ಸಾಲಮನ್ನಾ ಸೇರಿದಂತೆ ಸಂಪುಟದ ಪ್ರಮುಖ ನಿರ್ಣಯ
1ನೇ ಆಗಸ್ಟ್ 2011ರಿಂದ 25ನೇ ಜುಲೈ 2012ರವರೆಗೆ ಸಾಲ ಪಡೆದವರಿಗೆ ಈ ಸೌಲಭ್ಯ ಅನ್ವಯಿಸಲಿದ್ದು, ಇದಕ್ಕಾಗಿ 3,500 ಕೋಟಿ ರೂಪಾಯಿ ಹಣ ಬೊಕ್ಕಸಕ್ಕೆ ನಷ್ಟವಾಗಲಿದೆ ಎಂದು ಅವರು ತಿಳಿಸಿದರು. ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಇತರ ಕೆಲವು ಪ್ರಮುಖ ನಿರ್ಣಯಗಳು ಇಂತಿವೆ:
* ಸುಮಾರು 2160 ಕೋಟಿ ಅಂದಾಜು ವೆಚ್ಚದಲ್ಲಿ 189 ಗ್ರಾಮೀಣ ಮತ ಕ್ಷೇತ್ರಗಳಲ್ಲಿನ 30 ಕಿ.ಮೀ. ರಸ್ತೆ ಅಭಿವೃದ್ಧಿ.
* ಪ್ರೊ: ಮಾಲಿ ಮುದ್ದಣ ಸಮಿತಿ ವರದಿ ಆಧಾರದ ಮೇಲೆ 19 ಕಾನೂನು ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಲು ಒಪ್ಪಿಗೆ.
* ಸ್ವ ಬೀಜಾಭಿವೃದ್ಧಿ ಯೋಜನೆಯಡಿ ರೈತರು ತಮಗೆ ಬೇಕಾದ ಬಿತ್ತನೆ ಬೀಜ ಬೆಳೆಯಲು ಅನುಕೂಲ ಕಲ್ಪಿಸಲು 50 ಕೋಟಿ ರೂ. ಹಣವನ್ನು ಬಿಡುಗಡೆ.
* ಸುಮಾರು 442 ಆಹಾರ ನಿರೀಕ್ಷಕರು 154 ಆಹಾರ ಶಿರಸ್ತೇದಾರರಿಗೆ ಬಿಎಸ್ಎನ್ಎಲ್ ಸಿಮ್ ಕಾರ್ಡ್ ನೀಡಲು ಸಚಿವ ಸಂಪುಟ ನಿರ್ಧಾರ.
* ರಾಜ್ಯದ ಪದವಿ ಕಾಲೇಜುಗಳ ಅಭಿವೃದ್ಧಿಗಾಗಿ 300 ಕೋಟಿ ಹಣ ಬಿಡುಗಡೆಗೆ ಅನುಮೋದನೆ. ಈ ಅನುದಾನದಲ್ಲಿ 200 ಕಾಲೇಜುಗಳಲ್ಲಿ ಶೌಚಾಲಯ ನಿರ್ಮಾಣ, 80 ಪ್ರಯೋಗಾಲಯಗಳಿಗೆ ಸೌಲಭ್ಯ, 38 ಹೊಸ ಕಾಲೇಜು ಕಟ್ಟಡ ನಿರ್ಮಾಣ, ಹೆಚ್ಚುವರಿ ಕಟ್ಟಡ ನಿರ್ಮಾಣ ಕೈಗೊಳ್ಳಲಾಗುವುದು.
* ಬೆಂಗಳೂರು ಪೂರ್ವ ತಾಲ್ಲೂಕು ಕೃಷ್ಣರಾಜಪುರ ಹೋಬಳಿಯ ಕ್ಯಾಸನಹಳ್ಳಿ ಗ್ರಾಮದಲ್ಲಿ ನಿಮ್ಯಾನ್ಸ್ ಸಂಸ್ಥೆ ವಿಸ್ತರಣಕ್ಕೆ 39 ಎಕರೆ 38 ಗುಂಟೆ ಜಮೀನು ನೀಡಲು ಸಮ್ಮತಿ.
* ರಾಷ್ಟ್ರೀಯ ಭೂ ದಾಖಲೆ ಆಧುನೀಕರಣಕ್ಕೆ 100 ಕೋಟಿ ರೂ. ಹಣ ಬಿಡುಗಡೆಗೆ ನಿರ್ಧಾರ.
* ಸಚಿವ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ ಪರಿಶಿಷ್ಠಜಾತಿ, ಪರಿಶಿಷ್ಠ ಪಂಗಡಗಳು ಬ್ಯಾಕ್ಲಾಗ್ ಹುದ್ದೆ ಭರ್ತಿ ಮಾಡಲು ಕ್ಯಾಬಿನೆಟ್ ಉಪಸಮಿತಿ ರಚಿಸಲು ಒಪ್ಪಿಗೆ.
* ಗೃಹ ಮಂಡಳಿ ವತಿಯಿಂದ 53 ವಿವಿಧ ವಸತಿ ಯೋಜನೆಯಡಿ ಸುಮಾರು 7888 ಕೋಟಿ ರೂ. ವೆಚ್ಚದಲ್ಲಿ 134,471 ನಿವೇಶನ ನಿರ್ಮಾಣ 6867 ಮನೆ ನಿರ್ಮಾಣಕ್ಕೆ ನಿರ್ಧಾರ.
* ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಸುಮಾರು 945 ಲಕ್ಷ ರೂ. ವೆಚ್ಚದಲ್ಲಿ ಮುಸ್ಲಿಂ ವಸತಿ, ಶಾಲಾ ಸಂಕಿರಣ ನಿರ್ಮಾಣ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.