ಮೇ 5ರಿಂದ ಮಾವು-ಹಲಸು ಮೇಳ, ಲಾಲ್ ಬಾಗ್ ಗೆ ಬಂದು ಖುಷಿಯಿಂದ ತಿನ್ನಿ
ಮೇ 5ರಂದು ಬೆಂಗಳೂರು ಲಾಲ್ ಬಾಗ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾವು-ಹಲಸು ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಕಡಿಮೆ ಬೆಲೆಗೆ ಒಳ್ಳೆ ಹಣ್ಣ ಖರೀದಿಸಲು ಬೆಂಗಳೂರಿಗರಿಗೆ ಇದಕ್ಕಿಂತ ಅವಕಾಶ ಬೇಕಾ?
ಬೆಂಗಳೂರು, ಮೇ 3: ಇದೇ ತಿಂಗಳ 5ರಂದು ಲಾಲ್ ಬಾಗ್ ನಲ್ಲಿ ಹಲಸು-ಮಾವು ಮೇಳಕ್ಕೆ ಚಾಲನೆ ದೊರೆಯಲಿದೆ. ಮೇ 5ರಿಂದ 24ರವರೆಗೆ ಅಂದರೆ ಇಪ್ಪತ್ತು ದಿನಗಳ ಕಾಲ ಬೆಳಗ್ಗೆ 8ರಿಂದ ರಾತ್ರಿ 7ರವರೆಗೆ ನಡೆಯುವ ಈ ಮೇಳಕ್ಕೆ ಮೇ 5ರ ಶುಕ್ರವಾರ ಮಧ್ಯಾಹ್ನ 12.05ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಾಲ್ ಬಾಗ್ ನಲ್ಲಿ ಚಾಲನೆ ನೀಡಲಿದ್ದಾರೆ.
ಶಾಸಕ ಆರ್.ವಿ,ದೇವರಾಜ್, ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಮತ್ತಿತರರು ಹಾಜರಿರುತ್ತಾರೆ. ಈ ಮೇಳದ ವಿಶೇಷ ಏನು ಅಂದರೆ ರಾಸಯನಿಕ ಬಳಸದೆ ಬೆಳೆದ ಮಾವಿನ ಹಣ್ಣನ್ನು ಖರೀದಿಸಬಹುದು. ರೈತರೇ ನೇರವಾಗಿ ಮಾವಿನ ಹಣ್ಣನ್ನು ಮಾರಾಟ ಮಾಡುತ್ತಾರೆ. ಅದಕ್ಕೂ ಮುನ್ನ ಅವುಗಳೆಲ್ಲದರ ಪರೀಕ್ಷೆ ಮಾಡಲಾಗುತ್ತದೆ.[ಡಿಜಿಟಲ್ ಸ್ಪರ್ಷದೊಂದಿಗೆ ಹಾಪ್ಕಾಮ್ಸ್ ಮಾವು-ಹಲಸು ಮೇಳ ಆರಂಭ]

ಅವುಗಳ ಬೆಲೆ ನಿಗದಿಗಾಗಿಯೇ ತಜ್ಞರದೊಂದು ಸಮಿತಿ ಮಾಡಿದ್ದು, ಅಯಾ ತಳಿಯ ಹಣ್ಣಿನ ಬೆಲೆಯನ್ನು ಆ ಸಮಿತಿಯೇ ನಿರ್ಧರಿಸುತ್ತದೆ. ರಸಪುರಿ, ಬಾದಾಮಿ, ಸಕ್ಕರೆಗುತ್ತಿ, ಬೇನಿಶಾ, ಮಲ್ಲಿಕಾ, ಬಂಗನಪಲ್ಲಿ, ರಶೇರಿ..ಇತರ ತಳಿಗಳ ಮಾವನ್ನು ಸವಿಯಬಹುದು. ಇದರ ಜತೆ ಹತ್ತರಿಂದ ಹನ್ನೆರಡು ತಳಿಯ ಹಲಸನ್ನು ಕೂಡ ರುಚಿ ನೋಡಬಹುದು.
ಈ ಸಲ ಲಾಲ್ ಬಾಗ್ ನಲ್ಲಿ ಮೇಳಕ್ಕೆ ಚಾಲನೆ ಸಿಕ್ಕರೂ ಮೊದಲ ಬಾರಿಗೆ ಬೆಂಗಳೂರಿನ ವಿವಿಧೆಡೆ ರೈತರು ಮಾವನ್ನು ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿದೆ. ನಾಯಂಡಹಳ್ಳಿ, ವಿವೇಕಾನಂದ, ಎಂಜಿ ರಸ್ತೆ, ಕೆಂಪೇಗೌಡ ಬಸ್ ನಿಲ್ದಾಣ, ಶಾಂತಿನಗರ, ಜಯನಗರ ಮೆಟ್ರೋ ನಿಲ್ದಾಣಗಳಲ್ಲಿ, ಇಂದಿರಾನಗರ, ಸಹಕಾರ ನಗರದಲ್ಲಿ ಕೂಡ ಮಾರಾಟ ವ್ಯವಸ್ಥೆ ಮಾಡಲಾಗಿದೆ.[ಮಾರುಕಟ್ಟೆಗೆ ಹಣ್ಣುಗಳ ರಾಜ: ತಿನ್ನುವ ಮುನ್ನ ಇರಲಿ ಎಚ್ಚರ!]

