ರೈತರ ಬೆಳೆ ಸಾಲಮನ್ನಾ: ಇದೀಗ ಪಂಜಾಬಿನ ಸರದಿ
ಚಂಡಿಘರ್, ಜೂನ್ 20: ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳು ರೈತರ ಬೆಳೆ ಸಾಲ ಮನ್ನಾಕ್ಕೆ ಅಸ್ತು ಎಂದಿರುವ ಬೆನ್ನಲ್ಲೇ ಪಂಜಾಬ್ ಸರ್ಕಾರ ಸಹ ರೈತರ ಸಾಲಮನ್ನಾಕ್ಕೆ ಮುಂದಾಗಿದೆ.
5 ಎಕರೆ ಗಿಂತ ಕಡಿಮೆ ಜಮೀನು ಹೊಂದಿದ ರೈತರ 2 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಜೂನ್ 19 ರಂದು ಪಂಜಾಬ್ ಮುಖ್ಯಮಂತ್ರಿ ಕ್ಯಾ. ಅಮರೀಂದರ್ ಸಿಂಗ್ ಘೋಷಿಸುತ್ತಿದ್ದಂತೆಯೇ ಪಂಜಾಬಿನಾದ್ಯಂತ ರೈತರ ಸಂತಸ ಮುಗಿಲುಮುಟ್ಟಿದೆ.

ಆದರೆ ಈ ಸಾಲಮನ್ನಾದಿಂದ ಪಂಜಾಬ್ ಸರ್ಕಾರದ ಮೇಲೆ 24,000 ಕೋಟಿ ರೂ. ಹೊರೆಬೀಳಲಿದೆ.
ನಮ್ಮ ರಾಜ್ಯದಲ್ಲಿ ಹೆಚ್ಚುತ್ತಿರುವ ರೈತರ ಆತ್ಮಹತ್ಯೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications