ಭೀಕರ ಬರಗಾಲದಲ್ಲೂ 'ಶ್ರಮಬಿಂದು ಸಾಗರ'ದಲ್ಲಿ ನೀರೋ ನೀರು
ಈ ಸಲದ ಭೀಕರ ಬರಗಾಲಕ್ಕೆ ಕೃಷ್ಣಾ ತೀರದ ರೈತರು ಮೊದಲೇ ಎಚ್ಚೆತ್ತುಕೊಂಡಿದ್ದರು. ತಾವೇ ಹಣ ಸಂಗ್ರಹಿಸಿ ಶ್ರಮಬಿಂದು ಸಾಗರಕ್ಕೆ ನೀರು ತುಂಬಿಸಿದ್ದರು. ಇದರಿಂದ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿದ್ದು, ಕೃಷ್ಣಾ ತೀರದ ರೈತರಲ್ಲಿ ಸಂತಸ ಮೂಡಿಸಿದೆ.
ಜಮಖಂಡಿ, ಮಾರ್ಚ್ 29: ಈ ಸಲದ ಭೀಕರ ಬರಗಾಲಕ್ಕೆ ಕೃಷ್ಣಾ ತೀರದ ರೈತರು ಮೊದಲೇ ಎಚ್ಚೆತ್ತುಕೊಂಡಿದ್ದರು. ತಾವೇ ಹಣ ಸಂಗ್ರಹಿಸಿ ಶ್ರಮಬಿಂದು ಸಾಗರಕ್ಕೆ ನೀರು ತುಂಬಿಸಿದ್ದರು. ಇದರಿಂದ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿದ್ದು, ಕೃಷ್ಣಾ ತೀರದ ರೈತರಲ್ಲಿ ಸಂತಸ ಮೂಡಿಸಿದೆ.
ಕಳೆದ ಬೇಸಿಗೆಯ ಜನವರಿ ತಿಂಗಳಿನಲ್ಲೇ ನದಿ ಸಂಪೂರ್ಣ ಬತ್ತಿ ಬರಿದಾಗಿತ್ತು. ನದಿ ತೀರದ ಜನತೆ ನದಿ ಒಡಲಿನಲ್ಲಿ ಬಾವಿಗಳನ್ನು ತೋಡಿ ಜಾನುವಾರುಗಳಿಗೆ ನೀರು ಅಗೆಯುತ್ತಾ ಹನಿ ನೀರಿಗಾಗಿ ಪರದಾಡಿದ್ದರು.[ಬೇಸಿಗೆ 2017: ದಾವಣಗೆರೆ 'ಜಲ ಸಿರಿ' ಕಾಣದ ಶ್ರೀಮಂತ ಜಿಲ್ಲೆ]

ಆದರೆ ಈ ಬಾರಿ ಹಾಗಾಗಿಲ್ಲ. ಶಾಸಕ ಸಿದ್ದು ನ್ಯಾಮಗೌಡ ಅವರ ನೇತೃತ್ವದಲ್ಲಿ ರೈತರು ವಂತಿಗೆ ಸಂಗ್ರಹಿಸಿದ್ದರು. ಈ ಹಣದಲ್ಲಿ ಚಿಕ್ಕಪಡಸಲಗಿಯಿಂದ ಹಿಪ್ಪರಗಿ ಬ್ಯಾರೆಜ್ ಗೆ ಸುಮಾರು 39 ಕಿಮೀ ನದಿ ನೀರು ತಂದು ಶ್ರಮಬಿಂದು ಸಾಗರಕ್ಕೆ ನೀರು ತುಂಬಿಸಿದ್ದರು. ಇದರಿಂದ ಈ ಸಲ ರೈತರ ಬೆಳೆಗಳಿಗೂ, ಜನ ಜಾನುವಾರುಗಳಿಗೂ ನೀರಿನ ಕೊರತೆ ಇಲ್ಲದೆ ಒಳ್ಳೆ ಪಸಲಿನ ಲೆಕ್ಕಾಚಾರದಲ್ಲಿ ರೈತರಿದ್ದಾರೆ.
ರೈತರಿಂದ ನೀರು, ವಿದ್ಯುತ್ ಉಳಿತಾಯ:
ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ಅತ್ತ ಪಕ್ಕದ ಜಿಲ್ಲೆಗಳ ನದಿ ಒಡಲೂ ಖಾಲಿಯಾಗಿವೆ. ಇದರಿಂದ ನದಿಯಲ್ಲಿನ ನೀರು ಖಾಲಿಯಾದರೆ ಬೇರಡೆಯಿಂದ ನೀರು ಸಿಗುವ ಸಾಧ್ಯತೆ ಕಡಿಮೆ ಎಂದು ರೈತರು ಮನಗಂಡಿದ್ದರು.
ನದಿಯಲ್ಲಿನ ನೀರನ್ನು ಪ್ರತಿ ಭಾನುವಾರದ ದಿನ ಪಂಪ್ ಮಾಡುವುದನ್ನು ನಿಲ್ಲಿಸಿದ್ದರು. ಹೀಗೆ ತಿಂಗಳಿನಲ್ಲಿ ಐದು ದಿನ, ಒಟ್ಟಾರೆ ನಾಲ್ಕು ತಿಂಗಳಿನಲ್ಲಿ ಸುಮಾರು 20 ನೀರು ಬಳಕೆ ಮಾಡದೇ ಇದ್ದುದರಿಂದ 20 ದಿನಗಳವರೆಗೆ ಹೆಚ್ಚುವರಿಯಾಗಿ ನೀರು ಸಿಗಲಿದೆ.[ಭೀಕರ ಬರ, ಜನರ ಸುಲಿಗೆ ಮಾಡುತ್ತಿರುವ ಟ್ಯಾಂಕರ್ ಮಾಫಿಯಾ]
ಇದರಿಂದ ರೈತರಿಗೆ ಬೇಕಾದ ನೀರೂ ಉಳಿತಾಯವಾಗಿದೆ. ಜತೆಗೆ ವಿದ್ಯುತ್ ಕೂಡಾ ಉಳಿಕೆಯಾಗಿದೆ.
ರೈತರ ಪ್ರಕಾರ ಇನ್ನೂ ಒಂದು ತಿಂಗಳವರೆಗೆ ನದಿ ನೀರು ಖಾಲಿಯಾಗುವುದಿಲ್ಲ. ಆದರೆ ಮುಂದಿನ ದಿನಮಾನಗಳಲ್ಲಿ ಉಂಟಾಗುವ ನೀರಿನ ಕೊರತೆ ಬಗ್ಗೆ ಈಗಿನಿಂದಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ ನದಿಯಲ್ಲಿ ನೀರು ನಳನಳಿಸುತ್ತಿರುವುದರಿಂದ ರೈತರ ಮೊಗದಲ್ಲಿ ಹರ್ಷ ಮೂಡಿಸಿದೆ. ಭೀಕರ ಬರಗಾಲದಲ್ಲೂ ಈ ವರ್ಷದ ಬೇಸಿಗೆಯಲ್ಲಿ ನದಿ ತೀರದಲ್ಲಿ ಹಸಿರು ವೃದ್ದಿಸಿದೆ. ಇದು ಮುಂದುವರೆಯಬೇಕಾದರೆ ನದಿಗೆ ನೀರು ತರುವಲ್ಲಿ ನಿರಂತರ ಕಾರ್ಯ ನಡೆಯಬೇಕೆಂಬುದು ರೈತರ ಒತ್ತಾಸೆಯಾಗಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications