ಕಾರಹುಣ್ಣಿಮೆ: ಎತ್ತುಗಳಿಗೆ ಇದೇನು ಮಾಡ್ತಿದ್ದಾರೆ ನೋಡಿ!
ಶಿಗ್ಗಾಂವ್, ಜೂನ್ 14: ರೈತಾಪಿ ಜನ ಸಂತಸಗೊಂಡಿದ್ದಾರೆ. ಮುಂಗಾರು ಅಲ್ಲಲ್ಲಿ ನಿಧಾನಕ್ಕೆ ಕಾಲಿಡುತ್ತಿದೆ. ಕೃಷಿಕರು, ಅದರಲ್ಲೂ ಉತ್ತರ ಕರ್ನಾಟಕದವರು ನಿನ್ನೆಯ ವಿಶೇಷ ಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಿದ್ದಾರೆ.
ಈ ಕಾರಹುಣ್ಣಿಮೆ ಸಂಭ್ರಮದ ಕೇಂದ್ರಬಿಂದು ರೈತನ ಸಂಗಾತಿ ಎತ್ತು. ಮಳೆ ಪ್ರಾರಂಭವಾಗುವ ಹೊತ್ತಿಗೆ ಎತ್ತುಗಳನ್ನು ಪೂಜಿಸಿ ಉಳುಮೆಗೆ ಸಜ್ಜಾಗುವಂತೆ ಪ್ರೇರೇಪಿಸುವ ಹಬ್ಬ ಇದು. ಮಣ್ಣಿನ ಮಕ್ಕಳು ಈ ಕಾರಹುಣ್ಣಿಮೆಯ ದಿನ ಎತ್ತುಗಳನ್ನು ಸಿಂಗರಿಸಿ ಮೆರವಣಿಗೆ ಮಾಡಿ, ಹೊಟ್ಟೆ ತುಂಬ ಊಟ ಮಾಡಿ, ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿ ಮಳೆರಾಯ ಇಳಿಗೆ ಇಳಿಯುತ್ತಿದ್ದಂತೆಯೇ ಮತ್ತೆ ಕೆಲಸಕ್ಕೆ ಸಜ್ಜಾಗುವಲ್ಲಿ ಪ್ರೇರಣೆ ನೀಡುತ್ತದೆ.
ಇಲ್ಲಿ ಮತ್ತೋ ಒಂದು ವಿಶೇಷ ನಡೆಯುತ್ತದೆ. ಹಾವೇರಿಯ ನಿಂಗಪ್ಪ ಚವಡಿ (Ningappa Chavadi ಫೇಸ್ ಬುಕ್) ಈ ವಿಶೇಷತೆಯನ್ನು ತಮ್ಮ ಫೇಸ್ ಬುಕ್ ಗೋಡೆಯ ಮೇಲೆ ಹೀಗೆ ದಾಖಲಿಸಿದ್ದಾರೆ.

ಈ ಬಗ್ಗೆ ಪೌರಾಣಿಕ ಹಿನ್ನೆಲೆ ಎನೇ ಇರಲಿ ಕೃಷಿ ಚಟುವಟಿಕೆಗಳು ಆರಂಭವಾಗುವುದೇ ವರ್ಷಾಧಾರಣೆಯೊಂದಿಗೆ ಬರುವ ಈ ಕಾರಹುಣ್ಣಿಮೆಯ ದಿನ. ಹೊಲಗಳನ್ನು ಹಸನು ಮಾಡುವುದು, ಬಿತ್ತುವುದು ಸೇರಿದಂತೆ ಕೃಷಿ ಚಟುವಟಿಕೆಗಳು ಬಹಳ ಜೋರಾಗಿ ಆರಂಭವಾಗುತ್ತದೆ. ಆಗ ಎತ್ತುಗಳು ಬಿಡುವಿಲ್ಲದ ಕೆಲಸಕಾರ್ಯಗಳಲ್ಲಿ ತಲ್ಲೀನವಾಗುತ್ತವೆ. ಆದ್ದರಿಂದ ಅವುಗಳಿಗೆ ಶಕ್ತಿ ಬರಲೆಂದು ಕೋಳಿಮೊಟ್ಟೆಯನ್ನು ಹಾಕುತ್ತಾರೆ. ಮತ್ತು ಅರಿಶಣದ ಪುಡಿಯನ್ನು ಇವುಗಳ ನಾಲಿಗೆಗೆ ತಿಕ್ಕುವದರಿಂದ ಮೇವನ್ನು ಉತ್ತಮವಾಗಿ ಕಡಿದು ತಿನ್ನಲಿ ಎಂಬ ಸದಾಶಯವೂ ಇದೆ.
ಕಾರಹುಣ್ಣಿಮೆ ನಮಗೆಲ್ಲ ದೊಡ್ಡ ಹುಣ್ಣಮೆ. ಹಾಗಾಗಿ ಇವತ್ತು ನಮ್ಮ ಮನೆ ದೇವರು ಮೈಲಾರದ ಮೈಲಾರ ಲಿಂಗೇಶ್ವರ ಹಾಗೂ ದೇವರ ಗುಡ್ಡದ ಶ್ರೀ ಮಾಲತೇಶ (ಗುಡದಯ್ಯ) ದೇವಸ್ಥಾನಕ್ಕೆ ಹಣ್ಣು ಕಾಯಿ ಮಾಡಿಸಲೆಂದು ಜನ ಭಾರಿ ಸಂಖ್ಯೆಯೆಯಲ್ಲಿ ಸೇರುತ್ತಾರೆ. ಈ ಎರಡು ಕ್ಷೇತ್ರಗಳಿಗೆ ಹೋಗುವ ದಾರಿಯಲ್ಲಿ ಹೊನ್ನತ್ತಿ ಗ್ರಾಮದ ಶ್ರೀ ಹೊನ್ನಮ ದೇವಸ್ಥಾನಕ್ಕೆ ಹೋದಾಗ ನನ್ನ ಮೊಬೈಲಿಂದ ಕ್ಲಿಕ್ಕಿಸಿದ ಪೋಟೊವೊಂದು ಇಲ್ಲಿದೆ.

-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications