ಅಡಿಕೆ ಬೆಳೆಗೆ ರೋಗ ಬಾಧೆ, ಕೇಂದ್ರದ ಗಮನ ಸೆಳೆಯಲು ನಿಯೋಗ: ಆರಗ ಜ್ಞಾನೇಂದ್ರ
ಬೆಂಗಳೂರು, ಅಕ್ಟೋಬರ್ 19: ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕರಾವಳಿ ಭಾಗದಲ್ಲಿ, ರೈತ ಸಮುದಾಯದ ಜೀವನಾಡಿಯದ, ಅಡಿಕೆ ಬೆಳೆ, ಎಲೆ ಚುಕ್ಕೆ ರೋಗದಿಂದ, ನಲುಗಿದ್ದು, ನಿಯಂತ್ರಣ ಬಗ್ಗೆ ಕೇಂದ್ರ ಸರಕಾರದ ಗಮನ ಸೆಳೆಯಲು, ದೆಹಲಿಗೆ ನಿಯೋಗವೊಂದನ್ನು, ಕೊಂಡೊಯ್ಯಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ರವರು ತಿಳಿಸಿದ್ದಾರೆ.
ಸುದ್ದಿಗಾರ ರೊಂದಿಗೆ, ಮಾತನಾಡಿದ ಸಚಿವರು, ಎಲೆ ಚುಕ್ಕೆ ರೋಗವು, ಇಡೀ ಮಲೆನಾಡು ಭಾಗದ ಅಡಿಕೆ ತೋಟಗಳಲ್ಲಿ ವ್ಯಾಪಕವಾಗಿ ಹಬ್ಬಿದ್ದು, ಅಡಿಕೆ ಬೆಳೆ ಸಂಪೂರ್ಣವಾಗಿ ನಾಶವಾಗುವ ಅಪಾಯಕ್ಕೆ ತುತ್ತಾಗಿದೆ.
ಅಡಿಕೆ ಬೆಳೆಯಲ್ಲಿ ಎಲೆ ಚುಕ್ಕೆ ರೋಗ; ಹತೋಟಿ ಕ್ರಮಗಳ ವಿವರಗಳು
ಅಡಿಕೆ ಬೆಳೆಯನ್ನು ಉಳಿಸಿ, ಬೆಳೆಗಾರರ ರಕ್ಷಣೆಗೆ ಬರಬೇಕಾದ ತುರ್ತು ಅಗತ್ಯವಿದ್ದು, ತಕ್ಷಣ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹಾಗೂ ಇತರರನ್ನು ಭೇಟಿಯಾಗಿ, ಚರ್ಚಿಸಲಾಗುವುದು, ಎಂದು ತಿಳಿಸಿದರು.
ಎಲೆ ಚುಕ್ಕೆ ರೋಗದ ನಿಯಂತ್ರಣ ಬಗ್ಗೆ, ಸಂಶೋಧನೆ, ರೈತರಿಗೆ ಪರಿಹಾರ ಹಾಗೂ ಇತರ ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ಬಗ್ಗೆಯೂ, ಚರ್ಚಿಸಲಾಗುವುದು, ಎಂದು ಸಚಿವರು ತಿಳಿಸಿದರು.
ಸಂಸದ ರಾಘವೇಂದ್ರ, ಶಾಸಕರಾದ ಹರತಾಳು ಹಾಲಪ್ಪ ಹಾಗೂ ಇತರ ಗಣ್ಯರು, ರೋಗ ಪೀಡಿತ ಅಡಿಕೆ ತೋಟಗಳಿಗೆ, ತೀರ್ಥಹಳ್ಳಿ, ಸಾಗರ ಹಾಗೂ ಹೊಸನಗರ ತಾಲೂಕಿನಲ್ಲಿ, ಭೇಟಿ ನೀಡಿ, ರೈತರು, ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಹಾಗೂ ಇತರರ ಜತೆ, ಸಮಾಲೋಚನೆ, ಸಂವಾದ ನಡೆಸಿದ್ದೇವೆ, ಎಂದು ಸಚಿವರು ಹೇಳಿದರು. ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ, ಸಾಗರ ಶಾಸಕ ಹರತಾಳು ಹಾಲಪ್ಪ, ಸೊರಬ ಮಂಜಪ್ಪ ನವರು ಹಾಗೂ ಇತರರು ನಿಯೋಗದಲ್ಲಿ ಭಾಗವಹಿಸುತ್ತಾರೆ ಎಂದು ಹೇಳಿದರು.
