ಚಿಲ್ಲರೆ ಮಾರುಕಟ್ಟೆ ಎಫ್ ಡಿಐ: ಲಾಭವೋ? ನಷ್ಟವೋ?
ಬಹು ಬ್ರ್ಯಾಂಡ್ ಚಿಲ್ಲರೆ ಮಳಿಗೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್ ಡಿಐ)ಗೆ ಮುಂದಾಗಿರುವ ಯುಪಿಎ ಸರ್ಕಾರಕ್ಕೆ ಸಂಸತ್ತಿನ ಉಭಯ ಸದನಗಳಲ್ಲೂ ಬಹುಮತ ಸಿಕ್ಕಿದೆ. ಭಾರತಕ್ಕೆ ಎಫ್ ಡಿಐ ಹೊಸ ವಿಷಯವೇನಲ್ಲ. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಬಹು ಬ್ರ್ಯಾಂಡ್ ಗಳ ಮೇಲೆ ವಿದೇಶಿಯರ ಹಿಡಿತ ಹೆಚ್ಚಾಗುವುದು ಆತಂಕಕಾರಿ ಎಂಬ ಕೂಗು ಎದ್ದಿದೆ.
ಎಫ್ ಡಿಐ ಬಗ್ಗೆ ಸಾಮಾನ್ಯ ಜನರಿಗೆ ಅರಿವು ಇದೆಯೇ? ಶೇ 51 ರಷ್ಟು ಪಾಲು ವಿದೇಶಿ ಕಂಪನಿಗಳ ಕೈಗೆ ಹೋದರೆ ಸ್ಥಳೀಯರ ಪಾಡೇನು? ಸೇವ್ ಮನಿ, ಲಿವ್ ಬೆಟರ್ ಎಂದು ಚಿಲ್ಲರೆ ಮಾರುಕಟ್ಟೆಗೆ ಕಾಲಿರಿಸಿರುವ ವಾಲ್ ಮಾರ್ಟ್ ಸಂಸ್ಥೆ ಸುಮಾರು 5, 000 ಕೋಟಿ ಲಾಭದ ನಿರೀಕ್ಷೆ ಹೊಂದಿದೆ.
ಫ್ರಾನ್ಸಿನ ಕ್ಯಾರಿಫರ್, ಅಮೆರಿಕದ ವಾಲ್ ಮಾರ್ಟ್ ಹಾಗೂ ಯುಕೆಯ ಟೆಸ್ಕೋ ಕಂಪನಿಗಳು ಭಾರತದ ಚಿಲ್ಲರೆ ಮಾರುಕಟ್ಟೆ ಮೇಲೆ ಏಕಸ್ವಾಮ್ಯತೆ ಹೊಂದಿದರೆ ಮುಂದೆ ಗತಿಯೇನು?
ಭಾರತದಲ್ಲಿ ಸಿಂಗಲ್ ಬ್ರ್ಯಾಂಡ್ ನಲ್ಲಿ ಎಫ್ ಡಿಐಗೆ ಅನುಮತಿ ಇದೆ. ಇದು ಹೋಲ್ ಸೇಲ್, ಬ್ಯಾಂಕಿಂಗ್, ವಿಮಾ ಕ್ಷೇತ್ರದಲ್ಲಿ ಜಾರಿಯಲ್ಲಿದೆ. ಆದರೆ, ಈಗ ಮಲ್ಟಿ ಬ್ರ್ಯಾಂಡ್ ನಲ್ಲಿ ಎಫ್ ಡಿಐಗೆ ಅನುಮತಿ ನೀಡಿದರೆ, ಅಂದರೆ ಶೇ 51 ರಷ್ಟು ಪಾಲು ವಿದೇಶಿ ಕಂಪನಿ ವಶವಾದರೆ, ಇಡೀ ಚಿಲ್ಲರೆ ಮಾರುಕಟ್ಟೆ ಶೆಟ್ಟಿ ಅಂಗಡಿ ಜುಟ್ಟು ಜನಿವಾರ ವಿದೇಶಿಯರ ಕೈವಶವಾಗಲಿದೆ. ವಿಮೆ, ಇನ್ಸುರೆನ್ಸ್ ಹಣಕ್ಕಾಗಿ ವಿದೇಶಿ ಕಂಪನಿ ಮುಂದೆ ಕೈ ಚಾಚುವಂತಾಗುತ್ತದೆ
ಇದೇ ಸಮಸ್ಯೆಗೆ ಮೂಲ ಕಾರಣವಾಗಿರುವುದು. ಒಂದೇ ಮಳಿಗೆಯಲ್ಲಿ ಮಲ್ಟಿ ಬ್ರ್ಯಾಂಡ್ ಮಾರಾಟ ಸಾಧ್ಯವೇ? ಎಫ್ ಡಿಐ ಭೂತವೇ? ಭಗವಂತನ ಕೃಪೆಯೇ? ಮುಂದೆ ಓದಿ...

