ಬರ ತಾಲೂಕುಗಳ ಪಟ್ಟಿಗೆ ಸೇರಿದ ಬೆಂಗಳೂರು ಜಿಲ್ಲೆ

ಕೇವಲ ಐದು ಜಿಲ್ಲೆಗಳಲ್ಲಿ ಮಾತ್ರ ವ್ಯಾಪಕವಾಗಿ ಉತ್ತಮ ಮಳೆಯಾಗಿದೆ. 14 ಜಿಲ್ಲೆಗಳಲ್ಲಿ ಎಲ್ಲೋ ಒಂಚೂರು ಮಳೆಯಾಗಿದೆ. 7 ಜಿಲ್ಲೆಗಳಲ್ಲಂತೂ ಮಳೆಯ ಸೂಚನೆಯೇ ಇಲ್ಲ. ಹೊಸ ಪಟ್ಟಿಯಂತೆ ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಬೆಂಗಳೂರು ಹಾಗೂ ಬೆಳಗಾವಿ ಜಿಲ್ಲೆಗಳ ತಾಲೂಕುಗಳು ಸೇರಿದೆ.
19 ತಾಲೂಕುಗಳ ಹೆಸರು ಈ ರೀತಿಯಾಗಿದೆ: ಆನೇಕಲ್, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ, ಹೊಸಕೋಟೆ, ಮಾಲೂರು, ನೆಲಮಂಗಲ, ಚನ್ನಗಿರಿ, ಹರಿಹರ, ಎಚ್ ಡಿ ಕೋಟೆ, ರಾಮನಗರ, ಹುಣಸೂರು, ಭದ್ರಾವತಿ, ಶಿವಮೊಗ್ಗ, ಗೋಕಾಕ, ತರೀಕೆರೆ, ಶಿಕಾರಿಪುರ, ಚನ್ನಗಿರಿ ಹಾಗೂ ಆಲೂರು.
ನೈಋತ್ಯ ಮುಂಗಾರು ಮಾರುತಗಳು ಐದಾರು ಜಿಲ್ಲೆಗಳಲ್ಲಿ ಮಳೆ ತಂದರೂ ಉಳಿದ 25 ಜಿಲ್ಲೆಗಳಲ್ಲಿ ತೀರಾ ಕ್ಷೀಣವಾಗಿದೆ. 17 ಜಿಲ್ಲೆಗಳಲ್ಲಿ ಕಳೆದ ಎರಡು ಮೂರು ದಿನಗಳಲ್ಲಿ ಅಲ್ಲಲ್ಲಿ ಮಳೆ, ತುಂತುರು ಹನಿ ಪ್ರೋಕ್ಷಣೆಯಾಗಿದ್ದು ಬಿಟ್ಟರೆ ಒಣ ಹವೆ ಮುಂದುವರೆದಿದೆ.
ಕರ್ನಾಟಕದ 175 ತಾಲೂಕುಗಳ ಪೈಕಿ 142 ತಾಲೂಕುಗಳು ಬರಪೀಡಿತ ಎಂದು ಸರ್ಕಾರ ಅಧಿಕೃತವಾಗಿ ಘೋಷಿಸಿದೆ. ಇತ್ತೀಚೆಗೆ ಭೀಕರ ಬರಗಾಲದಿಂದ ತತ್ತರಿಸಿರುವ ರಾಜ್ಯದ ಅನ್ನದಾತರ ನೆರವಾಗಲು ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ರೈತರ ಸಾಲ ಮನ್ನಾ ಮಾಡುವ ನಿರ್ಧಾರ ಕೈಗೊಂಡಿತ್ತು. 16 ಲಕ್ಷ ರೈತರು ಪಡೆದಿರುವ 3,500 ಕೋಟಿ ರು. ಸಾಲವನ್ನು ಬಡ್ಡಿಸಮೇತ ಮನ್ನಾ ಮಾಡುವುದಾಗಿ ಹೇಳಿ, ರೈತರಲ್ಲಿ ಮತ್ತೆ ಉಸಿರು ತುಂಬಿತ್ತು.












Click it and Unblock the Notifications