ಭಾರತವು ಈ ವರ್ಷ ನಿರೀಕ್ಷೆಗಿಂತಲೂ 9.25 ಲಕ್ಷ ಬೇಲ್ಗಳಷ್ಟು ಕಡಿಮೆ ಹತ್ತಿ ಉತ್ಪಾದಿಸಿದೆ
ಬೆಂಗಳೂರು, ಜನವರಿ 15: ಭಾರತದಲ್ಲಿ ಹತ್ತಿ ಉತ್ಪಾದನೆ ಪ್ರಸಕ್ತ 2022-23ನೇ ಋತುವಿನಲ್ಲಿ ನಿರೀಕ್ಷೆಗಿಂತ 9.25 ಲಕ್ಷ ಬೇಲ್ಗಳಷ್ಟು ಕಡಿಮೆ ಉತ್ಪಾದನೆ ಆಗಿದೆ ಎಂದು ಕಾಟನ್ ಅಸೋಸಿಯೇಷನ್ ಆಫ್ ಇಂಡಿಯಾ (ಸಿಎಐ) ತಿಳಿಸಿದೆ.
ಪ್ರಸಕ್ತ 2022-23ನೇ ಋತುವಿನಲ್ಲಿ ಒಟ್ಟು ಸುಮಾರು 330.50 ಲಕ್ಷ ಬೇಲ್ (1 ಬೇಲ್ = 172kg) ಹತ್ತಿ ಉತ್ಪಾದನೆ ನಿರೀಕ್ಷೆ ಮಾಡಲಾಗಿತ್ತು. ಆದರೆ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಉತ್ಪಾದನೆ ಕುಸಿತ ಸಾಧ್ಯತೆ ಹಿನ್ನೆಲೆಯಲ್ಲಿ ಈ ವರ್ಷ 9.25 ಲಕ್ಷ ಹತ್ತಿ ಉತ್ಪಾದನೆ ಕಡಿಮೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 307 ಲಕ್ಷ ಬೇಲ್ ಉತ್ಪಾದನೆ ಆಗಬಹುದು ಎಂದು ಅಂದಾಜಿಸಲಾಗಿತ್ತು ಎಂದು ಸಿಎಐ ಹೇಳಿದೆ.

2022ರ ಅಕ್ಟೋಬರ್ 1 ರಿಂದ ಆರಂಭವಾದ ಹಂಗಾಮಿನಲ್ಲಿ ಹತ್ತಿ ಉತ್ಪಾದನೆಯು ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ತಲಾ 2 ಲಕ್ಷ ಬೇಲ್ಗಳಷ್ಟು ಇಳಿಕೆಯಾಗಿದೆ. ಮುಂದಿನ ದಿನಗಳಲ್ಲಿ ಅದೇ ರಾಜ್ಯಗಳಿಂದ ಕ್ರಮವಾಗಿ ಈ ವರ್ಷ 82.50 ಲಕ್ಷ ಬೇಲ್ಗಳು, 13 ಲಕ್ಷ ಬೇಲ್ಗಳು ಮತ್ತು 22 ಲಕ್ಷ ಬೇಲ್ ಉತ್ಪಾದನೆ ನಿರೀಕ್ಷಿಸಲಾಗಿತ್ತು ಎಂದು ಸಂಸ್ಥೆ ತಿಳಿಸಿದೆ.
ಕಳೆದ ಅಕ್ಟೋಬರ್ ತಿಂಗಳಿಂದ ಡಿಸೆಂಬವರೆಗೆ ಒಟ್ಟು ಹತ್ತಿ ಪೂರೈಕೆಯು 116.27 ಲಕ್ಷ ಬೇಲ್ಗಳು ಎಂದು ಅಂದಾಜಿಸಲಾಗಿತ್ತು. ಇದರಲ್ಲಿ 80.13 ಲಕ್ಷ ಬೇಲ್ಗಳ ಪೂರೈಕೆ ಆಗಿದ್ದು, 4.25 ಲಕ್ಷ ಬೇಲ್ ಹತ್ತಿಯು ಆಮದಾಗಿದೆ. ಸದ್ಯಕ್ಕೆ ಉಗ್ರಾಣದಲ್ಲಿ ಅಂದಾಜು 31.89 ಲಕ್ಷ ಬೇಲ್ಗಳ ಹತ್ತಿ ಸಂಗ್ರಹವಿದೆ. ಗುಜರಾತ್ ರಾಜ್ಯ ಮಾತ್ರ ಹತ್ತಿ ಉತ್ಪಾದಣೆಯಲ್ಲಿ ಸ್ಥಿರತೆ ಹೊಂದಿದೆ ಎನ್ನಲಾಗಿದೆ. ಬೇರೆ ರಾಜ್ಯಗಳಿಗಿಂತ ಉತ್ತಮ ಇಳುವರಿ ಸಿಗುಬಹುದು ಎಂದು ಸಿಎಐ ಮುಖ್ಯಸ್ಥರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಕ್ಟೋಬರ್-ಡಿಸೆಂಬರ್ ವರೆಗೆ ಒಟ್ಟು 65 ಲಕ್ಷ ಬೇಲ್ ಗಳ ಬಳಕೆಯಾಗಿದ್ದರೆ, 2022ರ ಡಿಸೆಂಬರ್ 31ರವರೆಗೆ 2 ಲಕ್ಷ ಬೇಲ್ಗಳು ವಿದೇಶಕ್ಕೆ ರಫ್ತು ಮಾಡಲಾಗಿದೆ. ಈ ವರ್ಷದ 2022-23 ಹತ್ತಿ ಋತುವಿನ ಅಂತ್ಯದ ವೇಳೆಗೆ ಅಂದರೆ ಮುಂದಿನ ಸೆಪ್ಟೆಂಬರ್ 30ರ ಹೊತ್ತಿಗೆ 374.39 ಲಕ್ಷ ಬೇಲ್ ಹತ್ತಿ ಪೂರೈಕೆ ಆಗುವ ಸಾಧ್ಯತೆ ಇದೆ.
ಒಟ್ಟಾರೆ ಋತುವಿನ ಅಂದಾಜು 330.50 ಲಕ್ಷ ಬೇಲ್ಗಳು ಗಳಲ್ಲಿ ಆಮದು ಅಂದಾಜು 12 ಲಕ್ಷ ಬೇಲ್ ಆಗಿದೆ. ಕಳೆದ ಅಕ್ಟೋಬರ್ 1 ರ ಆರಂಭದಲ್ಲಿ ದೇಶದಲ್ಲಿ 31.89 ಲಕ್ಷ ಬೇಲ್ಗಳ ಪ್ರಥಮ ಹಂತದ ಸಂಗ್ರಹಣೆ ಮಾಡಲಾಗಿತ್ತು.
ಈ ಋತುವಿನ ದೇಶೀಯ ಬಳಕೆ ಅಂದಾಜು 300 ಲಕ್ಷ ಬೇಲ್ಗಳಾಗಿದ್ದರೆ, ರಫ್ತು ಮಾಡುವ ಬೇಲ್ಗಳ ಸಂಖ್ಯೆ 30 ಲಕ್ಷ ಎಂದು ಸಂಸ್ಥೆ ವಿವರಿಸಿದೆ.
-
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ












Click it and Unblock the Notifications