ರೈತರ ಕುರಿತು ಮಾತನಾಡಲು ರಾಜ್ಯಕ್ಕೆ ಮೋದಿ ಆಗಮನ
ದಾವಣಗೆರೆ, ಫೆಬ್ರವರಿ 27: ನಗರದ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿರುವ 'ರೈತ ಸಮಾವೇಶ'ದಲ್ಲಿ ಪಾಲ್ಗೊಳ್ಳಲು ಮೋದಿ ರಾಜ್ಯಕ್ಕೆ ಆಗಮಿಸಿದ್ದಾರೆ.
ಭಾರತ-ಕೊರಿಯಾ ನಡುವಿನ ಮುಖ್ಯ ಸಭೆಯನ್ನು ಮುಗಿಸಿದ ಮೋದಿ ಅವರು ವಿಶೇಷ ವಿಮಾನದಲ್ಲಿ ಹುಬ್ಬಳಿಗೆ ಆಗಮಿಸಿದರು. ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿ ಅವರನ್ನು ಜಿಲ್ಲಾಧಿಕಾರಿ, ಹುಬ್ಬಳಿಯ ಮೇಯರ್, ಪೊಲೀಸ್ ಆಯುಕ್ತರು, ಮತ್ತು ಹಲವು ಸ್ಥಳೀಯ ಪ್ರಮುಖ ಅಧಿಕಾರಿಗಳು ಮೋದಿ ಅವರನ್ನು ಸ್ವಾಗತಿಸಿದರು.

ಮೋದಿ ಅವರಿಗೆ ಹೂವು ಮತ್ತು ಪುಸ್ತಕಗಳನ್ನು ನೀಡಿ ಸ್ವಾಗತಿಸಲಾಯಿತು. ನಂತರ ಮೋದಿ ಅವರು ಮೂರು ವಿಶೇಷ ಹೆಲಿಕಾಪ್ಟರ್ಗಳಲ್ಲಿ ದಾವಣಗೆರೆಯತ್ತ ತೆರಳಿದರು.
ದಾವಣಗೆರೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ರೈತರು ಹಾಜರಾಗಿದ್ದು, ಮೋದಿ ಅವರು ಕೆಲವೇ ನಿಮಿಷದಲ್ಲಿ ವೇದಿಕೆ ಏರಲಿದ್ದಾರೆ.












Click it and Unblock the Notifications