ಮೈಸೂರಿನಲ್ಲಿ 'ಭಾನುವಾರ ಸಂತೆ' ಕಟ್ಟಡ ಉದ್ಘಾಟಿಸಿದ ಸಿಎಂ
ಮೈಸೂರು, ಜುಲೈ 16: ಶನಿವಾರ ಮೈಸೂರು ನಗರದ ವಿಜಯನಗರದಲ್ಲಿರುವ ಸಂತೆಗೆ ತರಕಾರಿ ಕೊಳ್ಳಲು ಗಣ್ಯ ಅತಿಥಿಗಳು ಬಂದಿದ್ದರು. ಅತಿಥಿಗಳನ್ನು ಕಂಡು ನಿಬ್ಬೆರಗಾಗುವ ಸರದಿ ವ್ಯಾಪಾರಸ್ಥರದಾಗಿತ್ತು. ಇದೇನಪ್ಪಾ ಇವ್ರು ಇಲ್ಲಿ ಎಂದುಕೊಳ್ಳುತ್ತಿರುವಾಗಲೇ 'ಎಲ್ಲಿ ಆ ಸೌತೆ ಕಾಯಿ ಕೊಡಿ, ರೇಟು ಎಷ್ಟು?' ಎಂದರು. ಹಾಗೆ ಕೇಳಿದವರು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ.
ಮೈಸೂರು ನಗರದ ಎಪಿಎಂಸಿ ಆವರಣದಲ್ಲಿ 'ಭಾನುವಾರ ಸಂತೆ' ಕಟ್ಟಡ, ಕ್ಲೀನಿಂಗ್, ಪ್ಯಾಕಿಂಗ್ ಘಟಕ ಉದ್ಘಾಟನೆ ಮುಖ್ಯಮಂತ್ರಿಗಳು ಶನಿವಾರ ನೆರವೇರಿಸಿದರು.

ನಂತರ ಮುಖ್ಯಮಂತ್ರಿಗಳು ಸಂತೆಯ ಆವರಣಕ್ಕೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದರು. ನಂತರ ಮೈಸೂರು ನಗರದ ಹಿನಕಲ್ ಸಮೀಪ ಉದ್ಘಾಟನಾ ಕಾರ್ಯಕ್ರಮ ನಡೆಯಿತು.













Click it and Unblock the Notifications