ಅಷ್ಟೇ ಅಲ್ಲ, ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ಮಾವಿನಹಣ್ಣು ಮಾರಾಟ ವ್ಯವಸ್ಥೆ ಇದೆ. ಇನ್ನು ಮೇ 6ಕ್ಕೆ ರಾಮನಗರ, ಮಂಡ್ಯದಲ್ಲಿ, ಕೊಪ್ಪಳದಲ್ಲಿ ಮೇ 9ರಂದು, ಧಾರವಾಡದಲ್ಲಿ ಮೇ 5ರಂದು ಮಾರಾಟ ಮೇಳ ನಡೆಯಲಿದೆ. ಈ ವರ್ಷ ಮಾವು ಮೇಳಕ್ಕಾಗಿ 236 ರೈತರು ಅರ್ಜಿ ಸಲ್ಲಿಸಿದರು ಎಂಬ ಮಾಹಿತಿ ನೀಡಲಾಯಿತು.
ಹಲಸಿಗೆ ವಾಣಿಜ್ಯ ಸ್ಥಾನ ಸಿಗಬೇಕು ಎಂದು ಮೌಲ್ಯವರ್ಧನೆಯನ್ನು ಪ್ರೋತ್ಸಾಹಿಸಲು ಪ್ರೋತ್ಸಾಹಧನ ನೀಡಲಾಗುವುದು ಎಂದು ತಿಳಿಸಲಾಯಿತು. ಮೌಲ್ಯವರ್ಧನೆ ಅಂದರೆ ಹಲಸಿನ ಚಿಪ್ಸ್, ಜಾಮ್ ಮತ್ತಿತರ ಪದಾರ್ಥಗಳನ್ನು ಮಾಡುವವರಿಗೆ ಪ್ರೋತ್ಸಾಹ ನೀಡಲು ಈ ಯೋಜನೆ ಇದೆ.[10 ಸಾವಿರ ಟನ್ ದಾಟಲಿದೆ ಕರ್ನಾಟಕದ ಮಾವು ರಫ್ತು]

ಮುಂದಿನ ದಿನಗಳಲ್ಲಿ ಜಿಲ್ಲಾ ಕೇಂದ್ರಗಳಲ್ಲೂ ಮಾವು-ಹಲಸು ಮಾರಾಟ ಆಯೋಜಿಸುವ ಆಲೋಚನೆ ಇದೆ ಎಂದು ಮಾಹಿತಿ ನೀಡಲಾಯಿತು. ಮುಂದಿನ ಐದು ವರ್ಷದಲ್ಲಿ ಹಲಸು ಮಾರಾಟಕ್ಕೆ ಒತ್ತು ನೀಡಲಾಗುವುದು. ಮಾವು ಮಾರಾಟದ ಜೊತೆಗೆ ಹಲಸು ಪ್ರೋತ್ಸಾಹಕ್ಕಾಗಿ ಮಾವು ಅಭಿವೃದ್ಧಿ ನಿಗಮಕ್ಕೆ ಸೇರಿಸುವ ಆಲೋಚನೆ ಇದೆ ಎಂದು ತಿಳಿಸಿದರು.
ಹಲಸು ಬೆಳೆಯಲು ಹಾಗೂ ಅದಕ್ಕೆ ವಾಣಿಜ್ಯ ಸ್ಥಾನ ಸಿಗಲು ಶ್ರಮಿಸುತ್ತಿರುವ ಶ್ರೀಪಡ್ರೆ ಅವರ ಶ್ರಮದ ಬಗ್ಗೆ ಪ್ರಸ್ತಾಪವಾಯಿತು. ಈ ಸಂದರ್ಭದಲ್ಲಿ ಮಾವು ಅಭಿವೃದ್ಧಿ ಹಾಗೂ ಮಾರುಕಟ್ಟೆ ನಿಗಮದ ಅಧ್ಯಕ್ಷ ಎಲ್.ಗೋಪಾಲಕೃಷ್ಣ ಅವರು ಜತೆ ಒನ್ಇಂಡಿಯಾ ಕನ್ನಡ ನಡೆಸಿದ ಪ್ರಶ್ನೋತ್ತರ ವಿವರ ಇಂತಿದೆ.[ಮಾವಿನ ತೋಟದಲ್ಲಿ ಬೇಕೆಂದ ಹಣ್ಣು ಖರೀದಿಸಬೇಕಾ, ಹತ್ತಿ ಬಸ್ಸು..]

