್ನು ಹಮ್ಮಿಕೊಂಡು ಪಂಚಾಯಿತಿ ಕಟ್ಟೆಯಲ್ಲಿ ಕೂತು ಶ್ರೀಸಾಮಾನ್ಯನ ಸಮಸ್ಯೆಗಳನ್ನು ಕಾಂಗ್ರೆಸ್ ಆಲಿಸುತ್ತದೆ.
ಭೂ ಕಬಳಿಕೆ ಇಲ್ಲಿ ಚರ್ಚೆಯಾಗುವ ಮಹತ್ವದ ಅಂಶ ಉಳಿದಂತೆ ರೈತರ ದೈನಂದಿನ ಆಗು ಹೋಗುಗಳು, ಸಮಸ್ಯೆಗಳು, ಸ್ಥಳೀಯ ಆಡಳಿತದ ನೆರವು ಮುಂತಾದ ವಿಷಯಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆಯಲಿದೆ. ಕಿಸಾನ್ ಅಧಿಕಾರ್ ದಿವಸ್ ಗೆ ಮುನ್ನುಡಿ ಎಂಬಂತೆ ಕಳೆದ ವಾರ ಗ್ರೇಟರ್ ನೋಯ್ಡಾದ ಭಟಾ ಪರ್ ಸೌಲ್ ನಲ್ಲಿ ಕಿಸಾನ್ ಪಂಚಾಯತ್ ಅನ್ನು ಯಶಸ್ವಿಯಾಗಿ ಕಾಂಗ್ರೆಸ್ ನಡೆಸಿದೆ. ರಾಹುಲ್ ಗ್ರಾಮ ವಾಸ್ತವ್ಯದ ಫಲವಾಗಿ ಬಂದಿರುವ ಕಿಸಾನ್ ದಿನಾಚರಣೆ ರೈತರ ಪಾಲಿಗೆ ಒಂದು ದಿನದ ಹುಟ್ಟುಹಬ್ಬದ ಆಚರಣೆಯಾಗದೆ ಹಕ್ಕುಗಳನ್ನು ಚಲಾಯಿಸುವ ದಿನವಾದರೆ ಸಾರ್ಥಕವಾಗುತ್ತದೆ.












Click it and Unblock the Notifications