ಭಾರತಕ್ಕೆ ಭೂತಾನ್ ದೇಶದಿಂದ ಅಡಿಕೆ ಆಮದು: ಆತಂಕ ಬೇಡ ಎಂದ ಆರಗ ಜ್ಞಾನೇಂದ್ರ
ಎಲೆ
ಚುಕ್ಕೆ
ರೋಗ
ಎಲೆ
ಚುಕ್ಕೆ
ರೋಗದ
ಲಕ್ಷಣಗಳು
ಎಲೆ
ಚುಕ್ಕೆ
ರೋಗ
ಬಾಧಿತ
ಮರಗಳ
ಕೆಳಗಿನ
ಸೋಗೆಗಳ
ಮೇಲ್ಭಾಗದಲ್ಲಿ
ಹಳದಿ
ಮತ್ತು
ಕಪ್ಪು
ಬಣ್ಣದ
ಚುಕ್ಕೆಗಳು
ಕಾಣಿಸುತ್ತವೆ.
ಮುಂದುವರೆದು
ಈ
ಚುಕ್ಕೆಗಳು
ಶೀಘ್ರವಾಗಿ
ಒಂದಕ್ಕೊಂದು
ಕೂಡಿಕೊಂಡು
ಪೂರ್ತಿ
ಹೆಡೆಗಳನ್ನು
ಆವರಿಸುತ್ತವೆ,
ನಂತರ
ಹೆಡೆಗಳು
ಒಣಗಲಾರಂಭಿಸುತ್ತವೆ.
ಇಂತಹ
ಒಣಗಿದ
ಎಲ್ಲಾ
ಹೆಡೆಗಳು
ಜೋತು
ಬಿದ್ದು
ಮರ
ಶಕ್ತಿಕಳೆದುಕೊಂಡು
ಇಳುವರಿ
ಕುಂಠಿತಗೊಳ್ಳುತ್ತದೆ.
ರಾಜ್ಯ
ಅಡಿಕೆ
ಟಾಸ್ಕ್
ಫೋರ್ಸ್
ಅಧ್ಯಕ್ಷರೂ
ಆಗಿರುವ
ಆರಗ
ಜ್ಞಾನೇಂದ್ರ
ಅಡಿಕೆ
ಬೆಳೆಯಲ್ಲಿ
ಎಲೆ
ಚುಕ್ಕೆ
ರೋಗ
ಕಾಣಿಸಿಕೊಂಡ
ಬಗ್ಗೆ
ಸಭೆ
ನಡೆಸಿದರು.
ರೋಗದ
ನಿರ್ವಹಣೆ
ಕುರಿತು
ಚರ್ಚೆ
ನಡೆಸಿದ್ದಾರೆ.
ಈ ರೋಗವು ಕೊಲ್ಲೆಟೋಟ್ರೈಕಮ್ ಗ್ಲೀಯೋಸ್ಪೊರೈಡ್ಸ್ ಮತ್ತು ಫಿಲ್ಲೊಸ್ಟಿಕ್ಟ ಅರಕೆ ಎಂಬ ಎರಡು ಶಿಲೀಂಧ್ರಗಳಿಂದ ಉಂಟಾಗುತ್ತದೆ. ಶಿಲೀಂಧ್ರವು ಬಿದ್ದ ಗರಿಗಳಲ್ಲಿ ವಾಸಿಸುವುದು, ಮಳೆಹನಿಗಳು ಚಿಮ್ಮುವುವಿಕೆಯಿಂದ ಶಿಲೀಂಧ್ರದ ಕಣಗಳು ಗಾಳಿಯಲ್ಲಿ ಸೇರಿ ಗರಿಗಳನ್ನು ತಲುಪುತ್ತವೆ. ಹಾಗೆಯೇ ತೇವಭರಿತ ಬಿಸಿಲಿನ ವಾತಾವರಣ, ಕಡಿಮೆ ಉಷ್ಣಾಂಶ (180 ರಿಂದ 240 ಸೆ) ಮತ್ತು ಹೆಚ್ಚಿನ ಆದ್ರತೆ (80 ರಿಂದ 90%) ಈ ರೋಗದ ತೀವ್ರತೆ ಮತ್ತು ಹರಡುವಿಕೆಗೆ ಪೂರಕವಾದ ಅಂಶಗಳಾಗಿರುತ್ತವೆ. ರೋಗವು ವರ್ಷ ಪೂರ್ತಿ ಕಂಡುಬಂದರೂ ಸಹ ಮಾರ್ಚ್ ನಿಂದ ಸೆಪ್ಟಂಬರ್ ತಿಂಗಳ ವರೆಗೂ ಹೆಚ್ಚಾಗಿ ಬಾಧೆಯನ್ನು ಉಂಟುಮಾಡುತ್ತದೆ.
ರೋಗದ
ನಿರ್ವಹಣೆ
ಹೇಗೆ?
ರೋಗ
ಬಾಧಿತ
ಒಣಗಿದ
ಗರಿಗಳನ್ನು
ಕತ್ತರಿಸಿ
ತೆಗೆದು
ನಾಶಪಡಿಸುವುದರಿಂದ
ರೋಗ
ಹರಡುವಿಕೆಯನ್ನು
ಪರಿಣಾಮಕಾರಿಯಾಗಿ
ತಡೆಯಬಹುದು.
ಬಿಸಿಲು
ಬೀಳುವಂತೆ
ಮಾಡಲು
ಅಂತರ
ಬೆಳೆಗಳ
ಅಥವಾ
ಕಾಡು
ಮರಗಳ
ಹೆಚ್ಚುವರಿ
ರೆಂಬೆಗಳನ್ನು
ಕತ್ತರಿಸಿ
ತೆಗೆಯುವುದು.
ರೋಗ
ಲಕ್ಷಣದ
ಪ್ರಾರಂಭದಲ್ಲಿ
ಮುಂಜಾಗ್ರತವಾಗಿ
ಶಿಲೀಂಧ್ರನಾಶಕಗಳಾದ
ಮ್ಯಾಂಕೋಜೆಬ್
(2.5
ಗ್ರಾಂ)
ಅಥವಾ
ಸಾಫ್
(ಮ್ಯಾಂಕೋಜೆಂಬ್
ಶೇ
63
ಕಾರ್ಬೆನ್ಡೈಜೀಮ್
ಶೇ
12)
2
ಗ್ರಾಂ
ಪ್ರತೀ
ಲೀಟರ್
ನೀರಿನಲ್ಲಿ
ಬೆರೆಸಿ
ಸಿಂಪಡಿಸಬೇಕು
ಅಥವಾ
ಹೆಕ್ಸಕೊನಜೋಲ್
ಶೇ
5
ಎಸ್.ಸಿ
ಅಥವಾ
ಪ್ರೊಪಿಕೊನಜೋಲ್
ಶೇ
25
ಇ.ಸಿ
ಅಂತರವ್ಯಾಪಿ
ಶಿಲೀಂಧ್ರನಾಶಕಗಳನ್ನು
1
ಮಿ.ಲೀ.
ಪ್ರತೀ
ಲೀಟರ್
ನೀರಿನಲ್ಲಿ
ಬೆರೆಸಿ
ಅಂಟು
ದ್ರಾವಣದ
(1
ಮಿ.ಲೀ)
ಜೊತೆಗೆ
ಸಿಂಪಡಿಸಬೇಕು.
ದೇಶಕ್ಕೆ ಭೂತಾನ್ ಅಡಿಕೆ ಆಮದಿಗೆ ಆಂತಕ ವ್ಯಕ್ತಪಡಿಸಿದ ಕೋಟೆ ನಾಡಿನ ರೈತರು!
ಆತಂಕ ಬೇಡ: ವಿದೇಶಿ ಹಸಿರು ಅಡಿಕೆಯಿಂದ ಕರ್ನಾಟಕದ ಅಡಿಕೆ ಉತ್ಪನ್ನದಲ್ಲಾಗಲಿ, ಮಾರುಕಟ್ಟೆಯಲ್ಲಾಗಲಿ ಯಾವುದೇ ಪರಿಣಾಮ ಬೀರದಂತೆ ನೋಡಿಕೊಳ್ಳುವ ಸಲುವಾಗಿ ಕೇಂದ್ರ ಮನವರಿಕೆ ಮಾಡಿಕೊಡಲಾಗುವುದು. ಈ ಸಂಬಂಧ ಲೋಕಸಭಾ ಸದಸ್ಯರ ನೇತೃತ್ವದಲ್ಲಿ ನಿಯೋಗ ಒಂದನ್ನು ದೆಹಲಿಗೆ ಕರೆದೊಯ್ಯಲಾಗುವುದು ಎಂದು ಅವರು ಭರವಸೆ ನೀಡಿದರು.
ಕೇಂದ್ರ ಸರ್ಕಾರ ವಾರ್ಷಿಕವಾಗಿ ಭೂತಾನ್ನಿಂದ ಕನಿಷ್ಠ ಆಮದು ಬೆಲೆ (ಎಂಐಪಿ) ಷರತ್ತು ಇಲ್ಲದೆಯೇ 17,000 ಟನ್ ಹಸಿರು ಅಡಿಕೆ ಆಮದು ಮಾಡಿಕೊಳ್ಳಬಹುದು ಎಂದು ಅನುಮತಿ ನೀಡಿದೆ. ಇದರ ಬೆನ್ನಲ್ಲೆ ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯದಿಂದ ನೋಂದಣಿ ಪ್ರಮಾಣ ಪತ್ರ ಪಡೆದವರು ಆಮದು ಮಾಡಿಕೊಳ್ಳಲು ಸಜ್ಜಾಗಲಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ ಅಡಿಕೆ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿರುವ ಕರ್ನಾಟಕದ ಬೆಳೆಗಾರರು, ಮಾರುಕಟ್ಟೆ ವ್ಯಾಪಾರಿಗಳು ಆತಂಕಗೊಂಡಿದ್ದರು ಎನ್ನಲಾಗಿದೆ.