* ನಮ್ಮ ದೇಶದ ಮಾವಿನಹಣ್ಣುಗಳಿಗೆ ವಿದೇಶಗಳಲ್ಲಿ ಎಲ್ಲೆಲ್ಲಿ ಬೇಡಿಕೆ ಇದೆ?
ಅಮೆರಿಕ, ಯುರೋಪ್, ಸಿಂಗಾಪುರ್, ಆಸ್ಟ್ರೇಲಿಯಾ, ಮಲೇಶಿಯಾ ಮತ್ತಿತರ ಕಡೆ ಭಾರತದ ಮಾವಿಗೆ ಬೇಡಿಕೆ ಇದೆ.
* ಈ ಸಲ ಎಷ್ಟು ಪ್ರಮಾಣದ ಹಣ್ಣು ಮಾರಾಟ ಆಗಬಹುದು?
1500 ಟನ್ ಮಾರಾಟ ಆಗಬಹುದು

* ಹಾಗಿದ್ದರೆ ಎಷ್ಟು ಹಣದ ವ್ಯಾಪಾರ ನಡೆಯಬಹುದು?
ಬೇರೆ ಜಾತಿಯ ಹಣ್ಣುಗಳು ಇರುತ್ತವೆ. ಒಂದೊಂದು ರೀತಿಯ ಬೆಲೆ ಇರುತ್ತದೆ. ಆದ್ದರಿಂದ ಇಷ್ಟು ಹಣ ಅಂತ ಹೇಳೋಕ್ಕಾಗಲ್ಲ
* ನಮ್ಮ ದೇಶದ ಮಾವಿನ ರಫ್ತು ಹೇಗಿದೆ?
ರಫ್ತು ಮಾಡುವುದಕ್ಕೆ ಗ್ಯಾಪ್ ಸರ್ಟಿಫಿಕೇಟ್ ಪಡೆದಿರಬೇಕು. ಕೇಂದ್ರ ಸರಕಾರದ ರಫ್ತು ಮಾಡುವ ರೈತರ ಪಟ್ಟಿಯಲ್ಲಿ ಕರ್ನಾಟಕ 9900 ಮಂದಿ ಇದ್ದಾರೆ.

*ರಫ್ತು ಉತ್ತೇಜನಕ್ಕಾಗಿ ಮಂಡಳಿ ಏನು ಮಾಡಿದೆ?
ಮಾವು ಬೆಳೆಗಾರರನ್ನು ಪ್ರೋತ್ಸಾಹಿಸಲು ಮಂಡಳಿ ಪ್ರೋತ್ಸಾಹ ಧನ ನೀಡುತ್ತಿದೆ. ಚಿಕ್ಕಬಳ್ಳಾಪುರ-ಕೋಲಾರದ ಹಲವು ರೈತರು ಇದರ ಅನುಕೂಲ ಪಡೆದಿದ್ದಾರೆ.

*ಮಾವು ಅಭಿವೃದ್ಧಿ ಮಂಡಳಿ ಬಗ್ಗೆ ಸರಕಾರದ ಧೋರಣೆ ಹೇಗಿದೆ?
ಈ ಬಾರಿ ಬಜೆಟ್ ನಲ್ಲಿ 45 ಕೋಟಿ ಮೀಸಲಿಡಲಾಗಿದೆ. ಇದರ ಜತೆಗೆ ತೋಟಗಾರಿಕೆ ಇಲಾಖೆಯಿಂದಲೂ ಹಣಕಾಸಿನ ನೆರವು ದೊರೆಯುತ್ತದೆ. ಕೇಂದ್ರ ಸರಕಾರದಿಂದಲೂ ಸಹಾಯ ದೊರೆಯುತ್ತದೆ.
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು












Click it and Unblock the Notifications