ಕಿರಾಣಿ ಅಂಗಡಿಗಳ ಸರ್ವನಾಶ?
ಚಿಲ್ಲರೆ ಮಾರುಕಟ್ಟೆಯಲ್ಲಿ ಬಹು ಬ್ರ್ಯಾಂಡ್ ಅನುವು ಮಾಡಿಕೊಟ್ಟು ಶೇ 51 ರಷ್ಟು ಹೂಡಿಕೆಗೆ ಅವಕಾಶ ಕೊಟ್ಟರೆ, ಸಣ್ಣ ಪುಟ್ಟ ಕಿರಾಣಿ, ದಿನಸಿ ಅಂಗಡಿಗಳು ಮುಚ್ಚಬೇಕಾಗುತ್ತದೆ.
ವಿದೇಶಿ ರೀಟೈಲ್ ಕ್ಷೇತ್ರ ದಿಗ್ಗಜರ ಮುಂದೆ ಮಂಡಿಯೂರಬೇಕಾಗುತ್ತದೆ. ದೈನಂದಿನ ಸಾಮಾಗ್ರಿ ಈಗಾಗಲೇ ಮಾಲ್ ಬಜಾರುಗಳಲ್ಲಿ ಜನಪ್ರಿಯವಾಗಿದೆ. ಹೀಗಾಗಿ ರೀಟೈಲ್ ಮಳಿಗೆಗಳ ಆಫರ್ ಗಳಿಗೆ ಜನ ಮುಗಿಬೀಳುತ್ತಾರೆ.

ನಿರುದ್ಯೋಗ ಸಮಸ್ಯೆ
ವಾಲ್ ಮಾರ್ಟ್ ಭಾರತದಲ್ಲಿ 17 ಕಡೆ ಹೊಸ ಮಳಿಗೆ ಸ್ಥಾಪಿಸಲಿದೆ. ಒಟ್ಟಾರೆ ಎಲ್ಲಾ ಕಂಪನಿಗಳಿಂದ 60 ರಿಂದ 80 ಲಕ್ಷ ಉದ್ಯೋಗ ಅವಕಾಶ ಸಿಗಲಿದೆ.
ಎಫ್ ಡಿಐನಿಂದ ಸ್ಥಳೀಯ ಉದ್ಯೊಗ ಸಿಕ್ಕರೂ ಅದು ಸೇಲ್ಸ್ ಮ್ಯಾನ್, ಮಾರ್ಕೆಟಿಂಗ್ ಗೆ ಸ್ಥೀಮಿತವಾಗಲಿದೆ. ಪ್ರಮುಖ ಕಾರ್ಪೋರೇಟ್ ಸಂಸ್ಥೆಗಳಾದ ರಿಲೆಯನ್ಸ್, ಆದಿತ್ಯಾ ಬಿರ್ಲಾ ಹಾಗೂ ಗೋಯೆಂಕಾ ಸಂಸ್ಥೆಗಳಿಂದಲೂ ಉದ್ಯೋಗ ಸಮಸ್ಯೆ ಬೆಳೆದಿದೆ.
ಬೆಲೆ ಏರಿಕೆ ಇಳಿಕೆ ಭಯ
ಭಾರಿ ಆರ್ಥಿಕ ಬಂಡವಾಳ ಹೂಡಿಕೆ ಮಾಡಲಿರುವ ವಿದೇಶಿ ಕಂಪನಿಗಳು ಎಲ್ಲದರ ರೇಟ್ ಫಿಕ್ಸ್ ಮಾಡಿ ಲಾಭದತ್ತ ಮಾತ್ರ ಯೋಚಿಸುತ್ತಾರೆ.
ಕಿರಾಣಿ ಅಂಗಡಿಯಲ್ಲಿ ಚೌಕಾಸಿ ಮಾಡಿದಂತೆ ಇಲ್ಲ ಸಾಧ್ಯವಿಲ್ಲ. ರೈತರಿಗೆ ಸೂಕ್ತ ಬೆಲೆ ಸಿಗುವುದಿಲ್ಲ, ಮಧ್ಯವರ್ತಿಗಳ ಕೈ ಮೇಲಾಗುತ್ತದೆ. ಗ್ರಾಹಕರಿಗೆ ಅಸಲಿ ಬೆಲೆ ಗೊತ್ತಾಗುವುದೇ ಇಲ್ಲ.
ಕೊಳೆತ ಆಹಾರ, ತ್ಯಾಜ್ಯ ನಿರ್ವಹಣೆ ಸುಲಭ
ರೀಟೈಲ್ ನಲ್ಲಿ ಎಫ್ ಡಿಎಇ ಬಂದರೆ ಆಹಾರ ಸಾಮಾಗ್ರಿಗಳು, ತ್ಯಾಜ್ಯಗಳ ನಿರ್ವಹಣೆ ಸುಲಭವಾಗಲಿದೆ. ಕೋಲ್ಡ್ ಸ್ಟೋರೇಜ್, ಆಹಾರ ಶೇಖರಣೆಗೆ ವಿದೇಶಿ ತಂತ್ರಜ್ಞಾನ ಕೂಡಾ ಬರಲಿದೆ.
ರೈತರು ನೊಂದು ಬೆಳೆಗಳನ್ನು ರಸ್ತೆಗಳಲ್ಲಿ ಎಸೆಯುವುದು ತಪ್ಪುತ್ತದೆ. ವಾರ್ಷಿಕವಾಗಿ ಸರ್ಕಾರಕ್ಕೆ ಆಹಾರ ತ್ಯಾಜ್ಯದಿಂದ ಉಂಟಾಗುತ್ತಿರುವ 55,000 ಕೋಟಿ ರು ಉಳಿತಾಯವಾಗಲಿದೆ.
ಮಧ್ಯವರ್ತಿಗಳ ಕಾಟ ಇರುವುದಿಲ್ಲ
ಚಿಲ್ಲರೆ ಮಾರುಕಟ್ಟೆ ಮಲ್ಟಿ ಬ್ರ್ಯಾಂಡ್ ನಲ್ಲಿ ಎಫ್ ಡಿಐ ಬಯಸುವವರು ಮಧ್ಯವರ್ತಿಗಳ ಕಾಟ ತಪ್ಪಿಸುವ ಭರವಸೆ ನೀಡಿದ್ದಾರೆ. ಇದು ನಿಜವಾದರೆ ರೈತರ ಪಾಲಿಗೆ ಎಫ್ ಡಿಐ ಭಾಗ್ಯೋದಯವಾಗಲಿದೆ. ರೈತರೊಡನೆ ವಿದೇಶಿ ಕಂಪನಿಗಳು ನೇರ ಸಂಪರ್ಕ ಸಾಧ್ಯವೇ ಎಂಬ ಪ್ರಶ್ನೆ ಕೂಡಾ ಇದೆ.

ಉದ್ಯೋಗಗಳ ಮಹಾಪೂರ ಹರಿಯಲಿದೆ
ಹೆಚ್ಚಿನ ವೃತ್ತಿಪರತೆ, ಕಾರ್ಯಕ್ಷಮತೆ ಬೆಳೆಯಲಿದೆ. 80 ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿಯಾಗಲಿದೆ.
ರತನ್ ಟಾಟಾ, ಗ್ಲೋಬಲ್ ಹಂಟ್ ಸಂಸ್ಥೆ ಆರ್ಥಿಕ ತಜ್ಞರು ಕೂಡಾ ಎಫ್ ಡಿಐಗೆ ಓಕೆ ಎಂದಿದ್ದಾರೆ. ವಾಲ್ಮರ್ಟ್ ಇ ಕಾಮರ್ಸ್ ಕ್ಷೇತ್ರದಲ್ಲಿ ಕ್ರಾಂತಿ ಉಂಟು ಮಾಡುವ ನಿರೀಕ್ಷೆಯಿದೆ.

ಸೇವ್ ಮನಿ, ಲಿವ್ ಬೆಟರ್
ಗ್ರಾಹಕರನ್ನು ಉಳಿಸಿಕೊಳ್ಳುವುದು ನಮ್ಮ ಆದ್ಯತೆ. ಬೆಲೆ ಸಮರದಿಂದಾಗಿ ಎಲ್ಲಾ ಸಾಮಾಗ್ರಿಗಳು ಕಡಿಮೆ ದರಕ್ಕೆ ಗ್ರಾಹಕರಿಗೆ ಸಿಗುವ ಸಾಧ್ಯತೆ ಇರುತ್ತದೆ.
ಜೊತೆಗೆ ಆನ್ ಲೈನ್ ವ್ಯಾಪಾರ, ರಿಯಾಯಿತಿ ದರ ಮಾರಾಟ ಕೂಡಾ ಗ್ರಾಹಕರನ್ನು ಆಕರ್ಷಿಸಲಿದ್ದು, ಜಾಗತಿಕವಾಗಿ ಯಶಸ್ವಿಯಾದ ಕಂಪನಿಗಳು ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ವರ್ತಿಸಲಿದೆ.-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications